Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 25-11-2021

ನಾರಾಯಣಪೂರ ಪೊಲೀಸ ಠಾಣೆ
ಗುನ್ನೆ ನಂ.65/2021 ಕಲಂ: 295 ಐಪಿಸಿ : ಇಂದು ದಿನಾಂಕ 24/11/2021 ರಂದು 09:00 ಎ.ಮ್ ಕ್ಕೆ ಧರ್ಮಣ್ಣ ತಂದೆ ಪೀರಪ್ಪ ಚಲುವಾದಿ ವಯ :34 ವರ್ಷ ಜಾ :ಪ.ಜಾತಿ ಉ :ಕೂಲಿಕೆಲಸ ಸಾ :ಹಗರಟಗಿ ತಾ :ಹುಣಸಗಿ ಜಿ :ಯಾದಗಿರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ತಂದು ಹಾಜರುಪಡಿಸಿದ ಪಿಯರ್ಾದಿ ಅಜರ್ಿಯ ಸಾರಾಂಶವೆನೆಂದರೆ, ನಿನ್ನೆ ದಿ :23/11/2021 ರಂದು ಮುಂಜಾನೆ ನಾನು ಮತ್ತು ನಮ್ಮೂರ ಲಕ್ಷ್ಮಣ ತಂದೆ ಯಲ್ಲಪ್ಪ ಚಲುವಾದಿ, ಬಸವರಾಜ ತಂದೆ ಭೀಮಣ್ಣ ಹೊಸಮನಿ, ಸೋಮಣ್ಣ ತಂದೆ ಬಸಪ್ಪ ಚಲುವಾದಿ ಎಲ್ಲರೂ ಕೂಡಿ ಸುರಪೂರದಲ್ಲಿ ಮಾಜಿ ಶಾಸಕರ ಹುಟ್ಟ ಹಬ್ಬದ ಕಾರ್ಯಕ್ರಮಕ್ಕೆ ಹೋಗಿ ರಾತ್ರಿ 1.00 ಗಂಟೆಯ ಸುಮಾರಿಗೆ ನಾವು ನಾಲ್ಕು ಜನರು ನಮ್ಮ ಮೋಟಾರ್ ಸೈಕಲ ಮೇಲೆ ಊರಿಗೆ ಬಂದು ನಮ್ಮ ಓಣಿಯಲ್ಲಿ ಅಂಬೇಡ್ಕರ ಕಟ್ಟಿಯ ಹತ್ತಿರ ಹೊರಟಾಗ ನಮ್ಮೂರ ನಿಂಗಪ್ಪ ತಂದೆ ಬಸಪ್ಪ ಬಿದರಕುಂದಿ ಸಾ :ಹಗರಟಗಿ ಈತನು ನಮ್ಮ ಓಣಿಯಲ್ಲಿ ಮಹಾನ ನಾಯಕ ಡಾ|| ಅಂಬೇಡ್ಕರ ರವರ ಕಟ್ಟಿಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದನು. ನಾವು ನಾಲ್ಕು ಜನರು ಲೈಟಿನ ಬೆಳಕಿನಲ್ಲಿ ಮೂತ್ರ ವಿಸರ್ಜನೆ ಮಾಡುವದನ್ನು ನೋಡಿದ್ದು, ಆಗ ನಾವು ಎಲ್ಲರೂ ಕೂಡಿ ನಿಂಗಪ್ಪನಿಗೆ ನೀನು ಈ ರೀತಿ ಮಾಡುವದು ಸರಿಯಲ್ಲಾ ನಮ್ಮ ಸಮಾಜದ ಮಹಾನ ನಾಯಕ ಡಾ|| ಬಾಬಾ ಸಾಹೇಬ್ ಅಂಬೇಡ್ಕರ ರವರಿಗೆ ಅವಮಾನ ಮಾಡಿದ್ದಿ ಅಂತಾ ಅಂದೆವು. ಈ ಬಗ್ಗೆ ನಾವು ನಾಲ್ಕು ಜನರ ಊರಲ್ಲಿ ನಮ್ಮ ಸಮಾಜದವರೊಂದಿಗೆ ವಿಚಾರ ಮಾಡಿಕೊಂಡು ಇಂದು ಠಾಣೆಗೆ ಬಂದು ದೂರು ಕೊಡುತ್ತಿದ್ದು ದಿ :24/11/2021 ರಂದು ಬೆಳಗಿನ ಜಾವ 01.00 ಗಂಟೆಯ ಸುಮಾರಿಗೆ ನಮ್ಮೂರ ನಿಂಗಪ್ಪ ತಂದೆ ಬಸಪ್ಪ ಬಿದರಕುಂದಿ ಸಾ :ಹಗರಟಗಿ ಈತನು ನಮ್ಮ ಸಮಾಜದವರು ಎಲ್ಲರೂ ದೇವರೆಂದು ಪೂಜೆ ಮಾಡು ಮಹಾನ ನಾಯಕ ಡಾ|| ಬಾಬಾ ಸಾಹೇಬ್ ಅಂಬೇಡ್ಕರ ರವರ ಕಟ್ಟಿಗೆ ಮೂತ್ರ ವಿಸರ್ಜನೆ ಮಾಡಿ ಅವಮಾನ ಮಾಡಿದ್ದು ಸದರಿಯವನ ವಿರುದ್ದ ಕಾನೂನ ಕ್ರಮ ಜರುಗಿಸಬೇಕೆಂದು ಮಾನ್ಯರಲ್ಲಿ ವಿನಂತಿ.ಅಂತಾ ನೀಡಿದ ಪಿಯರ್ಾದಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 65/2021 ಕಲಂ 295 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 179/2021 ಕಲಂ: 323, 324, 504, 506 ಸಂ. 149 ಐಪಿಸಿ : ಇಂದು ದಿನಾಂಕ:24/11/2021 ರಂದು 10.00 ಎ.ಎಂಕ್ಕೆ ಶ್ರೀ ಮಾಹಾದೇವಪ್ಪ ಸಿಪಿಸಿ-126 ಸುರಪುರ ಪೊಲೀಸ್ ಠಾಣೆರವರು ಮಾನ್ಯ ಜೆ.ಎಂ.ಎಫ್.ಸಿ ನ್ಯಾಯಾಲಯ ಸುರಪುರ ರವರಿಂದ ಖಾಸಗಿ ಪಿಯರ್ಾದಿ ಸಂ. /2021 ದಿನಾಂಕ:12/11/2021 ನೇದ್ದನ್ನು ವಸೂಲಾಗಿದ್ದು, ಠಾಣೆಗೆ ತಂದು ಹಾಜರ ಪಡಿಸಿದ್ದು ಸಾರವಂಶವೆನೆಂದರೆ, ಪಿಯರ್ಾದಿ ಭೀಮಣ್ಣ ತಂದೆ ಶೇಖಪ್ಪ ತಳವಾರ ವ|| 35 ವರ್ಷ ಸಾ|| ಮಾಚಗುಂಡಾಳ ಇವರು ಜೆ.ಎಂ.ಎಫ್.ಸಿ ನ್ಯಾಯಾಲಯ ಸುರಪುರದಲ್ಲಿ ಹಾಜರಾಗಿ ಆರೋಪಿ ನಂ. 1) ಮಲ್ಲಮ್ಮ ಗಂಡ ಭೀಮಣ್ಣ ತಳವಾರ 2) ಶಿವಕಾಂತಮ್ಮ ಗಂಡ ತಿಮ್ಮಣ್ಣ ಗುತ್ತೆದಾರ, 3) ಲಕ್ಷ್ಮಣ ತಂದೆ ಭೀಮಣ್ಣ ಗುತ್ತೆದಾರ, 4) ಪಾರಪ್ಪ ತಂದೆ ಲಕ್ಷ್ಮಣ ಗುತ್ತೆದಾರ, 5) ರವಿಕುಮಾರ ತಂದೆ ತಿಮ್ಮಣ್ಣ ಗುತ್ತೆದಾರ, 6) ಶಿವರಾಜಕುಮಾರ ತಂದೆ ಮಲ್ಲಣ್ಣ ಬಿರಾದಾರ, 7) ಪ್ರವೀಣ ತಂದೆ ಪಾರಪ್ಪ ಗುತ್ತೆದಾರ, 8) ಅಕಿಲೇಶ ತಂದೆ ಭೀಮಣ್ಣ ಗುತ್ತೆದಾರ, 9) ರಮೇಶ ತಾಯಿ ಭೀಮವ್ವ ಸಾ|| ಎಲ್ಲರು ಸುರಪುರ ಇವರ ವಿರುದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್ 323, 324, 504, 506 ಸಂ.149 ರ ಅಡಿ ಖಾಸಗಿ ಪಿಯರ್ಾದಿ ಸಲ್ಲಿಸಿದ್ದು ಆದಕಾರಣ ಆರೋಪಿತರ ವಿರುದ್ದ ಯೋಗ್ಯ ವಿಚಾರಣೆ ಮಾಡಿ ಶಿಕ್ಷೆ ವಿದಿಸಬೇಕೆಂದು ಕೋರಿ ದಂಡ ಪ್ರಕ್ರೀಯ ಸಂಹಿತೆ ಕಲಂ:200 ಅಡಿಯಲ್ಲಿ ಒಂದು ಖಾಸಗಿ ಪಿಯರ್ಾದಿಸಲ್ಲಿಸಿದ್ದು ಇರುತ್ತದೆ. ಸದರಿ ಖಾಸಗಿ ಪಿಯರ್ಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.179/2021 ಕಲಂ: 323, 324, 504, 506 ಸಂ.149 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.

 

ಗೋಗಿ ಪೊಲೀಸ ಠಾಣೆ
ಗುನ್ನೆ ನಂ : 107/2021 ಕಲಂ: 143, 147, 148, 323, 324, 354, 504, 506 ಸಂ: 149 ಐಪಿಸಿ : ದಿನಾಂಕ 24/11/2021 ರಂದು 07.10 ಪಿ.ಎಮ್.ಕ್ಕೆ ಫಿಯರ್ಾದಿದಾರರಾದ ಶ್ರೀಮತಿ. ಬಸ್ಸಮ್ಮ ಗಂಡ ರುದ್ರಗೌಡ ಪೊಲೀಸ್ ಪಾಟೀಲ್ ವಯಾ:45 ಜಾ: ಲಿಂಗಾಯತರೆಡ್ಡಿ ಉ: ಮನೆಗೆಲಸ ಸಾ ಸಿಂಗನಳ್ಳಿ ಸದ್ಯ ಹಾರಣಗೇರಾ ತಾ: ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕರಿಸಿದ ಅಜರ್ಿ ಹಾಜರ ಪಡೆಸಿದ್ದು ಅದರ ಸಾರಂಶ ಏನಂದರೆ, ನಾನು ಬಸ್ಸಮ್ಮ ಗಂಡ ರುದ್ರಗೌಡ ಪೊಲೀಸ್ ಪಾಟೀಲ್ ವಯಾ:45 ಜಾ: ಲಿಂಗಾಯತರೆಡ್ಡಿ ಉ: ಮನೆಗೆಲಸ ಸಾ ಸಿಂಗನಳ್ಳಿ ಸದ್ಯ ಹಾರಣಗೇರಾ ಗ್ರಾಮ ವಾಸ ಇರುತ್ತೇನೆ. ಹೀಗಿದ್ದು ನಾನು ನನ್ನ ಕುಟುಂಬದೊಂದಿಗೆ ನನ್ನ ಸ್ವಂತ ತಮ್ಮನಾದ ಶಿವರುದ್ರ @ ಬಸನಗೌಡ ತಂದೆ ಮಲ್ಲಣ್ಣ ಚೆನ್ನೂರ ಸಾ: ಹಾರಣಗೇರಾ ಈತನ ಮನೆಯಲ್ಲಿಯೇ ಸುಮಾರು 10 ವರ್ಷ ಗಳಿಂದ ನನ್ನ ಕುಟುಂಬ ಸಮೇತ ಅನ್ಯೋನ್ಯವಾಗಿ ವಾಸಮಾಡುತ್ತಾ ಇದ್ದೇನೆ.ಹೀಗಿದ್ದು ನನ್ನ ತಮ್ಮನಾದ ಶಿವರುದ್ರ @ ಬಸನಗೌಡ ತಂದೆ ಮಲ್ಲಣ್ಣ ಚೆನ್ನೂರ ಸಾ: ಹಾರಣಗೇರಾ ಈತನು ಸುಮಾರು 10 ವರ್ಷಗಳಿಂದ ಉಕ್ಕನಾಳ ಗ್ರಾಮ ಪಂಚಾಯತಿ ಕಾಯರ್ಾಲಯದಲ್ಲಿ ಪಂಪ ಆಪರೇಟರ ಮತ್ತು ಕರವಸೂಲಿಗಾರ ಹುದ್ದೇ (ಬಿಲ್ ಕಲೆಕ್ಟರ) ನೌಕರಿ ಮಾಡುತ್ತಿದ್ದಾನೆ. ನಮ್ಮೂರಿನ ಶಾಂತಪ್ಪ ತಂದೆ ಬಸ್ಸಪ್ಪ ಈತನು ನನ್ನ ತಮ್ಮ ಶಿವರುದ್ರ @ ಬಸನಗೌಡ ಈತನ ವಿರುದ್ಧ ವೈಷ್ಯಮ್ಯ ಬೆಳಿಸಿ ಆಗಾಗ ತಕರಾರು ಮಾಡುತ್ತಾ ಮಗನೇ ನಿನಗೆ ಪಂಚಾಯತಿಯಲ್ಲಿ ವಜಾ ಮಾಡಿಸಿ ಬಿಡತ್ತಿನಿ ಸೂಳಿ ಮಗನೇ ಅಂತಾ ಆವಾಗ ಅವಾಗ ಅನ್ನುತ್ತಾ ದ್ವೇಷ ಸಾದಿಸುತ್ತಿದ್ದನು. ಹೀಗಿದ್ದು ನನ್ನ ತಮ್ಮನು ದಿನಾಲೂ ಎಲ್ಲಾ ಹಳ್ಳಿಗಳಿಗೆ ಬೆಳಿಗ್ಗೆ 6 ಗಂಟೆಗೆ ನೀರು ಬಿಡುವ ಕೆಲಸವನ್ನು ಆಯಾ ಹಳ್ಳಿಗಳಲ್ಲಿ ಸಮಯಕ್ಕೆ ತಕ್ಕಂತೆ ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದನು. ದಿನಾಂಕ:14/11/2021 ರಂದು ನಾನು ಮತ್ತು ನಮ್ಮ ತಮ್ಮ ಶಿವರುದ್ರ @ ಬಸನಗೌಡ ನನ್ನ ತಂಗಿಯಾದ ಸಿದ್ದಲಿಂಗಮ್ಮ ಮತ್ತು ನನ್ನ ಮಗಳು ಕವಿತಾ ಹಾಗೂ ನನ್ನ ಗಂಡನಾದ ರುದ್ರಗೌಡ ನನ್ನ ಮಗ ಭೀಮನಗೌಡ ಇವರೊಂದಿಗೆ ನನ್ನ ತಮ್ಮನ ಮನೆಯಲ್ಲಿ ಇದ್ದಾಗ ಹಾರಣಗೇರಾ ಗ್ರಾಮದ ಶಾಂತಪ್ಪ ತಂದೆ ಬಸ್ಸಪ್ಪ ಸಾಲಿಮನಿ ಈತನು ಪೋನ ಮಾಡಿ ಲೇ ಬಸ್ಯಾ ಸೂಳಿ ಮಗನೇ ಊರಲ್ಲಿ ನೀರಿನ ಟಾಕಿ ತುಂಬಿ ಹರಿತಾ ಇದೆ ನೋಡಲಿಕ್ಕೆ ಬರಲ್ಲಾ ಏನಲೇ ಮನೆಯಲ್ಲಿ ಇದ್ದು ಶಂಟಾ ಹರೀತಿದಿ ಏನಲೇ ಬೋಸಡಿ ಮಗನೇ ಅಂತಾ ಬೈಯ್ದನು. ಆಗ ನನ್ನ ತಮ್ಮನು ಶಾಂತಪ್ಪ ಏನಾಗಿದೆ ಸಮಸ್ಯೆ ಮೊದಲು ಹೇಳು ಹಾಗೇಲ್ಲಾ ಸುಮ್ಮನೆ ಬೈಯ್ಯಬೇಡ ಇದು ಸರಿಯಲ್ಲಾ ಅಂತಾ ಅಂದು ನನ್ನ ತಮ್ಮನಾದ ಶಿವರುದ್ರ @ ಬಸನಗೌಡ ಈತನು ಆಯಿತು ಶಾಂತು, ಟಾಕಿ ಹತ್ತಿರ ಮುದುಕಪ್ಪ ಹೋಳೆರ ಈತನನ್ನು ಕಳುಹಿಸಿ ಮೋಟಾರ್ ಬಂದ ಮಾಡಸ್ತೀನಿ ಅಂತಾ ಹೇಳಿ ಪೋನ ಕಟ್ ಮಾಡಿದನು. ಮುದುಕಪ್ಪ ಈತನಿಗೆ ಮೋಟಾರ್ ಬಂದ ಮಾಡಿ ಬಾ ಅಂತಾ ಹೇಳಿ ಕಳುಹಿಸಿ ತಾನು ಮನೆಯಲ್ಲಿ ಜಳಕಾ ಮಾಡಲು ಹೋದನು. ನಂತರ ಸ್ವಲ್ಪ 10 ನಿಮಿಷ ಬಿಟ್ಟು ಮುದುಕಪ್ಪ ತಂದೆ ನಾಗಪ್ಪ ಹೋಳೆರ ಈತನು ಪುನಃ ನಮ್ಮ ಮನೆಗೆ ಬಂದು ನನ್ನ ತಮ್ಮನಿಗೆ ಹೇಳಿದ್ದೇನೆಂದರೆ ಮೋಟಾರ ಬಂದ ಮಾಡಲು ಹೋದಾಗ ಬಸವಣ್ಣ ದೇವರ ಗುಡಿಯ ಹತ್ತಿರ ಶಾಂತಪ್ಪ ಸಾಲಿಮನಿ ಈತನು ನೀನು ಪಂಪ ಆಪರೇಟರ ಅಲ್ಲ ನೀನು ವಾಪಸ ಹೋಗು ಪಂಪ ಆಪರೇಟರ ಬಂದು ಬಂದ ಮಾಡುತ್ತಾನೆ ಅಂತ ಹೇಳಿ ಕಳಿಸಿದ್ದಾನೆ ಅಂತಾ ನಮ್ಮ ತಮ್ಮನಿಗೆ ಬಂದು ಹೇಳಿದನು. ಆಯಿತು ಬಿಡು ಅಂತಾ ನಂತರ ನನ್ನ ಮಗನಾದ ಭೀಮನಗೌಡ ತಂದೆ ರುದ್ರಗೌಡ ಈತನಿಗೆ ಮೋಟಾರ್ ಬಂದ ಮಾಡಲು ಕಳಿಸಿದಾಗಲೂ ಸಹ ಪುನಃ ಶಾಂತಪ್ಪನು ಪಂಪ ಆಪರೇಟರ ಬಸ್ಯಾ ಈತನೆ ಬಂದ ಮಾಡಬೇಕು ನಾನೇ ಅವನ ಮನಿಗೆ ಬರುತ್ತೀನಿ ನಡಿರಲೇ ಅಂತಾ ಭೀಮನಗೌಡ ಈತನಿಗೆ ಬೈಯ್ದು ಕಳಿಸಿರುತ್ತಾನೆ ಅಂತಾ ಭೀಮನಗೌಡ ಈತನು ನಮಗೆ ಬಂದು ವಿಷಯ ತಿಳಿಸಿದನು.ಆಗ ದಿನಾಂಕ:14/11/2021 ರಂದು 09.30 ಎಎಂ ಸುಮಾರಿಗೆ ನಾವೆಲ್ಲರೂ ಮನೆಯಲ್ಲಿದ್ದು, ಇನ್ನೇನು ಊಟ ಮಾಡಲು ತಯ್ಯಾರಿಯಲ್ಲಿದ್ದಾಗ ಆಗ ನಮ್ಮೂರಿನ 1) ಶಾಂತಪ್ಪ ತಂದೆ ಬಸ್ಸಪ್ಪ ಸಾಲಿಮನಿ ಸದ್ಯ ಸದಸ್ಯರು ಗ್ರಾಮ ಪಂಚಾಯತಿ ಉಕ್ಕನಾಳ 2) ಗೌರಮ್ಮ ಗಂಡ ಶಾಂತಪ್ಪ ಸಾಲಿಮನಿ ಸದ್ಯಸರು ಗ್ರಾಮ ಪಂಚಾಯತಿ ಉಕ್ಕನಾಳ ಹಾಗೂ 3) ಬಸವರಾಜ ತಂದೆ ಭೀಮರಾಯ ಸಾಲಿಮನಿ ಸಾ; ಹಾರಣಗೇರಾ 4) ರವಿಕುಮಾರ ತಂದೆ ನಿಂಗಣ್ಣ ಸಾ: ಓತಿನಮಡು ಹಾ:ವ: ಹಾರಣಗೇರಾ 5) ಭೀಮರಾಯ ವಾಡಿ ಸಾ: ಹಾರಣಗೇರಾ ಇವರೆಲ್ಲರೂ ಲೇ ಬಸ್ಯಾ ಏಲ್ಲಿದಿಲೇ ಊರಲ್ಲಿ ನಾವು ಹೇಳಿದ ಕೆಲಸ ಮಾಡಲಿಕ್ಕೆ ಆಗಲ್ಲಾ ಏನಲೇ ಮಗನೇ ನಿನಗೆ ಸೊಕ್ಕು ಬಂದಿದೆ ಸೂಳಿ ಮಗನೇ ಅಂತಾ ಬೈಯುತ್ತಾ ನಮ್ಮ ಮನೆಯ ಹತ್ತಿರ ಬಂದು ಶಾಂತಪ್ಪ ತಂದೆ ಬಸ್ಸಪ್ಪ ಸಾಲಿಮನಿ ಈತನು ನನ್ನ ತಮ್ಮನ ಕಾಲಿಗೆ ಒದ್ದನು. ಆಗ ನನ್ನ ತಮ್ಮ ಶಿವರುದ್ರ ಈತನು ಕೆಳಗಡೆ ಬಿದ್ದನು. ಆಗ ಅವನಿಗೆ ಎದೆಗೆ ಮತ್ತು ಬೆನ್ನಿಗೆ ಗುಪ್ತಗಾಯವಾಗಿದ್ದು ಇರುತ್ತದೆ. ಅದರಂತೆ ಬಸವರಾಜ ತಂದೆ ಭೀಮರಾಯ ಈತನು ನನಗೆ ಕೈಹಿಡಿದು ಎಳೆದಾಡಿ ಸೀರೆ ಹಿಡಿದು ಜಗ್ಗಾಡಿ ನನಗೆ ನಿನ್ನ ತಮ್ಮನಿಗೆ ಬುದ್ದಿ ಹೇಳಲಿಕ್ಕೆ ಬರುವದಿಲ್ಲಾ ಏನು ಅಂತಾ ಅಂದು ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯಿಂದ ನನ್ನ ತೆಲೆಯ ಮೇಲೆ ಮತ್ತು ಕಣ್ಣಿಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ.ನಂತರ ಗೌರಮ್ಮ ಗಂಡ ಶಾಂತಪ್ಪ ಸಾಲಿಮನಿ ಇವಳು ಈ ಸೂಳಿ ಮಕ್ಕಳದು ಹಾರಣಗೇರಾದಲ್ಲಿ ಬಹಳ ದಿಮಾಕ ಆಗಿದೆ ಅಂತಾ ಅಂದು ನನ್ನ ತಂಗಿ ಸಿದ್ದಲಿಂಗಮ್ಮ ಇವಳಿಗೆ ಕೈಯಿಂದ ಕೂದಲೂ ಜಗ್ಗಾಡಿ ನೆಲಕ್ಕೆ ಕೆಡವಿ ಮೈಮೇಲೆ ಹೊಡೆದು ಗುಪ್ತಗಾಯ ಪೆಟ್ಟು ಮಾಡಿರುತ್ತಾರೆ. ನಂತರ ರವಿಕುಮಾರ ತಂದೆ ನಿಂಗಣ್ಣ ಮತ್ತು ಭೀಮರಾಯ ವಾಡಿ ಇವರು ನನ್ನ ತಮ್ಮ ಶಿವರುದ್ರ @ ಬಸನಗೌಡ ಈತನಿಗೆ ಕಾಲಿನಿಂದ ಒದ್ದು ಕೆಳಗೆ ಕೆಡವಿ ಕಾಲಿಗೆ ಮತ್ತು ಬೆನ್ನಿನ ಹತ್ತಿರ ತುಳಿದು ಒಳಪೆಟ್ಟು ಮಾಡಿದ್ದು ಇರುತ್ತದೆ. ನಂತರ ನನ್ನ ಮಗ ಭೀಮನಗೌಡ ತಂದೆ ರುದ್ರಗೌಡ ಈತನು ಜಗಳ ಬಿಡಿಸಲು ಬಂದಾಗ ಆಗ ಎಲ್ಲರೂ ಕೂಡಿ ಇದರಲ್ಲಿ ನಿನ್ನದೇನು ಸುದ್ದಿ ಮಗನೇ ಅಂತಾ ನನ್ನ ಮಗ ಭೀಮನಗೌಡ ಈತನಿಗೆ ಕೈಯಿಂದ ಎಲ್ಲರೂ ಗುದ್ದಿ ಒಳಪೆಟ್ಟು ಮಾಡಿರುತ್ತಾರೆ. ನಂತರ ಶಾಂತಪ್ಪ ತಂದೆ ಬಸ್ಸಪ್ಪ ಸಾಲಿಮನಿ ಈತನು ನನಗೆ ಮತ್ತೊಂದು ಬಡಿಗೆಯಿಂದ ನನ್ನ ಬೆನ್ನ ಮೇಲೆ ಹೊಡೆದು ಒಳಪಡೆಟ್ಟು ಮಾಡಿದ್ದು ಇರುತ್ತದೆ. ಆಗ ಅಲ್ಲಿಯೇ ದಾರಿಯಲ್ಲಯೇ ಹಾಯ್ದು ಹೋಗುತ್ತಿದ್ದ ನಮ್ಮೂರ ಸುಭಾಸ್ ಬೇವಿನಕಟ್ಟಿ, ಮುದುಕಪ್ಪ ಹೋಳೆರ, ಶಿವಶಂಕರ ಕಟ್ಟಿಮನಿ, ರಾಮನಗೌಡ ಬಿದ್ನಾಳ, ಸಂಗಪ್ಪ ಮಜ್ಜರಿ, ಅಯ್ಯಪ್ಪ ಬೇವಿನಕಟ್ಟಿ ಇವರು ಬಂದು ಜಗಳ ಬಿಡಿಸಿದರು. ಆಗ ಮಕ್ಕಳೇ ಇವತ್ತು ಉಳದೀರಿ ಇನ್ನೊಮ್ಮೆ ಸಿಕ್ಕರೆ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ. ನಂತರ ಗಾಯ ಹೊಂದಿದ ನಮಗೆ ಜಗಳ ಬಿಡಿಸಿದವರು ನಮಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೇಗೆ ಕರೆದುಕೊಂಡು ಹೋಗಿ ಚಿಕಿತ್ಸೇ ಕೊಡಿಸಿರುತ್ತಾರೆ. ಅಲ್ಲಿಂದ ನಾನು ಮತ್ತು ನನ್ನ ತಮ್ಮನಾದ ಶಿವರುದ್ರ @ ಬಸನಗೌಡ ಹೆಚ್ಚಿನ ಚಿಕಿತ್ಸೇಗೆ ಯಾದಗಿರಿ ಸರಕಾರಿ ಅಸ್ಪತ್ರೆಗೆ ಹೋಗಿ ಚಿಕಿತ್ಸೇ ಪಡೆದುಕೊಂಡಿರುತ್ತೇವೆ.

Last Updated: 25-11-2021 10:00 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080