Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19-06-2021

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 86/2021 ಕಲಂ 279, 337, 338, 304(ಎ) ಐಪಿಸಿ ಮತ್ತು 187 ಐಎಮ್ವ್ಹಿ ಎಕ್ಟ್ : ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅನಪುರ ಗ್ರಾಮ ಸಿಮೇಯಲ್ಲಿ ದಿನಾಂಕ 11.06.2021 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನಡೆದೋದ ರಸ್ತೆ ಅಪಘಾತ ಘಟನೆಗೆ ಸಂಬಂಧಿಸಿದಂತೆ ಶ್ರೀ ಸಾಬಣ್ಣ ತಂದೆ ನರಸಿಂಗಪ್ಪ ನಕ್ಕಾ, ವಯಾ|| 60 ವರ್ಷ, ಜಾ|| ಕಬ್ಬಲಿಗ, ಉ|| ಒಕ್ಕಲುತನ, ಸಾ|| ಎಡೇಪಲ್ಲಿ ಗ್ರಾಮ ತಾ|| ಗುರುಮಠಕಲ್ ಇವರು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ್ವಯ ಶ್ರೀ ಹಫೀಜ್ ಸಿ.ಹೆಚ್.ಸಿ-31 ಗುರುಮಠಕಲ್ ಠಾಣೆ ರವರು ಠಾಣಾ ಗುನ್ನೆ ನಂಬ 86/2021 ಕಲಂ 279, 337, 338 ಐಪಿಸಿ ಮತ್ತು 187 ಐ.ಎಂ.ವ್ಹಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರುತ್ತಾರೆ.ಘಟನಾ ಕಾಲಕ್ಕೆ ಗಂಭೀರವಾಗಿ ಗಾಯಗೊಂಡ ಹಣಮಂತ ತಂದೆ ಭೀಮಶಪ್ಪ ಕಾನಾ, ವಯಾ|| 56 ವರ್ಷ, ಜಾ|| ಕಬ್ಬಲಿಗ, ಉ|| ಡಿ ದಜರ್ೆ ನೌಕರ (ಗ್ರಾಮ ಪಂಚಾಯತ ಪಿವುನ್), ಸಾ|| ಅನಪುರ ಗ್ರಾಮ ತಾ|| ಗುರುಮಠಕಲ್ ಈತನಿಗೆ ಯಾದಗಿರಿ, ರಾಯಚೂರು, ಕಲಬುಗರ್ಿ ನಗರಗಳಲ್ಲಿಯ ವಿವಿಧ ಆಸ್ಪತ್ರೆಗಳಲ್ಲಿ ಉಪಚಾರ ಮಾಡಿಸಿದರೂ ಸಹ ಗುಣಮುಖನಾಗದೇ ದಿನಾಂಕ 17.06.2021 ರಂದು ಮಧ್ಯಾಹ್ನ 1.20 ಗಂಟೆ ಸುಮಾರಿಗೆ ಕಲಬುಗರ್ಿ ನಗರದ ವಾತ್ಸಲ್ಯ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಕಾರಣ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಕಾಯ್ದೆ ಕಲಂ ಅಳವಡಿಸಿಕೊಳ್ಳಲಾಗಿದೆ.

 


ಭೀಗುಡಿ ಪೊಲೀಸ್ ಠಾಣೆ
ಗುನ್ನೆ ನಂ : 44/2021 ಕಲಂ 323, 354, 504, 506 ಸಂ 34 ಐಪಿಸಿ : ಫಿಯರ್ಾದಿ ಮತ್ತುಆರೋಪಿತರ ನಡುವೆ ನಿನ್ನೆರಾತ್ರಿ ವಿನಾಕಾರಣ ನಡೆದತಕರಾರಿನ ವಿಷಯದಲ್ಲಿಇಂದು ದಿನಾಂಕ:18/06/2021 ರಂದು 7 ಎ.ಎಮ್. ಸುಮಾರಿಗೆ ಮರೆಮ್ಮದೇವಿ ಗುಡಿ ಮುಂದೆ ನ್ಯಾಯ ಪಂಚಾಯತಿ ಮಾಡುತ್ತಿರುವಾಗಆರೋಪಿರು ಫಿಯರ್ಾದಿಗೆಅವಾಚ್ಯ ಶಬ್ದಗಳಿಂದ ಬೈದು, ಕೈ ಮತ್ತು ಸೀರೆಯ ಸೆರಗು ಹಿಡಿದು ಎಳೆದಾಡಿ ಕೈಯಿಂದ ಹೊಡೆಬಡೆ ಮಾಡಿಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.

 


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 138/2021 ಕಲಂ 279, 337 338 ಐ.ಪಿ.ಸಿ : ಇಂದು ದಿನಾಂಕ 18/06/2021 ರಂದು ಮದ್ಯಾಹ್ನ 13-45 ಗಂಟೆಗೆ ಫಿಯರ್ಾದಿ ಶ್ರೀ ಮಹೇಶ ತಂದೆ ಸೂರ್ಯಕಾಂತ @ ಕಾತರ್ಿಕ್ ಬಾಳಿ, ವಯಸ್ಸು 28 ವರ್ಷ, ಜಾತಿ ಲಿಂಗಾಯತ, ಉಃ ಒಕ್ಕಲುತನ, ಸಾಃ ಶಳ್ಳಗಿ, ತಾಃ ಸುರಪೂರ, ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಿನ್ನೆ ದಿನಾಂಕ 17/06/2021 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ನನ್ನ ತಮ್ಮ ದೇವರಾಜ ತಂದೆ ಸೂರ್ಯಕಾಂತ @ ಕಾತರ್ಿಕ್ ಬಾಳಿ ವಯಸ್ಸು 22 ವರ್ಷ ಮತ್ತು ಗ್ರಾಮದ ರಂಗನಾಥ ತಂದೆ ದೇವರಾಜ @ ದೇವಿಂದ್ರ ದೊರಿ ವಯಸ್ಸು 25 ವರ್ಷ ಇಬ್ಬರೂ ಕೂಡಿ ಶಹಾಪೂರದಲ್ಲಿ ಕೆಲಸವಿದೆ ಅಂತ ಹೇಳಿ ಪಲ್ಸರ್ ಮೋಟರ್ ಸೈಕಲ್ ನಂ ಕೆಎ-33-ಯು-6725 ನೇದ್ದರ ಮೇಲೆ ಹೋದರು.ನಂತರ ಸಾಯಂಕಾಲ 4-00 ಗಂಟೆಯ ಸುಮಾರಿಗೆ ಗ್ರಾಮದ ಸಿದ್ದಪ್ಪ ತಂದೆ ಬಸಪ್ಪ ಮನಗುಳಿ ವಯಸ್ಸು 22 ವರ್ಷ ಈತನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾನು ನನ್ನ ವೈಯಕ್ತಿಕ ಕೆಲಸದ ಸಂಬಂಧ ಮೋಟರ್ ಸೈಕಲ್ ಮೇಲೆ ಶಹಾಪೂರಕ್ಕೆ ಬಂದು, ಶಹಾಪೂರದಿಂದ ಮರಳಿ ಮೋಟರ್ ಸೈಕಲ್ ಮೇಲೆ ಊರಿಗೆ ಬರುವಾಗ, ಶಹಾಪೂರದ ಗ್ಯಾರೇಜ್ ಲೈನದಲ್ಲಿ ನಿನ್ನ ತಮ್ಮ ದೇವರಾಜ ಮತ್ತು ನಮ್ಮೂರ ರಂಗನಾಥ ಇವರು ಪಲ್ಸರ್ ಮೋಟರ್ ಸೈಕಲ್ ನಂಬರ ಕೆಎ-33-ಯು-6725 ಮೇಲೆ ಸಿಕ್ಕಿದ್ದು, ಮೋಟರ್ ಸೈಕಲ್ ನಿನ್ನ ತಮ್ಮ ದೇವರಾಜ ಈತನು ಚಲಾಯಿಸುತಿದ್ದ ಮತ್ತು ನಮ್ಮೂರ ರಂಗನಾಥ ದೋರಿ ಈತನು ಮೋಟರ್ ಸೈಕಲ್ ಹಿಂದುಗಡೆ ಕುಳಿತಿದ್ದನು. ನನಗೆ ಮಾತನಾಡಿಸಿ ತಮ್ಮ ಮೋಟರ್ ಸೈಕಲ್ ಚಲಾಯಿಸಿಕೊಂಡು ಮುಂದೆ ಹೋದರು, ನಾನು ಅವರ ಹಿಂದಿನಿಂದ ಮೋಟರ್ ಸೈಕಲ್ ಚಲಾಯಿಸಿಕೊಂಡು ಹೋಗುತಿದ್ದೇನು. ಶಹಾಪೂರ-ವಿಭೂತಿಹಳ್ಳಿ ರೋಡಿನ ಮೇಲೆ ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ಶಹಾಪೂರ ಪಟ್ಟಣದ ಚಾಂದಪೆಟ್ರೋಲ್ ಪಂಪ್ ಹತ್ತಿರ ದೇವರಾಜನು ಮೋಟರ್ ಸೈಕಲ್ ಚಲಾಯಿಸಿಕೊಂಡು ಹೋಗುತಿದ್ದಾಗ, ಎದರುಗಡೆಯಿಂದ ಅಂದರೆ ವಿಭೂತಿಹಳ್ಳಿ ಗ್ರಾಮದ ಕಡೆಯಿಂದ ಒಂದು ಮಿನಿ ಅಶೋಕ್ ಲೈಲ್ಯಾಂಡ್ ವಾಹನ ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ನಿನ್ನ ತಮ್ಮ ದೇವರಾಜನು ಚಲಾಯಿಸುತಿದ್ದ ಮೋಟರ್ ಸೈಕಲ್ಗೆ ಜೋರಾಗಿ ಡಿಕ್ಕಿ ಮಾಡಿದ್ದರಿಂದ, ನಿನ್ನ ತಮ್ಮ ದೇವರಾಜ ಮತ್ತು ರಂಗನಾಥ ಇಬ್ಬರೂ ಮೋಟರ್ ಸೈಕಲ್ ಮೇಲಿಂದ ಹಾರಿ ರೋಡಿನ ಮೇಲೆ ಬಿದ್ದರು. ಆಗ ನಾನು ನನ್ನ ಮೋಟರ್ ಸೈಕಲ್ ರೋಡಿನ ಬದಿಗೆ ನಿಲ್ಲಿಸಿ ಹೋಗಿ ನೋಡಲಾಗಿ, ನಿನ್ನ ತಮ್ಮ ದೇವರಾಜ ಮತ್ತು ನಮ್ಮೂರ ರಂಗನಾಥ ಇವರಿಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದವು. ಅಪಘಾತ ಪಡಿಸಿದ ವಾಹನವು ಮಿನಿ ಅಶೋಕ ಲೈಲ್ಯಾಂಡ್ ವಾಹನ ಇದ್ದು, ನಂಬರ ಕೆಎ-33-ಎ-8248 ರ ಇರುತ್ತದೆ. ಅಪಘಾತ ಪಡಿಸಿದ ವಾಹನ ರೋಡಿನ ಬದಿಗೆ ನಿಲ್ಲಿಸಿದ್ದು, ವಾಹನ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಅಯ್ಯಣ್ಣಗೌಡ ತಂದೆ ಶಂಕ್ರಪ್ಪಗೌಡ ಸಾಃ ಮರಕಲ್ ತಾಃ ಶಹಾಪೂರ ಅಂತಾ ಹೇಳಿದನು. ಅಪಘಾತ ಪಡಿಸಿದ ಮಿನಿ ಅಶೋಕ ಲೈಲ್ಯಾಂಡ್ ವಾಹನ ಮತ್ತು ನಿನ್ನ ತಮ್ಮ ಚಲಾಯಿಸುತಿದ್ದ ಪಲ್ಸರ್ ಮೋಟರ್ ಸೈಕಲ್ ನಂಬರ ಕೆಎ-33-ಯು-6725 ಎರಡು ವಾಹನಗಳು ಜಖಂಗೊಂಡಿರುತ್ತವೆ. ಗಾಯಗೊಂಡ ನಿನ್ನ ತಮ್ಮ ದೇವರಾಜ ಮತ್ತು ನಮ್ಮೂರ ರಂಗನಾಥ ಇಬ್ಬರಿಗೂ 108 ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತೇನೆ ನೀನು ಬೇಗನೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಬಾ ಅಂತ ತಿಳಿಸಿದ ಮೇರೆಗೆ, ನಾನು ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ತಮ್ಮ ದೇವರಾಜ ಮತ್ತು ನಮ್ಮೂರ ರಂಗನಾಥ ಇಬ್ಬರೂ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಿದ್ದರು, ನನ್ನ ತಮ್ಮನಿಗೆ ಬಲಗಾಲ ತೊಡೆಯ ಎಲಬು ಮತ್ತು ಬಲಗಾಲ ಮೊಳಕಾಲ ಕೆಳಗೆ ಎಲಬು ಮುರಿದು ಭಾರಿ ರಕ್ತಗಾಯವಾಗಿರುತ್ತದೆ, ಹಣೆಗೆ ಮತ್ತು ಎಡಗಾಲಿನ ಪಾದದ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ. ರಂಗನಾಥ ಈತನಿಗೆ ಬಲಗಾಲ ತೊಡೆಗೆ ಮತ್ತು ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿರುತ್ತದೆ. ಬಲಗೈ ರಟ್ಟೆಗೆ ಒಳಪೆಟ್ಟಾಗಿರುತ್ತದೆ. ಎಡಗೈ ಮಣಿಕಟ್ಟಿನ ಹತ್ತಿರ ರಕ್ತಗಾಯವಾಗಿರುತ್ತದೆ. ಗಾಯಗೊಂಡ ಇಬ್ಬರನ್ನು ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ನಾನು 108 ವಾಹನದಲ್ಲಿ ಕರೆದುಕೊಂಡು ಕಲಬುರಗಿಗೆ ಹೋಗಿ, ಕಾಮರಡ್ಡಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತಿದ್ದೇನೆ. ಕಾರಣ ಈ ಅಪಘಾತಕ್ಕೆ ಕಾರಣಿಭೂತನಾದ ಮಿನಿ ಅಶೋಕ ಲೈಲ್ಯಾಂಡ್ ವಾಹನ ನಂಬರ ಕೆಎ-33-ಎ-8248 ರ ಚಾಲಕನಾದ ಅಯ್ಯಣ್ಣಗೌಡ ತಂದೆ ಶಂಕ್ರಪ್ಪಗೌಡ ಸಾಃ ಮರಕಲ್ ತಾಃ ಶಹಾಪೂರ ಈತನ ವಿರುದ್ಧ ಕಾನೂನು ರೀತಿಯ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದದ ಮೇಲಿಂದ ಠಾಣೆ ಗುನ್ನೆ ನಂಬರ 138/2021 ಕಲಂ 279, 337, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 


ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ: 66/2021 ಕಲಂ: 87 ಕೆ.ಪಿ ಆ್ಯಕ್ಟ್ : ದಿನಾಂಕ 18/06/2021 ರಂದು 09.05 ಪಿಎಂ ಕ್ಕೆ ಶ್ರೀ ಸೊಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ರವರ ಠಾಣೆಗೆ ಆರೋಪಿತರು, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ಬಂದು ಒಂದು ವರದಿ ನೀಡಿದ್ದು ಅದರ ಸಾರಂಶವೇನಂದರೆ, ಗೋಗಿ ಕೆ ಗ್ರಾದ ಗಂಗಾ ರೈಸ್ ಮಿಲ್ ಹತ್ತಿರ ಕೆರೆಯ ಸಾರ್ವಜನಿಕ ಜಾಗದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 05 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 4600=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು 07.35 ಪಿಎಮ್ ದಿಂದ 08.35 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 09.05 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಹಾಜರಪಡಿಸಿದ್ದರಿಂದ ವರದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ 66/2021 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Last Updated: 19-06-2021 10:15 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080