Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 27-06-2022


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 77/2022 ಕಲಂ 143, 147, 148, 341, 447, 323, 324, 504, 506 ಸಂಗಡ 149 ಐಪಿಸಿ: ಫಿಯರ್ಾದಿಗೆ ಸಂಬಂಧಿಸಿದ ಜಮೀನು ಸವರ್ೇ ನಂಬರ 365 ರಲ್ಲಿ ಅಕ್ರಮವಾಗಿ ಸಾಗುವಳಿ ಮಾಡುವದನ್ನು ಕೇಳಿದ್ದಕ್ಕೆ ಫಿಯರ್ಾದಿಗೆ ಅವಾಚ್ಯವಾಗಿ ಬೈದು, ಕೈಯಿಂದ, ಕಲ್ಲಿನಿಂದ, ಬಡಿಗೆಯಿಂದ, ಕಬ್ಬಿಣದ ರಾಡನಿಂದ ಹೊಡೆಬಡೆ ಮಾಡಿ ರಕ್ತಗಾಯ, ಗುಪ್ತಗಾಯ ಮಾಡಿದ್ದು ಅಲ್ಲದೆ ಜಗಳ ಬಿಡಿಸಲು ಬಂದ ಶರಣಪ್ಪನಿಗೆ ಕಲ್ಲಿನಿಂದ ಕೈಗೆ ಹೊಡೆದು ಜೀವ ಬೆದರಿಕೆ ಹಾಕಿದ ಮೇಲ್ಕಂಡ 6 ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಇರುತ್ತದೆ.

 


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 108/2022 ಕಲಂ: 448, 323, 504, 506 ಸಂಗಡ 34 ಐಪಿಸಿ: ನಿನ್ನೆ ದಿನಾಂಕ 25.06.2022 ರಂದು ಮಧ್ಯಾಹ್ನ 2:00 ಗಂಟೆಯ ಸುಮರಿಗೆ ಪೀರ್ಯಾದಿಯು ತನ್ನ ಮನ್ನೆಯಲ್ಲಿದ್ದಾಗ ಆರೋಪಿತರು ಫೀರ್ಯಾದಿಯ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಆಕೆಯ ಕುತ್ತಿಗೆ ಕೈ ಹಾಕಿ ನೂಕಿ ಕೊಟ್ಟು ಅವಾಚ್ಯ ಶಬ್ದಳಿಂದ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ತನ್ನ ಮನೆಯಲ್ಲಿ ತನ್ನ ಅಳೀಯನೊಂದಿಗೆ ವಿಚಾರ ಮಾಡಿದ ನಂತರ ತಡವಾಗಿ ಇಂದು ದಿನಾಂಕ 26.06.2022 ರಂದು ಠಾಣೆಗೆ ಬಂದು ದೂರು ನೀಡಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 108/2022 ಕಲಂ: 448, 323, 504, 506 ಸಂಗಡ 34 ಐಪಿಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 108/2022 ಕಲಂ 143, 147, 448, 323, 504, 506 ಸಂಗಡ 149 ಐಪಿಸಿ: ಇಂದು ದಿನಾಂಕ 26.06.2022 ರಂದು 1.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಮಲ್ಲಮ್ಮ ಗಂಡ ಶಾಂತಗೌಡ ಪೊಲೀಸ್ ಪಾಟೀಲ ವ|| 60ವರ್ಷ ಜಾ|| ಹಿಂದೂ ಕುರಬರ ಉ|| ಮನೆಗೆಲಸ ಸಾ|| ದಂಡಸೊಲ್ಲಾಪೂರ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ಇದ್ದು ತಮ್ಮಲ್ಲಿ ಈ ಅಜರ್ಿ ನೀಡುವುದೇನೆಂದರೆ, ನನಗೆ ಮೂರು ಜನ ಗಂಡು ಮಕ್ಕಳು ಹಾಗು ನಾಲ್ಕು ಜನ ಹೆಣ್ಣು ಮಕ್ಕಳು ಇರುತ್ತಾರೆ. ಅವರಲ್ಲಿ ನನ್ನ ಮಗನಾದ ಬಸವರಾಜ ತಂದೆ ಶಾಂತಗೌಡ ಪೊಲೀಸ್ ಪಾಟೀಲ ಇವರಿಗೆ ಗುಂಡಾಪೂರದ ಬನ್ನೆಪ್ಪ ದೊಡಮನಿ ಇವರ ಮಗಳಾದ ಶಿವಲೀಲಾ ಇವಳನ್ನು ತೆಗೆದುಕೊಂಡು ಮದುವೆ ಮಾಡಿದ್ದು ಸದ್ಯ ನನ್ನ ಮಗನಿಗೆ ಒಂದು ಹೆಣ್ಣು ಮಗಳಿರುತ್ತಾಳೆ. ನನ್ನ ಸೊಸಿಯಾದ ಶಿವಲೀಲಾ ಇವಳಿಗೆ ಆರಾಮವಿಲ್ಲದ ಕಾರಣ ವೈದ್ಯರು ವಿಶ್ರಾಂತಿ ಪಡೆಯುವಂತೆ ಹೇಳಿದ ಕಾರಣ ನಾವು ಮನೆಯಲ್ಲಿ ಆರಾಮವಾಗಿ ಇರು ಅಂತ ಹೇಳಿದ್ದೆವು ಆದರೂ ಸಹ ಅವಳು ನಮ್ಮೊಂದಿಗೆ ಜಗಳಾ ತೆಗೆದು ತನ್ನ ತವರು ಮನೆಗೆ ಹೋಗಿ, ನಂತರ ನನ್ನ ಮಗನಾದ ಬಸವರಾಜ ಹಾಗು ಇತರರ ಮೇಲೆ ಡೌರಿ ಕೇಸ್ ಮಾಡಿಸಿದ್ದು ಇರುತ್ತದೆ. ಇಷ್ಟಾದರೂ ಸಹ ನಾವು ಸುಮ್ಮನೆ ಇದ್ದೆವು. ನನ್ನ ಮಗನಾದ ಬಸವರಾಜ ಈತನು ಸರಕಾರಿ ಶಿಕ್ಷಕರಾಗಿದ್ದು ನಗನೂರ ಸರಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಇರುತ್ತಾರೆ. ನಾನು ಹಾಗು ನನ್ನ ಎಲ್ಲಾ ಮಕ್ಕಳು ಕೂಡಿ ನಮ್ಮ ಹೊಲದಲ್ಲಿ ಇರುವ ಮನೆಯಲ್ಲಿ ವಾಸವಾಗಿರುತ್ತೇವೆ. ಹೀಗಿದ್ದು ನಿನ್ನೆ ದಿನಾಂಕ 25.06.2022 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ನಾನು ಒಬ್ಬಳೇ ದಂಡಸೊಲ್ಲಾಪೂರ ಸೀಮಾಂತರದಲ್ಲಿರುವ ಹೊಲ ಸವರ್ೆ ನಂಬರ 15/2 ರಲ್ಲಿನ ಮನೆಯಲ್ಲಿದ್ದಾಗ ಅದೇ ಸಮಯಕ್ಕೆ ನನ್ನ ಸೊಸಿಯ ಕಡೆಯವರಾದ 1] ಶೇಖವ್ವ ಗಂಡ ಬನ್ನೆಪ್ಪ ದೊಡಮನಿ 2] ಜೆಟ್ಟೆಪ್ಪ ತಂದೆ ಮಾನಪ್ಪ ದೊಡಮನಿ 3] ಮಾನಪ್ಪ ತಂದೆ ನಿಂಗಪ್ಪ ದೊಡಮನಿ 4] ಬನ್ನೆಪ್ಪ ತಂದೆ ಮುದೆಪ್ಪ ದೊಡಮನಿ ಎಲ್ಲರೂ ಸಾ|| ಗುಂಡಾಪೂರ ಹಾಗು 5] ಶಿವಪ್ಪಗೌಡ ತಂದೆ ಸೋಮರಾಯಗೌಡ ಪೊಲೀಸ್ ಪಾಟೀಲ ಸಾ|| ದಂಡಸೊಲ್ಲಾಪೂರ ಈ ಎಲ್ಲಾ ಜನರು ಗುಂಪು ಕಟ್ಟಿಕೊಂಡು ಅಕ್ರಮವಾಗಿ ನಮ್ಮ ಮನೆಯಲ್ಲಿ ಬಂದವರೇ ಏನಲೇ ಸೂಳಿ ನಿನ್ನ ಮಗ ಬಸ್ಯಾ ಎಲ್ಲಿದ್ದಾನೆ ಅಂತ ಅಂದಾಗ ನಾನು ಯಾಕೇ ನನ್ನ ಮಗ ನಿಮಗೇನು ಮಾಡಿದ್ದಾನೆ ಅಂತ ಅಂದಾಗ ಎಲ್ಲಾ ಜನರು ಈ ಸೂಳೆಯದು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಹೊಡೆಯುತ್ತಾ ಎಲ್ಲರೂ ಕೂಡಿ ನೆಲಕ್ಕೆ ಕೆಡವಿ ಮನಸ್ಸಿಗೆ ಬಂದ ಹಾಗೆ ಹೊಡೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಮನೆಯ ಮುಂದೆ ಹೊರಟಿದ್ದ ಮಹಾದೇವಪ್ಪಗೌಡ ತಂದೆ ಬಸಪ್ಪಗೌಡ ಹಚ್ಚಡ, ಅಂಬ್ರೀಶ ತಂದೆ ನಿಂಗಪ್ಪ ಜಾಗೀರದಾರ ಹಾಗು ಬಸಣ್ಣ ತಂದೆ ಶರಣಪ್ಪ ಟಣಕೇದಾರ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ನನಗೆ ಹೊಡೆಯುವದನ್ನು ಬಿಟ್ಟು ಎಲ್ಲರೂ ನನಗೆ ಎಲೇ ಸೂಳೇ ಇನ್ನು ಮುಂದೆ ನೀನಾಗಲೀ ನಿನ್ನ ಮಗನಾಗಲೀ ಸುಮ್ಮನಿದ್ದರೆ ಸರಿ ಇಲ್ಲದಿದ್ದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನಂತರ ಸಾಯಂಕಾಲ ನನ್ನ ಮಕ್ಕಳಾದ ಬಸವರಾಜ, ಬಾಪೂಗೌಡ ಮತ್ತು ಮಲ್ಲಣಗೌಡ ಇವರು ಮನೆಗೆ ಬಂದಿದ್ದು ಅವರ ಮುಂದೆ ನಡೆದ ವಿಷಯ ತಿಳಿಸಿ ಎಲ್ಲರೂ ಕೂಡಿ ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ 05 ಜನರು ಕೌಟುಂಬಿಕ ವಿಷಯದಲ್ಲಿ ನಮ್ಮೊಂದಿಗೆ ಜಗಳ ತೆಗೆದು ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ, ಅವಾಚ್ಯವಾಗಿ ಬೈದು, ಕೈಯಿಂದ ಹೊಡೆಬಡೆ ಮಾಡಿ, ಜೀವದ ಭಯ ಹಾಕಿದ್ದು ಕಾರಣ ಮೇಲ್ಕಾಣಿಸಿದ ಎಲ್ಲಾ ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 108/2022 ಕಲಂ 143, 147, 448, 323, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 23/2022 ಕಲಂ 323, 498(ಎ), 504, 506, ಐಪಿಸಿ: ಇಂದು ದಿನಾಂಕ: 26/06/2022 ರಂದು 7:30 ಪಿ.ಎಂ ಕ್ಕೆ ಶ್ರೀಮತಿ ಸುನೀತಾ ಗಂಡ ರವಿ ಚವ್ಹಾಣ ವ:20 ವರ್ಷ ಉ:ಕೂಲಿ ಕೆಲಸ ಜಾ:ಹಿಂದು ಲಂಬಾಣಿ ಸಾ:ಬಸರಗೀಡದತಾಂಡಾ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪುಮಾಡಿಸಿಕೊಂಡು ಬಂದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ನನ್ನ ತವರು ಮನೆ ಸೊನ್ನಾಪೂರ ತಾಂಡಾ ಇದ್ದು ನನಗೆ ಈಗ ಸುಮಾರು ಒಂದು ವರ್ಷದ ಹಿಂದೆ ಬಸರಗೀಡದ ತಾಂಡಾದ ರವಿಕುಮಾರ ತಂದೆ ಮಾನಪ್ಪ ಚವ್ಹಾಳ ಈತನೊಂದಿಗೆ ನಮ್ಮ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಟ್ಟಿದ್ದು ಮದುವೆಯಾದ ಹೊಸತರಲ್ಲಿ ಸುಮಾರು 6 ತಿಂಗಳವರೆಗೆ ನನ್ನೊಂದಿಗೆ ನನ್ನ ಗಂಡನು ಚೆನ್ನಾಗಿ ಇದ್ದನು. ನಂತರ ನನ್ನ ಗಂಡನು ದುಡಿಯಲು ಹಾಸನಕ್ಕೆ ಹೋಗಿ ಬರುತ್ತಿದ್ದನು ನನ್ನ ಗಂಡನು ಈಗ ಸುಮಾರು 3 ತಿಂಗಳಗಳಿಂದ ನನ್ನೊಂದಿಗೆ ಸರಿಯಾಗಿ ಇರೆದೆ ನಿನಗೆ ಅಡುಗೆ ಸರಿಯಾಗಿ ಮಾಡಲು ಬರುವದಿಲ್ಲ ನೀನು ಚೆನ್ನಾಗಿಲ್ಲ ಅಂತಾ ನನಗೆ ಹೊಡೆಯುವದು ಬಡಿಯುವದು ಮಾಡುತ್ತಿದ್ದನು ಆಗ ನಾನು ಈ ವಿಷಯವನ್ನು ನನ್ನ ತವರು ಮನೆಯವರಿಗೆ ತಿಳಿಸಿದ್ದು ನಮ್ಮ ತಂದೆ ತಾಯಿಯವರು ನನಗೆ ಬುದ್ದಿವಾದ ಹೆಳಿ ನಿನ್ನ ಗಂಡನೊಂದಿಗೆ ಅನುಸರಿಸಿಕೊಂಡುಹೋಗಮ್ಮ ಅಂತಾ ಹೇಳುತ್ತಿದ್ದರು. ನಾನು ನನ್ನ ಗಂಡನೊಂದಿಗೆ ಅನುಸರಿಸಿಕೊಂಡು ಹೋಗುತ್ತಿದ್ದೇನು. ಆದರೂ ನನ್ನ ಗಂಡನು ಊರಿಗೆ ಬಂದಾಗ ನನ್ನೊಂದಿಗೆ ಸರಿಯಾಗಿ ಇರದೆ ನೀನಗೆ ಅಡುಗೆ ಮಾಡಲು ಬರುವದಿಲ್ಲ ನೀನು ಚೆನ್ನಾಗಿ ಇಲ್ಲ ಅಂತಾ ನನಗೆ ಚುಚ್ಚು ಮಾತುಗಳಿಂದ ಮಾತನಾಡುತ್ತಾ ನನಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ಮಾಡುತ್ತಿದ್ದನು ಆಗ ನಾನು ಈ ವಿಷಯವನ್ನು ನಮ್ಮ ತವರು ಮನೆಗೆ ಹೋಗಿ ಹೇಳಿದ್ದು ನಮ್ಮ ತಂದೆ, ನಮ್ಮ ತಾಂಡಾದ ಶರಣು ತಂದೆ ಶಂಕರಪ್ಪ ಚವ್ಹಾಣ, ಜೀವಲಪ್ಪ ತಂದೆ ರಾಜಪ್ಪ ಜಾದವ ಸಾ: ಗೆದ್ದಲಮರಿ ತಾಂಡಾ ಮತ್ತು ಬಸರಗೀಡದ ತಾಂಡಾದ ಮೋತಿರಾಮ ಗ್ರಾಮಪಂಚಾಯತ ಸದಸ್ಯ ಮೊತಿಲಾಲ ರವರ ಸಮಕ್ಷಮದಲ್ಲಿ ನಮಗೆ ಹಾಗೂ ನನ್ನ ಗಂಡನಿಗೆ ಕೂಡಿಸಿಕೊಂಡು ನ್ಯಾಯ ಪಂಚಾಯಿತಿ ಮಾಡಿದ್ದು ಅವರ ಎದರಿಗೆ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತೇನೆ ಅಂತಾ ಒಪ್ಪಿಕೊಂಡು ನನ್ನನ್ನು ತನ್ನ ಮನೆಗೆ ಕರೆದುಕೊಂಡು ಹೋದನು. ನಂತರ ಮರಳಿ ಹಾಸನಕ್ಕೆ ದುಡಿಯಲು ಹೋಗಿ ಬರುತ್ತೇನೆ ಅಂತಾ ಹೇಳಿ ಹೋದನು. ದಿನಾಂಕ 19/06/2022 ರಂದು ಮುಂಜಾನೆ 9:00 ಗಂಟೆಗೆ ನನ್ನ ಗಂಡನು ಹಾಸನದಿಂದ ಮರಳಿ ನಮ್ಮ ತಾಂಡಾಕ್ಕೆ ಬಂದಿದ್ದು ಬರುವಾಗ ಹಾಸನದಿಂದ ಒಬ್ಬ ಹೆಣ್ಣುಮಗಳನ್ನು ಕರೆದುಕೊಂಡು ಬಂದಿದ್ದನು ಆಗ ನಾನು ನನ್ನ ಗಂಡನಿಗೆ ಯಾರು ಈಕೆ ಅಂತಾ ಕೇಳಿದೆ, ಅದಕ್ಕೆ ನನ್ನ ಗಂಡನು ಇವಳು ನನ್ನ ಲವರ್ ಇರುತ್ತಾಳೆ ಇನ್ನು ಮುಂದೆ ಇವಳು ನನ್ನ ಜೊತೆಯಲ್ಲಿ ಇರುತ್ತಾಳೆ ಅಂತಾ ಅಂದನು. ಆಗ ನಾನು ನನ್ನ ಗಂಡನಿಗೆ ಆಯಿತು ನೀನು ಇವಳ ಜೊತೆಯಲ್ಲಿಯೇ ಸಂಸಾರ ಮಾಡು ನಾನು ನನ್ನ ತವರ ಮನೆಗೆ ಹೊಗುತ್ತೇನೆ ಅಂತಾ ಅಂದೇನು. ಆಗ ನನ್ನ ಗಂಡನು ನನಗೆ ಬೋಸುಡಿ ಸೂಳಿ ನಿಂದರು ಎಲ್ಲಿಗೆ ಹೋಗುತ್ತಿ ಅಂತಾ ನನ್ನ ಕೈಯಿಡಿದು ಎಳೆದು ನನ್ನ ಕಪಾಳಕ್ಕೆ ಹೋಡೆದನು, ಆಗ ನಾನು ನನ್ನ ತವರು ಮನೆಗೆ ಹೋಗುತ್ತೇನೆ ಅಂತಾ ಅಂದಾಗ ನನ್ನ ಗಂಡನು ಬೋಸುಡಿ ನೀನು ಇಲ್ಲೆ ಬಿದ್ದಿರು ಎಲ್ಲಿಗಾದರು ಹೊದರೆ ನಿನಗೆ ಇಲ್ಲೆ ಖಲಾಸ ಮಾಡಿಬಿಡುತ್ತೇನೆ ಅಂತಾ ನನಗೆ ಜೀವದ ಬೇದರಿಕೆ ಹಾಕಿದನು. ಆಗ ಅಲ್ಲಿಯೇ ಇದ್ದ ಮಾನಪ್ಪ ತಂದೆ ಲಾಲಸಿಂಗ ರಾಠೋಡ ಮತ್ತು ಇತರರು ಬಂದು ಬಿಡಿಸಿದ್ದು ಇರುತ್ತದೆ. ಆಗ ನಾನು ಅಂಜಿ ಸುಮ್ಮನೆ ನನ್ನ ಗಂಡನ ಮನೆಯಲ್ಲಿಯೇ ಇದ್ದೇನು ನಂತರ ನಾನು ನನ್ನ ತವರು ಮನೆಯವರಿಗೆ ಪೋನ ಹಚ್ಚಿ ವಿಷಯವನ್ನು ತಿಳಿಸಿದ್ದು ನನ್ನ ತವರು ಮನೆಯವರು ನನ್ನ ಗಂಡನ ಮನೆಗೆ ಬಂದು ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ನಮ್ಮ ಸಮಾಜದ ಮುಖಂಡರಲ್ಲಿ ನ್ಯಾಯಾ ಪಂಚಾಯಿತಿ ಮಾಡಿಸಿದ್ದು ನಮ್ಮ ನ್ಯಾಯ ಬಗೆ ಹರಿದಿರುವದಿಲ್ಲ ಆದ್ದರಿಂದ ಇಂದು ತಡವಾಗಿ ಇಲ್ಲಿಗೆ ಬಂದು ಪಿಯರ್ಾದಿಕೊಟ್ಟಿದ್ದು ಇರುತ್ತದೆ.ಅಂತಾ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 23/2022 ಕಲಂ 323, 498(ಎ), 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Last Updated: 27-06-2022 10:35 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080