Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 02-03-2022


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 31/2022 ಕಲಂ 279, 337, 338 ಐಪಿಸಿ : ದಿನಾಂಕ 28.02.2022 ರಂದು ರಾತ್ರಿ 11.00 ಗಂಟೆ ಸುಮಾರಿಗೆ ರಾಯಚೂರ ರಿಮ್ಸ್ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಕರೆಯ ಮೇರೆಗೆ ಶ್ರೀ ಗೋಪಾಲರೆಡ್ಡಿ ಹೆಚ್.ಸಿ-101 ರವರಿಗೆ ಸದರಿ ಆಸ್ಪತ್ರೆಗೆ ಎಮ್.ಎಲ್.ಸಿ ಕುರಿತು ಕಳಿಸಿಕೊಟ್ಟಿದ್ದು, ಸದರಿಯವರು ಆಸ್ಪತ್ರೆಗೆ ಭೇಟಿ ನೀಡಿ ಲಕ್ಷ್ಮೀ ಇವಳ ಫಿಯರ್ಾದಿ ಹೆಳಿಕೆ ಪಡೆದು ಮರಳಿ ಠಾಣೆಗೆ ತಂದು ಒಪ್ಪಿಸಿದ್ದು, ಸದರಿ ಫಿಯರ್ಾದಿ ಸಾರಾಂಶವೇನೆಂದರೆ, ದಿನಾಂಕ 28.02.2022 ರಂದು ರಾತ್ರಿ 8.00 ಗಂಟೆ ಸುಮಾರಿಗೆ ರಾಂಪೂರ ಕ್ರಾಸದಿಂದ ಸೈದಾಪೂರ ಕಡೆಗೆ ಹೋಗಲು ಎನ.ಹೆಚ್.ರೋಡ ಕ್ರಾಸ ಮಾಡಲು ಮೋಟಾರ ಸೈಕಲನ್ನು ನಿಲ್ಲಿಸಿದಾಗ ಯಾದಗಿರಿ ಕಡೆಯಿಂದ ಒಂದು ಕಾರ ನಂಬರ ಕೆ.ಎ-53, ಡಿ-5640 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿಯರ್ಾದಿಯವರು ಕುಳಿತಿದ್ದ ಮೋಟಾರ ಸೈಕಲಗೆ ಡಿಕ್ಕಿಪಡಿಸಿದ್ದರಿಂದ ಫಿಯರ್ಾದಿಗೆ ಎಡಗಾಲು ಮೊಣಕಾಲು ಕೆಳಗೆ ಭಾರಿ ಒಳಪೆಟ್ಟಾಗಿದ್ದು, ಹಣೆಗೆ ಮತ್ತು ಮೈಮೇಲೆ ಅಲ್ಲಲ್ಲಿ ತೆರಚಿದ ಗಾಯಗಳಾದವು. ಫಿಯರ್ಾದಿ ತಂಗಿ ರೇಣುಕಾಳಿಗೆ ಎಡಗಾಲು ಮೊಣಕಾಲಿನ ಕೆಳಗೆ ಭಾರಿ ರಕ್ತಗಾಯ, ಬಲಗೈ ಮೊಳಕೈ ರಟ್ಟೆಗೆ ಮತ್ತು ಬಲಗಡೆ ಹಣೆಗೆ ತೆರಚಿದ ಗಾಯ ಆಗಿರುತ್ತದೆ ಮತು ಬಲಸೊಂಟಕ್ಕೆ ಗುಪ್ತಗಾಯ ಆಗಿರುತ್ತದೆ. ಫಿಯರ್ಾದಿ ಗಂಡನಿಗೆ ತಲೆಯ ಮೇಲೆ ಭಾರಿ ರಕ್ತಗಾಯ, ಮುಖಕ್ಕೆ ತೆರಚಿದ ಗಾಯ ಮತ್ತು ಕೈಕಾಲು, ಮೊಣಕಾಲುಗಳಿಗೆ ರಕ್ತಗಾಯಗಳಾಗಿರುತ್ತವೆ. ಕಾರಿನ ಚಾಲಕ ಶಂಕರ ತಂದೆ ರವಿಕುಮಾರ ಇವನಿಗೆ ಎಡ ಭುಜಕ್ಕೆ ಮತ್ತು ಎದೆಗೆ ಗುಪ್ತಗಾಯಗಳಾಗಿದ್ದು ಕಂಡುಬಂದಿರುತ್ತದೆ. ಆನಂತರ ಕಾರಿನಲ್ಲಿ ಇನ್ನೂ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಹೆಣ್ಣು ಮಗು ಇದ್ದರು ಅವರಿಗೆ ಯಾವುದೆ ಗಾಯಗಳಾಗಿದ್ದು ಕಂಡುಬಂದಿರುವದಿಲ್ಲ.ಸ್ಥಳಕ್ಕೆ ಬಂದ ಅಂಬುಲೆನ್ಸ್ದಲ್ಲಿ ರಾಯಚೂರ ರಿಮ್ಸ್ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿದ್ದು ಕಾರ ನಂಬರ ಕೆ.ಎ-53, ಡಿ-5640 ನೇದ್ದರ ಚಾಲಕ ಶಂಕರ ತಂದೆ ರವಿಕುಮಾರ ವಯ|| 34 ವರ್ಷ, ಜಾ|| ಲಿಂಗಾಯತ ಉ|| ಕಾರ ಚಾಲಕ ಸಾ|| ಯರಮರಸ ಕ್ಯಾಂಪ ರಾಯಚೂರ ಈತನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೊಂಡಾ ಶೈನ ಸೈಕಲ ಮೋಟಾರ ನಂಬರ ಕೆ.ಎ-33, ಇ.ಎ-6939 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ಘಟನೆ ಜರುಗಿದ್ದು ಸದರಿ ಕಾರ ಮತ್ತು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಫಿಯರ್ಾದಿ ಸಾರಾಂಶ ಇರುತ್ತದೆ.

 

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 23/2022 ಕಲಂ: 279 338 ಐಪಿಸಿ : ಇಂದು ದಿನಾಂಕ:01.03.2022 ರಂದು ಬೆಳಿಗ್ಗೆ 09:00 ಗಂಟೆಗೆ ಪಿರ್ಯಾದಿ ಶ್ರೀ ನಂದಪ್ಪಗೌಡ ತಂದೆ ಬಸಪ್ಪ ಮಾಳಿ ವ:65 ಜಾ: ಹಿಂದೂ ಕುರುಬರ ಉ:ಒಕ್ಕಲುತನ ಸಾ:ಕಡದರಾಳ ತಾ:ಹುಣಸಗಿ ಜಿ:ಯಾದಗಿರಿ ರವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿರ್ಯಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ದೂರು ಅಜರ್ಿಯ ಸಾರಾಂಶವೆನೆಂದರೆ ನಮ್ಮೂರ ದೇವರಾಜ ತಂದೆ ಪರಸಪ್ಪ ಕುರಿ ಇವರು ನನಗೆ ಅಳಿಯನಾಗಬೇಕಾಗಿದ್ದು ಇರುತ್ತದೆ. ಅವನದು ಒಂದು ಮೋಟರ್ ಸೈಕಲ್ ನಂ:ಕೆಎ-33 ಆರ್-1839 ನೇದ್ದು ಇದ್ದು ಅದನ್ನು ಅವನೇ ಚಲಾಯಿಸುತ್ತಾನೆ. ಹೀಗಿದ್ದು ದಿನಾಂಕ 27.02.2022 ರಂದು ರಾಜನಕೊಳುರದಲ್ಲಿ ನನ್ನ ಕೆಲಸವಿದ್ದುದರಿಂದ ನಾನು ನಮ್ಮೂರ ದಂಡಪ್ಪ ತಂದೆ ಜುಮ್ಮಣ್ಣ ಮೇಟಿ ಇವರನ್ನು ಕರೆದುಕೊಂಡು ನನ್ನ ಮೋಟರ್ ಸೈಕಲ್ಲ ಮೇಲೆ ನಮ್ಮೂರಿನಿಂದ ರಾಜನಕೊಳೂರಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಹೋಗಲು ನಾವಿಬ್ಬರೂ ಕೂಡಿ ಗೆದ್ದಲಮರಿ-ರಾಜನಕೊಳೂರ ರಸ್ತೆಯ ಮೇಲೆ ರಾಜನಕೊಳೂರ ಸೀಮಾಂತರದ ರಾಚಯ್ಯ ಸ್ವಾಮಿ ರವರ ಹೊಲದ ಸಿಡಿಯ ಹತ್ತಿರ ಮಧ್ಯಾಹ್ನ 12:45 ಗಂಟೆಯ ಸುಮಾರಿಗೆ ನಮ್ಮ ಮೋಟರ್ ಸೈಕಲ್ ಮೇಲೆ ಹೋಗುತ್ತಿರುವಾಗ ನಮ್ಮ ಹಿಂದಿನಿಂದ ರಾಜನಕೊಳೂರ ಕಡೆಯಿಂದ ನನಗೆ ಅಳಿಯನಾಗಬೇಕಾದ ದೇವರಾಜ ತಂದೆ ಪರಸಪ್ಪ ಕುರಿ ಇತನು ತನ್ನ ಮೋಟರ್ ಸೈಕಲ್ನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಯಿಸಿಕೊಂಡು ಬಂದು ನಮ್ಮನ್ನು ಹಿಂದೆ ಹಾಕಿ ಸ್ವಲ್ಪ ಮುಂದೆ ಹೋಗಿ ಮೋಟರ್ ಸೈಕಲ್ ಮೇಲೆ ನಿಯಂತ್ರಣ ಕಳೆದುಕೊಂಡು ಮೋಟರ್ ಸೈಕಲ್ ಸಮೇತ ಬಿದ್ದಿದ್ದು ನಾವು ನಮ್ಮ ಮೋಟರ್ ಸೈಕಲ್ನ್ನು ನಿಲ್ಲಿಸಿ ಹೋಗಿ ನೋಡಲಾಗಿ ದೇವರಾಜನಿಗೆ ತಲೆಯ ಹಿಂಬದಿಗೆ ಭಾರಿ ರಕ್ತಗಾಯವಾಗಿದ್ದು ಮತ್ತು ಬಲಗೈ ಕಿರುಬೆರಳಿನ ಪಕ್ಕದ ಬೆರಳಿಗೆ ರಕ್ತಗಾಯವಾಗಿ ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದು ದೇವರಾಜನು ನಡೆಯಿಸಿಕೊಂಡು ಬಂದ ಮೋಟರ್ ಸೈಕಲ್ ನಂಬರ ನೋಡಲಾಗಿ ಕೆಎ-33 ಆರ್-1839 ಇದ್ದು ನಂತರ ನಾನು ಮತ್ತು ನನ್ನ ಜೊತೆಗೆ ಇದ್ದ ದಂಡಪ್ಪ ತಂದೆ ಜುಮ್ಮಣ್ಣ ಮೇಟಿ ಹಾಗೂ ಅದೇ ವೇಳೆಗೆ ಅಲ್ಲಿಂದಲೇ ಹೋಗುತ್ತಿದ್ದ ನಮ್ಮೂರ ನಾಗಪ್ಪ ತಂದೆ ಹಯ್ಯಾಳಪ್ಪ ಮೇಟಿ ಎಲ್ಲರೂ ಕೂಡಿ ದೇವರಾಜನಿಗೆ ಉಪಚಾರಕ್ಕಾಗಿ ರಾಜನಕೊಳೂರದ ಒಂದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ನಾನು ದೇವರಾಜನ ಹೆಂಡತಿಯಾದ ನೀಲಮ್ಮ ಇವರಿಗೆ ಪೋನ್ ಮಾಡಿ ದೇವರಾಜನಿಗೆ ಅಪಘಾತವಾದ ವಿಷಯ ತಿಳಿಸಿದ್ದು ಸ್ವಲ್ಪ ಹೊತ್ತಿನಲ್ಲಿಯೇ ದೇವರಾಜನ ಹೆಂಡತಿ ನೀಲಮ್ಮ ಮತ್ತು ದೇವರಾಜನ ತಾಯಿ ಚಂದಮ್ಮ, ಹಾಗೂ ನಮ್ಮೂರ ಪರಶುಗೌಡ ತಂದೆ ಚೌಡಪ್ಪ ಬಿರಾದಾರ ರವರು ಆಸ್ಪತ್ರೆಗೆ ಬಂದು ದೇವರಾಜನಿಗೆ ನೋಡಿದ್ದು ನಂತರ ರಾಜನಕೊಳೂರ ಖಾಸಗಿ ಆಸ್ಪತ್ರೆಯ ವೈದ್ಯರು ದೇವರಾಜನಿಗೆ ಹೆಚ್ಚಿನ ಉಪಚಾರಕ್ಕಾಗಿ ಲಿಂಗಸೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಅಂದು ದಿನಾಂಕ 27.02.2022 ರಂದು ದೇವರಾಜನಿಗೆ ಆತನ ಹೆಂಡತಿ ನೀಲಮ್ಮ ಹಾಗೂ ತಾಯಿ ಚಂದಮ್ಮ ಮತ್ತು ನಾನು ಹಾಗೂ ನಮ್ಮೂರ ಪರಶುಗೌಡ ಬಿರಾದಾರ ರವರು ಲಿಂಗಸೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು ನಿನ್ನೆ ದಿನಾಂಕ 28.02.2022 ರಂದು ಲಿಂಗಸೂರ ಸರಕಾರಿ ಆಸ್ಪತ್ರೆಯ ವೈದ್ಯರು ದೇವರಾಜನಿಗೆ ಹೆಚ್ಚಿನ ಉಪಚಾರಕ್ಕಾಗಿ ಬಳ್ಳಾರಿ ವೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ದೇವರಾಜನ ಹೆಂಡತಿ ನೀಲಮ್ಮ ಹಾಗೂ ತಾಯಿ ಚಂದಮ್ಮ ಮತ್ತು ನಮ್ಮೂರ ಪರಶುಗೌಡ ಬಿರಾದಾರ ರವರು ದೇವರಾಜನಿಗೆ ನಿನ್ನೆ ದಿನ ಬಳ್ಳಾರಿ ವೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು ನಾನು ನಿನ್ನೆ ರಾತ್ರಿ ಮರಳಿ ಊರಿಗೆ ಬಂದಿದ್ದು ನನ್ನ ಅಳಿಯ ದೇವರಾಜ ಇತನು ದಿನಾಂಕ 27.02.2022 ರಂದು ಮಧ್ಯಾಹ್ನ 12:45 ಗಂಟೆಯ ಸುಮಾರಿಗೆ ರಾಜನಕೊಳುರ-ಗೆದ್ದಲಮರಿ ರಸ್ತೆಯ ಮೇಲೆ ರಾಜನಕೊಳುರ ಸೀಮಾಂತರದ ರಾಚಯ್ಯ ಸ್ವಾಮಿ ರವರ ಹೊಲದ ಸಿಡಿಯ ಹತ್ತಿರ ತನ್ನ ಮೋಟರ್ ಸೈಕಲ್ ನಂ:ಕೆಎ-33 ಆರ್-1839 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮೋಟರ್ ಸೈಕಲ್ ಮೇಲೆ ನಿಯಂತ್ರಣ ಕಳೆದುಕೊಂಡು ಮೋಟರ್ ಸೈಕಲ್ ಸಮೇತ ಬಿದ್ದುದರಿಂದ ತಲೆಯ ಹಿಂಬದಿಗೆ ಬಲಗೈ ಕಿರುಬೆರಳಿನ ಪಕ್ಕದ ಬೆರಳಿಗೆ ಭಾರಿ ರಕ್ತಗಾಯವಾಗಿದ್ದು ನನ್ನ ಅಳಿಯ ದೇವರಾಜ ಇತನು ಇನ್ನೂ ಬಳ್ಳಾರಿ ವೀಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದು ದೇವರಾಜನಿಗೆ ಉಪಚಾರಕ್ಕಾಗಿ ಕರೆದುಕೊಂಡು ಹೋಗಿದ್ದರಿಂದ ದೂರು ಕೊಡಲು ತಡವಾಗಿದ್ದು ಈ ಅಪಘಾತವು ದೇವರಾಜ ತಂದೆ ಪರಸಪ್ಪ ಕುರಿ ಇತನ ನಿರ್ಲಕ್ಷತನದಿಂದಲೇ ಸಂಭವಿಸಿದ್ದು ಅವನ ಮೇಲೆೆ ಕಾನುನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿಯರ್ಾದಿ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:23/2022 ಕಲಂ: 279 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 32/2022 ಕಲಂ 279,337,338 ಐಪಿಸಿ : ಇಂದು ದಿನಾಂಕ: 01-03-2022 ರಂದು 7-45 ಪಿ.ಎಮ್ ಕ್ಕೆ ಪಿರ್ಯಾದಿದಾರರಾದ ಶ್ರೀ ದೇವಪ್ಪ ತಂದೆ ರಾಯಪ್ಪ ರಾಕಿಂಗೇರಿ ವಯ: 30 ವರ್ಷ ಜಾ: ಕುರಬರ ಉ: ಹೊಲಮನೆಗೆಲಸ ಸಾ: ನಂದಳ್ಳಿ ತಾ: ಶಹಾಪೂರ ರವರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆೆ, ಇಂದು ದಿನಾಂಕ: 01-03-2022 ರಂದು ಸಾಯಾಂಕಾಲ 5.00 ಗಂಟೆ ಸುಮಾರಿಗೆ ನಾನು ಖಾಸಗಿ ಕೆಲಸದ ನಿಮಿತ್ಯವಾಗಿ ಹತ್ತಿಗುಡುರ ಹತ್ತಿರ ಇರುವ ಮಾಗನೂರ ಪೆಟ್ರೊಲ್ ಬಂಕ ಹತ್ತಿರ ನಿಂತಿದ್ದಾಗ ಅದೇ ವೇಳೆಗೆ ನಮ್ಮ ಸಂಬಂದಿಕನಾದ ನಿಂಗಪ್ಪ ತಂದೆ ನಿಜಪ್ಪ ಪೂಜಾರಿ ವಯಾ: 30 ಉ: ಹೊಲಮನೆಕೆಲಸ ಈತನು ಮುಖ್ಯ ರಸ್ತೆ ಮೇಲೆ ಸುರಪೂರ ಕಡೆಗೆ ಮೋಟಾರ ಸೈಕಲ್ ಮೇಲೆ ಹೋಗುವಾಗ ಅದೇ ವೇಳಗೆ ಹಿಂದುಗಡೆಯಿಂದ ಒಂದು ಮೋಟಾರ ಸೈಕಲ್ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಂಗಪ್ಪ ಪೂಜಾರಿ ಈತನ ಮೋಟಾರ ಸೈಕಲಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ್ದು, ಎರಡು ಮೋಟಾರ ಸೈಕಲ್ ಮೇಲೆ ಹೋಗುತ್ತಿದ್ದವರು ರಸ್ತೆ ಮೇಲೆ ಕೆಳಗೆ ಬಿದ್ದರು. ಆಗ ಅಲ್ಲೇ ಇದ್ದ ನಾನು ಓಡಿ ಹೋಗಿ ನೋಡಲಾಗಿ ನಮ್ಮ ಸಂಬಂದಿ ನಿಂಗಪ್ಪ ತಂದೆ ನಿಜಪ್ಪ ಪೂಜಾರಿ ಈತನಿಗೆ ಬಲಕಣ್ಣಿನ ಹತ್ತಿರ ತರಚಿದ ರಕ್ತಗಾಯ ಆಗಿದ್ದು, ತಲೆಗೆ ಭಾರಿ ಒಳಪೆಟ್ಟು ಆಗಿರುತ್ತದೆ. ಅಲ್ಲದೇ ಕಿವಿಯಿಂದ ರಕ್ತ ಬಂದು ಬೇವುಸ್ ಆಗಿ ಬಿದ್ದಿರುತ್ತಾನೆ. ಈತನು ನಡೆಸುತ್ತಿರುವ ಮೋಟಾರ ಸೈಕಲ್ ನಂಬರ ನೋಡಲಾಗಿ ಹೀರೋ ಹೊಂಡಾ ಸಿಡಿ ಡಿಲೆಕ್ಸ, ಎಮ್ಹೆಚ್-12/ಇಕೆ-5011 ಇರುತ್ತದೆ. ಹಿಂದಿನಿಂದ ಬಂದು ಡಿಕ್ಕಿ ಪಡಿಸಿದ ಮೋಟಾರ ಸೈಕಲ್ ನಂಬರ ನೋಡಲಾಗಿ ಕೆ.ಟಿ.ಎಮ್ 250 ಸಿಸಿ(ಡಕ್) ಕೆ.ಎ-04/ಜೆಜೆ-7020 ಇರುತ್ತದೆ. ಈ ಮೊಟಾರ ಸೈಕಲ್ನ ಮೇಲೆ ಇದ್ದ ಇಬ್ಬರ ಬಗ್ಗೆ ವಿಚಾರಿಸಲಾಗಿ ಮೊಟಾರ ಸೈಕಲ್ ನಡೆಸುತ್ತಿದ್ದ ಭರತ ತಂದೆ ಕೃಷ್ಣದಾಸ್ ರೊಡಲಬಂಡಿ ವಯಾ: 19 ವರ್ಷ ಉ: ವಿದ್ಯಾಥರ್ಿ ಸಾ: ಹುಣಸಗಿ ಇತನಿಗೆ ಎಡಕಾಲು ಹಿಂಬಡಿ ಹತ್ತಿರ ತರಚಿದ ರಕ್ತಗಾಯ ಆಗಿದ್ದು, ಮೊಟಾರ ಸೈಕಲ್ ಹಿಂದೆ ಕುಳಿತಿದ್ದ ಸುನಿಲ್ ತಂದೆ ಶಿವಪುತ್ರ ವಯಾ: 19 ವರ್ಷ ಉ: ವಿದ್ಯಾಥರ್ಿ ಸಾ: ಬಂಗಾರ ಹಟ್ಟಿ ತಾ: ಲಿಂಗಸೂರ ಜಿಲ್ಲಾ: ರಾಯಚೂರ ಅಂತಾ ಗೊತ್ತಾಗಿದ್ದು ಈತನಿಗೆ ಮೂಗಿಗೆ ತರಚಿದ ರಕ್ತಗಾಯ ಆಗಿರುತ್ತದೆ. ಈ ರಸ್ತೆ ಅಪಘಾತವಾದಾಗ ಅಂದಾಜು ಸಾಯಾಂಕಾಲ 5-30 ಗಂಟೆ ಆಗಿರುತ್ತದೆ. ನಂತರ 108 ವಾಹನದಲ್ಲಿ ಮೂರು ಜನರಿಗೆ ಉಪಚಾರ ಕುರಿತು ಶಹಾಪೂರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೆನು. ನಂತರ ನಮ್ಮ ಗಾಯಾಳು ನಿಂಗಪ್ಪ ತಂದೆ ನಿಜಪ್ಪ ಪೂಜಾರಿ ಈತನಿಗೆ ಹೆಚ್ಚಿನ ಉಪಚಾರ ಕುರಿತು ನಮ್ಮ ಅಣ್ಣನಾದ ಶೇಖಪ್ಪ ತಂದೆ ರಾಯಪ್ಪ ರಾಕಂಗೇರಿ ಸಾ: ನಂದಳ್ಳಿ ಹಾಲಿವಸತಿ: ಇಂಡಸ್ಟ್ರಿಯಾ ಏರಿಯಾ ಶಹಾಪೂರ ಇವರು ಯುನೈಟೆಡ ಆಸ್ಪತ್ರೆ ಕಲಬುರಗೆಗೆ ತೆಗೆದುಕೊಂಡು ಹೋಗಿರುತ್ತಾರೆ.ಕಾರಣ ನಮ್ಮ ಸಂಬಂದಿಯಾದ ನಿಂಗಪ್ಪ ತಂದೆ ನಿಜಪ್ಪ ಪೂಜಾರಿ ವಯಾ: 30 ಜಾತಿ: ಕುರುಬರ ಸಾ: ನಂದಳ್ಳಿ ಈತನು ನಡೆಸುತ್ತಿದ್ದ ಮೋಟಾರ ಸೈಕಲ್ ನಂ: ಹೀರೋ ಹೊಂಡಾ ಸಿಡಿ ಡಿಲೆಕ್ಸ, ಎಮ್ಹೆಚ್-12/ಇಕೆ-5011 ನೇದ್ದಕ್ಕೆ ಹಿಂದಿನಿಂದ ಕೆ.ಟಿ.ಎಮ್ 250 ಸಿಸಿ(ಡಕ್) ಕೆ.ಎ-04/ಜೆಜೆ-7020 ನೇದ್ದರ ಚಾಲಕನಾದ ಭರತ ತಂದೆ ಕೃಷ್ಣದಾಸ್ ರೊಡಲಬಂಡಿ ವಯಾ: 19 ವರ್ಷ ಸಾ: ಹುಣಸಗಿ ಈತನು ಡಿಕ್ಕಿ ಪಡಿಸಿ ಭಾರಿ ಒಳಪೆಟ್ಟು ಹಾಗೂ ತರಚಿದ ರಕ್ತಗಾಯ ಪಡಿಸಿದ್ದು, ಸದರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 32/2022 ಕಲಂ: 279,337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ.

 

 

ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 28/2022 ಕಲಂ 87 ಕೆಪಿ ಯ್ಯಾಕ್ಟ : ಇಂದು ದಿನಾಂಕ 01/03/2022 ರಂದು 04.30 ಪಿ.ಎಮ್.ಕ್ಕೆ ಫಿಯರ್ಾದಿ ಠಾಣೆಯಲ್ಲಿದ್ದಾಗಶಿರವಾಳ ಗ್ರಾಮದತಿಮ್ಮಪ್ಪನಗುಡಿ ಹತ್ತಿರ ಸಾರ್ವಜನಿಕಖುಲ್ಲಾಜಾಗದಲ್ಲಿ ಕೆಲವು ಜನರುದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿಅಂದರ ಬಾಹರಅಂತಇಸ್ಪೇಟಜೂಜಾಟಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ 05.40 ಪಿ.ಎಮ್ ಕ್ಕೆ ದಾಳಿ ಮಾಡಿದಾಗ 07 ಜನರು ಸಿಕ್ಕಿದ್ದು ಇಬ್ಬರು ಓಡಿ ಹೋಗಿದ್ದು ಸಿಕ್ಕ ಆರೋಪಿತರಿಂದ ಹಾಗು ಕಣದಲ್ಲಿಂದ ನಗದುಒಟ್ಟು ಹಣ 5850/- ರೂ, 52 ಇಸ್ಪೇಟ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕುರಿತು ವರದಿ ಸಲ್ಲಿಸಿರುತ್ತಾರೆ.

Last Updated: 02-03-2022 10:30 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080