Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 06-07-2022


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 112/2022 ಕಲಂ: 279, 337, 338 ಐಪಿಸಿ : ಇಂದು ದಿನಾಂಕ 05/07/2022 ರಂದು 8.30 ಪಿಎಂ ಕ್ಕೆ ಅಜರ್ಿದಾರರಾದ ನಾಗರಾಜ ತಂದೆ ಹಳ್ಳೆಪ್ಪ ಕವಲ್ದಾರ ವ|| 30ವರ್ಷ ಜಾ|| ಬೇಡರ ಉ|| ಕೂಲಿ ಸಾ|| ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ದಿನಾಂಕ 27/06/2022 ರಂದು ನಾನು ಮತ್ತು ನಮ್ಮ ಗೆಳೆಯನಾದ ರಾಮಪ್ಪ ತಂದೆ ಶರಣಪ್ಪ ಕಕ್ಕಸಗೇರಾ ವ|| 27 ಜಾ|| ಮಾದರ ಉ|| ಕೂಲಿ ಸಾ|| ಕೆಂಭಾವಿ ಇಬ್ಬರೂ ಕೂಡಿ ಅಟೋ ನಂ ಕೆಎ 33 7226 ನೇದ್ದರಲ್ಲಿ ಕೆಲಸದ ನಿಮಿತ್ಯ ಪರಸನಳ್ಳಿ ಗ್ರಾಮಕ್ಕೆ ಹೋಗಿ ಪರಸನಳ್ಳಿಯಿಂದ ಮರಳಿ ಅದೇ ಅಟೋದಲ್ಲಿ ಕೆಂಭಾವಿಗೆ ಬರುತ್ತಿದ್ದು ಅಟೋವನ್ನು ಭೀಮಾಶಂಕರ ತಂದೆ ಹಳ್ಳೆಪ್ಪ ಕವಲ್ದಾರ ಈತನು ನಡೆಸುತ್ತಿದ್ದನು. ದಿನಾಂಕ 27/06/2022 ರಂದು 4.30 ಪಿಎಂ ಸುಮಾರಿಗೆ ನಾವು ಕೆಂಭಾವಿ ಸುರಪೂರ ಮುಖ್ಯ ರಸ್ತೆಯ ಮೇಲೆ ಕೆಂಭಾವಿ ಹೊಸ ಬಸ್ ನಿಲ್ದಾಣದ ಹತ್ತಿರ ಬರುತ್ತಿದ್ದಾಗ ಅಟೋ ನಂ ಕೆಎ 33 7226 ನೇದ್ದರ ಚಾಲಕನಾದ ಭೀಮಾಶಂಕರ ಈತನು ಅಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಎಮ್ಮೆ ಅಡ್ಡ ಬಂದಿದ್ದರಿಂದ ಅದಕ್ಕೆ ಡಿಕ್ಕಿ ಹೊಡೆಯುವುದು ತಪ್ಪಿಸಲು ಹೋಗಿ ಒಮ್ಮೆಲೇ ಕಟ್ ಹೊಡೆದಿದ್ದರಿಂದ ಅಟೋ ಪಲ್ಟಿಯಾಗಿ ರೋಡಿನ ಪಕ್ಕದಲ್ಲಿ ಬಿದ್ದಿದ್ದು ನಾನು ಮತ್ತು ನಮ್ಮ ಗೆಳೆಯನಾದ ರಾಮಪ್ಪ ಇಬ್ಬರೂ ನೆಲಕ್ಕೆ ಬಿದ್ದು ಅಟೋದ ಕೆಳಗಡೆ ಸಿಲುಕಿದ್ದರಿಂದ ನನ್ನ ತಲೆಗೆ ಭಾರೀ ಗುಪ್ತಗಾಯ ಮತ್ತು ರಕ್ತಗಾಯವಾಗಿದ್ದು, ಎಡಗೈ ಭುಜಕ್ಕೆ ತರಚಿದ ರಕ್ತಗಾಯ ಮತ್ತು ಎಡಗಾಲಿನ ಮೊಣಕಾಲಿಗೆ ತರಚಿದ ರಕ್ತಗಾಯವಾಗಿದ್ದು ಇರುತ್ತದೆ. ನಮ್ಮ ಗೆಳೆಯನಾದ ರಾಮಪ್ಪನಿಗೆ ಮುಖಕ್ಕೆ ಭಾರೀ ರಕ್ತಗಾಯವಾಗಿ ನಾಲಿಗೆ ಕತ್ತರಿಸಿದಂತೆ ಆಗಿದ್ದು, ಹಲ್ಲುಗಳು ಬಿದ್ದಿದ್ದು, ಹಣೆಗೆ ರಕ್ತಗಾಯವಾಗಿದೆ ಮತ್ತು ಎರಡೂ ಕೈಗಳಿಗೆ, ಎರಡೂ ಕಾಲುಗಳಿಗೆ ತರಚಿದ ರಕ್ತಗಾಯವಾಗಿದ್ದು ಇರುತ್ತದೆ. ಅಟೋ ಚಾಲಕನಾದ ಭೀಮಾಶಂಕರನಿಗೆ ಯಾವುದೇ ಗಾಯಗಳಾಗಿರಲಿಲ್ಲ. ನಾವು ಅಟೋದ ಕೆಳಗಡೆ ಗಾಯಗಳಾಗಿ ಬಿದ್ದು ಒದ್ದಾಡುತ್ತಿದ್ದಾಗ ತಕ್ಷಣ ಅಟೋ ಚಾಲಕನಾದ ಭೀಮಾಶಂಕರ ಈತನು ಅಲ್ಲಿಯೇ ದಾರಿಯ ಮೇಲೆ ಹೋಗುತ್ತಿದ್ದ ನಮ್ಮೂರ ಪ್ರಕಾಶ ಬೈಚಬಾಳ ಮತ್ತು ದಶರಥ ಮೂಡಲಗೆರೆ ಇವರನ್ನು ಕರೆದುಕೊಂಡು ಬಂದು ಅಟೋವನ್ನು ಮೇಲಕ್ಕೆ ಎತ್ತಿ ನಮಗೆ ಎಬ್ಬಿಸಿದ್ದು ಅವರು ಮೂರೂ ಜನರು ಕೂಡಿ ನನಗೆ ಮತ್ತು ರಾಮಪ್ಪನಿಗೆ ಒಂದು ಖಾಸಗಿ ವಾಹನದಲ್ಲಿ ಸಕರ್ಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕರೆದುಕೊಂಡು ಹೋಗಿದ್ದು ನನಗೆ ಕಲಬುರಗಿಯ ಆಕ್ಸೋನ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿದ್ದು, ರಾಮಪ್ಪನಿಗೆ ಕಲಬುರಗಿಯ ಸಕರ್ಾರಿ ಆಸ್ಪತ್ರೆಯಲ್ಲಿ ಮತ್ತು ಚೇತನಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿದ್ದು ಇಬ್ಬರೂ ನಿನ್ನೆ ದಿನಾಂಕ 04/07/2022 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದಿರುತ್ತೇವೆ. ನಮಗೆ ಅಪಘಾತವಾದ ದಿನ ಹೆಚ್ಚಿನ ಗಾಯಗಳಾಗಿ ಮಾತನಾಡದ ಸ್ಥಿತಿಯಲ್ಲಿ ಇಲ್ಲದ ಕಾರಣ ಅರ್ಜಂಟಾಗಿ ಕಲಬುರಗಿ ಆಸ್ಪತ್ರೆಗೆ ಹೋಗಿದ್ದರಿಂದ ಆ ದಿನ ಠಾಣೆಗೆ ಬಂದು ದೂರು ನೀಡಲು ತಡವಾಗಿದ್ದು, ಸದ್ಯ ಉಪಚಾರ ಪಡೆದು ಗುಣಮುಖನಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ಅಟೋ ನಂ ಕೆಎ 33 7226 ನೇದ್ದರಲ್ಲಿ ಪರಸನಳ್ಳಿಯಿಂದ ಕೆಂಭಾವಿಗೆ ಬರುತ್ತಿದ್ದಾಗ ಅಟೋ ಚಾಲಕನಾದ ಭೀಮಾಶಂಕರನು ತನ್ನ ಅಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಒಮ್ಮೆಲೇ ಕಟ್ ಹೊಡೆದು ಪಲ್ಟಿ ಮಾಡಿದ್ದರಿಂದ ಅಟೋದಲ್ಲಿದ್ದ ನನಗೆ ಮತ್ತು ನಮ್ಮ ಗೆಳೆಯನಾದ ರಾಮಪ್ಪನಿಗೆ ಸಾದಾ ಮತ್ತು ಭಾರೀ ಸ್ವರೂಪದ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು, ಅಪಘಾತಪಡಿಸಿದ ಅಟೋ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಅಂತಾ ನೀಡಿದ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 112/2022 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Last Updated: 06-07-2022 10:29 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080