Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 15-08-2022

 

ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 125/2022 ಕಲಂ: 279, 338 ಐಪಿಸಿ ಮತ್ತು 187 ಐ.ಎಮ್.ವಿ. ಆಕ್ಟ್: ಇಂದು ದಿ: 14/08/2022 ರಂದು 07.00 ಪಿ.ಎಮ್ಕ್ಕೆ ಶ್ರೀಮತಿ ಮಂಜುಳಾ ಗಂ. ಮರೆಪ್ಪ ವಯಸ್ಸು:45 ವರ್ಷ ಉದ್ಯೋಗ: ಕೂಲಿ ಸಾ|| ಶೆಟ್ಟಿಕೇರಾ (ಚನ್ನಪ್ಪನದೊಡ್ಡಿ) ತಾ|| ಶಹಾಪೂರ ಜಿ: ಯಾದಗಿರಿ ರವರು ಠಾಣೆಗೆ ಬಂದು ಕನ್ನಡದಲ್ಲಿ ಬರೆದ ಒಂದು ದೂರು ಅಜರ್ಿ ನೀಡಿದ್ದು, ಸದರಿ ಅಜರ್ಿ ಸಾರಾಂಶವೆನೆಂದರೆ,ನನಗೆ ಒಟ್ಟು ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ಹೆಣ್ಣು ಮಕ್ಕಳಿಗೆ ಮುದುವೆ ಮಾಡಿಕೊಟ್ಟಿದ್ದು, ಅವರು ಗಂಡನ ಮನೆಯಲ್ಲಿರುತ್ತಾರೆ. ಗಂಡು ಮಕ್ಕಳಲ್ಲಿ ಹಿರಿಯವನಾದ ಭೀಮರಾಯ ಇತನು ನನ್ನೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಶೆಟ್ಟಿಕೇರಾದಲ್ಲಿಯೇ ಇರುತ್ತಾನೆ. ಇನ್ನು ಮದುವೆಯಾಗಿರುವದಿಲ್ಲ. ಇನ್ನೊಬ್ಬ ಮಗ ಆಕಾಶ ಇನ್ನು ಚಿಕ್ಕವನಿರುತ್ತಾನೆ. ಹೀಗಿರುವಾಗ ನನ್ನ ಮಗ ಭೀಮರಾಯ (20 ವರ್ಷ) ಇಂದು ದಿ|| 14.08.2022 ರ ಮುಂಜಾನೆ 8 ಗಂಟೆಗೆ ನಮ್ಮ ಮನೆಯಿಂದ ಅಂದರೆ ಶೆಟ್ಟಿಕೇರಾ (ಚನ್ನಪ್ಪನ ದೊಡ್ಡಿ) ಒಂದು ಸೈಕಲ್ ಮೋಟರ್ ನಂ. ಕೆಎ-33. ಯು-0146 (ಪ್ಯಾಶನ್ ಪ್ರೋ) ರ ಮೇಲೆ ಹಯ್ಯಾಳಕ್ಕೆ ಹೋಗಿ ಹಯ್ಯಾಳ ಲಿಂಗೇಶ್ವರ ಗುಡಿಗೆ ಕಾಯಿ ಹೊಡೆಸಿಕೊಂಡು ಬರುವದಾಗಿ ಹೇಳಿ ಹೋಗಿದ್ದು ನನ್ನ ಮಗ ಕಾಯಿ ಹೊಡಿಸಿಕೊಂಡು ಮರಳಿ ಹತ್ತಿಗೂಡೂರು ಮಾರ್ಗವಾಗಿ ಸುರಪುರ ಕಡೆಗೆ ಹೊರಟು ಬರುತ್ತಿರುವಾಗ ಸಮಯ ಸುಮಾರು 11.30 ಗಂಟೆಗೆ ದೇವಿಕೇರಾ ಕ್ರಾಸ್ ಹತ್ತಿರ ರೋಡಿನ ಎಡಬಾಗದಲ್ಲಿ ನಿಧಾನವಾಗಿ ತನ್ನ ಮೋಟರ್ ಸೈಕಲನ್ನು ನಡೆಸಿಕೊಂಡು ಹೋಗುತ್ತಿರುವಾಗ ಅದೇ ವೇಳೆಗೆ ಹಿಂದಿನಿಂದ ಒಂದು ಕ್ರಶರ್ ವಾಹನ ಸಂಖ್ಯೆ ಕೆಎ-40.ಎಮ್-1583 ರ ಚಾಲಕ ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೇ ನನ್ನ ಮಗ ಚಲಾಯಿಸುತ್ತಿದ್ದ ಮೋಟರ್ ಸೈಕಲ್ಗೆ ಡಿಕ್ಕಿ ಪಡಿಸಿದ್ದು ಪರಿಣಾಮ ನನ್ನ ಮಗ ಸೈಕಲ್ ಮೋಟರ್ ಸಮೇತ ರೋಡಿನ ಪಕ್ಕಕ್ಕೆ ಬಿದ್ದಿದ್ದು ಆತನ ಬಲ ಕಾಲು ತೊಡೆ ಮುರಿದು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಹೆಬ್ಬಟ್ಟಿನ ಹತ್ತಿರ ಮುರಿದಂತೆ ಆಗಿದ್ದು, ಅಲ್ಲದೆ ತಲೆಯ ಹಿಂಭಾಗ ರಕ್ತಗಾಯವಾಗಿದ್ದು, ನನ್ನ ಮಗ ಭೀಮರಾಯನಿಗೆ ಅಪಘಾತವಾದ ವಿಷಯವನ್ನು ಭೀಮರಾಯ ತಂ. ಬಸಣ್ಣ ಬಡಿಗೇರ ಸಾ|| ಶೆಟ್ಟಿಕೇರಾ (ಚನ್ನಪ್ಪನ ದೊಡ್ಡಿ) ಇತನು ಪೋನ್ ಮಾಡಿ ತಿಳಿಸಿದ್ದು, ನಾನು ಕೂಡಲೇ ಸುರಪುರದ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗ ಭೀಮರಾಯ ಗಂಭಿರ ಗಾಯವಾಗಿ ನರಳಾಡುತ್ತಿದ್ದು, ತಾನು ಹಯ್ಯಾಳದಿಂದ ಸುರಪುರಕ್ಕೆ ಹೊರಟು ಬರುವಾಗ ಕ್ರುಶರ್ ವಾಹನ ನಂ. ಕೆಎ-40. ಎಮ್-1583 ರ ಚಾಲಕ ಅತಿ ವೇಗ ಮತ್ತು ಅಲಕ್ಷತನದಿಂದ ಹಿಂದಿನಿಂದ ಬಂದು ತನ್ನ ಸೈಕಲ್ ಮೋಟರ್ಗೆ ಡಿಕ್ಕಿ ಪಡಿಸಿ ತನ್ನ ವಾಹನ ನಿಲ್ಲಿಸದೇ ಓಡಿ ಹೋದ ಬಗ್ಗೆ ತಿಳಿಸಿದನು. ನಂತರ ಹೆಚ್ಚಿನ ಚಿಕಿತ್ಸೆಗೆ ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ಸೇರಿಸಿ ಈಗ ತಡವಾಗಿ ಬಂದು ಈ ದೂರನ್ನು ಸಲ್ಲಿಸುತ್ತಿದ್ದೇನೆ. ಆದ್ದರಿಂದ ಅತಿವೇಗ ಮತ್ತು ಅಲಕ್ಷತನದಿಂದ ಕ್ರೂಶರ್ ವಾಹನ ಚಲಾಯಿಸಿ ನನ್ನ ಮಗನಿಗೆ ಅಪಘಾತಪಡಿಸಿ ಗಂಭಿರ ಗಾಯಪಡಿಸಿರುವ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿಅಂತ ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.125/2022 ಕಲಂ:279, 338 ಐಪಿಸಿ ಮತ್ತು 187 ಐ.ಎಮ್.ವಿ. ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

Last Updated: 16-08-2022 11:14 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080