ಅಭಿಪ್ರಾಯ / ಸಲಹೆಗಳು

 ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 07-01-2023



ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ : 01/2023 ಕಲಂ:143, 147, 504, 323, 324, 506 ಸಂ 149 ಐಪಿಸಿ: ಮನೆ ಮುಂದಿನ ದಾರಿ ಸಂಬಂಧ ಜಗಳ ತೆಗೆದು ಎಲ್ಲರೂ ಸೇರಿ ಬಂದು ಫಿರ್ಯಾಧಿದಾರಳ ಗಂಡನಾದ ರಾಜಕುಮಾರಿನಿಗೆ ಕಟ್ಟಿಗೆಯಿಂದ ಮತ್ತು ಕೈಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 02/2023 ಕಲಂ: 279, 337, 338 ಐಪಿಸಿ: ಇಂದು ದಿ: 06/12/2022 ರಂದು 11-30 ಎ.ಎಮ್ಕ್ಕೆ ಪಿರ್ಯಾದಿ ಶ್ರೀ ಹೊನ್ನಪ್ಪ ತಂದೆ ಮೈಲಾರೆಪ್ಪ ಬಂಡೇರ ವ|| 70 ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ಬೋನಾಳ ಹಾ.ವ|| ಬಂಡೇರ ದೊಡ್ಡಿ ತಾ|| ಸುರಪೂರ ಇದ್ದು, ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುವದೆನೆಂದರೆ, ನನಗೆ ಇಬ್ಬರು ಗಂಡುಮಕ್ಕಳು ಹಾಗೂ 4 ಜನ ಹೆಣ್ಣುಮಕ್ಕಳು ಇದ್ದು ಎಲ್ಲರ ಮದುವೆಯಾಗಿರುತ್ತದೆ. ನನ್ನ ಮಗನಾದ ನಾಗಪ್ಪ ವಯಸ್ಸು|| 35 ವರ್ಷ ಈತನು ಸುಮಾರು 4-5 ವರ್ಷಗಳಿಂದ ತನ್ನ ಹೆಂಡತಿಯ ತವರೂರಾದ ಟಿ ಬೊಮನಳ್ಳಿ ಗ್ರಾಮದಲ್ಲಿ ಒಕ್ಕಲುತನ ಮಾಡಿಕೊಂಡು ವಾಸವಾಗಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ: 05/12/2022 ರಂದು ನಾನು ಮತ್ತು ನನ್ನ ಅಳಿಯ ಶಾಂತಪ್ಪ ತಂದೆ ಕನಕಪ್ಪ ಕುರಿ ಸಾ|| ಚಿಕನಳ್ಳಿ ಇಬ್ಬರು ನಮ್ಮ ಮನೆಯಲ್ಲಿದ್ದಾಗ ಬೆಳಿಗ್ಗೆ 9 ಗಂಟೆ ಸುಮಾರಿಗೆ ನನಗೆ ಪರಿಚಯದವಾರ ಟಿ ಬೊಮನಳ್ಳಿ ಗ್ರಾಮದ ನಿಂಗಪ್ಪ ತಂದೆ ಪರಮಣ್ಣ ಮಾಲಗತ್ತಿ ಈತನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ಮಾಚಗುಂಡಾಳ ಗ್ರಾಮದಲ್ಲಿ ಕೆಲಸವಿದ್ದ ನಿಮಿತ್ಯ ನಾನು ಮತ್ತು ನಮ್ಮೂರ ಮಲ್ಲಪ್ಪ ತಂದೆ ಮಾಳಪ್ಪ ದೇವಿಕೇರಿ ಇಬ್ಬರು ಕೂಡಿ ನನ್ನ ಮೋಟರ ಸೈಕಲ್ ಮೇಲೆ ಹಾಗೂ ನಿಮ್ಮ ಮಗನಾದ ನಾಗಪ್ಪ ಈತನು ತನ್ನ ಮೋಟರ ಸೈಕಲ್ ನಂ ಕೆಎ 35 ಎಕ್ಸ್ 1660 ನೇದ್ದರ ಮೇಲೆ ನಮ್ಮೂರಿನಿಂದ ಮಾಚಗುಂಡಾಳ ಗ್ರಾಮಕ್ಕೆ ಹೋಗುತ್ತಿದ್ದಾಗ ಇಂದು ಬೆಳಿಗ್ಗೆ 8.30 ಗಂಟೆ ಸುಮಾರಿಗೆ ಸುರಪುರ ಕೆಂಭಾವಿ ಮುಖ್ಯ ರಸ್ತೆಯ ಮಾಚಗುಂಡಾಳ ಗ್ರಾಮದ ಕವರ್ಿಂಗ್ ಹತ್ತಿರ ಎದುರುಗಡೆಯಿಂದ ಒಂದು ಕ್ರೂಷರ್ ವಾಹನದ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮುಂದೆ ಹೊರಟಿದ್ದ ನಿಮ್ಮ ಮಗ ನಾಗಪ್ಪನ ಮೋಟರ ಸೈಕಲ್ಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ನಾಗಪ್ಪನು ಮೋಟರ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದನು. ಆಗ ನಾನು ಮತ್ತು ಮಲ್ಲಪ್ಪ ಇಬ್ಬರು ಕೂಡಿ ನಮ್ಮ ಮೋಟರ ಸೈಕಲ್ ನಿಲ್ಲಿಸಿ ಬಿದ್ದ ಸ್ಥಳಕ್ಕೆ ಹೋಗಿ ನೋಡಲಾಗಿ ನಾಗಪ್ಪನಿಗೆ ತಲೆಯ ಬಲಭಾಗಕ್ಕೆ ಭಾರಿ ರಕ್ತಗಾಯವಾಗಿದ್ದು, ಬಲಗಣ್ಣಿನ ಹತ್ತಿರ ತರಚಿದ ಗಾಯ, ಗದ್ದಕ್ಕೆ ರಕ್ತಗಾಯ, ಬಲಗೈ ಹಸ್ತ ಹಾಗು ಮೊಳಕೈ ಹತ್ತಿರ ತರಚಿದ ಗಾಯ, ಬಲಮುಡ್ಡಿಗೆ ತರಚಿದ ಗಾಯ, ಬಲಗಾಲ ತೊಡೆ ಮತ್ತು ಮೊಳಕಾಲ ಕೆಳಗೆ ಮುರಿದಂತಾಗಿ ಬಾರಿ ಗಾಯವಾಗಿದ್ದು ಇರುತ್ತದೆ. ನಂತರ ಅಲ್ಲೆ ನಿಂತಿದ್ದ ಕ್ರೂಷರ್ ವಾಹನ ನಂಬರ ನೋಡಲಾಗಿ ಕೆಎ 28 ಎಮ್ 3922 ಅಂತ ಇದ್ದು, ಅದರ ಚಾಲಕನ ಹೆಸರು ವಿಳಾಸ ವಿಚಾರಿಸಲು ಪಾಡೆಶಾ ಮುಲಿನ್ ತಂದೆ ಗುಡನಶಾ ಕೊತ್ವಾಲ ಸಾ|| ಅಗ್ನಿ ಅಂತ ತಿಳಿಸಿದ್ದು ಗಾಯಗೊಂಡ ನಿಮ್ಮ ಮಗನಿಗೆ ಸರಕಾರಿ ಆಸ್ಪತ್ರೆ ಸುರಪುರಕ್ಕೆ ಕರೆದುಕೊಂಡು ಹೋಗುತ್ತೇವೆ ನೀವು ಬೇಗನೆ ಬನ್ನಿರಿ ಅಂತ ತಿಳಿಸಿದನು. ನಂತರ ನಾನು ಮತ್ತು ನಮ್ಮ ಅಳಿಯ ಶಾಂತಪ್ಪ ತಂದೆ ಕನಕಪ್ಪ ಕುರಿ ಸಾ|| ಚಿಕನಳ್ಳಿ ಇಬ್ಬರು ಕೂಡಿ ಕೂಡಲೆ ಸರಕಾರಿ ಆಸ್ಪತ್ರೆ ಸುರಪುರಕ್ಕೆ ಬಂದು ನನ್ನ ಮಗನಿಗೆ ನೋಡಲಾಗಿ ಮೇಲಿನಂತೆ ಗಾಯಗಳಾಗಿದ್ದು ಇರುತ್ತದೆ. ನನ್ನ ಮಗನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಲು ತಿಳಿಸಿದ್ದರಿಂದ ನಾನು ಮತ್ತು ನಮ್ಮ ಅಳಿಯ ಶಾಂತಪ್ಪ ಇಬ್ಬರು ಕೂಡಿ ನನ್ನ ಮಗ ನಾಗಪ್ಪನಿಗೆ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಕಾರಣ ಕ್ರೂಷರ್ ಜೀಪ್ ನಂ. ಕೆಎ 28 ಎಮ್ 3922 ನೇದ್ದರ ಚಾಲಕನಾದ ಪಾಡೆಶಾ ಮುಲಿನ್ ತಂದೆ ಗುಡನಶಾ ಕೊತ್ವಾಲ ಸಾ|| ಅಗ್ನಿ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.158/2022 ಕಲಂ:279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 01/2023 87 ಕೆ.ಪಿ ಯಾಕ್ಟ್: ಇಂದು ದಿನಾಂಕ 06/01/2023 ರಂದು 4.30 ಪಿಎಮ್ ಕ್ಕೆ ಹಣಮಂತ ಪಿ ಎಸ್ ಐ ಸಾಹೇಬರು ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ, ಮುದ್ದೆಮಾಲು, 7 ಜನ ಆರೋಪಿತರು ಮತ್ತು ಒಂದು ವರದಿ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ವರದಿಯ ಸಾರಾಂಶವೇನೆಂದರೆ, ಇಂದು ದಿನಾಂಕ 06/01/2023 ರಂದು 2.20 ಪಿಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಅಗ್ನಿ ಗ್ರಾಮದ ಹೊರವಲಯದಲ್ಲಿನ ಮೇನ್ ಕೆನಾಲ್ ಪಕ್ಕದಲ್ಲಿನ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣ ಪಣಕ್ಕಿಟ್ಟು, ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎನ್ನುವ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು ಮತ್ತು ಠಾಣೆಯ ಶಿವರಾಜ ಹೆಚ್.ಸಿ 85, ಶಿವಕುಮಾರ ಹೆಚ್ ಸಿ 91, ಪ್ರಭುಗೌಡ ಪಿಸಿ 361, ಮಾಳಪ್ಪ ಪಿಸಿ 29, ವೀರೇಶ ಪಿಸಿ 401, ವಿಜಯಾನಂದ ಪಿಸಿ 103 ಮತ್ತು ರವಿಕುಮಾರ ಎಹೆಚ್ಸಿ 38 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಮತ್ತು ಮಕ್ತುಮಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 2.30 ಪಿಎಂ ಕ್ಕೆ ಹೊರಟು 2.55 ಪಿಎಂ ಕ್ಕೆ ಅಗ್ನಿ ಗ್ರಾಮದ ಹೊರವಲಯದಲ್ಲಿನ ಮೇನ್ ಕೆನಾಲ್ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಹಣ ಪಣಕ್ಕಿಟ್ಟು ಅಂದರ್ ಬಾಹರ್ ಎನ್ನುವ ಇಸ್ಪೀಟ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು 3.00 ಪಿಎಂ ಕ್ಕೆ ನಾನು ಮತ್ತು ಸಿಬ್ಬಂದಿ ಜನರು ಕೂಡಿ ಒಮ್ಮೆಲೇ ದಾಳಿ ಮಾಡಿದ್ದು ದಾಳಿಯಲ್ಲಿ 7 ಜನರು ಸಿಕ್ಕಿದ್ದು ಸಿಕ್ಕವರ  ಹೆಸರು ವಿಳಾಸ ವಿಚಾರಿಸಲಾಗಿ 1) ನಿಂಗಣ್ಣ ತಂದೆ ಹೆಗ್ಗೇರೆಪ್ಪ ದೊಡ್ಡಮನಿ ವ|| 25 ಜಾ|| ಕುರುಬರ ಉ|| ಒಕ್ಕಲುತನ ಸಾ|| ಅಗ್ನಿ ತಾ|| ಹುಣಸಗಿ ಈತನ ಹತ್ತಿರ 500/- ರೂ 2) ಭಾಷಾಸಾಬ ತಂದೆ ಮದರಶಾ ಮಕನದಾರ ವ|| 62 ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಅಗ್ನಿ ಈತನ ಹತ್ತಿರ 900/- ರೂ 3) ಮಹಿಬೂಬ ತಂದೆ ಬಂದಗಿಶಾ ಮಕಾನದಾರ ವ|| 48 ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಅಗ್ನಿ ಈತನ ಹತ್ತಿರ 600/- ರೂ 4) ಮಹಿಬೂಬ ತಂದೆ ಬಂದೇನವಾಜ ಗೌಂಡಿ ವ|| 41 ಜಾ|| ಮುಸ್ಲಿಂ ಉ|| ಕೂಲಿ ಸಾ|| ಅಗ್ನಿ ಈತನ ಹತ್ತಿರ 500/- ರೂ 5) ಹೊನ್ನಿಂಗಪ್ಪ ತಂದೆ ಶರಣಪ್ಪ ಬಿರಾದಾರ ವ|| 30 ಜಾ|| ಲಿಂಗಾಯತ ಉ|| ಕೂಲಿ ಸಾ|| ಅಗ್ನಿ ಈತನ ಹತ್ತಿರ 1500/- ರೂ 6) ಭಾಷಾ ತಂದೆ ಪೀರಮಹ್ಮದ ಬಂಡಾರಿ ವ|| 38 ಜಾ|| ಮುಸ್ಲಿಂ ಉ|| ಕೂಲಿ ಸಾ|| ಅಗ್ನಿ ಈತನ ಹತ್ತಿರ 800/- ರೂ 7) ರಾಮನಗೌಡ ತಂದೆ ಹಣಮಂತ್ರಾಯ ಹಂದಿಗನೂರ ವ|| 32 ಜಾ|| ಗಾಣಿಗ ಉ|| ಚಾಲಕ ಸಾ|| ಅಗ್ನಿ ತಾ|| ಹುಣಸಗಿ ಈತನ ಹತ್ತಿರ 700/- ರೂ ಅಂತ ಇದ್ದು ಎಲ್ಲರ ಮಧ್ಯ ಕಣದಲ್ಲಿ 2600/- ರೂ ಹಣ ಸಿಕ್ಕಿದ್ದು ಹೀಗೆ ಒಟ್ಟು 8100/- ರೂ ನಗದು ಹಣ ಸಿಕ್ಕಿರುತ್ತವೆ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು ಅಲ್ಲದೇ ಅಲ್ಲಿಯೇ ಸ್ಥಳದಲ್ಲಿ 7 ಮೋಟರ ಸೈಕಲಗಳು ಬಿಟ್ಟು ಓಡಿ ಹೋಗಿದ್ದು ಅವುಗಳನ್ನು ಪರಿಶೀಲಿಸಿ ನೋಡಲು 1) ಹೋರೋ ಹೆಚ್.ಎಫ್ ಡಿಲಕ್ಸ್ ಮೋಟರ್ ಸೈಕಲ್  ನಂ ಕೆಎ 33 ಆರ್ 8631 ಅ.ಕಿ 15000/- 2) ಹೀರೋ ಸ್ಪ್ಲೆಂಡರ್ ಮೋಟಾರ ಸೈಕಲ್ ನಂ ಕೆಎ 28 ಎಕ್ಸ್ 4099 ಅ.ಕಿ 15000/- 3) ಹೀರೋ ಹೆಚ್ ಎಫ್ ಡಿಲಕ್ಸ ಮೋಟಾರ ಸೈಕಲ್ ನಂ ಕೆಎ 33 ಕ್ಯೂ 9372 ಅ.ಕಿ 15000/- 4) ಹೋಂಡಾ ಶೈನ್ ಮೋಟರ ಸೈಕಲ್ ನಂ ಕೆಎ 33 ಇಬಿ 3037 ಅ.ಕಿ 20000/- 5) ಬಜಾಜ್ ಪಲ್ಸರ್ ಮೋಟಾರ ಸೈಕಲ್ ನಂ ಕೆಎ 33 ಇಬಿ 2286 ಅ.ಕಿ 25000/- 6) ಹೋಂಡಾ ಶೈನ್ ಮೋಟಾರ ಸೈಕಲ್ ನಂ ಕೆಎ 33 ಇಎ 4382 ಅ.ಕಿ 20000/- 7) ಹೀರೋ ಪ್ಯಾಷನ್ ಪ್ರೋ ಮೋಟಾರ ಸೈಕಲ್ ನಂ ಕೆಎ 36 ಇಎಮ್ 8027 ಅ.ಕಿ 20000/- ನೇದ್ದವುಗಳು ಸಿಕ್ಕಿದ್ದು ಸದರಿ ದಾಳಿಯಲ್ಲಿ ಸಿಕ್ಕ ಹಣ, ಇಸ್ಪೀಟ ಎಲೆಗಳು ಮತ್ತು ಸೈಕಲ್ ಮೋಟಾರಗಳನ್ನು ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 3.00 ಪಿಎಂ ದಿಂದ 4.00 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿತರು ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಮರಳಿ ಠಾಣೆಗೆ 4.30 ಪಿಎಮ್ ಕ್ಕೆ ಬಂದು ಈ ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದರಿಂದ ಸದರಿ ವರದಿಯ ಸಾರಾಂಧ ಮೇಲಿಂದ ಠಾಣೆ ಗುನ್ನೆ ನಂ 01/2023 ಕಲಂ 87 ಕೆಪಿ ಯಾಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.



ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 07/2023 ಕಲಂ379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್: ಇಂದು ದಿನಾಂಕ 07/01/2023 ರಂದು 02.15 ಗಂಟೆಗೆ ಶ್ರೀ ಚೆನ್ನಯ್ಯ ಹಿರೇಮಠ ಪಿ.ಐ. ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಕೊಟ್ಟ ವರಧಿ ಏನಂದರೆ ಇಂದು ದಿನಾಂಕ 07/01/2023 ರಂದು 12.05 ಗಂಟೆಗೆ ಮಾನ್ಯ ಎಸ್ ಪಿ ಸಾಹೇಬರು ಯಾದಗಿರಿ ರವರ ಆದೇಶದಂತೆ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟುವ ಕುರಿತು ವಿಶೇಷ ಕರ್ತವ್ಯದ ನಿಮಿತ್ಯ ಶಹಾಪೂರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಾ ನಿಂತಾಗ ಬಂದ ಬಾತ್ಮಿ ಏನಂದರೆ ಶಹಾಪೂರ ಠಾಣಾ ವ್ಯಾಪ್ತಿಯ ಹೈಯಾಳ [ಬಿ] ಗ್ರಾಮದ ನದಿಯಿಂದ  ಒಂದು ಟಿಪ್ಪರದಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದು ತಾವು ಕೂಡಲೇ ಬರಬೇಕು ತಡವಾದರೆ ತಪ್ಪಿಸಿಕೊಳ್ಳುವ ಸಾದ್ಯತೆ ಇರುತ್ತದೆ ಅಂತ ಬಾತ್ಮಿ ಬಂದ ಮೇರೆಗೆ ನಾನು ಹಾಗು ನನ್ನ ಜೊತೆಯಲ್ಲಿದ್ದ ಸಿಬ್ಬಂದಿಯವರಾದ ನಿಂಗಪ್ಪ ಪಿಸಿ 284, ಮಹಾದೇವಪ್ಪ ಪಿಸಿ 334  ಹಾಗು ನಮ್ಮ ಜೀಪ ಚಾಲಕ ರುದ್ರಗೌಡ ಎಪಿಸಿ 34 ರವರಿಗೆ ಬಾತ್ಮೀ ವಿಷಯ ತಿಳಿಸಿ ನಂತರ ರಾತ್ರಿ ಗಸ್ತ ಸಿಬ್ಬಂದಿಯವರಾದ ಶಿವಲಿಂಗಪ್ಪ ಹೆಚ್ ಸಿ 185 ರವರಿಗೆ ಬಸವೇಶ್ವರ ವೃತ್ತಕ್ಕೆ ಕರೆಯಿಸಿಕೊಂಡು ಅವರಿಗೂ ಬಾತ್ಮೀ ವಿಷಯ ತಿಳಿಸಿ ನಂತರ ಎಲ್ಲರೂ ಕೂಡಿಕೊಂಡು ನಮ್ಮ ಸರಕಾರಿ ಜೀಪ್. ನಂ. ಕೆಎ-33 ಜಿ-0316 ನೇದ್ದರಲ್ಲಿ 12.15 ಗಂಟೆಗೆ ಹೊರಟು 12.45 ಗಂಟೆಗೆ ಹೈಯಾಳ [ಬಿ] ಗ್ರಾಮವನ್ನು ತಲುಪಿ, ಹೈಯಾಳ ಬಿ ಗ್ರಾಮದಿಂದ ಕೃಷ್ಣಾ ನದಿಗೆ ಹೋಗುವ ರಸ್ತೆಯ ಜಾಲಿಗಿಡಗಳ ಮರೆಯಲ್ಲಿ ನಿಂತು ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿರುವ ಟಿಪ್ಪರ ಬರುವದನ್ನು ಗಮನಿಸುತ್ತಾ ನಿಂತಾಗ, ರಾತ್ರಿ 01.00 ಗಂಟೆಗೆ ಒಂದು ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬಂದಿದ್ದು ಅದನ್ನು ನಾನು ಹಾಗು ಸಿಬ್ಬಂದಿಯವರೊಂದಿಗೆ ಸದರಿ ಟಿಪ್ಪರ ಹಾಗು ಚಾಲಕನನ್ನು ಹಿಡಿದು ವಿಚಾರಿಸಲಾಗಿ ಚಾಲಕನು ತನ್ನ ಹೆಸರು ಶರಣಪ್ಪ ತಂದೆ ಭೀಮಣ್ಣ ಕಂಬಾರ ವ|| 32 ಜಾ|| ಬೋವಿ ವಡ್ಡರ ಉ|| ಟಿಪ್ಪರ ಚಾಲಕ ಸಾ|| ಕಕ್ಕಸಗೇರಾ ತಾ|| ಶಹಾಪೂರ ಅಂತ ತಿಳಿಸಿದನು. ನಂತರ ಸದರಿ ಟಿಪ್ಪರದಲ್ಲಿದ್ದ ಮರಳಿನ ಬಗ್ಗೆ ದಾಖಲಾತಿಗಳನ್ನು ಹಾಜರುಪಡಿಸುವಂತೆ ಕೇಳಿದಾಗ ಆತನು ತನ್ನ ಹತ್ತಿರ ಯಾವದೇ ದಾಖಲಾತಿಗಳು ಇರುವದಿಲ್ಲ ಸದರಿ ಮರಳನ್ನು ತಮ್ಮ ಮಾಲೀಕರು ಹೇಳಿದಂತೆ ಹೈಯಾಳ [ಬಿ] ಪಕ್ಕದಲ್ಲಿರುವ ಕೃಷ್ಣಾ ನದಿಯಿಂದ ತೆಗೆದುಕೊಂಡು ಬರುತ್ತಿದ್ದು ನಮ್ಮ ಮಾಲೀಕರ ಹೆಸರು ಯಲ್ಲಪ್ಪ ಸಾ|| ಬೀರನಕಲ್ ಅಂತ ತಿಳಿಸಿದನು. ನಂತರ ಅಲ್ಲಿಯೇ ನಿಂತಿದ್ದ ಟಿಪ್ಪರ ನಂಬರ ನೋಡಲಾಗಿ ಅದರ ನಂಬರ ಕೆಎ-33 ಎ- 9835 ಅಂತ ಇದ್ದು ಸದರಿ ಟಿಪ್ಪರದಲ್ಲಿ ಅಂದಾಜು 12 ಕ್ಯೂಬಿಕ್ ಮೀಟರ್ ಮರಳು ಇದ್ದು ಅದರ ಅ,ಕಿ. 9,000/- ರೂ ಇದ್ದದ್ದು ಕಂಡು ಬಂದಿದ್ದು ಹಾಗು ಟಿಪ್ಪರನ ಅಂದಾಜು ಕಿಮ್ಮತ್ತು 10,00,000/- ರೂ ಆಗುತ್ತಿದ್ದು ಸದರಿ ಟಿಪ್ಪರ ಚಾಲಕನು ಸರಕಾರದಿಂದ ಯಾವದೇ ಮರಳು ಸಾಗಾಣಿಕೆ ಪರವಾನಿಗೆ ಪತ್ರ ಪಡೆಯದೇ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ, ಸದರಿ ಮರಳು ತುಂಬಿದ ಟಿಪ್ಪರ ಸಮೇತ 01.15 ಗಂಟೆಗೆ ಹೈಯಾಳ [ಬಿ] ಗ್ರಾಮವನ್ನು ಬಿಟ್ಟು ಮರಳು ತುಂಬಿದ ಟಿಪ್ಪರನ್ನು ಅದರ ಚಾಲಕನ ಸಹಾಯದಿಂದ ತೆಗೆದುಕೊಂಡು ಮರಳಿ ಠಾಣೆಗೆ 01.45 ಗಂಟೆಗೆ ಬಂದು ವರಧಿಯನ್ನು ತಯಾರಿಸಿ 02.15 ಗಂಟೆಗೆ ಮರಳು ತುಂಬಿದ ಟಿಪ್ಪರ ಹಾಗು ಅದರ ಚಾಲಕ ಮತ್ತು ಮಾಲೀಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಸಿಬೇಕು ಅಂತ ಸ||ತ|| ಫಿಯರ್ಾದಿದಾರನಾಗಿ ಈ ವರದಿ   ಸಲ್ಲಿಸಿದ್ದು ಸದರಿ ವರಧಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂಬರ 07/2023 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

ಇತ್ತೀಚಿನ ನವೀಕರಣ​ : 07-01-2023 11:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080