Feedback / Suggestions

                      ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 17-12-2022


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ:  ಕಲಂ:279, 304(ಎ) ಐಪಿಸಿ : ದಿನಾಂಕ:15/11/2022 ರಂದು ಮೃತನು ಹುಣಸಗಿ-ಸುರಪೂರ ರಸ್ತೆಯ ಮೇಲೆ ಜೇಜಾರಾಮ ರೈಸ್ ಮಿಲ್ ಹತ್ತಿರ ತಾನು ಚಾಯಿಸುವ ಮೋಟಾರ್ ಸೈಕಲ್ ನಂ: ಕೆಎ-33  ಇಬಿ-2982 ನೇದ್ದನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿ ನಿಯಂತ್ರಣ ತಪ್ಪಿ ತನ್ನಷ್ಟಕ್ಕೆ ತಾನೆ ಸ್ಕಿಡ್ಡಾಗಿ ಬಿದ್ದು, ಬಾರಿ ಮತ್ತು ಸಾದಾ ರಕ್ತಗಾಯಗಳಾಗಿ ಮೃತಪಟ್ಟ ಬಗ್ಗೆ ಅಪರಾಧ.   

                
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 135/2022 ಕಲಂ 379 ಐಪಿಸಿ: ಇಂದು ದಿನಾಂಕ 16.12.2022 ರಂದು ರಾತ್ರಿ 9.00 ಗಂಟೆಗೆ ಕಿರಣ ಡಿ.ಆರ್. ಭೂವಿಜ್ಞಾನಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಯಾದಗಿರಿ ಜಿಲ್ಲೆ ಇವರು ಠಾಣೆಗೆ ಹಾಜರಾಗಿ ದೂರು ಹಾಗೂ ಪಂಚನಾಮೆಯನ್ನು ಹಾಜರುಪಡಿಸಿರುತ್ತಾರೆ. ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ ರಾಚನಳ್ಳಿ, ಶೆಟ್ಟಿಹಳ್ಳಿ ಹಾಗೂ ದದ್ದಲ್ ಗ್ರಾಮ ಸೀಮಾಂತರದ ಜಮೀನು ಸವರ್ೇ ನಂಬರ 60/1, 38, 101, 99/1, 107, 65, 62/2, 60 ನೇದ್ದವುಗಳಲ್ಲಿ ಟಿಪ್ಪರ ವಾಹನ ಸಂಖ್ಯೆ ಕೆಎ-59/0789 ರ ಮಾಲಿಕರು ಮತ್ತು ಚಾಲಕನು ಹಾಗೂ ಈ ಮೇಲಿನ ಜಮೀನುಗಳ ಮಾಲಿಕರು ಈಗ ಸುಮಾರು ಒಂದು ತಿಂಗಳಿನಿಂದ ಸತತವಾಗಿ ಒಟ್ಟು 51856 ಮೆಟ್ರಿಕ ಟನ ಮುರಂ ಖನಿಜ ಅಂದಾಜು ರಾಜಧನ 20,74,240/-ರೂಪಾಯಿ ಬೆಲೆ ಬಾಳುವ ಮುರಂ ಖನಿಜವನ್ನು ಯಾವುದೇ ಇಲಾಖೆಯ ಪರವಾನಿಗೆಯನ್ನು ಪಡೆಯದೆ ಕಳ್ಳತನದಿಂದ ಮಾರಾಟದ ಉದ್ದೇಶದಿಂದ ಸಾಗಾಣಿಕೆ ಮಾಡಿದ್ದು ಕನರ್ಾಟಕ ಸರಕಾರಕ್ಕೆ ನಷ್ಟವುಂಟು ಮಾಡಿದ್ದು, ಸದರಿ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದೆ. ಅಂತಾ ವಗೈರೆ ಆಪಾದನೆ.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 138/2022 ಕಲಂ: 379 ಐಪಿಸಿ: ಇಂದು ದಿನಾಂಕ:16/12/2022 ರಂದು 3 ಪಿಎಮ್ಕ್ಕೆ ವ್ಹಿ.ನಾಗೇಶ್ವರರಾವ ತಂದೆ ಬಸವಪೂರ್ಣಯ್ಯ ವ್ಹಿ ವ:65, ಜಾತಿ:ಕಮ್ಮಾ, ಉ:ಒಕ್ಕಲುತನ ಸಾ: ಬಸವೇಶ್ವರ ನಗರ ಯಾದಗಿರಿ ಇದ್ದು ತಮ್ಮಲ್ಲಿ ಸಲ್ಲಿಸುವ ದೂರು ಅಜರ್ಿಯೆನೆಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ಗುರುಸಣಗಿ ಸೀಮಾಂತರದ ಭೀಮಾನದಿ ದಂಡೆಯಲ್ಲಿ ಕವಳೆ ಗದ್ದೆಗಳು ಹೊಂದಿದ್ದು ಇರುತ್ತದೆ. ಸದರಿ ಕವಳೆ ಗದ್ದೆಗಳ ಸವರ್ೆ ನಂಬರ: 171, 172, 173, ರ ವಿಸ್ತಿರ್ಣ 60 ಎಕರೆ ಜಮೀನಿನಲ್ಲಿ ಕವಳೆ ಗದ್ದೆಗಳು ಇರುತ್ತವೆ. ಸದರಿ ಕವಳೆ ಗದ್ದೆಗಳಿಗೆ ನೀರು ಸರಬುರಾಜು ಮಾಡಲು ಭೀಮಾನದಿ ದಂಡೆಗೆ ಇರುವ  ಕವಳೆ ಗದ್ದೆಹೊಲ ಸವರ್ೆ ನಂ:173 ರ ದಂಡೆಯಲ್ಲಿ ನೀರು ಸರಬುರಾಜು ಮಾಡುವ ಪಾಯಿಂಟ್ ಇರುತ್ತದೆ. ಸದರಿ ಪಾಯಿಂಟ್ನಲ್ಲಿ ನಾನು ನಮ್ಮ ಕವಳೆ ಗದ್ದೆಗೆ ನೀರು ಸರಬುರಾಜು ಮಾಡಲು ಟೆಸ್ಕೊ ಕಂಪನಿಯ 5 ಮೋಟರ ಪಂಪಸೆಟ್ಗಳನ್ನು ಅಳವಡಿಸಿರುತ್ತೇನೆ. ನಮ್ಮ ಬಾಜು ಕವಳೆ ಗದ್ದೆಯವರಾದ ಬಾಬುರಾವ ತಂದೆ ಹುಲಗಪ್ಪ ಕಾಡ್ಲೂರು ಇವರು ಕೂಡ ಕವಳೆ ಗದ್ದೆ ಸವರ್ೆ ನಂಬರ: 176 ರಲ್ಲಿನ ದಂಡೆಯಲ್ಲಿ 4 ಟೆಸ್ಕೊ ಕಂಪನಿಯ ಮೋಟರ ಪಂಪಸೆಟ್ ಕೂಡಿಸಿರುತ್ತಾರೆ. ನಾವು ಸದರಿ ಮೋಟರಗಳಿಂದ ಸ್ವಲ್ಪ ಮೇಲ್ಗಡೆ ಮೋಟರಗಳನ್ನು ಚಾಲು ಮಾಡಲು ಸ್ಟಾಟರಗಳನ್ನು ಕೂಡಿಸಿರುತ್ತೇವೆ. ಸದರಿ ನದಿ ತೀರದಲ್ಲಿರುವ ಮೋಟರದಿಂದ ಸ್ಟಾಟರವರೆಗೆ ಕೇಬಲ್ ವೈಯರಗಳನ್ನು ಹಾಕಿರುತ್ತೇವೆ. ಸದರಿ ಮೋಟರಗಳನ್ನು ನಾವು ಚಾಲು ಮಾಡಿ ನಮ್ಮ ಗದ್ದೆಗಳಿಗೆ ನೀರು ಹರಿಸುತ್ತಾ ಬಂದಿರುತ್ತೇವೆ. ಅದರಂತೆ ದಿನಾಂಕ: 14/12/2022 ರಂದು ನನ್ನ ಮಗ ಬಸವಶಂಕರ ಮತ್ತು ನಮ್ಮ ಬಾಜು ಗದ್ದೆಯವರಲ್ಲಿ ಕೂಲಿ ಕೆಲಸ ಮಾಡುವ ಆಂಜನೇಯ ತಂದೆ ಶ್ರೀನಿವಾಸ ಇಬ್ಬರು ಕೂಡಿ ರಾತ್ರಿ 11:30 ಗಂಟೆಯ ವರೆಗೆ ಕವಳೆ ಗದ್ದೆಗಳಿಗೆ ಮೋಟರ ಚಾಲು ಮಾಡಿ ಮನೆಗೆ ಬಂದಿರುತ್ತಾರೆ. ಹೀಗಿದ್ದು ದಿನಾಂಕ: 15/12/2022 ರಂದು ಮುಂಜಾನೆ 6 ಗಂಟೆ ಸುಮಾರಿಗೆ ನನ್ನ ಮಗನಾದ ಬಸವಶಂಕರ ಈತನು ನನಗೆ ಪೋನು ಮಾಡಿ ಹೇಳಿದ್ದೇನೆಂದರೆ ನಾನು ಮತ್ತು ನಮ್ಮ ಬಾಜು ಕವಳೆ ಗದ್ದೆಯವರ ಹತ್ತಿರ ಕೂಲಿ ಕೆಲಸ ಮಾಡಿತ್ತಿದ್ದ ಅಂಜನೇಯ ಇಬ್ಬರೂ ಕೂಡಿ ಹೋಗಿ ನಮ್ಮ ಕವಳೆ ಗದ್ದೆಗಳನ್ನು ಹೋಗಿ ನೋಡಿದಾಗ ಕವಳೆ ಗದ್ದೆಯಲ್ಲಿ ನೀರು ಬಂದಿರಲಿಲ್ಲ ಆಗ ನಾವು ಇಬ್ಬರೂ ಕೂಡಿ ಭೀಮಾ ನದಿಯ ದಂಡೆಗೆ ಹೋಗಿ ನಾವು ಕೂಡಿಸಿದ ಮೋಟರ ಪಂಪಸೆಟ್ಗಳ ಬೋಲ್ಟ್ನಟ್ಗಳನ್ನು ಬಿಚ್ಚಿ ಮೋಟರ ಪಂಪಸೆಟ್ನಲ್ಲಿರುವ ತಾಮ್ರ ವೈಯರಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಹೇಳಿದಾಗ ಗಾಭರಿಯಾದ ನಾನು ಮತ್ತು ನಮ್ಮ ಗದ್ದೆಯ ಬಾಜು ಇರುವ ಬಾಬುರಾವ ಇಬ್ಬರೂ ಕೂಡಿ ನೋಡಿದಾಗ ನಾವು ಕೂಡಿಸಿದ ಟೆಸ್ಕೋ ಕಂಪನಿಯ 4 ಮೋಟರ ಪಂಪಸೆಟ್ ಮತ್ತು 1 ಸಿಆರ್ಐ ಕಂಪನಿಯ ಮೋಟರ ಪಂಪಸೆಟಗಳ ಬೋಲ್ಟ್ ನೆಟ್ನ್ನು ಬಿಚ್ಚಿ ಅವುಗಳಲ್ಲಿದ್ದ ತಾಮ್ರದ ವೈಯರ ಅಂದಾಜು 16,000/-ಮೌಲ್ಯದ ತಾಮ್ರದ ವೈಯರಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಹಾಗೂ ಬಾಬುರಾವ ಇವರ ಟೆಸ್ಕೋ ಕಂಪನಿಯ 3 ಮೋಟರ ಪಂಪಸೆಟ್ಗಳ ಬೋಲ್ಟ್ನಟ್ಗಳನ್ನು ಬಿಚ್ಚಿ ಅವುಗಳಲ್ಲಿದ ಇದ್ದ ಅಂದಾಜು 14,000/- ರೂ ಮೌಲ್ಯದ ತಾಮ್ರದ ವೈಯರಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಹಾಗೂ 300 ಮೀಟರ ಉದ್ದದ ಕೇಬಲ್ ವೈಯರ ಅಂದಾಜು 5,000/-ರೂ ಬೆಲೆ ಬಾಳುವ ಕೇಬಲ್ನ್ನು ದಿನಾಂಕ: 14/12/2022 ರಂದು 11:30 ಪಿಎಮ್ ದಿಂದ ದಿನಾಂಕ: 15/12/2022 ರಂದು 6 ಎಎಮ್ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮೋಟರ ಪಂಪಸೆಟ್ಗಳ ಬೋಲ್ಟ್ನಟ್ ಬಿಚ್ಚಿ ಅದರಲ್ಲಿದ್ದ ತಾಮ್ರದ ವೈಯರಗಳನ್ನು ಹಾಗೂ ಕೇಬಲ್ ವೈಯರಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.ಕಾರಣ ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ನಾವು ಯಾರೂ ಹೊಲ ಗದ್ದೆಗಳಲ್ಲಿ ಇಲ್ಲದ್ದನ್ನು ಗಮನಿಸಿ, ಟೆಸ್ಕೋ ಕಂಪನಿಯ ಮೋಟರ ಪಂಪಸೆಟ್ ಹಾಗೂ ಕೇಬಲ್ ವೈಯರಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರಗಿಸಿ ಕಳುವಾದ ವಸ್ತುಗಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ. ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 138/2022 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ: 210/2022 ಕಲಂ: 323,324,504, ಸಂಗಡ 34 ಐಪಿಸಿ: ಇಂದು ದಿನಾಂಕ:16/09/2022 ರಂದು ಸಾಯಾಂಕಾಲ 4-00 ಗಂಟೆಗೆ ಪಿರ್ಯಾದಿ ಶ್ರೀ ಅಲ್ಲಿಸಾಬ ತಂದೆ ಖಾಸಿಮಸಾಬ ದೇವಿಕೇರಿ ವಯಾ: 55 ಜಾತಿ: ಮುಸ್ಲಿಂ ಉ: ಒಕ್ಕಲುತನ ಸಾ: ಚಟ್ನಳ್ಳಿ ತಾ: ಶಹಾಪೂರ ಮೊ.ನಂ: 9591555499 ರವರು ಠಾಣೆಗೆ ಹಾಜರಾಗಿ ಪಿರ್ಯಾದಿ  ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆ, ಹೀಗಿದ್ದು ನಮ್ಮ ಮನೆ ಮತ್ತು ನನ್ನ ಹೆಂಡತಿ ಖಾಜಾಬೀ ಇವರ ತಮ್ಮನಾದ ಬಾಸುಮೀಯಾ ಇವರ ಮನೆ ಒಂದೇ ಓಣಿಯಲ್ಲಿ ಇರುತ್ತವೆ. ನಮಗೆ ಹಾಗು ಬಾಸುಮೀಯಾ ಇಬ್ಬರ ಮದ್ಯ ಸುಮಾರು ವರ್ಷಗಳಿಂದ ತಕರಾರು ಇದ್ದು, ಇಬ್ಬರ ಮಧ್ಯ ಸುಮಾರು ಸಲ ಬಾಯಿ ಮಾತಿನಿಂದ ತಕರಾರು ಆಗಿದ್ದು ಊರಿನ ಹಿರಿಯರು ನಮಗೆ ಬುದ್ದಿ ಹೇಳಿದ್ದರಿಂದ ನಾವು ಇರಲಿ ಬಿಡು ಅಂತಾ ಸುಮ್ಮನಿದ್ದೇವು. ಅವಾಗಿನಿಂದಲೂ ನಮ್ಮ ಮೇಲೆ ಬಾಸುಮೀಯಾ ಮತ್ತು ಅವನ ಮಗನಾದ ಜಾನಿ@ ಜಾವೀದ ಈತನು ನಮ್ಮ ಮೇಲೆ ಹಗೆತನ ಸಾಧಿಸುತ್ತಿದ್ದರು.
  ಹೀಗಿದ್ದು, ದಿನಾಂಕ: 14/12/2022 ರಂದು ನಮ್ಮ ಓಣಿಯಲ್ಲಿ ಅಬ್ದುಲಸಾಬ ಪಠಾಣ ಇವರ ಮನೆಯಲ್ಲಿ ಅವರ ತಂದೆಯ ಕಾರ್ಯ ಮಾಡಿದ್ದರಿಂದ ರಾತ್ರಿ ಅಂದಾಜು ಸುಮಾರು 8-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಖಾಜಾಬೀ ಇಬ್ಬರೂ ಕೂಡಿ ಊಟಕ್ಕೆ ಹೋಗಿದ್ದೇವು ನನ್ನ ಮಗನಾದ ಖಾಸಿಮಸಾಬ ಈತನು ಮನೆಯಲ್ಲಿಯೇ ಇದ್ದನು. ನಂತರ ರಾತ್ರಿ 9-00 ಗಂಟೆ ಸುಮಾರಿಗೆ ನಮ್ಮ ಮನೆಯಲ್ಲಿ ಬಾಯಿ ಮಾತಿನ ಶಬ್ದ ಕೇಳಿ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿ ನಮ್ಮ ಮನೆಗೆ ಬಂದೇವು ಅಲ್ಲಿ, ನನ್ನ ಮಗ ಖಾಸಿಮಸಾಬ ಈತನಿಗೆ ಜಾನಿ@ ಜಾವೀದ ತಂದೆ ಬಾಸುಮೀಯಾ ಪಠಾಣ ಹಾಗೂ ಅವರ ತಂದೆಯಾದ ಬಾಸುಮೀಯ ತಂದೆ ಖಾಸಿಮಸಾಬ ಇಬ್ಬರೂ, ನನ್ನ ಮಗನಿಗೆ ಎಲೇ ಸೂಳೆ ಮಗನೆ, ಮೊದಲೇ ನಮಗೂ ನಿಮಗೂ ಮೊದಲಿನಿಂದಲೂ ಆಗಿ ಬರುವುದಿಲ್ಲ, ಅಂತದರಲ್ಲಿ ನಮ್ಮ ಅಣ್ಣ-ತಮ್ಮ ಪೈಕಿಯಾದ ಅಬ್ದುಲಸಾಬ ಪಠಾಣ ಇವರ ಮನೆಗೆ ನಿಮ್ಮ ತಂದೆ-ತಾಯಿ ಇಬ್ಬರೂ ಯಾಕೆ ಊಟಕ್ಕೆ ನೀನು ಕಳುಹಿಸುತ್ತಿಯಾ, ಸೂಳೆ ಮಗನೇ ನಿಂದು ಬಹಾಳ ಸೊಕ್ಕು ಬಂದಿದೆ ಅಂತಾ ಬೈಯುತ್ತಾ ಜಾನಿ ಈತನು ಅಲ್ಲಿಯೇ ಇದ್ದ ಕೊಡಲಿಯ ಹಿಂಬಡಿನಿಂದ ನನ್ನ ಮಗನ ತಲೆಯ ಹಿಂಬಾಗಕ್ಕೆ ಹೊಡೆದು ರಕ್ತಗಾಯ ಮಾಡಿದನು. ಅಲ್ಲದೇ ಬಾಷುಮಿಯಾ ಈತನು ಕೈಯಿಂದ ಹೊಟ್ಟೆಗೆ, ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿದನು, ನನ್ನ ಮಗನು ನೆಲಕ್ಕೆ ಬಿದ್ದು ಚಿರಾಡುವಾಗ ನಾನು ಮತ್ತು ನನ್ನ ಹೆಂಡತಿಯಾದ ಖಾಜಾಬೀ ಇಬ್ಬರೂ ಬಂದು ಹೋಡೆಯುವುದನ್ನು ನೋಡಿ ಬಿಡಿಸಿಕೊಂಡೆವು, ನನಗೂ ಕೂಡಾ ಬಾಸುಮೀಯಾ ಮತ್ತು ಜಾನಿ@ ಜಾವೀದ ಇಬ್ಬರೂ ನನಗೆ ಕೈಯಿಂದ ಬೆನ್ನಿಗೆ ಕೈಯಿಂದ ಹೊಡೆ ಬಡೆ ಮಾಡಿ ಒಳಪೆಟ್ಟು ಮಾಡಿರುತ್ತಾರೆ. ಅಲ್ಲದೇ ಅವರಿಬ್ಬರೂ ನಮಗೆ ಇವತ್ತು ನಮ್ಮ ಕೈಯಲ್ಲಿ ಉಳಿದಿರಿ ಇನ್ನೊಮ್ಮೆ ಸಿಕ್ಕರೇ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿ ಹೋದರು. ನನ್ನ ಮಗನಿಗೆ ತಲೆಗೆ ರಕ್ತಗಾಯ ಆಗಿದ್ದರಿಂದ ನಾನು ಮತ್ತು ನನ್ನ ಹೆಂಡತಿಯಾದ ಖಾಜಾಬೀ ಇಬ್ಬರೂ ಕೂಡಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ನನ್ನ ಮಗನಿಗೆ ಉಪಚಾರ ಪಡಿಸಿ ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ಪೊಲೀಸ್ ಠಾಣೆಗೆ ಬಂದು ಅಜರ್ಿ ನೀಡಿರುತ್ತೇವೆ. ಕಾರಣ ನನಗೆ ಮತ್ತು ನನ್ನ ಮಗನಾದ ಖಾಸಿಮಸಾಬ ಇಬ್ಬರಿಗೆ ವಿನಾಕಾರಣ ಜಗಳ ತೆಗೆದು ನನ್ನ ಮಗನಿಗೆ ಜಾನಿ@ ಜಾವೀದ ಈತನು ಕೊಡಲಿ ಹಿಂಬಂದಿಯಿಂದ ಹೊಡೆದು ರಕ್ತಗಾಯ ಹಾಗೂ ನನಗೂ ಕೈಯಿಂದ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದ್ದು, ಸದರಿ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರಯಗಿಸಲು ಮಾನ್ಯರವರಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 210/2022 ಕಲಂ: 323,324,504,506 ಸಂಗಡ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ

Last Updated: 17-12-2022 10:39 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080