Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 15-07-2022


ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 114/2022 ಕಲಂ: 323, 354, 354(ಬಿ) 504 506, ಐಪಿಸಿ ಮತ್ತು ಕಲಂ: 8, 12 ಪೋಕ್ಸೋ ಕಾಯ್ದೇ-2012: ಇಂದು ದಿನಾಂಕ:14/07/2022 ರಂದು 8:00 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗ ಕು. ಲಕ್ಷ್ಮೀ ತಂದೆ ಮಾನಪ್ಪ ಮೇಟಿ ವಯಾ|| 17 ವರ್ಷ ಜಾ|| ಕುರುಬರ ಉ|| ಹೊಲಮನೆಗೆಲಸ ಸಾ|| ಮಾಚಗುಂಡಾಳ ಇವರು ಠಾಣೆಗೆ ಹಾಜರಾಗಿ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನಂದರೆ, ನಮ್ಮ ತಂದೆ-ತಾಯಿಗೆ ನಾವು ಒಟ್ಟು 7 ಜನ ಮಕ್ಕಳಿದ್ದು, ಮೂವರು ಗಂಡು ಮಕ್ಕಳು ಮತ್ತು ನಾಲ್ಕು ಜನ ಹೆಣ್ಣುಮಕ್ಕಳು ಇರುತ್ತೇವೆ. ನಾನು ಕೊನೆಯ ಮಗಳಾಗಿರುತ್ತೇನೆ. ನಮ್ಮ ತಂದೆಯು ಸುಮಾರು 12 ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿರುತ್ತಾನೆ. ನಾನು ನಮ್ಮ ಅಣ್ಣಂದಿರು ಮತ್ತು ತಾಯಿಯೊಂದಿಗೆ ಹೊಲಮನೆಗೆಲಸ ಮಾಡಿಕೊಂಡು ಇರುತ್ತೇನೆ. ನಮ್ಮ ಅಣತಮಕಿಯ ದೊಡ್ಡಪ್ಪನ ಮಗನಾದ ಹೊನ್ನಪ್ಪ @ ಹೊನ್ನಯ್ಯ ಈತನು ನನ್ನೊಂದಿಗೆ ಆಗಾಗ ಸಲುಗೆಯಿಂದ ಮಾತನಾಡುತ್ತಿದ್ದನು. ನಮ್ಮ ಹೊಲದ ಬಾಜು ಹೊನ್ನಪ್ಪ @ ಹೊನ್ನಯ್ಯ ಇವರ ಹೊಲ ಕೂಡ ಇರುತ್ತದೆ. ಹೀಗಿದ್ದು ಇಂದು ದಿನಾಂಕ: 14/07/2022 ರಂದು ಬೆಳಿಗ್ಗೆ ನಾನು, ನಮ್ಮ ತಾಯಿ ದೇವಿಂದ್ರಮ್ಮ, ಅಣ್ಣನಾದ ಶರಣಪ್ಪ ಮೂವರು ಕೂಡಿ ನಮ್ಮೂರ ಸೀಮಾಂತರದ ನಮ್ಮ ಹೊಲವಾದ ತೆಳಗಿನ ಹೊಲಕ್ಕೆ ಹೋಗಿದ್ದೆವು. ಹೊಲದಲ್ಲಿ ನಾನು, ನಮ್ಮ ತಾಯಿ ಇಬ್ಬರು ಹೊಲದಲ್ಲಿನ ಹತ್ತಿಯಲ್ಲಿ ಕಸ ತೆಗೆಯುತ್ತಿದ್ದೆವು. ಅಣ್ಣನಾದ ಶರಣಪ್ಪ ಈತನು ಎತ್ತುಗಳನ್ನು ಮೇಯಿಸುತ್ತಿದ್ದನು. ಮದ್ಯಾಹ್ನ 2 ಗಂಟೆ ಸುಮಾರಿಗೆ ನಾನು ನಮ್ಮ ಹೊಲದ ಬಾಂದಾರಿಗೆ ಕಾಲ್ಮಡಿಯಲು ಹೋಗಿದ್ದಾಗ ಅಲ್ಲಿಗೆ ಹೊನ್ನಪ್ಪ @ ಹೊನ್ನಯ್ಯ ತಂದೆ ಮಾನಪ್ಪ ಮೇಟಿ ಈತನು ತನ್ನ ಮೋಟರ ಸೈಕಲ ತೆಗೆದುಕೊಂಡು ನನ್ನ ಬಳಿ ಬಂದು, ಮೋಟರ ಸೈಕಲ್ ಮೇಲಿಂದ ಕೆಳಗೆ ಇಳಿದು ನಾನು ನಿನಗೆ ಇಷ್ಟ ಪಡುತ್ತಿದ್ದೇನೆ ನೀನು ನನ್ನೊಂದಿಗೆ ಮಲಕೋ ಬಾ ಅಂತ ಅನ್ನುತ್ತಾ ನನ್ನ ಕೈಹಿಡಿದು ಜಗ್ಗಾಡಿದಾಗ ನಾನು ಈ ರೀತಿ ಮಾಡಬೇಡ ನೀನು ನನಗೆ ಅಣ್ಣನಾಗುತ್ತಿ ಇದು ಸರಿ ಅಲ್ಲ ನಮ್ಮ ತಾಯಿಗೆ ಮತ್ತು ಅಣ್ಣನಿಗೆ ಹೇಳುತ್ತೇನೆ ಅಂತ ಅಂದಾಗ ಹೊನ್ನಪ್ಪ ಈತನು ತನ್ನ ಕೈಯಿಂದ ನನ್ನ ಕುತ್ತಿಗೆ ಹಿಡಿದು ತರಚಿದ ಗಾಯ ಮಾಡಿ ನೆಲಕ್ಕೆ ಕೆಡವಿ ಏ ಸೂಳೆ ನೀನು ಚೀರಾಡಿದರೆ ನಿನ್ನನ್ನು ಇಲ್ಲೇ ಖಲಾಸ್ ಮಾಡುತ್ತೇನೆ ಸುಮ್ಮನಿರಬೇಕು ಅಂತ ಜೀವದ ಭಯ ಹಾಕಿ ನನ್ನ ಪ್ಯಾಂಟ್ ಬಿಚ್ಚಿ ಅರೆಬೆತ್ತಲೆಗೊಳಿಸಿ, ಅವನು ತನ್ನ ಪ್ಯಾಂಟ ಬಿಚ್ಚುತ್ತಿದ್ದಾಗ ನಾನು ಜೋರಾಗಿ ಚೀರಾಡುತ್ತಿದ್ದಾಗ, ಅಲ್ಲಿಯೇ ಹೊಲದಲ್ಲಿದ್ದ ನಮ್ಮ ತಾಯಿ ದೇವಿಂದ್ರಮ್ಮ, ಅಣ್ಣನಾದ ಶರಣಪ್ಪ ಮತ್ತು ಬಾಜು ಹೊಲದ ಮರೆಪ್ಪ ತಂದೆ ದ್ಯಾವಪ್ಪ ದೊಡಮನಿ ಮೂವರು ನನ್ನ ಹತ್ತಿರ ಬರುತ್ತಿದ್ದಾಗ ಹೊನ್ನಪ್ಪ ಈತನು ಈ ವಿಷಯ ಯಾರಿಗೂ ಹೇಳಬೇಡ ಹೇಳಿದರೆ ನಿನ್ನನ್ನು ಜೀವಸಹಿತ ಬಿಡಲ್ಲ ಅಂತ ಅನ್ನುತ್ತಾ ಮೋಟರ ಸೈಕಲ್ ಸಮೇತ ಹೋದನು. ನನ್ನ ಬಳಿಗೆ ಬಂದ ನನ್ನ ತಾಯಿ, ಅಣ್ಣ ಮತ್ತು ಮರೆಪ್ಪ ಮೂವರಿಗೂ ನಡೆದ ವಿಷಯವನ್ನು ತಿಳಿಸಿ ಠಾಣೆಗೆ ಬಂದು ದೂರು ಸಲ್ಲಿಸಿರುತ್ತೇನೆ. ಕಾರಣ ಅಪ್ರಾಪ್ತಳಾದ ನನಗೆ ಲೈಂಗಿಕ ಕಿರುಕುಳ ಕೊಟ್ಟು, ಅರೆಬೆತ್ತಲೆಗೊಳಿಸಿ ಮಾನಭಂಗ ಮಾಡಲು ಪ್ರಯತ್ನಿಸಿ, ಜೀವದ ಬೆದರಿಕೆ ಹಾಕಿದ ಹೊನ್ನಪ್ಪ @ ಹೊನ್ನಯ್ಯ ತಂದೆ ಮಾನಪ್ಪ ಮೇಟಿ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕಾಗಿ ವಿನಂತಿ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.114/2022 ಕಲಂ: 323, 354, 354(ಬಿ) 504 506 ಐಪಿಸಿ ಮತ್ತು ಕಲಂ: 8, 12 ಪೋಕ್ಸೋ ಕಾಯ್ದೇ-2012 ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 92/2022 ಕಲಂ: 279, 337 ಐಪಿಸಿ: ಇಂದು ದಿನಾಂಕ:14/07/2022 ರಂದು 3-30 ಪಿಎಮ್ ಕ್ಕೆ ಶ್ರೀ ಉದಯಕುಮಾರ ತಂದೆ ಮೋನಪ್ಪ ಕಂಬಾರ, ವ:38, ಜಾ:ವಿಶ್ವಕರ್ಮ, ಉ:ಡ್ರೈವರ ಸಾ:ಮೋತಕಪಲ್ಲಿ ತಾ:ಸೇಡಂ ಜಿ:ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು 2018 ನೇ ಸಾಲಿನಿಂದ ಸಹಾಯಕ ನಿದರ್ೇಶಕರು ಕೃಷಿ ಮಾರಾಟ ಇಲಾಖೆ ಯಾದಗಿರಿ ರವರ ಸರಕಾರಿ ಬೊಲೆರೋ (ಜೀಪ) ವಾಹನ ನಂ.ಕೆಎ 33 ಎಮ್ 4170 ನೇದನ್ನು ಚಲಾಯಿಸಿಕೊಂಡಿರುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ:13/07/2022 ರಂದು ಬೆಳಗ್ಗೆ 11:45 ಎಎಮ್ ಸುಮಾರಿಗೆ ನಮ್ಮ ಸಹಾಯಕ ನಿದರ್ೇಶಕರಾದ ಶ್ರೀ ರಾಜಕುಮಾರ ಇವರು ನನಗೆ ಬಸವಸಾಗರ ಜಲಾಶಯದಿಂದ ಹೆಚ್ಚುವರಿ ನೀರು ಕೃಷ್ಣಾ ನದಿಗೆ ಬಿಟ್ಟಿರುವುದರಿಂದ ಪ್ರವಾಹ ಉಧ್ವವವಾಗುವ ಸಾಧ್ಯತೆಗಳಿರುವುದರಿಂದ ಸದರಿ ಕೃಷ್ಣಾ ನದಿ ದಂಡೆಯ ಗ್ರಾಮಗಳ ಜನ-ಜಾನುವಾರುಗಳ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮ ಕುರಿತು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಸುರಪೂರ ತಾಲೂಕಿನ ದೇವಾಪೂರ, ನಾಗರಾಳ ಮುಂತಾದ ಗ್ರಾಮಗಳ ಕಡೆ ಹೋಗಿ ನೋಡಿಕೊಂಡು ಬರೋಣ ಎಂದು ಹೇಳಿದ್ದರಿಂದ ನಾವು ಯಾದಗಿರಿಯಿಂದ ಸರಕಾರಿ ಬೊಲೆರೋ (ಜೀಪ) ವಾಹನ ನಂ. ಕೆಎ 33 ಎಮ್ 4170 ರಲ್ಲಿ ಸುರಪೂರಕ್ಕೆ ಹೊರಟೇವು. ನಾನು ವಾಹನ ಚಲಾಯಿಸುತ್ತಿದ್ದು, ನನ್ನ ಪಕ್ಕದಲ್ಲಿ ಮುಂದಿನ ಸೀಟಿಗೆ ರಾಜಕುಮಾರ ಸರ್ ಕುಂತಿದ್ದರು. ಯಾದಗಿರಿ-ಶಹಾಪೂರ ಮೇನ ರೋಡ ನಾಯ್ಕಲ್ ಬಯಲು ಹನುಮಾನ ಗುಡಿ ಹತ್ತಿರ ಹೋಗುತ್ತಿದ್ದಾಗ ಮದ್ಯಾಹ್ನ 12:00 ಗಂಟೆ ಸುಮಾರಿಗೆ ಎದುರುಗಡೆಯಿಂದ ಒಂದು ಸ್ವಿಫ್ಟ ಡಿಜೈರ ಕಾರ ನಂ. ಕೆಎ 33 ಬಿ 1968 ನೇದನ್ನು ಅದರ ಚಾಲಕನು ನಾಯ್ಕಲ್ ಕಡೆಯಿಂದ ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಯಾವುದೋ ಒಂದು ವಾಹನಕ್ಕೆ ಓವರಟೇಕ ಮಾಡಲು ಹೋಗಿ ವೇಗವಾಗಿ ಬಂದು ನಮ್ಮ ಬೊಲೆರೋಗೆ ಡಿಕ್ಕಿಪಡಿಸಿದನು. ಅಪಘಾತದಲ್ಲಿ ನನಗೆ ಮತ್ತು ನಮ್ಮ ರಾಜಕುಮಾರ ಸರ್ ಅವರಿಗೆ ಯಾವುದೇ ಗಾಯಗಳಾಗಿರಲಿಲ್ಲ. ಆಗ ನಾವು ಹೋಗಿ ಕಾರಿನಲ್ಲಿದ್ದವರಿಗೆ ನೋಡಲಾಗಿ ಕಾರಿನ ಚಾಲಕನಿಗೆ ವಿಚಾರಿಸಿದಾಗ ಅವನು ತನ್ನ ಹೆಸರು ಮೊಹ್ಮದ ಅಲಿ ತಂದೆ ಜಹಿರೋದ್ದಿನ ಮುಲ್ಲಾ ಸಾ:ಹತ್ತಿಗೂಡುರು ಎಂದು ಹೇಳಿದನು. ಕಾರಿನ ಚಾಲಕನಿಗೆ ಯಾವುದೇ ಗಾಯಗಳಾಗಿರಲ್ಲಿಲ್ಲ. ಕಾರಿನಲ್ಲಿ ಕುಳಿತ್ತಿದ್ದವರಿಗೆ ಕೇಳಿದಾಗ ಮುಂದುಗಡೆ ಕುಂತಿದ್ದ ದಾವೂದ ಅಲಿ ತಂದೆ ಅಬ್ಬಾಸ ಅಲಿ ಸಾ:ಹತ್ತಿಗೂಡುರು ಈತನಿಗೆ ಹಣೆಗೆ ರಕ್ತಗಾಯ, ಎಡಗೈ ತೋರು ಬೆರಳಿಗೆ ರಕ್ತಗಾಯ ಮತ್ತು ಬಲಗೈಗೆ ಒಳಪೆಟ್ಟಾಗಿತ್ತು. ಹಿಂದೆ ಕುಳಿತ್ತಿದ್ದ ಸರದಾರ ಬೇಗಂ ಗಂಡ ನಾಸಿರಸಾಬ ಸಾ:ಹತ್ತಿಗೂಡುರು ಇವರಿಗೆ ಬಲಗಾಲ ಮೊಳಕಾಲ ಕೆಳಗೆ ಒಳಪೆಟ್ಟು, ಬಲಗೈ ತೋಳಿಗೆ ಒಳಪೆಟ್ಟಾಗಿತ್ತು. ಅವರೊಂದಿಗೆ ಹಿಂದೆ ಕುಳಿತ್ತಿದ್ದ ಶಾಹಿನ ಗಂಡ ಹಸೇನ ಆರತಿ ಸಾ:ಜಾಲಹಳ್ಳಿ ಇವರಿಗೆ ಬಲಗೈ ತೋಳಿನಲ್ಲಿ ಒಳಪೆಟ್ಟಾಗಿತ್ತು. ಕಾರಿನ ಚಾಲಕನ ಮಗನಾದ ಶಾಹಿದ ಈತನಿಗೆ ಬಲಗೈಗೆ ಒಳಪೆಟ್ಟಾಗಿತ್ತು. ಅವರೆಲ್ಲರೂ ಹತ್ತಿಗೂಡುರ ಗ್ರಾಮದಿಂದ ಚಂದಾಪೂರಕ್ಕೆ ಹೋಗುತ್ತಿರುವುದಾಗಿ ಹೇಳಿದರು. ನಂತರ 108 ಅಂಬ್ಯುಲೇನ್ಸಗೆ ಕರೆ ಮಾಡಿ ಹೇಳಿದ್ದರಿಂದ 108 ಅಂಬ್ಯುಲೇನ್ಸ ಬಂದಿದ್ದು, ಅದರಲ್ಲಿ ಗಾಯಾಳುಗಳಿಗೆ ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ. ಕಾರಣ ಸದರಿ ಕಾರಿನ ಚಾಲಕನು ಯಾವುದೋ ಒಂದು ವಾಹನಕ್ಕೆ ಓವರ ಟೇಕ ಮಾಡಲು ವೇಗವಾಗಿ ಮುಂದೆ ಬಂದು ನಮ್ಮ ಬೊಲೆರೋ ಜೀಪಿಗೆ ಡಿಕ್ಕಿಪಡಿಸಿದ್ದರಿಂದ ಕಾರಿನಲ್ಲಿದ್ದರಿಗೆ ಮೇಲಿನಂತೆ ಗಾಯಗಳಾಗಿರುತ್ತವೆ. ಸದರಿ ಅಪಘಾತವು ಕಾರಿನ ಚಾಲಕನ ನಿರ್ಲಕ್ಷತನದಿಂದ ಸಂಭವಿಸಿರುತ್ತದೆ. ಆದ್ದರಿಂದ ಸದರಿ ಕಾರಿನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಮ್ಮ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ, ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 92/2022 ಕಲಂ: 279, 337 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 35/2022 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್: ಇಂದು ದಿನಾಂಕ 14/07/2022 ರಂದು 9 ಪಿ.ಎಂ.ಕ್ಕೆ ಪಿಯರ್ಾದಿ ಶ್ರೀ ಸಾಬಣ್ಣ ತಂದೆ ದೊಡ್ಡಯ್ಯ ನಾನೇಕಾರ್ ವಯ;40 ವರ್ಷ, ಜಾ;ಬೇಡರು (ಎಸ್.ಟಿ), ಉ;ಕೂಲಿ ಕೆಲಸ, ಸಾ;ಹಿರೇ ಅಗಸಿ ಯಾದಗಿರಿ ರವರು ಖುದ್ದಾಗಿ ಠಾಣೆಗೆ ಹಾಜರಾಗಿ ಇಂದು ಬೆಳಿಗ್ಗೆ ಜರುಗಿದ ರಸ್ತೆ ಅಪಘಾತದ ಘಟನೆ ಬಗ್ಗೆ ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ಪಿಯರ್ಾದಿ ದೂರನ್ನು ಸಲ್ಲಿಸಿದ್ದು, ಸಲ್ಲಿಸಿದ ದೂರಿನ ಸಾರಾಂಶವೇನೆಂದರೆ ಮಾನ್ಯರೇ, ನಾನು ಕೂಲಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನನ್ನ ತಂದೆಯ ತಾಯಿ ಸಾಬಮ್ಮ ವಯ;80 ವರ್ಷ, ಇವರು ನಮ್ಮೊಂದಿಗೆ ಇರುತ್ತಾರೆ. ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಕಿರಾಣಿ ಅಂಗಡಿಗೆ ಹೋಗಿ ಬರುತ್ತೇನೆಂದು ನಮಗೆ ಹೇಳಿ ಹೋಗಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 14/07/2022 ರಂದು ಬೆಳಿಗ್ಗೆ 10-15 ಎ.ಎಮ.ಕ್ಕೆ ನಮ್ಮ ಮನೆಯ ಮುಂದೆ ನಾನು ಮತ್ತು ನನ್ನ ತಮ್ಮನಾದ ಬಸವರಾಜ ತಂದೆ ದೊಡಯ್ಯ ಇಬ್ಬರು ಇದ್ದಾಗ ನಮ್ಮ ಓಣಿಯವರಾದ ನಮ್ಮ ಸಂಬಂಧಿ ಶ್ರೀ ಬಸವರಾಜ ತಂದೆ ಬಸಪ್ಪ ಪರಸನಾಯಕ ಇವರು ಬಂದು ನಮಗೆ ತಿಳಿಸಿದ್ದೇನೆಂದರೆ ನಾನು ಯಾದಗಿರಿಯ ಆಸರ್ ಮೊಹಲ್ಲಾ ಏರಿಯಾದ ಮಿಲನ್ ಮಜೀದಿ ಹತ್ತಿರ ನಿಂತಿದ್ದಾಗ ಅದೇ ಸಮಯಕ್ಕೆ ನಿಮ್ಮ ಅಜ್ಜಿ ಸಾಬಮ್ಮ ಇವರು ರಸ್ತೆ ಬದಿಯಲ್ಲಿ ನಡೆದುಕೊಂಡು ನಮ್ಮ ಓಣಿ ಕಡೆಗೆ ಹೊರಟಿದ್ದಾಗ ಒಬ್ಬ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲನ್ನು ಮಿಲನ್ ಮಜೀದ್ ಕಡೆಯಿಂದ ಮುಖ್ಯ ರಸ್ತೆ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಿಮ್ಮ ಅಜ್ಜಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ, ನಾನು ಹತ್ತಿರ ಹೋಗಿ ನೋಡಲಾಗಿ ಸದರಿ ಅಪಘಾತದಲ್ಲಿ ನಿಮ್ಮ ಅಜ್ಜಿಗೆ ತಲೆಗೆ ಭಾರೀ ಗುಪ್ತಗಾಯವಾಗಿ ಬಲ ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಹೊರಬಂದಿರುತ್ತದೆ, ಎಡಗೈ ಮುಂಗೈಗೆ ರಕ್ತಗಾಯ ಹಾಗೂ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ. ಅಪಘಾತಪಡಿಸಿದ ಮೋಟಾರು ಸೈಕಲ್ ಟಿ.ವಿ.ಎಸ್. ಎಕ್ಸಲ್ ನೊಂದಣ ಇಲ್ಲದ್ದು, ಅದರ ಚೆಸ್ಸಿ ನಂ. ಒಆ621ಃಕ23ಓ2ಂ02115 ನೇದ್ದು, ಮತ್ತು ಇಂಜಿನ್ ನಂಬರ ಃಕ2ಂಓ2809883 ಅಂತಾ ಇರುತ್ತದೆ. ಅದರ ಸವಾರನು ಘಟನಾ ಸ್ಥಳದಲ್ಲಿ ನಿಲ್ಲದೇ ಓಡಿ ಹೋಗಿರುತ್ತಾನೆ ಆತನಿಗೆ ನಾನು ಮತ್ತೆ ನೋಡಿದಲ್ಲಿ ಗುತರ್ಿಸುತ್ತೇನೆ. ಈ ಘಟನೆಯು ಇಂದು ಬೆಳಿಗ್ಗ 10 ಗಂಟೆ ಸುಮಾರಿಗೆ ಜರುಗಿರುತ್ತದೆ. ಘಟನಾ ಸ್ಥಳದಲ್ಲಿ ನಮ್ಮ ಓಣಿಯ ಹುಡುಗರಿಗೆ ಹೇಳಿ ಅಲ್ಲಿ ಘಟನಾ ಸ್ಥಳದಲ್ಲಿರಲು ತಿಳಿಸಿ, ನಿಮಗೆ ವಿಷಯ ತಿಳಿಸಿ ಕರೆದುಕೊಂಡು ಹೋಗಲು ಬಂದಿದ್ದು, ನಡೀರಿ ಹೋಗೋಣ ಅಂದಾಗ ನಾವಿಬ್ಬರು ಬಸವರಾಜನ ಸಂಗಡ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ಬಸವರಾಜ ನಮಗೆ ಈ ಮೇಲೆ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ನಮ್ಮ ಅಜ್ಜಿಯು ಗಾಯದ ಭಾದೆಯಿಂದ ಅರೆಬರೆ ಮಾತನಾಡುತ್ತಿದ್ದು, ನಾವುಗಳು ಆಕೆಗೆ ಉಪಚಾರ ಕುರಿತು ಒಂದು ಖಾಸಗಿ ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತೇವೆ. ಘಟನೆ ಬಗ್ಗೆ ಆಸ್ಪತ್ರೆಯಲ್ಲಿ ವಿಚಾರಣೆಗೆ ಪೊಲೀಸರು ಬಂದಿದ್ದಾಗ ಈ ವಿಷಯವನ್ನು ನಮ್ಮ ಮನೆಯ ಹಿರಿಯರಲ್ಲಿ ವಿಚಾರಿಸಿ ನಂತರ ಕೇಸು ಮಾಡುವ ಬಗ್ಗೆ ತಿಳಿಸುತ್ತೇವೆ ಅಂತಾ ಹೇಳಿರುತ್ತೇವೆ. ಈ ವಿಷಯವನ್ನು ನನ್ನ ಚಿಕ್ಕಪ್ಪನ ಮಗನಾದ ಬಸವರಾಜ ಈತನಿಗೆ ತಿಳಿಸಿರುತ್ತೇನೆ. ಆಗ ಆತನು ಈ ಘಟನೆ ಬಗ್ಗೆ ಮೊದಲು ಕೇಸು ಮಾಡು ಅಂತಾ ತಿಳಿಸಿರುತ್ತಾನೆ. ಹೀಗಿದ್ದು ಇಂದು ದಿನಾಂಕ 14/07/2022 ರಂದು ತಡವಾಗಿ ನಾನು ಖುದ್ದಾಗಿ ಠಾಣೆಗೆ ಹಾಜರಾಗಿ ಈ ಘಟನೆಯ ಬಗ್ಗೆ ಕಂಪ್ಯೂಟರಿನಲ್ಲಿ ಗಣೀಕೀಕರಣ ಮಾಡಿಸಿದ ದೂರು ಅಜರ್ಿ ಸಲ್ಲಿಸುತ್ತಿದ್ದು, ಇಂದು ದಿನಾಂಕ 14/07/2022 ರಂದು ಬೆಳಿಗ್ಗೆ 10 ಎ.ಎಂ.ಕ್ಕೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದ ನಮ್ಮ ಅಜ್ಜಿ ಸಾಬಮ್ಮಳಿಗೆ ಮೋಟಾರು ಸೈಕಲ್ ಟಿ.ವಿ.ಎಸ್. ಎಕ್ಸಲ್ ನೊಂದಣ ಇಲ್ಲದ್ದು, ಅದರ ಚೆಸ್ಸಿ ಒಆ621ಃಕ23ಓ2ಂ02115 ನೇದ್ದು ಮತ್ತು ಇಂಜಿನ್ ನಂಬರ ಃಕ2ಂಓ2809883 ನೇದ್ದರ ಸವಾರನು ಡಿಕ್ಕಿಹೊಡೆದು ಅಪಘಾತಪಡಿಸಿ ಮೋಟಾರು ಸೈಕಲನ್ನು ಘಟನಾ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು, ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ವಿನಂತಿ ಅಂತ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 35/2022 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

Last Updated: 22-07-2022 12:37 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080