Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 11-07-2022


ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 54/2022 ಕಲಂ: 279, 304(ಎ) ಐಪಿಸಿ ಸಂ 187 ಐಎಮ್ವಿ: ಇಂದು ದಿನಾಂಕ:10.07.2022 ರಂದು ಬೆಳಿಗ್ಗೆ 09:00 ಗಂಟೆಗೆ ಪಿರ್ಯಾಧಿ ಶ್ರೀ ಧನಕಪ್ಪ ತಂದೆ ಪೂರಪ್ಪ ರಾಠೋಡ ವ:48 ವರ್ಷ ಉ:ಒಕ್ಕಲುತನ ಜಾ:ಹಿಂದೂ ಲಂಬಾಣಿ ಸಾ:ಮನ್ನಾನಾಯಕ ತಾಂಡಾ (ಬರದೇವನಾಳ) ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ತನ್ನ ಲಿಖಿತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರ ಪಿರ್ಯಾದಿಯ ಲಿಖಿತ ದೂರು ಅಜರ್ಿಯ ಸಾರಾಂಶವೆನೆಂದರೆ ನಾನು ಹೆಂಡತಿ ಮಕ್ಕಳೊಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದು ದಿನಾಂಕ 07.07.2022 ರಂದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ನನ್ನ ಅಣ್ಣನಾದ ಮಾನಪ್ಪ ರವರ ಮಗನಾದ ತುಕಾರಾಮ, ಇವರ ಮಗನಾದ ನನಗೆ ಮೊಮ್ಮಗನಾಗಬೇಕಾದ ಕುಮಾರ ತಂದೆ ತುಕಾರಾಮ ರಾಠೋಡ ಮತ್ತು ತುಕಾರಾಮನ ತಮ್ಮನಾದ ರಮೇಶ ತಂದೆ ಮಾನಪ್ಪ ಇವರಿಬ್ಬರೂ ಕೋಳಿಹಾಳ ತಾಂಡಾದಲ್ಲಿ ನಮ್ಮ ಬೀಗರ ಮನೆಯಲ್ಲಿ ದೇವರ ಕಾರ್ಯಕ್ರಮ ಇದ್ದುದರಿಂದ ಅಲ್ಲಿಗೆ ಹೋಗಲು ಮೋಟರ್ ಸೈಕಲ್ ನಂ:ಕೆಎ-33 ಎಕ್ಸ್-1700 ನೇದ್ದನ್ನು ತೆಗೆದುಕೊಂಡು ಮೋಟರ್ ಸೈಕಲ್ನ್ನು ಕುಮಾರನು ನಡೆಸುತ್ತಿದ್ದು ಮೋಟರ್ ಸೈಕಲ್ ಹಿಂದುಗಡೆ ಅವರ ಕಾಕನಾದ ರಮೇಶ ತಂದೆ ಮಾನಪ್ಪ ರಾಠೋಡ ಇತನು ಕುಳಿತಿಕೊಂಡು ಹೋಗಿದ್ದು ಇರುತ್ತದೆ. ನಂತರ ಸಾಯಂಕಾಲ 7:15 ಗಂಟೆಯ ಸುಮಾರಿಗೆ ನಾನು ನನ್ನ ಮಗನಾಗಬೇಕಾದ ತುಕಾರಾಮ ತಂದೆ ಮಾನಪ್ಪ ರಾಠೋಡ ಇವರ ಮನೆಯಲ್ಲಿದ್ದಾಗ ರಾಜನಕೊಳೂರ ಮಾರುತಿ ತಾಂಡಾದ ನಮ್ಮ ಸಂಬಂಧಿ ವೀರೇಶ ತಂದೆ ಶಂಕ್ರೆಪ್ಪ ಪವಾರ ಇವರು ತುಕಾರಾಮನಿಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ ನಾನು ಮತ್ತು ನಮ್ಮ ತಾಂಡಾದ ಕೃಷ್ಣಾ ತಂದೆ ಮೊತಿಲಾಲ ಪವಾರ ಇಬ್ಬರೂ ರಾಜನಕೊಳೂರ ಸರಕಾರಿ ಆಸ್ಪತ್ರೆಯ ಮುಂದಿನ ಗೇಟಿನ ಹತ್ತಿರ ನಿಂತಿದ್ದಾಗ ಹುಣಸಗಿ-ನಾರಾಯಣಪೂರ ಮುಖ್ಯ ರಸ್ತೆಯ ಮೇಲೆ ಕೊಡೆಕಲ್ಲ ಕಡೆಯಿಂದ ಒಬ್ಬ ಮೋಟರ್ ಸೈಕಲ್ ಸವಾರನು ಹಿಂದುಗಡೆ ಒಬ್ಬನನ್ನು ಕೂಡಿಸಿಕೊಂಡು ಬರುತ್ತಿದ್ದು ಅದೇ ವೇಳೆಗೆ ರಾಜನಕೊಳುರ ಕಡೆಯಿಂದ ಒಬ್ಬ ಕಾರ್ ಚಾಲಕನು ತನ್ನ ಕಾರ್ನ್ನು ಅತಿ ವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಯಿಸಿಕೊಂಡು ಬಂದು ಕೊಡೆಕಲ್ಲ ಕಡೆಯಿಂದ ಬರುತ್ತಿದ್ದ ಮೋಟರ್ ಸೈಕಲ್ಗೆ ಡಿಕ್ಕಿ ಪಡಿಸಿದ್ದು ಮೋಟರ್ ಸೈಕಲ್ ಸವಾರನು ಮೋಟರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು ಕಾರ್ ಚಾಲಕನು ಅಪಘಾತಪಡಿಸಿ ಕಾರ್ ಸಮೇತ ಓಡಿ ಹೋಗಿದ್ದು ಸದರಿ ಕಾರ್ ಬಿಳಿಯ ಬಣ್ಣದ್ದಿದ್ದು ಅದರ ನಂಬರ ನೋಡಿರುವದಿಲ್ಲ. ನಾನು ಮತ್ತು ಕೃಷ್ಣಾ ರವರು ಅಪಘಾತಕ್ಕೀಡಾದ ಮೋಟರ್ ಸೈಕಲ್ ಹತ್ತಿರ ಹೋಗಿ ನೋಡಲಾಗಿ ಮೋಟರ್ ಸೈಕಲ್ ಸವಾರನು ನಿಮ್ಮ ಮಗ ಕುಮಾರ ಇತನು ಇದ್ದು ಮೋಟರ್ ಸೈಕಲ್ ಹಿಂದೆ ಕುಳಿತವನು ನಿಮ್ಮ ತಮ್ಮ ರಮೇಶ ತಂದೆ ಮಾನಪ್ಪ ರಾಠೋಡ ಇತನು ಇದ್ದು ನೋಡಲಾಗಿ ನಿಮ್ಮ ಮಗ ಕುಮಾರನಿಗೆ ತಲೆಯ ಹಿಂಭಾಜು ಭಾರಿ ರಕ್ತಗಾಯವಾಗಿದ್ದು ಮತ್ತು ಕಿವಿಯಲ್ಲಿ ರಕ್ತಸ್ರಾವವಾಗಿದ್ದು, ಎಡಗಾಲಿನ ಮೊಳಕಾಲ ಕೆಳಗೆ ರಕ್ತಗಾಯವಾಗಿದ್ದು ಮೋಟರ್ ಸೈಕಲ್ ಹಿಂದೆ ಕುಳಿತಿದ್ದ ರಮೇಶನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ನಿಮ್ಮ ಮಗ ಕುಮಾರನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ನಾನು ಮತ್ತು ಕೃಷ್ಣಾ ತಂದೆ ಮೊತಿಲಾಲ ಪವಾರ ರವರು ನಿಮ್ಮ ಮಗ ಕುಮಾರನಿಗೆ ಉಪಚಾರಕ್ಕಾಗಿ ತಾಳಿಕೋಟಿ ಸಿದ್ದಿಬಸವ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ನೀನು ಕೂಡಲೇ ಬಾ ಅಂತ ತಿಳಿಸಿದ್ದರಿಂದ ತುಕಾರಾಮ ತಂದೆ ಮಾನಪ್ಪ ರಾಠೋಡ ಹಾಗೂ ಆತನ ಹೆಂಡತಿ ಸುಬ್ಬುಬಾಯಿ ಮತ್ತು ಸಂಬಂಧಿ ರಮೇಶ ತಂದೆ ಭೀಮಪ್ಪ ಎಲ್ಲರೂ ಕೂಡಿ ತಾಳಿಕೋಟಿ ಸಿದ್ದಿಬಸವ ಆಸ್ಪತ್ರೆಗೆ ದಿನಾಂಕ 07.07.2022 ರಂದು ರಾತ್ರಿ ಹೋಗಿದ್ದು ಕುಮಾರನಿಗೆ ಹೆಚ್ಚಿನ ಉಪಚಾರಕ್ಕಾಗಿ ವಿಜಯಪೂರದ ಭಾಗ್ಯವಂತಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಬಿಎಲ್ಡಿ ಆಸ್ಪತ್ರೆಗೆ ಹೋದ ಬಗ್ಗೆ ಅವರಿಗೆ ಗೊತ್ತಾಗಿ ಅಲ್ಲಿಗೆ ಹೋಗಿದ್ದು ಕುಮಾರನು ಬಿಎಲ್ಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದನು ಇಂದು ದಿನಾಂಕ 10.07.2022 ರಂದು ಮುಂಜಾನೆ 07:00 ಗಂಟೆಯ ಸುಮಾರಿಗೆ ನನಗೆ ತಮ್ಮನಾಗಬೇಕಾದ ತುಕಾರಾಮ ತಂದೆ ಮಾನಪ್ಪ ರಾಠೋಡ ಇತನು ಪೋನ್ ಮಾಡಿ ತಿಳಿಸಿದ್ದೆನೆಂದರೆ ತನ್ನ ಮಗನಾದ ಕುಮಾರ ಇತನು ಉಪಚಾರ ಫಲಿಸದೇ ಬೆಳಿಗ್ಗೆ 05:30 ಗಂಟೆಯ ಸುಮಾರಿಗೆ ಬಿಎಲ್ಡಿ ಆಸ್ಪತ್ರೆಯಲ್ಲಿ ಸತ್ತಿದ್ದು ಈ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡು ಅಂತ ತಿಳಿಸಿದ್ದು ನಾನು ಈಗ ತಮ್ಮ ಠಾಣೆಗೆ ಬಂದು ದೂರು ಕೊಡುತ್ತಿದ್ದು ದಿನಾಂಕ 07.07.2022 ರಂದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ನನ್ನ ಮೊಮ್ಮಗ ಕುಮಾರ ಇತನು ತನ್ನ ಮೋಟರ್ ಸೈಕಲ್ ನಂ:ಕೆಎ-33 ಎಕ್ಸ್ -1700 ನೇದ್ದನ್ನು ನಡೆಯಿಸಿಕೊಂಡು ರಾಜನಕೊಳೂರ ಸರಕಾರಿ ಆಸ್ಪತ್ರೆಯ ಮುಂದಿನ ಹುಣಸಗಿ ನಾರಾಯಣಪೂರ ಮುಖ್ಯ ರಸ್ತೆಯ ಮೇಲೆ ಹೋಗುತ್ತಿರುವಾಗ ಎದುರಿನಿಂದ ಒಂದು ಬಿಳಿಯ ಬಣ್ಣದ ಕಾರಿನ ಚಾಲಕನು ಕಾರ್ನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಮೋಟರ್ ಸೈಕಲ್ಗೆ ಡಿಕ್ಕಿ ಪಡಿಸಿದ್ದರಿಂದ ಈ ಅಪಘಾತದಲ್ಲಿ ಆದ ಗಾಯಗಳಿಂದ ನನ್ನ ಮೊಮ್ಮಗ ಕುಮಾರ ತಂದೆ ತುಕಾರಾಯ ರಾಠೋಡ ವ:20 ವರ್ಷ ಉ:ಕೂಲಿಕೆಲಸ ಇತನು ಉಪಚಾರ ಫಲಿಸದೇ ಇಂದು ಮುಂಜಾನೆ 05:30 ಗಂಟೆಯ ಸುಮಾರಿಗೆ ಬಿಎಲ್ಡಿ ಆಸ್ಪತ್ರೆಯಲ್ಲಿ ಸತ್ತಿದ್ದು ಮೋಟರ್ ಸೈಕಲ್ ಹಿಂದುಗಡೆ ಕುಳಿತಿದ್ದ ರಮೇಶ ತಂದೆ ಮಾನಪ್ಪ ರಾಠೋಡ ಇತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಉಪಚಾರ ಪಡೆದಿರುವದಿಲ್ಲ ಈ ಅಪಘಾತವು ಕಾರ್ ಚಾಲಕನ ನಿರ್ಲಲಕ್ಷತನದಿಂದಲೇ ಸಂಭವಿಸಿದ್ದು ಕಾರ್ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತ ಪಿರ್ಯಾಧಿ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:54/2022 ಕಲಂ 279, , 304(ಎ) ಐಪಿಸಿ ಸಂ 187 ಐಎಮ್ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 55/2022 ಕಲಂ: 143, 147, 148, 323, 324, 354, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ 10.07.2022 ರಂದು 3:00 ಪಿಎಮಕ್ಕೆ ಪಿರ್ಯಾದಿ ಶ್ರೀಮತಿ ಭಾರತಿ ಗಂಡ ಕೆಂಚಪ್ಪ ಗೊಳಸಂಗಿ ವ:42 ವರ್ಷ ಉ: ಬೃಂದಾ ಇಂಡೇನ್ ಗ್ರಾಮಿಣ ವಿತರಕರು ಜಾ:ಹಿಂದೂ ಮಾದರ ಸಾ:ಕಕ್ಕೇರಾ ತಾ:ಸುರಪೂರ ಜಿ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ತಂದ ಅಜರ್ಿಯನ್ನು ಹಾಜರುಪಡಿಸಿದ್ದು ಸದರ ಅಜರ್ಿಯ ಸಾರಾಂಶವೆನೆಂದರೆ ನಾನು ಗಂಡ ಮಕ್ಕಳೊಂದಿಗೆ ಬೃಂದಾ ಇಂಡೇನ್ ಗ್ರಾಮಿಣ ವಿತರಕರು ಅಂತ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ಈಗ ಹಲವಾರು ವರ್ಷಗಳ ಹಿಂದೆ ಕಕ್ಕೇರಾ ಪಟ್ಟಣಕ್ಕೆ (ಪರಿಶಿಷ್ಟ ಜಾತಿ) ಇಂಡೇನ್ ಗ್ಯಾಸ್ನ ಗ್ರಾಮೀಣ ವಿತರಕರಿಗಾಗಿ ಕಂಪನಿಯ ಕೇಂದ್ರ ಕಛೇರಿಯವರು ಅಜರ್ಿ ಕರೆದಾಗ ನಾನು ಹಾಗೂ ಕಕ್ಕೇರಾ ಪಟ್ಟಣದ ಇನ್ನಿತರ ಪರಿಶಿಷ್ಟ ಜಾತಿಯ ಜನರು ಅಜರ್ಿ ಹಾಕಿದ್ದು ಇರುತ್ತದೆ. ಅದು ನನ್ನ ಹೆಸರಿಗೆ ಮಂಜೂರಾಗಿದ್ದು, ಇದರಿಂದ ಪರಿಶಿಷ್ಟ ಜಾತಿಯ ಪರಮಣ್ಣ ತಂದೆ ಸೋಮನಿಂಗಪ್ಪ ದೊಡಮನಿ ಸಾ:ಕಕ್ಕೇರಾ ಇತನು ತನಗೆ ಎಜೆನ್ಸಿ ಸಿಗಲಿಲ್ಲವೆಂದು ಕುಪಿತಗೊಂಡು ನನಗೆ ಎಜೆನ್ಸಿ ಸಿಕ್ಕಿದಾಗಿನಿಂದಲೂ ಒಂದಿಲ್ಲ ಒಂದು ಕಿರಿಕಿರಿ ಮಾಡುತ್ತಾ ಇದ್ದು ನಮಗೆ ಹಾಗೂ ಪರಮಣ್ಣ ಮತ್ತು ಅವನ ಕುಟುಂಬದ ನಡುವೆ ಈ ವಿಷಯದ ಸಲುವಾಗಿ ಮನಸ್ತಾಪ ಇರುತ್ತದೆ.
ಹೀಗಿದ್ದು ದಿನಾಂಕ: 30-06-2022 ರಂದು ಸಾಯಂಕಾಲ ಸುಮಾರು 7:15 ಪಿಎಮ್ ಸುಮಾರಿಗೆ ಕಕ್ಕೇರಾ ಪಟ್ಟಣದ ಯು.ಕೆ.ಪಿ ಕ್ಯಾಂಪನ ಮೇನ್ಗೇಟ್ ಹತ್ತಿರದಲ್ಲಿರುವ ನಮ್ಮ ಮನೆಯ ಮುಂದೆ ನಾನು ಮತ್ತು ನನ್ನ ಗಂಡ ಕೆಂಚಪ್ಪ ರವರು ಕುಳಿತಿದ್ದು ಆಗ ಕಕ್ಕೇರಾ ಪಟ್ಟಣದ 1) ಪರಮಣ್ಣ ತಂದೆ ಸೋಮನಿಂಗಪ್ಪ ದೊಡ್ಡಮನಿ ಪರಿಶಿಷ್ಟ ಜಾತಿಯ ಹೊಲೆಯ (ಚಲುವಾದಿ) ವಯಸ್ಸು 48 ಸಾ:ಕಕ್ಕೇರಾ ಮತ್ತು ಆತನೊಂದಿಗೆ 2) ಗೀರಿಜಾ ಗಂ: ಪರಮಣ್ಣ ದೊಡ್ಡಮನಿ ವಯಸ್ಸು 35 ಸಾ: ಕಕ್ಕೇರಾ 3) ದೇವಪ್ಪ ತಾಯಿ ಬಸಲಿಂಗಮ್ಮ ಎಂಟಮನಿ ವಯಸ್ಸು 36 ಸಾ: ಕಕ್ಕೇರಾ 4) ಮರೆಪ್ಪ ತಾಯಿ: ಭೀಮವ್ವ ಕಾಂಗ್ರೇಸ್ ವಯಸ್ಸು 46 ಸಾ: ಕಕ್ಕೇರಾ 5) ಮರೆಪ್ಪ ತಂ: ಸೋಮನಿಂಗಪ್ಪ ದೊಡ್ಡಮನಿ ವಯಸ್ಸು 53 ಸಾ: ಕಕ್ಕೇರಾ 6) ಪರಶುರಾಮ ತಂದೆ ದೇವಪ್ಪ ದೇವರಮನಿ ವಯಸ್ಸು 29 ಸಾ: ಕಕ್ಕೇರಾ ಇವರೆಲ್ಲರೂ ಕೂಡಿಕೊಂಡು ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಬಂದು ಪರಮಣ್ಣ ಇತನು ನನಗೆ ಲೇ ಸೂಳಿ, ರಂಡೀ, ಬೋಸೂಡಿ ನಿಂದೂ ಬಾಳ ಆಗಿದೆ ಅಂತಾ ಅಂದವನೇ ಕೈಯಿಂದ ನನ್ನ ಡುಬ್ಬದ ಮೇಲೆ ಹೊಡೆದು ಒಳಪೆಟ್ಟುಮಾಡಿದ್ದು, ನನ್ನ ತಲೆ ಕೂದಲನ್ನು ಹಿಡಿದು ನೆಲಕ್ಕೆ ಕೆಡವಿಹಾಕಿ ನನ್ನ ಓಡನಿಯನ್ನು ಹಿಡಿದು ಎಳೆದಾಡಿ ಮಾನಭಂಗಪಡಿಸಲು ಪ್ರಯತ್ನಿಸಿದ್ದು ಆಗ ಅಲ್ಲಿಯೇ ಇದ್ದ ನನ್ನ ಗಂಡ ನನಗೆ ಮಾನಭಂಗ ಪಡಿಸುವದನ್ನು ಬಿಡಿಸಿದ್ದು ಇರುತ್ತದೆ. ಆಗ ಪರಮಣ್ಣನು ನನ್ನ ಗಂಡನಿಗೆ ಏನಲೇ ಬೊಸಡಿ ಮಗನೇ ಕೆಂಚ್ಯಾ ಬಿಡಿಸಲು ಬಂದಿಯಾ ಅಂತ ತನ್ನ ಕಾಲಿನಿಂದ ನನ್ನ ಗಂಡನ ಹೊಟ್ಟೆಗೆ ಒದ್ದು ಒಳಪೆಟ್ಟು ಮಾಡಿ, ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯಿಂದ ನನ್ನ ಗಂಡನ ಬಲಭುಜಕ್ಕೆ ಹೊಡೆದು ಒಳಪೆಟ್ಟು ಮಾಡಿದ್ದು, ನಂತರ ಅವರಲ್ಲಿಯ ಗಿರಿಜಾ ಇವಳು ನನಗೆ ಏನಲೇ ರಂಡಿ ನಮ್ಮ ಕುಟುಂಬದ ತಂಟೆಗೆ ಬರುತ್ತೀಯಾ ಅಂತ ತನ್ನ ಕೈಯಿಂದ ನನ್ನ ಎಡ ಕಪಾಳದ ಮೇಲೆ ಹೊಡೆದಿದ್ದು, ಮರೆಪ್ಪ ಕಾಂಗ್ರೆಸ್ ಇತನು ನನ್ನ ಗಂಡನ ಡುಬ್ಬದ ತನ್ನ ಕೈಯಿಂದ ಹೊಡೆದು ಒಳಪೆಟ್ಟು ಮಾಡಿದ್ದು, ಆಗ ದೇವಪ್ಪ ಇತನು ನನ್ನ ಗಂಡನಿಗೆ ಲೇ ರಂಡಿ ಮಗನೇ ಕೆಂಚ್ಯಾ ನಮ್ಮ ತಂಟೆಗೆ ಬಂದರೇ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತ ತನ್ನ ಕೈಯಿಂದ ನನ್ನ ಗಂಡನ ಕಪಾಳಕ್ಕೆ ಹೊಡೆದಿದ್ದು, ಪರಶುರಾಮ ಇತನು ನನಗೆ ಮತ್ತು ನನ್ನ ಗಂಡನಿಗೆ ಲೇ ಬೋಸಡಿ ಮಕ್ಕಳೇ ನಿಮಗೆ ಸೊಕ್ಕು ಬಾಳ ಆಗಿದೆ ಅಂತ ನನ್ನ ಕಪಾಳಕ್ಕೆ ಹೊಡೆದಿದ್ದು ಇದರಿಂದ ನನ್ನ ದವಡೆಗೆ ಪೆಟ್ಟು ಆಗಿದ್ದು, ನಂತರ ಮರೆಪ್ಪ ದೊಡಮನಿ ಇತನು ನನ್ನ ಗಂಡನಿಗೆ ನೆಲಕ್ಕೆ ಕೆಡವಿ ತನ್ನ ಕಾಲಿನಿಂದ ಎದೆಯ ಮೇಲೆ ಸೊಂಟದ ಮೇಲೆ ಒದ್ದು ಒಳಪೆಟ್ಟು ಮಾಡಿದ್ದು ಆಗ ನಾನು ಮತ್ತು ನನ್ನ ಗಂಡ ನಮ್ಮನ್ನು ಉಳಿಸಿರಪ್ಪೋ ಅಂತ ಚೀರಾಡುತ್ತಿರುವಾಗ ಅಲ್ಲಿಯೇ ನಮ್ಮ ಮನೆಯ ಮುಂದಿನ ರಸ್ತೆಯ ಮೇಲಿಂದ ಹೋಗುತ್ತಿದ್ದ 1) ಧರ್ಮಣ್ಣ ತಂದೆ ಅಮ್ಮಣ್ಣ ತೆಳಗೇರಿ 2)ದೇವಿಂದ್ರಪ್ಪ ತಂದೆ ನಿಂಗಣ್ಣ ಗುರಿಕಾರ 3)ನೀಲಪ್ಪ ತಂದೆ ಭೀಮಣ್ಣ ಗೌಡಗೇರಿ ಸಾ:ಎಲ್ಲರೂ ಕಕ್ಕೇರಾ ಇವರು ನಮಗೆ ಹೊಡೆಯುವದನ್ನು ನೋಡಿ ಬಿಡಿಸಿದ್ದು ಒಂದು ವೇಳೆ ಅವರು ಬಂದು ಜಗಳ ಬಿಡಿಸದೇ ಇದ್ದರೇ ನಮ್ಮನ್ನು ಜೀವ ಸಹಿತ ಬಿಡುತ್ತಿರಲಿಲ್ಲ. ನಂತರ ಅವರೆಲ್ಲರೂ ಹೋಗುವಾಗ ನನಗೆ ಮತ್ತು ನನ್ನ ಗಂಡನಿಗೆ ಸೂಳೆ ಮಕ್ಕಳೆ ಇವತ್ತು ನಮ್ಮ ಕೈಯಲ್ಲಿ ಉಳಿದುಕೊಂಡಿರೀ ಇನ್ನೊಮ್ಮೆ ಸಿಕ್ಕಾಗ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಅಂತ ಹೇಳಿ ಹೋಗಿದ್ದು ನಂತರ ನಾನು ಮತ್ತು ಜಗಳ ಬಿಡಿಸಿದ ಧರ್ಮಣ್ಣ, ನೀಲಪ್ಪ ಮತ್ತು ದೇವಿಂದ್ರಪ್ಪ ರವರು ಕೂಡಿಕೊಂಡು ನನ್ನ ಗಂಡನನ್ನು ಕಕ್ಕೇರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಿನಾಂಕ 30.06.2022 ಸೇರಿಕೆ ಮಾಡಿದ್ದು ನಾನು ಇಷ್ಟು ದಿನ ನಮ್ಮ ಮನೆಯಲ್ಲಿ ಹಾಗೂ ಸಂಬಂಧಿಕರಿಗೆ ಮತ್ತು ನಮ್ಮ ಸಮಾಜದ ಮುಖಂಡರೊಂದಿಗೆ ವಿಚಾರ ಮಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನನಗೆ ಮಾನಭಂಗ ಪಡಿಸಲು ಪ್ರಯತ್ನಿಸಿ ನನಗೆ ಮತ್ತು ನನ್ನ ಗಂಡನಿಗೆ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 6 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ತಮ್ಮಲ್ಲಿ ವಿನಂತಿ ಅಂತ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 55/2022 ಕಲಂ:143, 147, 148, 323, 324, 354, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡೆನು.

 

ಗೋಗಿ ಪೊಲೀಸ ಠಾಣೆ:-
ಗುನ್ನೆ ನಂ: 47/2022 ಕಲಂ 87 ಕೆಪಿ ಯ್ಯಾಕ್ಟ: ಇಂದು ದಿನಾಂಕ: 10/07/2022 ರಂದು 07.20 ಪಿ.ಎಮ್.ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಅಯ್ಯಪ್ಪ ಪಿಎಸ್ಐ ಗೋಗಿ ಪೊಲೀಸ್ ಠಾಣೆ. ರವರು ಆರೋಪಿತರು ಮತ್ತು ಜಪ್ತಿ ಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ:10/07/2022 ರಂದು 03.50 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಹೋಸಕೇರಾ ಬಂಗ್ಲಾ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿನ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಯಾರೋ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದರಿಂದ, ಪಂಚರು ಮತ್ತು ಸಿಬ್ಬಂದಯವರೊಂದಿಗೆ ಕೂಡಿಕೊಂಡು 04.50 ಪಿ.ಎಮ್ ಕ್ಕೆ ದಾಳಿ ಮಾಡಿದ್ದು, ದಾಳಿಯಲ್ಲಿ ಮೇಲಿನ 14 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು, ಸಿಕ್ಕಿಬಿದ್ದವರಿಂದ ಮತ್ತು ಜೂಜಾಟ ಕಣದಲ್ಲಿದ್ದ ಒಟ್ಟು ನಗದು ಹಣ 12,700=00 ರೂ, 52 ಇಸ್ಪೇಟ ಎಲೆಗಳನ್ನು ದಿನಾಂಕ:10/07/2022 ರಂದು 04.55 ಪಿಎಮ್ ದಿಂದ 06.05 ಪಿಎಮ್ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ಪಡೆದು ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಆರೋಪಿತರನ್ನು, ಮುದ್ದೇಮಾಲನ್ನು ಹಾಜರ ಪಡಿಸಿ ಕ್ರಮ ಜರುಗಿಸಲು 07.20 ಪಿಎಮ್.ಕ್ಕೆ ವರದಿ ನೀಡಿದ್ದು ವರದಿಯ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 47/2022 ಕಲಂ, 87 ಕೆ.ಪಿ. ಯಾಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Last Updated: 11-07-2022 12:38 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080