Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 15-05-2022

ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 42/2022 ಕಲಂ 279, 338, 304(ಎ) ಐ.ಪಿ.ಸಿ: ಸಾರಾಂಶ:- ದಿನಾಂಕ:10/05/2022 ರಂದು 3 ಎ.ಎಮ್. ಸುಮಾರಿಗೆಆರೋಪಿತನುತನ್ನಅಟೋಟಂಟಂ ನಂ:ಕೆಎ-33, 6255 ನೇದ್ದರಲ್ಲಿ ಮಲ್ಲಪ್ಪ ಮತ್ತುಯಮನಪ್ಪಇವರೊಂದಿಗೆಅವರತರಕಾರಿ ಲೋಡ ಮಾಡಿಕೊಂಡು ಶಹಾಪೂರಕಡೆಗೆ ಹುಲಕಲ್ ಸೀಮಾಂತರ ಗುರುಲಿಂಗೇಶ್ವರ ವೇ ಬ್ರಿಜ್ ಹತ್ತಿರ ಶಹಾಪೂರ-ಜೇವಗರ್ಿ ಮುಖ್ಯರಸ್ತೆಯ ಮೇಲೆ ಹೋಗುತ್ತಿದ್ದಾಗಆರೋಪಿತನುತನ್ನಅಟೋಟಂಟಂನ್ನುಅತಿವೇಗ ಮತ್ತುಅಲಕ್ಷತನದಿಂದ ಓಡಿಸಿದ್ದರಿಂದ ಅಟೋ ಚಾಲಕನ ನಿಯಂತ್ರಣತಪ್ಪಿಅಟೋ ಸ್ಕಿಡ್ ಆಗಿ ಪಲ್ಟಿಯಾಗಿಅಪಘಾತಕ್ಕೀಡಾಗಿದ್ದು, ಅಪಘಾತದಲ್ಲಿಅಟೋ ಚಾಲಕ ಆರೋಪಿತನ ಹೊಟ್ಟೆ, ಎದೆ, ತಲೆಗೆ ಭಾರಿ ಒಳಪೆಟ್ಟಾಗಿದ್ದು, ಬಲಗೈ ರಟ್ಟೆಗೆ ಭಾರಿರಕ್ತಗಾಯವಾಗಿ ಎಲುಬು ಮುರಿದಿರುತ್ತದೆ. ಮಲ್ಲಪ್ಪ ಮತ್ತುಯಮನಪ್ಪಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕಾರಣಆರೋಪಿತನ ವಿರುಧ್ಧ ಕಾನೂನು ಕ್ರಮಜರುಗಿಸಲು ವಿನಂತಿಅಂತಾದೂರು ನೀಡಿದ್ದರಿಂದಗುನ್ನೆ ನಂ:42/2022 ಕಲಂ 279, 338 ಐಪಿಸಿ ಅಡಿಯಲ್ಲಿ ಪ್ರಕರಣದಾಖಲಾಗಿರುತ್ತದೆ. ಅಪಘಾತದಲ್ಲಿಗಾಯಗೊಂಡಆರೋಪಿ ದೇವರಾಜ ಹೊಸಮನಿ ಈತನುಜಿಮ್ಸ್ ಕಲಬುರಗಿಯಲ್ಲಿಉಪಚಾರ ಪಡೆಯುತ್ತಿದ್ದಾಗಉಪಚಾರ ಫಲಿಸದೆಇಂದು ದಿನಾಂಕ 13/05/2022 ರಂದು 9.45 ಪಿ.ಎಮ್. ಕ್ಕೆ ಮೃತಪಟ್ಟಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ 304(ಎ) ಅಳವಡಿಸಿಕೊಳ್ಳಲಾಗಿದೆ ಅಂತ ಮಾನ್ಯರವರಲ್ಲಿ ಶೀಘ್ರ ವರದಿ ಸಲ್ಲಿಸಲಾಗಿದೆಅಂತ ವಿನಂತಿ.


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 73/2022 ಕಲಂ 302 ಐ.ಪಿ.ಸಿ: ಸುಮಾರು 01 ವರ್ಷಗಳ ಹಿಂದೆ ಮೃತ ಪಾರ್ವತಿಗೆ ಆರೋಪಿ ಭೀಮರಾಯ ಭಂಗಿ ಎಂಬಾತನೊಂದಿಗೆ ಮದುವೆಯಾಗಿರುತ್ತದೆ. ನಂತರ ಅವರು ಅನೂನ್ಯವಾಗಿರುತ್ತಾರೆ. ಹೀಗಿದ್ದು ದಿನಾಂಕ ನಿನ್ನೆ ದಿನಾಂಕ 13.05.2022 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ಪಾರ್ವತಿ ಮತ್ತು ಆಕೆಯ ಗಂಡ ಭೀಮರಾಯ ಭಂಗಿ ಇಬ್ಬರು ಜೋರು ಧ್ವ್ವನಿಯಲ್ಲಿ ಜಗಳವಾಡಿಕೊಂಡಿದ್ದು ನಂತರ ದಿನಾಂಕ 13.05.2022 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 14.05.2022 ರಂದು ಬೆಳಿಗ್ಗೆ 6:00 ಗಂಟೆಯ ನಡುವಿನ ಅವಧಿಯಲ್ಲಿ ಆರೋಪಿತನು ತನ್ನ ಹೆಂಡತಿಯಾದ ಮೃತ ಪಾರ್ವತಿಗೆ ತನ್ನ ಮನೆಯಲ್ಲಿ ಏನೋ ತಗೊಂಡು ಕುತ್ತಿಗೆಗೆ ಹಾಕಿ ಕೊಲೆ ಮಾಡಿರುತ್ತಾನೆ. ಕಾರಣ ನನ್ನ ಅಳಿಯನ ಮೇಲೆ ಕಾನೂನು ಕ್ರಮ ಜರುಗಿಲು ವಿನಂತಿ ಅಂತಾ ಫೀರ್ಯಾದಿಯು ಠಾಣೆಗೆ ಬಂದು ಗಣಕೀಕೃತ ದೂರು ಅಜರ್ಿಯನ್ನು ಸಲ್ಲಿಸಿದ್ದು ಅದರ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 73/2022 ಕಲಂ: 302 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 64/2022 ಕಲಂ. 279, 338 ಐಪಿಸಿ:ದಿನಾಂಕ: 14-05-2022 ರಂದು ಸಾಯಂಕಾಲ 04-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 11-05-2022 ರಂದು ನಾನು ನನ್ನ ತಂದೆ ಇಬ್ಬರು ಕೂಡಿ ದರಕಾಸಪೇಟಗೆ ಹೋಗಬೇಕಂತ ನಮ್ಮ ಮೋಟರ ಸೈಕಲ್ ನಂ. ಕೆಎ-33 ಎಕ್ಸ-7828 ನೇದ್ದರಲ್ಲಿ ಯರಗೋಳ ಮಾರ್ಗವಾಗಿ ದರಕಾಸ ಪೆಟಗೆ ಮಧ್ಯಾಹ್ನ 03-30 ಗಂಟೆ ಸುಮಾರಿಗೆ ಯರಗೊಳ ಗ್ರಾಮದ ಗುಡ್ಡದ ಹತ್ತಿರ ಹೋಗುತ್ತಿರುವಾಗ ಎದರುಗಡೆಯಿಂದ ಆಟೋ ಚಾಲಕನು ತಾನು ನಡೆಸುವ ಆಟೋವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತಪಡಿಸಿದ್ದು ಅಪಾಘತದಲ್ಲಿ ನನ್ನ ತಂದೆ ಬಲಗಾಲಿನ ಮೋಣಕಾಲಿನ ಕೆಳಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿರುತ್ತದೆ ಆಟೋ ಚಾಲಕನ ಮೆಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿರ್ಯಾಧಿ ಸಾರಂಶ

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: ಗುನ್ನೆ ನಂ: 53/2022 ಕಲಂ 78(3) ಕೆ.ಪಿ ಎಕ್ಟ್ 1963: ಇಂದು ದಿನಾಂಕ.14/05/2022 ರಂದು ಯಾದಗಿರಿ ನಗರದ ಗಂಜ ಕ್ರಾಸ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ಅದಿಕಾರಿ ಮತ್ತು ಸಿಬ್ಬಂದಿಯವರು ಹಾಗೂ ಪಂಚರು ಕೂಡಿಕೊಂಡು ಹೋಗಿ 4-45 ಪಿಎಂಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಅವರು ತನ್ನ ಹೆಸರು ಮಹೇಂದ್ರ ತಂದೆ ಮಲ್ಲಿಕಾಜರ್ುನ ಬಳಿಚಕ್ರ ವಃ24 ಜಾಃ ಕಬ್ಬಲಿಗ ಉಃ ಚಾಲಕ ಸಾಃ ಕೋಲಿವಾಡ ಯಾದಗಿರಿ ಅಂತಾ ತಿಳಿಸಿದ್ದು ನಂತರ ಪಿ.ಎಸ್.ಐ ರವರು ಆತನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) 1520/-ರೂ. ನಗದು ಹಣ 2) ಒಂದು ಮಟಕಾ ಚೀಟಿ ಅಂ.ಕಿ.00-00, 3) ಒಂದು ಬಾಲ ಪೆನ್ ಅಂ.ಕಿ.00-00 ಸಿಕ್ಕಿದ್ದು ಸದರಿ ಮುದ್ದೆಮಾಲನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ.14/05/2022 ರಂದು 4-45 ಪಿಎಂ ದಿಂದ 5-45 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟಾಪದಲ್ಲಿ ಗಣಕೀಕರಣ ಮಾಡಿ ಮುಗಿಸಿದ್ದು ನಂತರ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿಪಂಚನಾಮೆಯನ್ನು ಮುಗಿಸಿಕೊಂಡು ಮರಳಿ ಠಾಣೆಗೆ 6-15 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಜ್ಞಾಪನಾ ಪತ್ರದೊಂದಿಗೆ ಒಪ್ಪಿಸಿದ್ದು ಜ್ಞಾಪನದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.53/2022 ಕಲಂ.78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 76/2022 ಕಲಂ 379, 279, 427 ಐ.ಪಿ.ಸಿ. ಮತ್ತು ಕಲಂ.44(1) ಕೆ.ಎಮ್.ಎಮ್.ಸಿ. ಆರ್.ಆಕ್ಟ: ಇಂದು ದಿನಾಂಕ:14/05/2022 ರಂದು 11:30 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಸರಕಾರಿ ತಪರ್ೆ ಪಿಯರ್ಾದಿ ಶ್ರೀ ಚಿತ್ರಶೇಖರ ಪಿಎಸ್ಐ ಸುರಪೂರ ಠಾಣೆ ರವರು ಒಂದು ಮರಳು ತುಂಬಿದ ಟ್ರಾಕ್ಟರದೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:14-05-2021 ರಂದು ಬೆಳಿಗ್ಗೆ 8.30 ಗಂಟೆ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ, ಯಾರೋ ಒಬ್ಬ ವ್ಯಕ್ತಿಯು ತಮ್ಮ ಟ್ಯಾಕ್ಟರದಲ್ಲಿ ಸೂಗೂರ ಸೀಮಾಂತರದ ಕೃಷ್ಣಾ ನದಿ ಪಾತ್ರದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ಚಂದ್ಲಾಪೂರ ಕ್ರಾಸ ಕಡೆಗೆ ಸಾಗಿಸುತ್ತಿದ್ದಾನೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಠಾಣೆಯಲ್ಲಿದ್ದ ಸಿಬ್ಬಂಧಿಯವರಾದ ಶ್ರೀ ಹೊನ್ನಪ್ಪ ಸಿಪಿಸಿ-427, ಶ್ರೀ ಸಿದ್ರಾಮರೆಡ್ಡಿ ಸಿಪಿಸಿ-423 ಇಬ್ಬರಿಗೂ ವಿಷಯ ತಿಳಿಸಿ, ಹೊನ್ನಪ್ಪ ಸಿ.ಪಿ.ಸಿ. ರವರಿಗೆೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಹೊನ್ನಪ್ಪ ಪಿಸಿ. ರವರು ಇಬ್ಬರು ಪಂಚರಾದ 1) ಶ್ರೀ ವಿರುಪಾಕ್ಷಪ್ಪ ತಂದೆ ಅಮರಪ್ಪ ಕನರ್ಾಳ ವಯಾ:46 ವರ್ಷ ಜಾತಿ: ಬೇಡರ ಉ:ಒಕ್ಕಲುತನ ಸಾ: ಕರನಾಳ 2) ಶ್ರೀ ರಮೇಶ ತಂದೆ ಹಣಮಂತ ಬಿರಾದಾರ ವಯಾ:31 ವರ್ಷ ಜಾತಿ:ಬೇಡರ ಉ:ಒಕ್ಕಲುತನ ಸಾ: ಕರನಾಳ ತಾ|| ಸುರಪುರ ಇವರನ್ನು ಬೆಳಿಗ್ಗೆ 9-00 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿ ಪಂಚರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರು ಮತ್ತು ಸಿಬ್ಬಂಧಿಯವರು ಕೂಡಿಕೊಂಡು ನಮ್ಮ ಸಕರ್ಾರಿ ಜೀಪ ನಂಬರ ಕೆಎ 33 ಜಿ 0094 ನೇದ್ದರಲ್ಲಿ ಕುಳಿತುಕೊಂಡು ಬೆಳಿಗ್ಗೆ 9-15 ಗಂಟೆ ಸುಮಾರಿಗೆ ಠಾಣೆಯಿಂದ ಹೊರಟು, ಬೆಳಿಗ್ಗೆ 9-45 ಗಂಟೆ ಸುಮಾರಿಗೆ ಚಂದ್ಲಾಪೂರ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ನಿಂತುಕೊಂಡಾಗ 10-00 ಗಂಟೆ ಸುಮಾರಿಗೆ ಸೂಗೂರ ಕಡೆಯಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ನಾನು ಸಿಬ್ಬಂಧಿಯವರ ಸಹಾಯದಿಂದ ಟ್ಯಾಕ್ಟರ ಚಾಲಕನಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಟ್ಯಾಕ್ಟರ ಚಾಲಕನು ನಮ್ಮನ್ನು ನೋಡಿ, ನಮ್ಮಿಂದ ತಪ್ಪಿಸಿಕೊಳ್ಳಲು ಟ್ಯಾಕ್ಟರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಟ್ರ್ಯಾಕ್ಟರನ್ನು ನಿಯಂತ್ರಣ ಮಾಡಲಾಗದೇ ಗ್ರಾಮದ ಶ್ರೀ ಹನುಮಾನ ದೇವರ ಗುಡಿಯ ಮುಂದಿನ ಸಾರ್ವಜನಿಕ ವಿದ್ಯೂತ್ ಕಂಬಕ್ಕೆ ಡಿಕ್ಕಿಪಡಿಸಿ, ಕಂಬ ಹಾನಿಗೊಳಿಸಿ, ಚಾಲಕನು ಟ್ರ್ಯಾಕ್ಟರ್ ಇಳಿದು ಓಡಿ ಹೋದನು. ನಾವು ಸದರಿ ಟ್ಯಾಕ್ಟರ ಹತ್ತಿರ ಹೋಗಿ ಟ್ಯಾಕ್ಟರನ್ನು ಪಂಚರ ಸಮಕ್ಷಮ ಪರೀಶಿಲಿಸಿ ನೋಡಲು ಒಂದು ಮಹಿಂದ್ರ ಕಂಪನಿಯ 575ಡಿಐ ಟ್ಯಾಕ್ಟರ ಇದ್ದು, ಅದರ ಇಂಜಿನ ನಂಬರ ಓಏಚಅ02692 ಹಾಗೂ ಚೆಸ್ಸಿ ನಂಬರ: ಓಏಚಅ02692 ಇದ್ದು ಅದರ ಟ್ರಾಲಿಗೆ ನಂಬರ ಇರುವದಿಲ್ಲ. ಸದರಿ ಟ್ಯಾಕ್ಟರದಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆ. ಸದರಿ ಮರಳು ತುಂಬಿದ ಟ್ಯಾಕ್ಟರನ್ನು ಪಂಚರ ಸಮಕ್ಷಮ ಬೆಳಿಗ್ಗೆ 10-00 ಗಂಟೆಯಿಂದ 11-00 ಗಂಟೆಯವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ಟ್ಯಾಕ್ಟರನ್ನು ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಟ್ಯಾಕ್ಟರ ಚಾಲಕ/ಮಾಲಿಕ ಇಬ್ಬರು ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 1600/- ರೂ.ಗಳ ಕಿಮ್ಮತ್ತಿನ ಅಂದಾಜು 02 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿರುವಾಗ ಚಾಲಕನು ತನ್ನ ಟ್ರಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸಾರ್ವಜನಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಪಡಿಸಿ ಹಾನಿಗೊಳಿಸಿದ್ದು ಇರುತ್ತದೆ. ಸದರಿ ಮರಳು ತುಂಬಿದ ಟ್ಯಾಕ್ಟರನ್ನು ಖಾಸಗಿ ಚಾಲಕರ ಸಹಾಯದಿಂದ ಠಾಣೆಗೆ ಬೆಳಿಗ್ಗೆ 11-30 ಗಂಟೆಗೆ ತಂದು ಒಪ್ಪಿಸಿ, ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 76/2022 ಕಲಂ 379, 279, 427 ಐ.ಪಿ.ಸಿ. ಮತ್ತು ಕಲಂ.44(1) ಕೆ.ಎಮ್.ಎಮ್.ಸಿ. ಆರ್.ಆಕ್ಟ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Last Updated: 15-05-2022 11:44 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080