Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 08-03-2022


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 29/2022 ಕಲಂ 379 ಐಪಿಸಿ : ದಿನಾಂಕ 07-03-2022 ರಂದು ಮಧ್ಯಾಹ್ನ 01-30 ಗಂಟೆಗೆ ಪಿಯಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 01-03-2022 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಮೈಲಾಪೂರ ಮಲ್ಲಯ್ಯಗೆ ಹೋಗಬೇಕಂತ ನಾನು ಮತ್ತು ನಮ್ಮ ಮಾವ ರಮೇಶ ತಂದೆ ಕುಂಟೆನ್ನ ಚಿನ್ನತಾಯಪ್ಪೋಳ ಇಬ್ಬರು ಕೂಡಿ ನನ್ನ ಮೋಟರ ಸೈಕಲ್ ಮೇಲೆ ಅಲ್ಲಿಂದ ಮೈಲಾಪೂರಕ್ಕೆ ಬಂದೆವು ಮೈಲಾಪೂರದಲ್ಲಿ ದೇವರ ದರ್ಶನ ಮಾಡಲು ನಾವು ನಮ್ಮ ಮೋಟರ ಸೈಕಲನ್ನು ಕೆರೆಯ ದಂಡೆಯ ಮೇಲೆ ಮಧ್ಯಾಹ್ನ 03-30 ಗಂಟೆಗೆ ಬಿಟ್ಟು ನಾವು ಸ್ನಾನ ಮಾಡಿ ಬರಲು ಕೆರೆಯಲ್ಲಿ ಹೋಗಿ ಸ್ನಾನ ಮಾಡಿ ವಾಪಸ ನಮ್ಮ ಗಾಡಿ ಬಿಟ್ಟಲ್ಲಿಗೆ ಬಂದು ನೋಡಲಾಗಿ ನಾವು ನಿಲ್ಲಿಸಿದ ಮೋಟರ ಸೈಕಲ್ ಇರಲಿಲ್ಲ ಆಗ ನಾವು ಸುತ್ತ ಮುತ್ತ ಎಲ್ಲಾ ಕಡೆ ನೋಡಿದರು ನನ್ನ ಮೋಟರ ಸೈಕಲ್ ಇರಲಿಲ್ಲ. ಯಾರಾದರು ತೆಗೆದುಕೊಂಡು ಹೋಗಿರಬೇಕು ಅಂತಾ ನಾವು ಸಾಯಂಕಾಲದವರೆಗೆ ಅಲಲ್ಲಿ ನೋಡಿದರು ನಮ್ಮ ಮೋಟರ ಸೈಕಲ್ ಸಿಗಲಿಲ್ಲ. ನಾವು ನಮ್ಮ ಮೋಟರ ಸೈಕಲಗಾಗಿ ಅಲಲ್ಲಿ ಹುಡಕಾಡಿದರು ನಮ್ಮ ಮೋಟರ ಸೈಕಲ್ ಸಿಗಲಿಲ್ಲ ನಮ್ಮ ಮೋಟರ ಸೈಕಲನ್ನು ಯಾರೋ ಕಳ್ಳರು ದಿನಾಂಕ: 01-03-2022 ರಂದು ಮದ್ಯಾಹ್ನ 03-30 ಗಂಟೆ ಸುಮಾರಿಗೆ ಮೋಟರ ಸೈಕಲನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಮೋಟರ ಸೈಕಲ್ ಅಂದಾಜು ಕಿಮ್ಮತ್ತು 30 ಸಾವಿರ ಇರುತ್ತದೆ ಅಂತಾ ಪಿಯರ್ಾಧಿ.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 45/2022 ಕಲಂ: 279, 337, 338 ಐಪಿಸಿ, 187 ಐಎಂವಿ ಯಾಕ್ಟ್ : ಇಂದು ದಿನಾಂಕ 07/03/2022 ರಂದು 4.30 ಪಿಎಂ ಕ್ಕೆ ಅಜರ್ಿದಾರರಾದ ಶ್ರೀ ಪ್ರಶಾಂತ ತಂದೆ ಸಿದ್ರಾಮಪ್ಪ ಬಿರಾದಾರ ವ|| 27ವರ್ಷ ಜಾ|| ಹಿಂದೂ ರೆಡ್ಡಿ ಉ|| ಖಾಸಗಿ ಕೆಲಸ ಸಾ|| ಕೆಂಭಾವಿ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಒಂದು ಅಜರ್ಿಯನ್ನು ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನಮ್ಮ ತಂದೆಯವರಾದ ಸಿದ್ರಾಮಪ್ಪ ತಂದೆ ಗೊಲ್ಲಾಳಪ್ಪ ಬಿರಾದಾರ ವ|| 62ವರ್ಷ ಜಾ|| ಹಿಂದೂ ರೆಡ್ಡಿ ಉ|| ನಿವೃತ್ತ ಶಿಕ್ಷಕ ಸಾ|| ಕೆಂಭಾವಿ ಇವರು ಪ್ರತಿ ನಿತ್ಯದಂತೆ ದಿನಾಂಕ 03/03/2022 ರಂದು ಸಂಜೆ 6.30 ಗಂಟೆಯ ಸುಮಾರಿಗೆ ನಮ್ಮ ಮನೆಯಿಂದ ತಾಳಿಕೋಟಿ ರಸ್ತೆಯ ಜಾಕವೆಲ್ ಕಡೆಗೆ ವಾಕಿಂಗ್ ಹೋಗುತ್ತಿದ್ದರು. ಅವರೊಂದಿಗೆ ನಮ್ಮ ಸಂಬಂಧಿಕರಾದ ಸಂತೋಷ ತಂದೆ ಮಹಾದೇವಪ್ಪ ಕರುವಿನ್ ಹಾಗೂ ಬಸನಗೌಡ ತಂದೆ ಭೀಮನಗೌಡ ಕರುವಿನ್ ಇವರು ಕೂಡಾ ಹೋಗಿದ್ದರು. ನಂತರ ನಾನು ಮನೆಯಲ್ಲಿದ್ದಾಗ 6.40 ಗಂಟೆಯ ಸುಮಾರಿಗೆ ನಮ್ಮ ಸಂಬಂಧಿಕನಾದ ಸಂತೋಷ ಕರುವಿನ್ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾವು ತಾಳಿಕೋಟಿ ರಸ್ತೆ ಕಡೆಗೆ ಜಾಕವೆಲ್ ಬ್ರಿಜ್ ದಾಟಿ ಸ್ವಲ್ಪ ಮುಂದೆ ವಾಕಿಂಗ್ ಹೋಗುತ್ತಿದ್ದಾಗ ಹಿಂದಿನಿಂದ ಒಬ್ಬ ಸ್ಕೂಟಿ ಸೈಕಲ್ ಮೋಟಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ನಿಮ್ಮ ತಂದೆಯವರಾದ ಸಿದ್ರಾಮಪ್ಪ ಬಿರಾದಾರ ರವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದು ಅಪಘಾತದಿಂದಾಗಿ ನಿಮ್ಮ ತಂದೆಯವರು ಕೆಳಗೆ ಬಿದ್ದು ಬಲಗಾಲಿನ ತೊಡೆಗೆ, ಪಾದದ ಮೇಲೆ ಭಾರೀ ಗುಪ್ತಗಾಯ ಮತ್ತು ರಕ್ತಗಾಯವಾಗಿದ್ದು, ಎಡಗಡೆಯ ಸೊಂಟಕ್ಕೆ ಭಾರೀ ಗುಪ್ತಗಾಯವಾಗಿ ಎಲುಬು ಮುರಿದಂತೆ ಆಗಿದ್ದು ನಾನು ಮತ್ತು ಬಸನಗೌಡ ಕರುವಿನ್ ಇಬ್ಬರೂ ಕೂಡಿ ನಿಮ್ಮ ತಂದೆಯವರಿಗೆ ಒಂದು ಖಾಸಗಿ ವಾಹನದಲ್ಲಿ ಸಕರ್ಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಬರುತ್ತಿದ್ದು ನೀವು ಅಲ್ಲಿಗೆ ಬರ್ರಿ ಅಂತಾ ತಿಳಿಸಿದ್ದರಿಂದ ನಾನು ತಕ್ಷಣ ಕೆಂಭಾವಿ ಸಕರ್ಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ಅಲ್ಲಿ ನಮ್ಮ ತಂದೆಯವರಿಗೆ ಭಾರೀ ಗಾಯಗಳಾಗಿದ್ದು ಕಂಡು ಬಂದಿತು. ಕೆಂಭಾವಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಮಿರಾಜ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಸದ್ಯ ಸ್ವಲ್ಪ ಆರಾಮವಾಗಿದ್ದು, ನಮ್ಮ ತಂದೆಯವರಿಗೆ ಅಪಘಾತ ಮಾಡಿದ ಸೈಕಲ್ ಮೋಟಾರ ಸ್ಕೂಟಿ ವಾಹನದ ನಂಬರನ್ನು ಸಂತೋಷನಿಗೆ ವಿಚಾರಿಸಲಾಗಿ ನಂಬರ್ ಇಲ್ಲದ ಕಪ್ಪು ಬಣ್ಣದ ಸ್ಕೂಟಿ ಇದ್ದು ಅದರ ಚೆಸ್ಸಿ ನಂಬರ ನೋಡಿ ತಿಳಿದುಕೊಳ್ಳಲಾಗಿ ಒಅಆಖಆ1ಃ1ಗಿಇ1ಏ06223 ಇದ್ದು ಅಪಘಾತಪಡಿಸಿದ ಸ್ಕೂಟಿ ಸೈಕಲ್ ಮೋಟಾರ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ನಾನಾಗೌಡ ತಂದೆ ಸಂಗಣ್ಣ ಯಾಳಗಿ ಸಾ|| ನೀರಲಗಿ ಅಂತಾ ತಿಳಿದು ಬಂದಿದ್ದು, ಅಪಘಾತಪಡಿಸಿದ ಸೈಕಲ್ ಮೋಟಾರ ಚಾಲಕನಾದ ನಾನಾಗೌಡನು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ನಮ್ಮ ತಂದೆಯವರಾದ ಸಿದ್ರಾಮಪ್ಪ ಬಿರಾದಾರ ಇವರಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದರಿಂದ ಹೆಚ್ಚಿನ ಉಪಚಾರ ಕುರಿತು ವೈದ್ಯರ ಸಲಹೆಯಂತೆ ಮಿರಾಜ್ನ ಜಿ.ಎಸ್.ಕುಲಕಣರ್ಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಇಂದು ದಿನಾಂಕ 07/03/2022 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ಕೆಂಭಾವಿ ತಾಳಿಕೋಟಿ ರಸ್ತೆಯ ಜಾಕವೆಲ್ ಬ್ರಿಜ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ನಮ್ಮ ತಂದೆಯವರಿಗೆ ಸೈಕಲ್ ಮೋಟಾರ ಸ್ಕೂಟಿ ಚೆಸ್ಸಿ ನಂ ಒಅಆಖಆ1ಃ1ಗಿಇ1ಏ06223 ನೇದ್ದರ ಚಾಲಕನಾದ ನಾನಾಗೌಡ ತಂದೆ ಸಂಗಣ್ಣ ಯಾಳಗಿ ಈತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಮ್ಮ ತಂದೆಗೆ ಬಲಗಾಲಿನ ತೊಡೆಗೆ, ಪಾದದ ಮೇಲೆ ಭಾರೀ ಗುಪ್ತಗಾಯ ಮತ್ತು ರಕ್ತಗಾಯವಾಗಿದ್ದು, ಎಡಗಡೆಯ ಸೊಂಟಕ್ಕೆ ಭಾರೀ ಗುಪ್ತಗಾಯವಾಗಿ ಎಲುಬು ಮುರಿದಿದ್ದು ಅಪಘಾತಪಡಿಸಿದ ಸ್ಕೂಟಿ ಚಾಲಕನಾದ ನಾನಾಗೌಡ ತಂದೆ ಸಂಗಣ್ಣ ಯಾಳಗಿ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 45/2022 ಕಲಂ 279, 337, 338 ಐಪಿಸಿ ಮತ್ತು 187 ಐಎಂವಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 46/2022 ಕಲಂ: 143,147,323,324,504,506 ಸಂ 149 ಐಪಿಸಿ : ಇಂದು ದಿನಾಂಕ 07/03/2022 ರಂದು 8.30 ಪಿ.ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಗಂಗಾಬಾಯಿ ಗಂಡ ವಿಠ್ಠಲ ಮಾಲಿಪಾಟೀಲ ವ|| 40 ಜಾ|| ಲಿಂಗಾಯತ ಉ|| ಹೊಲಮನೆಗೆಲಸ ಸಾ|| ಅಗ್ನಿ ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಸದರಿ ಅಜರ್ಿಯ ಸಾರಾಂಶವೇನೆಂದರೆ, ನನಗೆ ಮದುವೆಯಾಗಿ 20 ವರ್ಷ ಗತಿಸಿದ್ದು ನನಗೆ ಕೋಡಬೋಗಿ ಗ್ರಾಮ ತಾ|| ಕೋಲ್ಹಾರ ಜಿ|| ವಿಜಯಪುರದ ವಿಠಲ ತಂದೆ ಬಸಪ್ಪ ಉದ್ದಾರ ಈತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಮದುವೆಯಾದಾಗಿನಿಂದಲೂ ನನ್ನ ಗಂಡ ಹಾಗು ನಾನು ಕೋಡಬೋಗಿ ಗ್ರಾಮವನ್ನು ಬಿಟ್ಟು ಅಗ್ನಿ ಗ್ರಾಮದಲ್ಲಿಯೇ ವಾಸವಾಗಿದ್ದೆವು. ಮದುವೆಯಾಗಿ ಸುಮಾರು 15 ವರ್ಷಗಳವರೆಗೆ ಚೆನ್ನಾಗಿ ಸಂಸಾರ ಮಾಡಿದ್ದು ಇರುತ್ತದೆ. ಸದ್ಯ ನನಗೆ ಐದು ಜನ ಹೆಣ್ಣು ಮಕ್ಕಳಿರುತ್ತಾರೆ. ಸುಮಾರು ನಾಲ್ಕು ವರ್ಷಗಳಿಂದ ನನ್ನ ಗಂಡನು ನನ್ನ ಜೊತೆ ಜಗಳಾ ಮಾಡಿ ಬೇರೆಯಾಗಿ ಇರುತ್ತಾನೆ. ನಾನು ನನ್ನಷ್ಟಕ್ಕೆ ನನ್ನ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ದಿನಾಂಕ 05/03/2022 ರಂದು ಮದ್ಯಾಹ್ನ 4.00 ಗಂಟೆಯ ಸುಮಾರಿಗೆ ನಾನು ನಮ್ಮ ಅಣ್ಣನ ಹೊಲದಲ್ಲಿ ಎಮ್ಮೆ ಮೇಯಿಸುತ್ತಿದ್ದಾಗ ನಮ್ಮೂರ ನಮ್ಮ ಅಣ್ಣ ತಮ್ಮಕೀಯ 1) ಶಾಂತಗೌಡ ತಂದೆ ಚನ್ನಪ್ಪಗೌಡ ಮಾಲಿ ಪಾಟೀಲ್ 2) ಬಸವರಾಜ ತಂದೆ ಸಂಗನಗೌಡ ಮಾಲಿ ಪಾಟೀಲ್ 3) ಸಿದ್ದನಗೌಡ ತಂದೆ ಬಸವರಾಜ ಮಾಲಿ ಪಾಟೀಲ್ 4) ಪ್ರಭು ತಂದೆ ಬಸವರಾಜ ಮಾಲಿ ಪಾಟೀಲ್ 5) ಭೀಮನಗೌಡ ತಂದೆ ಅಮರಪ್ಪಗೌಡ ಮಾಲಿ ಪಾಟೀಲ 6) ಚಂದ್ರಶೇಖರ ತಂದೆ ಭೀಮನಗೌಡ ಮಾಲಿಪಾಟೀಲ 7) ಅನಸುಬಾಯಿ ಗಂಡ ಭೀಮನಗೌಡ ಮಾಲಿ ಪಾಟೀಲ್ 8) ನಾನಾಗೌಡ ತಂದೆ ಬಸನಗೌಡ ಮಾಲಿ ಪಾಟೀಲ್ 9) ಆನಂದ ತಂದೆ ನಿಂಗನಗೌಡ ಮಾಲಿ ಪಾಟೀಲ್ 10) ಸಚಿನ್ ತಂದೆ ಶಾಂತಗೌಡ ಮಾಲಿ ಪಾಟೀಲ್ ಎಲ್ಲರೂ ಸಾ|| ಅಗ್ನಿ ಈ ಎಲ್ಲಾ ಜನರು ಕೂಡಿಕೊಂಡು ನನ್ನ ಹತ್ತಿರ ಬಂದವರೇ ಏನಲೇ ಸೂಳೀ ಇಲ್ಲಿ ಯಾಕೇ ಎಮ್ಮೆ ಮೇಯಿಸುತ್ತೀ ಅಂತ ಅಂದಾಗ ನಾನು, ಏಕೇ ಏನಾಯಿತು ನಮ್ಮ ಅಣ್ಣನ ಹೊಲದಲ್ಲಿ ನಾನು ಎಮ್ಮೆ ಮೇಯಿಸಿದರೇ ಏನಾಯಿತು ಅಂತ ಕೇಳಿದಾಗ ಸದರಿಯವರು ಈ ಸೂಳೆಯದು ಸೊಕ್ಕು ಬಹಳ ಆಗಿದೆ ಅಂತ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅವರಲ್ಲಿಯ ಬಸವರಾಜನು ಅಲ್ಲಿಯೇ ಬಿದ್ದ ಕಲ್ಲಿನಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿದನು. ಶಾಂತಗೌಡನು ಕುಳಿತಲ್ಲಿಯೇ ಬಿಡಬೇಡರೀ ಹೊಡಿರೀ ಈ ಸೂಳೆಗೆ ಅಂತಾ ಹೇಳಿದಾಗ ಸಿದ್ದನಗೌಡನು ಅಲ್ಲಿಯೇ ಬಿದ್ದ ಬಡಿಗೆಯಿಂದ ನನ್ನ ಎಡ ಕಿವಿಯ ಹತ್ತಿರ ಹೊಡೆದಿದ್ದರಿಂದ ತರಚಿದ ರಕ್ತಗಾಯವಾಗಿದ್ದು, ಉಳಿದವರು ಎಲ್ಲರೂ ಕೂಡಿ ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನನ್ನ ಮಗಳಾದ ರೇಣುಕಾ ತಂದೆ ವಿಠ್ಠಲ ಮಾಲೀ ಪಾಟೀಲ್ ಇವಳು ಅಡ್ಡ ಬಂದು ನನಗೆ ಹೊಡೆಯುವುದುನ್ನು ಬಿಡಿಸಿಕೊಂಡಳು. ನಂತರ ಎಲ್ಲರೂ ಹೊಡೆಯುವದನ್ನು ಬಿಟ್ಟು ಎಲೇ ಸೂಳೇ ಇನ್ನೊಮ್ಮೆ ಈ ಹೊಲದ ಕಡೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನನಗೆ ಗಾಯವಾಗಿದ್ದರಿಂದ ನಾನು ದಿನಾಂಕ 05/03/2022 ರಂದು ಕೆಂಭಾವಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಹೋಗಿ ಊರಲ್ಲಿ ವಿಚಾರಿಸಿಕೊಂಡು ನಾನು ತಡವಾಗಿ ಇಂದು ದಿನಾಂಕ 07/03/2022 ರಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ಮೇಲ್ಕಾಣಿಸಿದ 10 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 46/2022 ಕಲಂ 143,147,323,324,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Last Updated: 08-03-2022 10:12 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080