Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 10-01-2023



ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ : 03/2023 ಕಲಂ. 279, 337, 338 ಐಪಿಸಿ & 187 ಐ.ಎಮ್ ವಿ ಕಾಯ್ದೆ  : ದಿನಾಂಕ: 09-01-2023 ರಂದು ರಾತ್ರಿ 08-10 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಮ್ ಎಲ್ ಸಿ ಇದೆ ವಸೂಲಾಗಿದ್ದು ಎಮ್ ಎಲ್ ಸಿ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ಗಾಯಾಳುಗಳನ್ನು ವಿಚಾರಿಸಿದ್ದು ಪಿಯರ್ಾಧಿ ಸಾರಂಶವೆನೆಂದರೆ ದಿನಾಂಕ: 09-01-2023 ರಂದು ಪಿಯರ್ಾಧಿ ಮತ್ತು ಆಕಾಶ ಇಬ್ಬರು ಮೋಟರ ಸೈಕಲ್ ನಂ. ಕೆಎ-33 ಇಎ-6104 ನೇದ್ದರಲ್ಲಿ ಹೋಗುತಿದ್ದು ಮತ್ತು ಇತರೆ ಗಾಯಾಳುಗಳು ನಡೆದುಕೊಂಡು ಹೋಗುತ್ತಿರುವಾಗ ಕಾರ ನಂ. ಕೆಎ-05-ಎಇ-2052 ನೇದ್ದರ ಚಾಲಕನು ತಾನು ನಡೆಸುವ ಕಾರನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತ ಪಡಿಸಿದ್ದು ಕಾರನ್ನು ನಿಲ್ಲಿಸದೆ ಬಿಟ್ಟು ಓಡಿ ಹೋಗಿರುತ್ತಾನೆ ಅಪಘಾತದಲ್ಲಿ ತಿವ್ರ ಮತ್ತು ಸಾಧಾಸ್ವರೂಪದ ಗಾಯಗಳಾಗಿರುತ್ತವೆ ಅಂತಾ ಪಿಯರ್ಾಧಿ ಸಾರಂಶ.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 04/2023  ಕಲಂ 279, 338  ಐಪಿಸಿ:ದಿನಾಂಕ 08/01/2023 ರಂದು ರಾತ್ರಿ 10 ಪಿ.ಎಂ.ದ ಸುಮಾರಿಗೆ ಯಾದಗಿರಿ-ಹೈದ್ರಾಬಾದ್  ಮುಖ್ಯ ರಸ್ತೆಯ ಯಾದಗಿರಿ ನಗರದ ಗಂಜ್ ಕ್ರಾಸ್ ಹತ್ತಿರ ಈ ಕೇಸಿನ ಗಾಯಾಳು ತನ್ನ ಮೋಟಾರು ಸೈಕಲ್ ನಂಬರ ಕೆಎ-33, ಇಬಿ-1913 ನೇದ್ದರ ಮೇಲೆ ಮುಂಡರಗಿ ಕಡೆಯಿಂದ ನಾಯ್ಕಲ್ ಕಡೆಗೆ ಬರುತ್ತಿರುವಾಗ, ಬೂದಿ ಲಾರಿ ಟ್ಯಾಂಕರ್ ನಂಬರ ಕೆಎ-28, ಸಿ-3291 ನೇದ್ದರ ಚಾಲಕನು ಗಂಜ್ ಕಡೆಯಿಂದ ರಾಯಚೂರು ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಎದುರುಗಡೆ  ಬರುತ್ತಿದ್ದ  ಮೋಟಾರು ಸೈಕಲ್ ನೆದ್ದಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಮೊಟಾರು ಸೈಕಲ್ ಸವಾರನಿಗೆ ಬಲಗಾಲಿನ ತೊಡೆಯಿಂದ ಪಾದದವರೆಗೆ ಭಾರೀ ರಕ್ತಗಾಯವಾಗಿ ನುಜ್ಜುಗುಜ್ಜಾಗಿರುತ್ತದೆ ಹಾಗೂ ತಲೆಗೆ, ಹಣೆಗೆ ರಕ್ತಗಾಯ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯಗಳು ಆಗಿರುತ್ತವೆ ಅಪಘಾತಪಡಿಸಿದ ಲಾರಿ ಚಾಲಕನ ಕಾನೂನಿನ ಸೂಕ್ತ  ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿಯ  ಹೇಳಿಕೆ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ  04/2023 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು  ತನಿಖೆ ಕೈ ಕೊಂಡೆನು.  


ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 03/2023  ಕಲಂ: 279, 337, 338  ಐಪಿಸಿ: ಇಂದು ದಿನಾಂಕ 09/01/2023 ರಂದು 7:30 ಪಿ.ಎಂ ಕ್ಕೆ ಮಾನಪ್ಪ ತಂದೆ ತೇಜಪ್ಪ ರಾಠೋಡ ವ:50 ವರ್ಷ ಉ:ಕೂಲಿ ಕೆಲಸ ಜಾ:ಹಿಂದು ಲಮಾಣಿ ಸಾ:ಮಿಂಚೇರಿ ನಂ:-1 ತಾಂಡಾ ತಾ:ಲಿಂಗಸೂರ ಜಿ: ರಾಯಚೂರ 9611773342 ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಟೈಪುಮಾಡಿಸಿ ತಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ನನ್ನ ಮಗ ಮಲ್ಲೇಶ ಹಾಗೂ ನನ್ನ ಸೊಸೆ ಹೇಮವ್ವ ಇಬ್ಬರೂ ಕೂಡಿ ಕಬ್ಬು ಕಡಿಯುವ ಸಲುವಾಗಿ ಕೂಲಿ ಕೆಲಸಕ್ಕೆ ಹೋಗಿದ್ದರು. ನಾನು ಘಾಳಪೂಜಿಯಲ್ಲಿ ಕಬ್ಬ ಕಡಿಯುವ ಕೆಲಸಕ್ಕೆ ಹೋಗಿದ್ದೇನು. ದಿನಾಂಕ 02/01/2023 ರಂದು ರಾತ್ರಿ 10:30 ಪಿ.ಎಂ ಸುಮಾರಿಗೆ ನಾನು ಗಾಳಪೂಜಿಯಲ್ಲಿ ಇದ್ದಾಗ ನನ್ನ ಮಗ ಮಲ್ಲೇಶ ಕೆಲಸ ಮಾಡುಲು ಹೋಗಿದ್ದ ಕಬ್ಬಿನ ಡ್ರೈವರ ಆದಂತಹ ಜಗು ಈತನು ನನಗೆ ಪೋನ ಹಚ್ಚಿ ತಿಳಿಸಿದ್ದೆನೆಂದರೆ  ನಿಮ್ಮ ಮಗನಾದ ಮಲ್ಲೇಶ ಈತನು ದಿನಾಂಕ 02/01/2023 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ನಮಗೆ ಕಬ್ಬು ಲೋಡ ಮಾಡಿಕೊಟ್ಟು ಊರಿಗೆ ಹೋಗುವ ಸಲುವಾಗಿ ತನ್ನ ಮೋಟರ ಸೈಕಲ್ ತಗೆದುಕೊಂಡು ನನ್ನ ಮುಂದೆ ಹೊರಟಿದ್ದನು ನಾನು ಅವನ ಹಿಂದೆ ನನ್ನ ಟ್ರ್ಯಾಕ್ಟರ ತಗೆದುಕೊಂಡು ಬರುತ್ತಿದ್ದೆನು. ಮಲ್ಲೇಶ ಈತನು ತನ್ನ ಮೋಟರ ಸೈಕಲ್ ತಗೆದುಕೊಂಡು 9:00 ಪಿ.ಎಂ ಸುಮಾರಿಗೆ ಕೊಟೆಗಡ್ಡ ಸಮೀಪ ಇರುವ ಹಣಮಂತ ದೇವರ ಗುಡಿಯ ಹತ್ತಿರ ಹುಣಸಗಿ ನಾರಾಯಣಪೂರ ಮುಖ್ಯ ರಸ್ತೆಯ ಮೆಲೆ ಹೋಗುತ್ತಿದ್ದಾಗ ಎದುರಿನಿಂದ ಒಂದು ಬೊಲೇರೊ ಪಿಕಪ್ ವಾಹನ ಚಾಲಕನು ತನ್ನ ಬೊಲೇರೊ ಪಿಕಪ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಡ್ಡಿಯಾಗಿ ನಡೆಯಿಸಿಕೊಂಡು ಬಂದು ನನ್ನ ಮುಂದೆ ಹೋಗುತ್ತಿದ್ದ ಮಲ್ಲೇಶ ರಾಠೋಡ ಈತನ ಮೊಟರ ಸೈಕಲ್ಗೆ ಗುದ್ದಿದನು, ಮಲ್ಲೇಶ ಈತನು ಮೋಟರ ಸಮೇತ ಕೇಳಗೆ ಬಿದ್ದನು. ಆಗ ನಾನು ಕೂಡಲೇ ನನ್ನ ಟ್ರ್ಯಾಕ್ಟರ ನಿಲ್ಲಿಸಿ ಓಡಿ ನೋಗಿ ನೊಡಿದಾಗ ಮಲ್ಲೇಶನು ಮೋಟರ ಸೈಕಲ್ ಸಮೇತ ಕೆಳಗಡೆ ಬಿದ್ದಿದ್ದನು, ಬೋಲೇರೋ ಪಿಕಪ್ ವಾಹನ ಪಲ್ಟಿಯಾಗಿ ನಿಂತಿತ್ತು,  ಆಗ ನಾನು ಮೊಟರ ಸೈಕಲ್ ಹತ್ತಿರ ಹೋಗಿ ಮಲ್ಲೇಶನಿಗೆ ನೋಡಲಾಗಿ ಮಲ್ಲೇಶನಿಗೆ ಬಲಗಡೆ ಸೊಂಟದ ಹತ್ತಿರ ಎಲಬು ಮುರಿದಂತಾಗಿ ಬಾರಿ ರಕ್ತಗಾಯವಾಗಿದ್ದು ಹಾಗೂ ಬಲಗಾಲ ಮೊಳಕಾಲ ಹತ್ತಿರ ರಕ್ತಗಾಯ ವಾಗಿದ್ದು ಬಲಗೈ ಮುಂಗೈ ಹತ್ತಿರ ಹಾಗೂ ಹೊಟ್ಟೆಗೆ ಭಾರಿ ಒಳಪೆಟ್ಟಾದಂತೆ ಕಂಡು ಬಂದಿತು, ಮತ್ತು ಬಲಗಡೆ ಕಪಾಳಕ್ಕೆ ತರುಚಿದ ರಕ್ತಗಾಯವಾಗಿದ್ದು ಕಂಡು ಬಂದಿತು. ನಂತರ ನಾನು ಬುಲೇರೋ ಪಿಕ್ಪ್ ವಾಹನದ ಹತ್ತಿರ ಹೋಗಿ ನೊಡಲಾಗಿ ಅದರಲ್ಲಿ ಒಬ್ಬ ಚಾಲಕ ಇದ್ದು ಇನ್ನೊಬ್ಬ ಅವನ ಪಕ್ಕದಲ್ಲಿ ಕುಳಿತಿದ್ದನು. ನಾನು ಚಾಲಕನ ಹೆಸರು ಕೇಳಲಾಗಿ ಅವನು ತನ್ನ ಹೆಸರು ನರಪತ್ಸಿಂಗ ತಂದೆ ಮಾನಸಿಂಗ್ ಸಾ: ಕೊಡೆಕಲ್ಲ ಅಂತಾ ತಿಳಿಸಿದನು ನಂತರ ನಾನು ಅವನ ಪಕ್ಕದಲ್ಲಿ ಕುಳಿತವನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ದಿನೇಶ ತಂದೆ ರೋನ್ಸಡರಾಮ ಸಾ: ಕೊಡೆಕಲ್ಲ ಅಂತಾ ತಿಳಿಸಿದನು, ತಾವು ಕೊಡೆಕಲ್ಲಕ್ಕೆ ಹೋಗುತ್ತಿರುವದಾಗಿ ತಿಳಿಸಿದರು. ನಂತರ ನಾನು ಬುಲೇರೋ ಪಿಕಪ್ ವಾಹನದ ನಂಬರ ನೊಡಲಾಗಿ ಅದರ ನಂ ಕೆ.ಎ. 26 ಎ-1479 ಇರುತ್ತದೆ. ನಂತರ ನಾನು ಮಲ್ಲೇಶನ ಮೋಟರ ಸೈಕಲ್ ನಂ ನೋಡಲಾಗಿ ಅದರ ನಂ ಎಂ.ಹೆಚ್.12 ಜೆ.ಡಬ್ಲ್ಯು-1227 ಇರುತ್ತದೆ. ನಂತರ ಅಪಘಾತವಾದ ಕೂಡಲೆ ಕೊಟ್ಟಗುಡ್ಡ ಗ್ರಾಮದ ಬಸನಗೌಡ ಕೊಟೆಗುಡ್ಡ ಹಾಗೂ ಸಿದ್ದಪ್ಪ ಕೊಟೆಗುಡ್ಡ ಹಾಗೂ ಇತರರು ಅಲ್ಲಿಗೆ ಬಂದು 108 ವಾಹನಕ್ಕೆ ಕರೆಮಾಡಿದ್ದು ಸ್ವಲ್ಪ ಸಮಯದ ನಂತರ 108 ವಾಹನ ಬಂದಿತು, ನಂತರ ಅದರಲ್ಲಿ ಮಲ್ಲೇಶನಿಗೆ ಹಾಕಿಕೊಂಡು ಉಪಚಾರ ಕುರಿತು ಕೊಡೆಕಲ್ಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡುಹೋಗಿದ್ದು ಅಲ್ಲಿನ ವೈದ್ಯಾಧಿಕಾರಿಗಳು ಮಲ್ಲೇಶನಿಗೆ ಪ್ರಥಮೋಚಾರ ಮಾಡಿಸಿ ಹೆಚ್ಚಿನ ಉಪಚಾರ ಕುರಿತು ಲಿಂಗಸೂರ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದರು. ಆಗ ನಾನು ಈ ವಿಷಯವನ್ನು ನಮ್ಮ ಕಬ್ಬಿನ ಗ್ಯಾಂಗನಲ್ಲಿ ಕಬ್ಬು ಕಡಿಯುತ್ತಿದ್ದ ಮಲ್ಲೇಶನ ಹೆಂಡತಿ ಹೇಮವ್ವ ಹಾಗೂ ನಮ್ಮ ಗ್ಯಾಂಗಮನ್ ಹಣಮಂತನಿಗೆ ತಿಳಿಸಿದ್ದು,  ಸ್ವಲ್ಪ ಸಮಯದ ನಂತರ  ಅವರು ಅಲ್ಲಿಗೆ ಬಂದರು. ಆಗ ನಾನು ಮತ್ತು ಮಲ್ಲೇಶನ ಹೆಂಡತಿ ಹೇಮವ್ವ  ಹಾಗೂ ನಮ್ಮ ಕಬ್ಬಿನ ಗ್ಯಾಂಗಮನ್ ಹಣಮಂತರ ರವರು ಕೂಡಿ ನಿಮ್ಮ ಮಗ ಮಲ್ಲೇಶನಿಗೆ ಲಿಂಗಸೂರಿಗೆ ಕರೆದುಕೊಂಡು ಹೊರಟಿದ್ದೇವೆ ನೀನು ಅಲ್ಲಿಗೆ ಬಾ ಅಂತಾ ತಿಳಿಸಿದನು. ನಂತರ ನಾನು ದಿನಾಂಕ 03/01/2023 ರಂದು ಬೆಳಿಗ್ಗೆ ಲಿಂಗಸೂರ ಸರಕಾರಿ ಆಸ್ಪತ್ರೆಗೆ ಹೋಗಿ ನೊಡಿದಾಗ ಲಿಂಗಸೂರ ಸರಕಾರಿ ಆಸ್ಪತ್ರೆಯಲ್ಲಿ ನನ್ನ ಮಗ ಉಪಚಾರ ಹೊಂದುತ್ತಿದ್ದು ನನ್ನ ಮಗನಿಗೆ ನೊಡಲಾಗಿ ನನ್ನ ಮಗನಿಗೆ ಕಬ್ಬಿನ ಚಾಲಕ ಜಗು ಹೇಳಿದಂತೆ  ಗಾಯಗಳು ಆಗಿದ್ದವು. ನಂತರ ಲಿಂಗಸೂರ ವೈದ್ಯಾಧಿಕಾರಿಗಳು ನನ್ನ ಮಗನಿಗೆ ಹೆಚ್ಚಿನ ಉಪಚಾರ ಕುರಿತು ಬಳ್ಳಾರಿಯ ವಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ನಾನು ಹಾಗೂ ನನ್ನ ಸೊಸೆ ಹೇಮವ್ವ ರವರು ಕೂಡಿ ನನ್ನ ಮಗನಿಗೆ ಬಳ್ಳಾರಿಯ ವಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ನಂತರ ದಿನಾಂಕ 04/01/2023 ರಂದು ತಾವು ಎಂ.ಎಲ್.ಸಿ ವಿಚಾರಣೆ ಕುರಿತು ವಿಮ್ಸ ಆಸ್ಪತ್ರೆಗೆ ಬಂದು ನನ್ನ ಮಗ ಮಲ್ಲೇಶನಿಗೆ ಹಾಗೂ ನನಗೆ ಅಪಘಾತದ ಬಗ್ಗೆ ವಿಚಾರಣೆ ಮಾಡಿದ್ದು ಆಗ ನಾನು ಮತ್ತು ನನ್ನ ಮಗ ಮಲ್ಲೇಶ ಇಬ್ಬರು ತಮಗೆ ತಿಳಿಸಿದ್ದೆನೆಂದರೆ ನಮ್ಮ ಇನ್ನೊಬ್ಬ ಮಗ ಬರುವವನಿದ್ದು ಅವನೊಂದಿಗೆ ವಿಚಾರ ಮಾಡಿಕೊಂಡು ನಂತರ ಠಾಣೆಗೆ ಬಂದು ಪಿಯರ್ಾದಿ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಅದರ ಪ್ರಕಾರ ನಾನು ಇಂದು ಠಾಣೆಗೆ ಬಂದು ನನ್ನ ಮಗ ಮಲ್ಲೇಶನಿಗೆ ಅಪಘಾತವಾದ ಬಗ್ಗೆ ಪಿಯರ್ಾದಿ ಸಲ್ಲಿಸುತ್ತಿದ್ದು ನನ್ನ ಮಗನಿಗೆ ಅಪಘಾತ ಪಡಿಸಿದ ಬೊಲೇರೊ ಪಿಕಪ್ ವಾಹನದ ಚಾಲಕನ ಮೇಲೆ ಕೇಸು ಮಾಡಲು ಮಾನ್ಯರಲ್ಲಿ ವಿನಂತಿ. ನನ್ನ ಮಗ ಮಲ್ಲೇಶ ತಂದೆ ಮಾನಪ್ಪ ರಾಠೋಡ ವ:35 ವರ್ಷ ಈತನು ಇನ್ನು ವಿಮ್ಸ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದಾನೆ. ಅಂತಾ ಪಿಯರ್ಾದಿ ಇರುತ್ತದೆ. ಅಂತಾ ನೀಡಿದ ಪಿಯರ್ಾದಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 03/2023 ಕಲಂ 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 05/2023 ಕಲಂ: 143, 147, 504, 323, 341 506 ಸಂ 149 ಐಪಿಸಿ: ಮನೆ ಮುಂದೆ ಮುಸರಿ ನೀರು ಚೆಲ್ಲ ಬೇಡ ಎಂದಿದಕ್ಕೆ ಜಗಳ ತೆಗೆದು  ಅಕ್ರಮ ಕೂಟ ರಚನೆ ಮಾಡಿಕೊಂಡು ಬಂದು ತಡೆದು ನಿಲ್ಲಿಸಿ, ಕೈಯಿಂದ ಹೊಡೆಬಡೆ ಮಾಡಿದ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 06/2023 ಕಲಂ: 87 ಕೆ.ಪಿ ಎಕ್ಟ್: ಇಂದು ದಿನಾಂಕ:09/01/2023 ರಂದು 7-45 ಪಿಎಮ್ ಕ್ಕೆ ಶ್ರೀ ಸುನೀಲ್ ವ್ಹಿ. ಮೂಲಿಮನಿ ಸಿ.ಪಿ.ಐ ಯಾದಗಿರಿ ವೃತ್ತ ರವರು ಇಸ್ಪೀಟ್ ದಾಳಿ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ:09/01/2023 ರಂದು 3-30 ಪಿಎಮ್ ಕ್ಕೆ ನಾನು ಮತ್ತು ಯಾದಗಿರಿ ವೃತ್ತ ಮತ್ತು ವಡಗೇರಾ ಪೊಲೀಸ್ ಠಾಣೆ ಸಿಬ್ಬಂದಿಯವರಾದ 1) ತಾಯಪ್ಪ ಹೆಚ್.ಸಿ 79 ವಡಗೇರಾ ಠಾಣೆ, 2) ಮಹೇಂದ್ರ ಪಿಸಿ 254 ವಡಗೇರಾ ಠಾಣೆ, 3) ರಾಘವೇಂದ್ರರೆಡ್ಡಿ ಪಿಸಿ 255 ಯಾದಗಿರಿ ವೃತ್ತ ಕಛೇರಿ, 4) ಹರಿನಾಥರೆಡ್ಡಿ ಪಿಸಿ 267 ಯಾದಗಿರಿ ವೃತ್ತ ಕಛೇರಿ, 5) ಬಸವರಾಜ ಎ.ಹೆಚ್.ಸಿ 31 ವೃತ್ತ ಕಛೇರಿ ಜೀಪ ಚಾಲಕ ರವರೊಂದಿಗೆ ವೃತ್ತ ಕಛೇರಿಯಲ್ಲಿದ್ದಾಗ ನನಗೆ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಖಾನಾಪೂರ ಸೀಮಾಂತರದ ಹೊರ ವಲಯದಲ್ಲಿರುವ ಕೆರೆ ಕೋಡಿ ಕೆಳಗಡೆ ಸರಕಾರಿ ಖಾಲಿ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರ-ಬಾಹರ ಎಂಬ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿರುತ್ತದೆ. ಈ ಜೂಜಾಟದ ಬಾತ್ಮಿ ಬಂದ ವಿಷಯವನ್ನು ನಾನು ಮಾನ್ಯ ಡಿವೈ.ಎಸ್.ಪಿ ಸಾಹೇಬರಿಗೆ ತಿಳಿಸಿದೆನು. ಆಗ ಡಿವೈ.ಎಸ್.ಪಿ ಸಾಹೇಬರು ತಮ್ಮ ಸಿಬ್ಬಂದಿಯರಾದ ನಾಗರಾಜ ಪಿಸಿ 357 ಯಾದಗಿರಿ ಉಪ-ವಿಭಾಗ ಕಛೇರಿ ಮತ್ತು ಅಮರೇಶ ಎ.ಹೆಚ್.ಸಿ 47 ರವರೊಂದಿಗೆ ವೃತ್ತ ಕಛೇರಿಗೆ ಭೇಟಿ ನೀಡಿದರು. ನಂತರ ರಾಘವೇಂದ್ರ ಪಿಸಿ 255 ರವರ ಸಹಾಯದಿಂದ ಇಬ್ಬರೂ ಪಂಚರನ್ನು 3-45 ಪಿಎಮ್ ಕ್ಕೆ ಬರಮಾಡಿಕೊಂಡು ಸದರಿ ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಇಸ್ಪೀಟ ಜೂಜಾಟ ದಾಳಿ ವಿಷಯ ತಿಳಿಸಿ, ಡಿವೈ.ಎಸ್.ಪಿ ಸಾಹೇಬರು ತಮ್ಮ ಜೀಪಿನಲ್ಲಿ ಪಂಚರ ಮತ್ತು ತಮ್ಮ ಸಿಬ್ಬಂದಿಯವರಿಗೆ ತಮ್ಮ ಸರಕಾರಿ ಜೀಪ ನಂ. ಕೆಎ 33 ಜಿ 0251 ನೇದರಲ್ಲಿ ಕೂಡಿಸಿಕೊಂಡರು. ನಾನು ನಮ್ಮ ಜೀಪ ನಂ. ಕೆಎ 33 ಜಿ 0314 ರಲ್ಲಿ ನಮ್ಮ ಮತ್ತು ವಡಗೇರಾ ಸಿಬ್ಬಂದಿಯವರನ್ನು ಕೂಡಿಸಿಕೊಂಡು 4 ಪಿಎಮ್ ಕ್ಕೆ ಯಾದಗಿರಿ ವೃತ್ತ ಕಛೇರಿಯಿಂದ ಹೊರಟು 4-30 ಪಿಎಮ್ ಕ್ಕೆ ಖಾನಾಪೂರ ಸೀಮಾಂತರದ ಹೊರ ವಲಯದಲ್ಲಿರುವ ಊರ ಕೆರೆ ಕೆಳಗಡೆ ಇರುವ ಸರಕಾರಿ ಜಾಗದಲ್ಲಿ ಜಾಲಿ ಕಂಟಿಗಳ ಹತ್ತಿರ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ಸದರಿ ಜಾಲಿ ಗಿಡಗಳನ್ನು ಮರೆಯಾಗಿ ನಿಂತು ನೋಡಲಾಗಿ ಸದರಿ ಸರಕಾರಿ ಜಾಲಿ ಗಿಡಗಳ ಮದ್ಯ ಇರುವ ಖಾಲಿ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕಿಟ್ಟು ಅಂದರ-ಬಾಹರ ಎನ್ನುವ ಇಸ್ಪಿಟ್ ಜೂಜಾಟವನ್ನು ಆಡುತ್ತಿದ್ದರು. ಆಗ ಸದರಿ ಪಂಚರ ಸಮಕ್ಷಮ ನಾವೇಲ್ಲರೂ 4-45 ಪಿಎಮ್ ಕ್ಕೆ ಒಮ್ಮೆಲೆ ಇಸ್ಪಿಟ್ ಜೂಜಾಟ ಆಡುತ್ತಿದ್ದ ಜನರ ಮೇಲೆ ದಾಳಿ ಮಾಡಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದವರನ್ನು ವಶಕ್ಕೆ ಪಡೆದುಕೊಂಡು, ಸದರಿ ವಶಕ್ಕೆ ಪಡೆದವರನ್ನು ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವರು ತಮ್ಮ ಹೆಸರು 1) ಹಣಮಂತ ತಂದೆ ಬಾಬು ಬಂಢಾರಿ, ವ:25, ಜಾ:ಮಾದಿಗ, ಉ:ಗೌಂಡಿ ಕೆಲಸ ಸಾ:ಹುರುಸಗುಂಡಗಿ ತಾ:ಶಹಾಪೂರ ಅಂತಾ ಹೇಳಿದ್ದು ಸದರಿಯವನು ತಾನು ಪಣಕ್ಕೆ ಇಟ್ಟ ನಗದು ಹಣ 1360/- ರೂ ಮತ್ತು 21 ಇಸ್ಪೀಟ್ ಎಲೆಗಳು ತನ್ನ ಕೈಯಲ್ಲಿ ಇದ್ದದ್ದನ್ನು ಹಾಜರಪಡಿಸಿದನು. 2) ಹೊನಕೆರೆಪ್ಪ ತಂದೆ ಹಣಮಂತ ಸಗರ, ವ:35, ಜಾ:ಕಬ್ಬಲಿಗ, ಉ:ಕೂಲಿ ಸಾ:ಉಳ್ಳೆಸೂಗೂರು ತಾ:ವಡಗೇರಾ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 1050/- ರೂ, ಹಾಜರಪಡಿಸಿದನು. 3) ಶಿವಶಂಕರ ತಂದೆ ಶರಣಗೌಡ ಅಲಗೂರ, ವ:34, ಜಾ:ಅಂಬಿಗೇರ, ಉ:ಒಕ್ಕಲುತನ ಸಾ:ಬಲಶೆಟ್ಟಿಹಾಳ ತಾ:ಸುರಪೂರ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 1510/- ರೂ, ಹಾಜರಪಡಿಸಿದನು. 4) ಚಂದ್ರಾಮಪ್ಪ ತಂದೆ ದೇವಿಂದ್ರಪ್ಪ ಮಾಲಿಪಾಟಿಲ್, ವ:48, ಜಾ:ಕುರುಬರ, ಉ:ಒಕ್ಕಲುತನ ಸಾ:ತೇಕರಾಳ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 940/- ರೂ, ಹಾಜರಪಡಿಸಿದನು. 5) ಬಸಪ್ಪ ತಂದೆ ಭೀಮಪ್ಪ ಜಂಬೆ, ವ:42, ಜಾ:ಕಬ್ಬಲಿಗ, ಉ:ಒಕ್ಕಲುತನ ಸಾ:ಕುರುಕುಂದಾ ತಾ:ವಡಗೇರಾ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 760/- ರೂ, ಹಾಜರಪಡಿಸಿದನು. 6) ಜಿಲಾನಿ ತಂದೆ ಮಹಿಬೂಬಸಾಬ ನದಿಮುಲ್ಲಾ, ವ:30, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ನಾಯ್ಕಲ್ ತಾ:ವಡಗೇರಾ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 1830/- ರೂ, ಹಾಜರಪಡಿಸಿದನು. 7) ಶಿವಪ್ಪ ತಂದೆ ಮಲ್ಲಪ್ಪ ಕಸನ, ವ:32, ಜಾ:ಹರಿಜನ, ಉ:ಡ್ರೈವರ ಸಾ:ದೋರನಳ್ಳಿ ತಾ:ಶಹಾಪೂರ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 2100/- ರೂ, ಹಾಜರಪಡಿಸಿದನು. ಜೂಜಾಟದ ಸ್ಥಳದಲ್ಲಿ ಎಲ್ಲರ ಮಧ್ಯೆ 31 ಇಸ್ಪಿಟ್ ಎಲೆಗಳು ಮತ್ತು 3150/- ರೂ. ಹೀಗೆ ಒಟ್ಟು 12,700/- ರೂ. ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ದೊರೆತ್ತಿದ್ದು, ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆ ಚಿಟಿಯನ್ನು ಅಂಟಿಸಿ ಜಪ್ತಿ ಪಡಿಸಿಕೊಂಡೆನು. ಸದರಿ ಆರೋಪಿತರು ಮತ್ತು ಮುದ್ದೆಮಾಲಿನೊಂದಿಗೆ ಮರಳಿ ವಡಗೇರಾ ಪೊಲೀಸ್ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಈ ವರದಿ ಸಲ್ಲಿಸುತ್ತಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 06/2023 ಕಲಂ: 87 ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
 

Last Updated: 10-01-2023 10:25 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080