Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 11-11-2022


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 55/2022 ಕಲಂ 279, 338, 304(ಎ) ಐ.ಪಿ.ಸಿ: ಇಂದು ದಿನಾಂಕ: 10/11/2022 ರಂದು 7:30 ಪಿ.ಎಮ್.ಕ್ಕೆ ಜಿ.ಜಿ.ಹೆಚ್. ಯಾದಗಿರಿಯಿಂದ ಫೋನಿನ ಮುಖಾಂತರ ಡೆತ್ ಎಮ್.ಎಲ್.ಸಿ. ವಸೂಲಾಗಿದ್ದು, ನಾನು ವಿಚಾರಣೆಗಾಗಿ ಜಿ.ಜಿ.ಹೆಚ್.ಯಾದಗಿರಿಗೆ ಭೇಟಿಕೊಟ್ಟು ಆಸ್ಪತ್ರೆಯಲ್ಲಿ ಹಾಜರಿದ್ದ ಮೃತನ ತಮ್ಮನಾದ ಮತ್ತು ಪ್ರತ್ಯಕ್ಷ ಸಾಕ್ಷಿದಾರನಾದ ಶ್ರೀ.ಸುರೇಶ ತಂದೆ ಮಲ್ಲಿಕಾಜರ್ುನ ಆಂದೇಲಿ, ವಯ:35 ವರ್ಷ, ಜಾತಿ:ಲಿಂಗಾಯತ, ಉ||ವ್ಯಾಪಾರ, ಸಾ||ಪಟೇಲ್ ವಾಡಿ ಯಾದಗಿರಿ ಇವರು ಘಟನೆಯ ಬಗ್ಗೆ ತಮ್ಮದೊಂದು ಹೇಳಿಕೆ ನೀಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 10/11/2022 ರಂದು ಸಾಯಂಕಾಲ 6:20 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಸ್ನೇಹಿತನಾದ ರಾಕೇಶಕುಮಾರ ತಂದೆ ನೂರಂದಪ್ಪ ಕೆರಳ್ಳಿ ಸಾ||ಗೋಗಿಮೊಹಲ್ಲಾ ಯಾದಗಿರಿ ಇಬ್ಬರು ಯಾದಗಿರಿ ನಗರದ ಯಾದಗಿರಿ-ಕಲಬುರಗಿ ರಸ್ತೆಯಲ್ಲಿರುವ ಮಹಿಂದ್ರಾ ಶೋರೂಮ್ ಮುಂದುಗಡೆ ಮಾತನಾಡುತ್ತ ನಿಂತಿದ್ದೆವು. ಅದೇ ವೇಳೆಗೆ ನನ್ನ ದೊಡ್ಡಪ್ಪನಾದ ಕರಿಬಸಪ್ಪ ತಂದೆ ಶಿವಣ್ಣ ಆಂದೇಲಿ ಹಾಗು ಅವರ ಮಗನಾದ ಮಲ್ಲಿಕಾಜರ್ುನ ಇಬ್ಬರು ಎಫ್.ಕೆ.ಫನರ್ಿಚರ್ ಅಂಗಡಿಯ ಕಡೆಯಿಂದ ರಸ್ತೆಯ ಬದಿಗೆ ಬಂದು ನಿಂತಿದ್ದಾಗ ನಾವು ನೋಡುನೋಡುತ್ತಿದ್ದಂತೆ ಡಾನ್ ಬಾಸ್ಕೋ ಶಾಲೆಯ ಕಡೆಯಿಂದ ಯಾದಗಿರಿ ನಗರದ ಕಡೆಗೆ ರಸ್ತೆಯ ಮೇಲೆ ಒಬ್ಬ ಮೋಟರ್ ಸೈಕಲ್ ಸವಾರನು ತನ್ನ ಮೋಟರ್ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನೆ ಮೇಲೆ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ನಿಂತಿದ್ದ ನನ್ನ ದೊಡ್ಡಪ್ಪನ ಮಗನಾದ ಮಲ್ಲಿಕಾಜರ್ುನನಿಗೆ ನೇರವಾಗಿ ಡಿಕ್ಕಿಹೊಡೆದು ಅಪಘಾತಪಡಿಸಿ ಮೋಟರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದನು. ಆಗ ನಾವಿಬ್ಬರು ಓಡಿಹೋಗಿ ನೋಡಲಾಗಿ ನನ್ನ ಅಣ್ಣ ಮಲ್ಲಿಕಾಜರ್ುನನಿಗೆ ತಲೆಗೆ, ಮುಖಕ್ಕೆ ಭಾರಿ ರಕ್ತಗಾಯಗಳಾಗಿದ್ದು ತೀವ್ರ ರಕ್ತಸ್ರಾವವಾಗಿತ್ತು. ಅಪಘಾತಪಡಿಸಿದ ಮೋಟರ್ ಸೈಕಲ್ ನೋಡಲಾಗಿ ನೋಂದಣಿ ನಂಬರ್ ಇಲ್ಲದ ಬಜಾಜ್ ಪಲ್ಸರ್ ಮೋಟರ್ ಸೈಕಲ್ ಇದ್ದು ಪರಿಶೀಲಿಸಲಾಗಿ ಚೆಸ್ಸಿ ನಂ:ಒಆ2ಂ11ಅಘಿ5ಓಅಒ74106 ಇರುತ್ತದೆ. ಅಪಘಾತದಲ್ಲಿ ಮೋಟರ್ ಸೈಕಲ್ ಸವಾರನಿಗೆ ಸಹ ತಲೆಗೆ ಮುಖಕ್ಕೆ ಭಾರಿರಕ್ತಗಾಯಗಳಾಗಿದ್ದು, ಇನ್ನಿತರ ಕಡೆಗಳಲ್ಲಿ ತರುಚಿದ ಗಾಯಗಳಾಗಿದ್ದು, ಆತನಿಗೆ ವಿಚಾರಿಸಲಾಗಿ ತನ್ನ ಹೆಸರು ಶಿವಕುಮಾರ ತಂದೆ ರಮೇಶಕುಮಾರ ಸುಲ್ತಾನಪೂರ ಸಾ||ಗಾಂಧಿನಗರ ಯಾದಗಿರಿ ಎಂದು ತಿಳಿಸಿದನು. ಆಗ ಕೂಡಲೇ ನಾನು ನನ್ನ ದೊಡ್ಡಪ್ಪ ಕರಿಬಸಪ್ಪ, ನನ್ನ ಗೆಳೆಯ ರಾಕೇಶಕುಮಾರ ರವರು ಕೂಡಿಕೊಂಡು ಒಂದು ಖಾಸಗಿ ಆಟೋರಿಕ್ಷಾದಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ನನ್ನ ಅಣ್ಣ ಮಲ್ಲಿಕಾಜರ್ುನನಿಗೆ ಹಾಗು ಶಿವಕುಮಾರ ಇಬ್ಬರಿಗೆ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದೆವು. ನನ್ನ ಅಣ್ಣ ಮಲ್ಲಿಕಾಜರ್ುನನಿಗೆ ಚಿಕಿತ್ಸೆ ನೀಡಿದ ವೈದ್ಯಾಧಿಕಾರಿಗಳು ಮಲ್ಲಿಕಾಜರ್ುನನು ಅಪಘಾತದಲ್ಲಿ ಆದ ಗಾಯಗಳಿಂದ 7:00 ಪಿ.ಎಮ್.ಕ್ಕೆ ಮೃತಪಟ್ಟಿರುತ್ತಾನೆ ಎಂದು ತಿಳಿಸಿದರು. ಗಾಯಗೊಂಡ ಶಿವಕುಮಾರನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಮಲ್ಲಿಕಾಜರ್ುನನು ಮೃತಪಟ್ಟ ವಿಷಯ ತಿಳಿದು ನನ್ನ ದೊಡ್ಡಪ್ಪ ಕರಿಬಸಪ್ಪರವರು ನೋವಿನ ಬಾದೆಯಲ್ಲಿರುವುದರಿಂದ ನಾನು ದೂರು ಹೇಳಿಕೆ ನೀಡಿರುತ್ತೇನೆ. ನಂತರ ಮೃತ ಮಲ್ಲಿಕಾಜರ್ುನನ ಹೆಂಡತಿಯಾದ ಶ್ರೀಮತಿ.ವಿಶಾಲಾಕ್ಷಿ ಇವರು ಬಂದು ಘಟನೆ ಬಗ್ಗೆ ವಿಚಾರಿಸಿರುತ್ತಾರೆ. ಕಾರಣ ಇಂದು ದಿನಾಂಕ:10/11/2022 ರಂದು 6:20 ಪಿ.ಎಮ್. ಸುಮಾರಿಗೆ ಯಾದಗಿರಿ-ಕಲಬುರಗಿ ರಸ್ತೆಯ ಯಾದಗಿರಿ ನಗರದ ಮಹಿಂದ್ರಾ ಶೋರೂಮ್ ಹತ್ತಿರ ಮುಖ್ಯ ರಸ್ತೆಯ ಬದಿಯಲ್ಲಿ ನಿಂತಿದ್ದ ನನ್ನ ಅಣ್ಣನಾದ ಮಲ್ಲಿಕಾಜರ್ುನ ತಂದೆ ಕರಿಬಸಪ್ಪ ಆಂದೇಲಿ, ವಯ:35 ವರ್ಷ, ಜಾತಿ:ಲಿಂಗಾಯತ, ಉ||ವ್ಯಾಪಾರ, ಸಾ||ಪಟೇಲವಾಡಿ ಯಾದಗಿರಿ ಈತನಿಗೆ ನೋಂದಣಿ ನಂಬರ್ ಇಲ್ಲದ ಬಜಾಜ್ ಪಲ್ಸರ್ ಮೋಟರ್ ಸೈಕಲ್ ಚೆಸ್ಸಿ ನಂ:ಒಆ2ಂ11ಅಘಿ5ಓಅಒ74106 ರ ಸವಾರ ಶಿವಕುಮಾರ ತಂದೆ ರಮೇಶಕುಮಾರ ಸುಲ್ತಾನಪೂರ ಸಾ||ಗಾಂಧಿನಗರ ಯಾದಗಿರಿ ಈತನು ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಅಪಘಾತದಲ್ಲಿ ಆದ ಗಂಭೀರ ಗಾಯಗಳಿಂದ ಮಲ್ಲಿಕಾಜರ್ುನನು ಚಿಕಿತ್ಸೆಗೆ ಸ್ಪಂಧಿಸದೇ 7:00 ಪಿ.ಎಮ್.ಕ್ಕೆ ಮೃತಪಟ್ಟಿದ್ದು ಇರುತ್ತದೆ. ಕಾರಣ ಮೋಟರ್ ಸೈಕಲ್ ಸವಾರ ಶಿವಕುಮಾರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಯಾದಗಿರಿ ಸಂಚಾರ ಠಾಣೆ ಗುನ್ನೆ ನಂಬರ 55/2022 ಕಲಂ: 279, 338, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

Last Updated: 11-11-2022 06:41 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080