Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 15-11-2022

 

ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 144/2022 ಕಲಂ 279,338, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್: ಇಂದು ದಿನಾಂಕಃ 14-11-2022 ರಂದು 9-00 ಪಿ.ಎಮ್ ಕ್ಕೆ ಶ್ರೀ ಲಕ್ಷ್ಮಣ ತಂದೆ ಚಂದ್ರಾಮಪ್ಪ ಬಾಲನ್ನೋರ ಸಾಃ ಬಿಜಾಸಪೂರ, ತಾಃ ಸುರಪೂರ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ಇಂದು 6-30 ಪಿ.ಎಮ್ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಚನ್ನಮ್ಮ, ನನ್ನ ಕಿರಿಯ ಮಗನಾದ ವೆಂಕಟೇಶ ಎಲ್ಲರೂ ಮನೆಯಲ್ಲಿದ್ದಾಗ ನನ್ನ ಹಿರಿಯ ಮಗನಾದ ಶಿವರಾಜ ತಂದೆ ಲಕ್ಷ್ಮಣ ಬಾಲನ್ನೋರ ಇತನು ನಮಗೆ ಸುರಪೂರಕ್ಕೆ ಹೋಗಿ ಎತ್ತುಗಳ ಸಲುವಾಗಿ ಔಷಧ ತಗೆದುಕೊಂಡು ಬರುತ್ತೇನೆ ಅಂತ ಹೇಳಿ ನಮ್ಮ ಮೋಟಾರ ಸೈಕಲ್ ನಂಬರ ಕೆ.ಎ 33 ಡಬ್ಲೂ 1822 ನೇದ್ದರ ಮೇಲೆ ತನ್ನ ಸ್ನೇಹಿತನಾದ ಆನಂದ ತಂದೆ ರಾಯಪ್ಪ ಬಾಯಿಬಲಿ ಇತನಿಗೆ ಹಿಂದುಗಡೆ ಕೂಡಿಸಿಕೊಂಡು ಸುರಪೂರ ಕಡೆಗೆ ಹೋಗಿದ್ದನು. ನಂತರ 6-50 ಪಿ.ಎಮ್ ಸುಮಾರಿಗೆ ನಮ್ಮೂರಿನ ಹಣಮಂತ ತಂದೆ ಶಿವಪ್ಪ ಲೆಕ್ಕೆನೋರ ಇತನು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ಮತ್ತು ನಮ್ಮೂರಿನ ಸೂರ್ಯ ತಂದೆ ದೊಡ್ಡ ರಾಮಣ್ಣ ಬಾಲನ್ನೋರ ಇಬ್ಬರೂ 6-40 ಪಿ.ಎಮ್ ಸುಮಾರಿಗೆ ಲಕ್ಷ್ಮೀಪೂರ ಸಿಮಾಂತರದ ತಾಜ್ ಹೊಟೇಲ್ ಮುಂದುಗಡೆ ರಸ್ತೆಯ ಪಕ್ಕ ನಿಂತಿದ್ದೇವು. ಅದೇ ವೇಳೆಗೆ ಬಿಜಾಸಪೂರ ಕಡೆಯಿಂದ ನಿನ್ನ ಮಗನಾದ ಶಿವರಾಜ ಇತನು ನಿಮ್ಮ ಮೋಟಾರ ಸೈಕಲ್ ಮೇಲೆ ತನ್ನ ಹಿಂದುಗಡೆ ನಮ್ಮೂರಿನ ಆನಂದ ಬಾಯಿಬಲಿ ಇತನಿಗೆ ಕೂಡಿಸಿಕೊಂಡು ಸುರಪೂರ ಕಡೆಗೆ ತನ್ನ ಸೈಡಿಗೆ ಹೊರಟಿದ್ದಾಗ ತಾಜ್ ಹೊಟೇಲ್ ಹತ್ತಿರ ಸುರಪೂರ ಕಡೆಯಿಂದ ಒಬ್ಬ ಕಾರ ಚಾಲಕನು ತನ್ನ ಕಾರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಶಿವರಾಜನ ಮೋಟಾರ ಸೈಕಲಿಗೆ ಜೋರಾಗಿ ಡಿಕ್ಕಿಪಡಿಸಿದರಿಂದ ಶಿವರಾಜ ಹಾಗು ಆನಂದ ಇಬ್ಬರೂ ಮೋಟಾರ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದರು. ತಕ್ಷಣ ನಾನು ಮತ್ತು ಸೂರ್ಯ ಹಾಗು ನಮಗೆ ಪರಿಚಯದ ಶಿವಪುತ್ರ ಕಟ್ಟಿಮನಿ ಸಾ: ಸುರಪೂರ ಮೂವರು ಓಡಿ ಹೋಗಿ ಇಬ್ಬರಿಗೂ ರಸ್ತೆಯ ಪಕ್ಕ ಮಲಗಿಸಿ ನೀರು ಕೂಡಿಸಿ ನೋಡಲಾಗಿ ಶಿವರಾಜನ ಎದೆಗೆ ಭಾರಿ ಒಳಪೆಟ್ಟಾಗಿ ಮೈಮೇಲೆ ಅಲ್ಲಲ್ಲಿ ಗಾಯಗಳಾಗಿ ಒದ್ದಾಡುತ್ತ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಆನಂದ ಇತನ ತಲೆಗೆ ಭಾರಿ ರಕ್ತಗಾಯಗಳಾಗಿದ್ದು, ಗದ್ದಕ್ಕೆ, ಎಡ ಮೊಣಕೈಗೆ ಎಡಪಕ್ಕಡಿಗೆ ತರಚಿದ ರಕ್ತಗಾಯಗಳಾಗಿರುತ್ತದೆ, ನೀವು ಬೇಗ ಬರುವಂತೆ ತಿಳಿಸಿದರಿಂದ ನಾವೆಲ್ಲರೂ ಅಳುತ್ತ ಅಪಘಾತ ಸ್ಥಳಕ್ಕೆ ಬಂದು ನಮ್ಮ ಮಗನ ಮೃತದೇಹವನ್ನು ನೋಡಿರುತ್ತೇವೆ. ನಮ್ಮ ಮಗನಿಗೆ ಅಪಘಾತಪಡಿಸಿದ ಕಾರ ರಸ್ತೆ ಪಕ್ಕ ನಿಲ್ಲಿಸಿದ್ದು ಅದರ ನಂಬರ ಕೆ.ಎ 36 ಎನ್ 5968 ಇದ್ದು, ಅದರ ಚಾಲಕನು ಓಡಿ ಹೋಗಿರುವ ಬಗ್ಗೆ ತಿಳಿಸಿದ್ದು ಆತನ ಹೆಸರು ವಿಳಾಸ ನಮಗೆ ಗೊತ್ತಿರುವದಿಲ್ಲ. ಸದರಿ ಚಾಲಕನಿಗೆ ನೋಡಿದ್ದಲ್ಲಿ ಗುರುತಿಸುವದಾಗಿ ಅಲ್ಲಿದ್ದವರು ತಿಳಿಸಿರುತ್ತಾರೆ. ಅಷ್ಟರಲ್ಲಿ 108 ಅಂಬ್ಯೂಲೇನ್ಸ್ ವಾಹನ ಬಂದು ಗಾಯಾಳು ಆನಂದನಿಗೆ ಹಾಕಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ನಂತರ ನಾವು ನಮ್ಮ ಮಗನ ಮೃತದೇಹವನ್ನು ಒಂದು ಅಟೋರಿಕ್ಷಾದಲ್ಲಿ ಹಾಕಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಹಾಕಿರುತ್ತೇವೆ. ಕಾರಣ ಅಪಘಾತ ಪಡಿಸಿದ ಕಾರ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 144/2022 ಕಲಂ: 279, 338, 304(ಎ) ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ:85/2022 143, 147, 323, 324, 355, 504, 506 ಸಂಗಡ 149 ಐಪಿಸಿ:ದಿನಾಂಕ:10/11/2022 ರಂದು ಬೆಳಿಗ್ಗೆ 10.30 ಗಂಟೆಗೆ ಹೆಬ್ಬಾಳ(ಕೆ) ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಚುನಾವಣೆ ಇದ್ದುದರಿಂದ ಪಿರ್ಯಾದಿಯು ಅಲ್ಲಿಗೆ ಹೋಗಿ ಕುಳಿತಾಗ ಆರೋಪಿ ಚಂದ್ರಕಾಂತ ಈತನು ಶಾಲೆಗೆ ಹೋಗಿ ಪಾಲಕರು ದೂರದ ಬೆಂಗಳೂರದಲ್ಲಿದ್ದು, ಅವರು ಬಂದ ನಂತರ ಚುನಾವಣೆ ಮಾಡಿರಿ ಅಂತಾ ಶಾಲೆಯ ಮುಖ್ಯಗುರುಗಳಿಗೆ ಹೇಳಿ ಚುನಾವಣೆ ಮುಂದೂಡಿಸಿದ್ದರಿಂದ, ಚುನಾವಣೆ ದಿನಾಂಕ:14/11/2022 ರಂದು ನಿಗಧಿಪಡಿಸಿದ್ದು ಇರುತ್ತದೆ. ನಂತರ ಪಿರ್ಯಾದಿಯ ತಂದೆಯು ಬೆಳಿಗ್ಗೆ 11.30 ಗಂಟೆಯ ಸುಮಾರಿಗೆ ಹೆಬ್ಬಾಳ(ಕೆ) ಗ್ರಾಮದ ಶ್ರೀ ಪರಮಾನಂದ ದೇವರ ಪಾದಗಟ್ಟೆಯ ಹತ್ತಿರ ಕುಳಿತಾಗ ಆರೋಪಿತರೆಲ್ಲರೂ ಕೂಡಿ ಅಕ್ರಮ ಕೂಟ ರಚಿಸಿಕೊಂಡು ಆರೋಪಿ ನಂ:5ನೇದ್ದವನ ಪ್ರಚೋದನೆಯಿಂದ ಪಿರ್ಯಾದಿಯ ತಂದೆಯ ಹತ್ತಿರ ಹೋಗಿ ಚಪ್ಪಲಿಯಿಂದ ಹೊಡೆದಿದ್ದು, ಜಗಳವನ್ನು ಬಿಡಿಸಲು ಹೋದ ಪಿಯರ್ಾದಿಗೆ & ಪಿಯರ್ಾದಿಯ ಚಿಕ್ಕಪ್ಪನಿಗೆ ಕಲ್ಲುಗಳಿಂದ & ಬಡಿಗೆಗಳಿಂದ ಹೊಡೆದು ಗುಪ್ತಗಾಯಪಡಿಸಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

 

ಗೋಗಿ ಪೊಲೀಸ ಠಾಣೆ:-
ಗುನ್ನೆ ನಂ:81/2022 78(3) ಕೆ.ಪಿ.ಆ್ಯಕ್ಟ್: ಇಂದು ದಿನಾಂಕ: 14/11/2022 ರಂದು 10.30 ಎ.ಎಮ್ ಕ್ಕೆ ಕಕ್ಕಸಗೇರಾ ಗ್ರಾಮದ ಪಂಚಾಯತಿಯ ಕಚೇರಿ ಮುಂದೆ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ಸಿಪಿಐ ಸಾಹೇಬರು ಶಹಾಪೂರ ರವರ ಮಾರ್ಗದರ್ಶನದಲ್ಲಿ, ಶ್ರೀ. ಅಯ್ಯಪ್ಪ ಪಿ.ಎಸ್.ಐ (ಕಾ&ಸು) ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ 11.35 ಎಎಮ್ ಕ್ಕೆ ದಾಳಿ ಮಾಡಿ ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ನಾಗಪ್ಪ ತಂದೆ ಬೈಲಪ್ಪ ಏವೂರ ವಯಾ:28 ಉ: ಕಿರಾಣಿ ಅಂಗಡಿ ಜಾ: ಪ.ಜಾತಿ ಸಾ: ಕಕ್ಕಸಗೇರಿ ತಾ: ಶಹಾಪೂರ ಜಿ:ಯಾದಗಿರಿ ಈತನಿಗೆ ಹಿಡಿದು ಸದರಿಯವನಿಂದ ನಗದು ಹಣ 320/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ 11.35 ಎಎಮ್ ದಿಂದ 12.35 ಪಿ.ಎಮ್ ವರೆಗೆ ಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 81/2022 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 123/2022 ಕಲಂ 279, 337, 338 ಐಪಿಸಿ ಮತ್ತು 187 ಐ.ಎಂ.ವ್ಹಿ ಆಕ್ಟ್: ಇಂದು ದಿನಾಂಕ 14.11.2022 ರಂದು ಸಾಯಂಕಾಲ 6.30 ಗಂಟೆಗೆ ಮೋಹನರೆಡ್ಡಿ ಸಿ.ಹೆಚ್.ಸಿ-151 ಸೈದಾಪೂರ ಠಾಣೆ ರವರು ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಗಾಯಾಳು ಶಿವಕುಮಾರ ತಂದೆ ಜಂಬಣ್ಣ ತೆಲ್ಗರ, ವ|| 28 ವರ್ಷ, ಜಾ|| ಕಬ್ಬಲಿಗ, ಉ|| ಲಾರಿ ಕ್ಲೀನರ್, ಸಾ|| ಗಂಜ್ ಏರಿಯಾ ರಾಯಚೂರು ಈತನ ಹೇಳಿಕೆ ಸೈದಾಪೂರ ಸರಕಾರಿ ಆಸ್ಪತ್ರೆಯಲ್ಲಿ ಪಡೆದುಕೊಂಡು ತಂದು ಹಾಜರುಪಡಿಸಿದು. ದೂರಿನ ಸಾರಾಂಶವೇನೆಂದರೆ, ರಾಯಚೂರಿನ ಸೈಯದ ಹಾಜಿ ಇವರ ಲಾರಿ ವಾಹನಗಳ ಮೇಲೆ ಕ್ಲೀನರ್ ಅಂತಾ ಕಳೆದ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಇಂದು ದಿನಾಂಕ 14.11.2022 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಮ್ಮ ಮಾಲೀಕ ನನಗೆ ತಮ್ಮ ಲಾರಿ ವಾಹನ ಸಂಖ್ಯೆ ಕೆಎ-36-5178 ವಾಹನದ ಮೇಲೆ ಬೆಳಗುಂದಿಗೆ ಹೋಗಿ ಕೌಳಿ ಲೋಡ್ ಮಾಡಿಕೊಂಡು ಬರುವಂತೆ ಕಳಿಸಿದ್ದರು. ಸದರಿ ಲಾರಿ ವಾಹನದ ಮೇಲೆ ನಾನು ಮತ್ತು ಕೌಳಿ ಲೋಡ್ ಮಾಡುವ ಹಮಾಲರು ಕುಂತು ಬೆಳಗುಂದಿ ಗ್ರಾಮಕ್ಕೆ ಹೋಗಿದ್ದೆವು. ಬೆಳಗುಂದಿ ಗ್ರಾಮದಲ್ಲಿ ಲಾರಿ ವಾಹನದಲ್ಲಿ ಕೌಳಿ ಧಾನ್ಯ ಲೋಡ್ ಮಾಡಿಕೊಂಡು ರಾಯಚೂರು ಕಡೆಗೆ ಹೋಗುವಾಗ ಲಾರಿ ಸಂಖ್ಯೆ ಕೆಎ-36-5178 ವಾಹನದ ಚಾಲಕನಾದ ನಮ್ಮ ಲಾರಿ ಮಾಲೀಕನ ಮಗ ಸೈಯದ್ ಸಾಲೀಮ್ ತಂದೆ ಸೈಯದ್ ಹಾಜಿ ರಾಯಚೂರು ಈತನು ಇಂದು ದಿನಾಂಕ 14.11.2022 ರಂದು ಸಾಯಂಕಾಲ 4.45 ಗಂಟೆ ಸುಮಾರಿಗೆ ವಾಹನ ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ವಾಹನ ನಿಯಂತ್ರಿಸದೆ ಸೈದಾಪೂರ-ರಾಚನಳ್ಳಿ ಕ್ರಾಸ್ ಮಧ್ಯ ಗ್ರಾಮ ಸೈದಾಪೂರ ಸೀಮಾಂತರದಲ್ಲಿ ರಸ್ತೆಯ ಪಕ್ಕದ ತೆಗ್ಗಿನಲ್ಲಿ ಲಾರಿ ಕೆಡವಿಬಿಟ್ಟ. ದುರ್ಘಟನೆಯಲ್ಲಿ ನನಗೆ ಎಡಕಿವಿ ಹತ್ತಿರ ತರಚಿದ ರಕ್ತಗಾಯವಾಗಿದೆ. ಉಳಿದಂತೆ ಲಾರಿ ಕ್ಯಾಬಿನ್ನಲ್ಲಿ ಕುಂತಿದ್ದ ಹಮಾಲರ ಪೈಕಿ 1. ಆಂಜನೇಯಲು ತಂದೆ ರಾಮಣ್ಣ ಆಲೂರು, 2. ನಾಗೇಂದ್ರ ತಂದೆ ಭಗವಂತರೆಡ್ಡಿ ರಾಯಚೂರು, 3. ವಿಠಲ್ ತಂದೆ ಕರೆಪ್ಪ ಕೆ.ಟಿ ದೊಡ್ಡಿ, 4. ಮಲ್ಲೇಶ ತಂದೆ ತಿಮ್ಮಪ್ಪ ಗಂಜ ಏರಿಯಾ ರಾಯಚೂರು ಇವರಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿವೆ. ನಂತರ ಯಾರೋ 108 ವಾಹನಕ್ಕೆ ಫೋನ್ ಮಾಡಿದ್ದರಿಂದ ಸ್ವಲ್ಪ ಹೊತ್ತಿನಲ್ಲಿ ಅಂಬುಲೆನ್ಸ್ ವಾಹನ ಸ್ಥಳಕ್ಕೆ ಬಂತು. ಹೋಗಿ ಬರುವ ಸಾರ್ವಜನಿಕರು ಅಂಬುಲೆನ್ಸ್ನಲ್ಲಿ ಗಾಯಗೊಂಡ ನನಗೆ ಮತ್ತು ಇನ್ನೂ 4 ಜನರಿಗೆ ಕೂಡಿಸಿ ಸೈದಾಪೂರ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಅಪಘಾತವಾದ ನಂತರ ನಮ್ಮ ಲಾರಿ ಚಾಲಕ ವಾಹನ ಬಿಟ್ಟು ಓಡಿ ಹೋಗಿದ್ದಾನೆ. ಕಾರಣ ರಸ್ತೆ ಅಪಘಾತ ನಡೆದೋಗಲು ಕಾರಣಿಭೂತನಾದ ಲಾರಿ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದೆ. ಅಂತಾ ಆಪಾದನೆ.


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 164/2022 ಕಲಂ: 78() ಕೆ.ಪಿ. ಆಕ್ಟ್: ಇಂದು ದಿನಾಂಕ 14.11.2022 ರಂದು ಮಧ್ಯಾಹ್ನ 3:15 ಗಂಟೆಗೆ ರಾಂಪೂರ ಗ್ರಾಮದ ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ ಸಾಹೇಬರು, ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸದರಿ ಸ್ಥಳಕ್ಕೆ ಹೋಗಿ 4 ಪಿ.ಎಮ ಕ್ಕೆ ದಾಳಿ ಮಾಡಿ ಆರೋಪಿತನನ್ನು ಹಿಡಿದು ಆತನ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 1100/- ರೂ ಬೆಲೆಯ ಮುದ್ದೆಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ಆರೋಪಿತನೊಂದಿಗೆ ದಿನಾಂಕ 14.11.2022 ರಂದು 5ಃ30 ಪಿ.ಎಮ ಕ್ಕೆ ಠಾಣೆಗೆ ಬಂದು, ಮುಂದಿನ ಕ್ರಮ ಕುರಿತು ನನ್ನ ಮುಂದೆ ಹಾಜರುಪಡಿಸಿದ್ದು, ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಠಾಣೆ ಗುನ್ನೆ ನಂ. 164/2022 ಕಲಂ: 78() ಕೆ.ಪಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

Last Updated: 15-11-2022 10:20 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080