Feedback / Suggestions

                                                                                                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 27-07-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 89/2022 ಕಲಂ 457, 380 ಐಪಿಸಿ:ನಾನು ಯಾದಗಿರಿ ನಗರ ಸುಭಾಷ ವೃತ್ತದಲ್ಲಿ ಮೈಸೂರು ಮೆಡಿಕಲ್ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಇರುತ್ತೇನೆ. ದಿನಾಲು ನಮ್ಮ ಅಂಗಡಿ ಬೆಳಿಗ್ಗೆ 09-00 ಗಂಟೆಗೆ ತೆಗೆದು ರಾತ್ರಿ 10-30 ಗಂಟೆಗೆ ಮುಚ್ಚುತ್ತೇವೆ. ಹೀಗಿದ್ದು, ಪ್ರತಿ ನಿತ್ಯದಂತೆ ದಿನಾಂಕ 24/07/2022 ರಂದು 10-30 ಗಂಟೆ ಸುಮಾರಿಗೆ ನಾನು ನಮ್ಮ ಅಂಗಡಿ ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು, ಮರಳಿ ದಿನಾಂಕ 25/07/2022 ರಂದು ಬೆಳಿಗ್ಗೆ 9-00 ಗಂಟೆಗೆ ನಮ್ಮ ಅಂಗಡಿಗೆ ಬಂದು ನೋಡಿದಾಗ ಅಂಗಡಿಯ ಶೆಟ್ಟರ ಕೀಲಿ ಮುರಿದಿದ್ದು, ಶೆಟ್ಟರ ಹಾಗಿ ಮುಚ್ಚಿದ್ದು ಕಂಡು ಬಂತು, ಗಾಬರಿಯಾಗಿ ಒಳಗೆ ಹೋಗಿ ನೋಡಿದಾಗ, ಅಂಗಡಿಯ ಗಲ್ಲೆ ಮುರಿದಿದ್ದು, ಅದರಲ್ಲಿ ಇದ್ದ ಚಿಲ್ಲರೆ ಹಣ 10,000/- ರೂ|| ಗಳು ಹಾಗೂ ದೇವರ ಮುಂದೆ ಇದ್ದ ಪ್ರತಿ ನಿತ್ಯ 2000/- ರೂ|| ಗಳಂತೆ ತೆಗೆದು ಇಟ್ಟ ಹುಂಡಿಯ ಹಣ ಅಂದಾಜು ಹಣ 1,25,000/- ಕಾಣಲಿಲ್ಲ. ನಂತರ ನಾನು ಮನೆಯಲ್ಲಿ ಇದ್ದ ನನ್ನ ಅಣ್ಣನಾದ ಮಹೇಂದ್ರ ತಂದೆ ಬಸವರಾಜ ಬೋನಾಳ ಇವರಿಗೆ ಹಾಗೂ ಅಂಗಡಿಯಲ್ಲಿ ಕೆಲಸ ಮಾಡುವ ಉಣಚಪ್ಪ ತಂದೆ ಮಲ್ಲಪ್ಪ ತಳವಾರ, ಶಿವಶರಣ ತಂದೆ ಚನ್ನವೀರಯ್ಯ ಇವರಿಗೆ ಮತ್ತು ನನ್ನ ಗೆಳೆಯನಾದ ಅಶೀಕ ಚವ್ಹಾಣ ತಂದೆ ಚಂದ್ರಾ ಚವ್ಹಾಣ ಸಾ|| ಬಸವೇಶ್ವರನ ನಗರ ಯಾದಗಿರಿ ಇವರಿಗೆ ತಿಳಿಸಿದಾಗ ಅವರು ಕೂಡ ಅಂಗಡಿಗೆ ಬಂದು ನೋಡಿ ಕಳ್ಳತನವಾದ ಬಗ್ಗೆ ವಿಚಾರಿಸಿದರು. ಕಾರಣ ದಿನಾಂಕ 24/07/2022 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ 25/07/2022 ರಂದು ಬೆಳಿಗ್ಗೆ 9-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಬೀ ಹಾಕಿದ ನಮ್ಮ ಅಂಗಡಿಯ ಶೆಟ್ಟರ ಕೀಲಿ ಮುರಿದು ಒಳಗೆ ಹೋಗಿ ಅಂಗಡಿಯ ಗಲ್ಲೆಯ ಹಣ ಹಾಗೂ ದೇವರ ಹುಂಡಿಗ ಹಣ ಹೀಗೆ ಒಟ್ಟು 1,35,000/- ರೂ|| ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮನೆಯಲ್ಲಿ ವಿಚಾರಣೆ ಮಾಡಿ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ನಮ್ಮ ಅಂಗಡಿ ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 89/2022 ಕಲಂ 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ್ ಠಾಣೆ:-
 ಗುನ್ನೆ ನಂ: 99/2022 ಕಲಂ: 279, 338 ಐಪಿಸಿ ಸಂ 187 ಐಎಮ್ವ್ಹಿ ಎಕ್ಟ: ಇಂದು ದಿನಾಂಕ:26/07/2022 ರಂದು 6-45 ಪಿಎಮ್ ಕ್ಕೆ ಶ್ರೀ ಮಲ್ಲಪ್ಪ ತಂದೆ ಶಿವಪ್ಪ ಕಲ್ಮನಿ, ವ:30, ಜಾ:ಕುರುಬರ, ಉ:ಕುರಿಕಾಯುವುದು ಸಾ:ತೇಕರಾಳ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಕುರಿ ಕಾಯ್ದುಕೊಂಡು ಹೆಂಡತಿ-ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನಮ್ಮ ಮನೆಯು ತೇಕರಾಳ ಗ್ರಾಮದಲ್ಲಿ ಕುರುಕುಂದಾ-ವಡಗೇರಾ ರಸ್ತೆ ಆಚೆ ಕಡೆ ಇರುತ್ತದೆ. ನನಗೆ 1) ರೇಣಮ್ಮ ವ:07 ವರ್ಷ, 2) ಪ್ರಶಾಂತ ವ:05 ವರ್ಷ ಮತ್ತು 3) ನಂದಿನಿ ವ:03 ವರ್ಷ ಹೀಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡುಮಗನಿರುತ್ತಾನೆ. ಹೀಗಿದ್ದು ದಿನಾಂಕ:21/07/2022 ರಂದು ನಾನು ಎಂದಿನಂತೆ ಬೆಳಗ್ಗೆಯಿಂದ ಸಾಯಂಕಾಲದ ವರೆಗೆ ನಮ್ಮ ಕುರಿಗಳನ್ನು ಅಡವಿಯಲ್ಲಿ ಮೇಯಿಸಿಕೊಂಡು ಸಾಯಂಕಾಲ ಮನೆಗೆ ಬಂದು ನಮ್ಮ ಮನೆ ಮುಂದೆ ಕುರಿ ಮರಿಗಳಿಗೆ ಹಾಲು ಕುಡಿಸುತ್ತಿದ್ದೆನು. ನನ್ನ ಮಗ ನಮ್ಮ ಮನೆ ಮುಂದೆ ಆಟ ಆಡುತ್ತಿದ್ದವನು ಒಮ್ಮೆಲೆ ಸಾಯಂಕಾಲ 6-30 ಗಂಟೆ ಸುಮಾರಿಗೆ ವಡಗೇರಾ-ಕುರುಕುಂದಾ ಮೇನ ರೋಡ ಈಚೆ ಕಡೆ ಇರುವ ನಮ್ಮ ಖಾಸ ಅಳಿಯನಾದ ರಾಚಪ್ಪ ತಂದೆ ಬಸಪ್ಪ ನಾಯ್ಕೋಡಿ ಇವರ ಮನೆಗೆ ವಡಗೇರಾ-ಕುರುಕುಂದಾ ಮೇನ ರೋಡ ದಾಟಿ ರಸ್ತೆಯ ಕೊನೆ ಅಂಚಿನಲ್ಲಿ ಹೋಗುತ್ತಿದ್ದಾಗ ಕುರುಕುಂದಾ ಕಡೆಯಿಂದ ಮೋಟರ್ ಸೈಕಲ್ ನಂ. ಕೆಎ 33 ಜೆ 3641 ನೇದರ ಸವಾರನು ತನ್ನ ಮೋಟರ್ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನೆ ನನ್ನ ಮಗ ಪ್ರಶಾಂತನಿಗೆ ಡಿಕ್ಕಿಪಡಿಸಿ, ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದನು. ಆಗ ನಾನು ಮತ್ತು ಅಲ್ಲಿಯೇ ತನ್ನ ಮನೆ ಮುಂದೆ ಇದ್ದ ನಮ್ಮ ಅಳಿಯ ರಾಚಪ್ಪ ತಂದೆ ಬಸಪ್ಪ ನಾಯ್ಕೋಡಿ ಮತ್ತು ನಮ್ಮೂರ ಮಲ್ಲಪ್ಪ ತಂದೆ ಬಾಲಪ್ಪ ನಾಯ್ಕೋಡಿ, ಹಣಮಂತ ತಂದೆ ಭೀಮಶಪ್ಪ ಶಿವಣ್ಣೋರ ಹಾಗೂ ಬಸಣ್ಣಗೌಡ ತಂದೆ ಹಣಮಂತ್ರಾಯಗೌಡ ಮಾಲಿಪಾಟಿಲ್ ಮತ್ತು ಇತರರು ಸೇರಿಕೊಂಡು ಹೋಗಿ ನನ್ನ ಮಗನಿಗೆ ನೋಡಿದಾಗ ಮೋಟರ್ ಸೈಕಲ್ ಅಪಘಾತದಲ್ಲಿ ನನ್ನ ಮಗನ ತಲೆಯ ಎಡಭಾಗಕ್ಕೆ ಭಾರಿ ಗಾಯವಾಗಿತ್ತು. ಎಡಕಾಲಿನ ಮೊಣಕಾಲ ಕೆಳಗಡೆ ಭಾರಿ ಗಾಯವಾಗಿ ಅಲ್ಲಲ್ಲಿ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದವು. ಮೋಟರ್ ಸೈಕಲ್ ಸವಾರನಿಗೆ ಹೆಸರು ವಿಳಾಸ ಕೇಳಿದಾಗ ಅವನು ತನ್ನ ಹೆಸರು ಸಿದ್ದಣ್ಣಗೌಡ ತಂದೆ ಕಂಠೆಪ್ಪಗೌಡ ಚಾಮನಾಳ ಸಾ:ಕಾಡಂಗೇರಾ (ಬಿ) ಎಂದು ಹೇಳಿದನು. ನನ್ನ ಮಗನಿಗೆ ಅಪಘಾತದಲ್ಲಿ ಭಾರಿಗಾಯವಾಗಿದ್ದನ್ನು ನೋಡಿದ ಸಿದ್ದಣ್ಣಗೌಡನು ತನ್ನ ಮೋಟರ್ ಸೈಕಲ್ ಚಾಲು ಮಾಡಿಕೊಂಡು ಓಡಿ ಹೋದನು. ನಂತರ ನಾವು ನನ್ನ ಮಗನಿಗೆ ತಕ್ಷಣ ವಡಗೇರಾ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಉಪಚಾರ ಮಾಡಿಸಿ, ಅಲ್ಲಿಂದ ಯಾದಗಿರಿ ಸರಕಾರಿ ಆಸ್ಪತ್ರೆಗೆ ಹೋದಾಗ ಅವರು ನೋಡಿ ಬಹಳ ಸಿರಿಯಸ್ ಇದೆ ನೀವು ತಕ್ಷಣ ದೊಡ್ಡ ಆಸ್ಪತ್ರೆಗೆ ಹೋಗ್ರಿ ಎಂದು ಹೇಳಿದ್ದರಿಂದ ಅಲ್ಲಿಂದ ನನ್ನ ಮಗನಿಗೆ ಕಲಬರುಗಿ ಕಾಮರೆಡ್ಡಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ಅಲ್ಲಿನ ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದ್ದರಿಂದ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಾನು ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ದೂರು ಕೊಡುವುದಿದ್ದರೆ ನಂತರ ಬಂದು ಕೊಡುತ್ತೇವೆ ಎಂದು ಹೇಳಿರುತ್ತೇನೆ. ಇದಾದ ನಂತರ ನಾನು ನಮ್ಮ ಹಿರಿಯರಿಗೆ ವಿಚಾರ ಮಾಡಿದಾಗ ಅವರು ಪೊಲೀಸ್ ಠಾಣೆಗೆ ಹೋಗಿ ದೂರು ಕೊಡು ಎಂದು ಹೇಳಿದ್ದರಿಂದ ಈಗ ನಾನು ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತಿದ್ದೇನೆ. ಕಾರಣ ಮೋಟರ್ ಸೈಕಲ್ ಸವಾರ ಸಿದ್ದಣ್ಣಗೌಡ ತಂದೆ ಕಂಠೆಪ್ಪಗೌಡ ಚಾಮನಾಳ ಸಾ:ಕಾಡಂಗೇರಾ (ಬಿ) ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 99/2022 ಕಲಂ: 279, 338 ಐಪಿಸಿ ಸಂ 187 ಐಎಮ್ವ್ಹಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ:-
 ಗುನ್ನೆ ನಂ: 133/2022 ಕಲಂ 419, 420, 465, 471 ಸಂಗಡ 149 ಐ.ಪಿ.ಸಿ.: ಇಂದು ದಿನಾಂಕ 26/07/2022 ರಂದು ಮಧ್ಯಾಹ್ನ 13-00 ಗಂಟೆಗೆ ಫಿಯರ್ಾದಿ ಶ್ರೀ ಮಲ್ಲಿಕಾಜರ್ುನ ತಂದೆ ಹಣಮಂತ್ರಾಯ ಕನಕನೂರ, ವಯಸ್ಸು 65 ವರ್ಷ, ಜಾತಿ ಉಪ್ಪಾರ, ಉಃ ಒಕ್ಕಲುತನ ಕೆಲಸ, ಸಾಃ ಎಸ್.ಡಿ ಗೋನಾಲ ತಾಃ ಸುರಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಫಿಯರ್ಾದಿಯ ಖಾಸಾ ಅಣ್ಣನಾದ ಗೋಪಾಲಪ್ಪ ತಂದೆ ಹಣಮಂತ್ರಾ ಕನಕನೂರ ಈತನು ಈ ಹಿಂದೆ ಟೋಕಾಪೂರ ಗ್ರಾಮದಲ್ಲಿ ವಾಸವಾಗಿದ್ದ ಕಾಲಕ್ಕೆ ಸದರಿ ಸೀಮಾಂತರದಲ್ಲಿ ಹೊಲ ಸವರ್ೇ ನಂ 118/1 ಆಕಾರ 3 ಎಕರೆ 36 ಗುಂಟೆ ಜಮೀನು ಖರೀದಿ ಮಾಡಿಕೊಂಡು ಸಾಗುವಳಿ ಮಾಡಿಕೊಂಡು ಬಂದಿದ್ದರು.  ಹೀಗಿರುವಾಗ ಗೋಪಾಲಪ್ಪ ಇವರು ದಿನಾಂಕ 08/01/1996 ರಂದು  ಮೃತ ಪಟ್ಟನಂತರ  ಸದರಿ ಹೊಲವನ್ನು ಟೋಕಾಪೂರ ಗ್ರಾಮದ ಖಾಸಿಂಸಾಬ ತಂದೆ ಚಂದಾಸಾಬ ಇವರಿಗೆ ಲಿಜಿಗೆ ಕೊಟ್ಟು ಫಿಯರ್ಾದಿಯವರು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ದುಡಿಯುವುದಕ್ಕೆ ಹೋಗಿರುತ್ತಾರೆ. ಸದರಿ ಕುಟುಂಬದಲ್ಲಿದ್ದ ಫಿಯರ್ಾದಿಯ ಅಣ್ಣಂದಿರು ಮತ್ತು ಅಕ್ಕ ಇವರೆಲ್ಲರೂ ಮೃತ ಪಟ್ಟಿರುತ್ತಾರೆ. ಕುಟುಂಬದಲ್ಲಿ ಫಿಯರ್ಾದಿ ಒಬ್ಬರೇ  ಜೀವಂತವಾಗಿರುತ್ತಾರೆ. ಅಣ್ಣನ ಹೆಸರಿನಲ್ಲಿರುವ ಹೊಲವನ್ನು ತನ್ನ ಹೆಸರಿಗೆ ವಿರಾಸತ ವಗರ್ಾವಣೆ ಮಾಡಿಸಿಕೊಳ್ಳುವ ಸಂಬಂಧ ಮೇಲ್ಕಂಡ ಹೊಲದ ಪಹಣಿ ಪತ್ರಗಳನ್ನು ನೋಡಿದಾಗ, ಟೋಕಾಪೂರ ಗ್ರಾಮದ ಖಾಸಿಂಸಾಬ ತಂದೆ ಖಾಜಾಸಾಬ ಗೋಗಿ ಎಂಬುವರ ಹೆಸರಿನಲ್ಲಿ ಬಂದಿರುತ್ತದೆ. ಆಗ ಇದರ ಬಗ್ಗೆ ಶಹಾಪೂರದ ಉಪ-ನೊಂದಣಾಧಿಕಾರಿಗಳ ಕಛೇರಿಗೆ ಭೇಟಿ ಮಾಡಿ ಸಂಪೂರ್ಣವಾಗಿ ಪರಿಶೀಲಿಸಿದಾಗ, ತನ್ನ  ಅಣ್ಣ ಮೃತ ಗೋಪಾಲಪ್ಪ ಇವರ ಹೆಸರಿನಲ್ಲಿರುವ ಆಸ್ತಿಯನ್ನು, ಖಾಸಿಂಸಾಬ ಎಂಬುವನು ಖೊಟ್ಟಿಯಾಗಿ ತನ್ನ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳುವ ಉದ್ದೇಶದಿಂದ, ಮೃತ ಗೋಪಾಲಪ್ಪ ಇವರ ಜಾಗದಲ್ಲಿ ಹಣಮಂತ್ರಾಯ ತಂದೆ ಸಾಯಬಣ್ಣ ಮಾಡಗಿ ಸಾಃ ದೋರನಹಳ್ಳಿ ಇವರನ್ನು ಶಹಾಪೂರದ ಉಪ-ನೊಂದಣಾಧಿಕಾರಿಗಳ ಕಛೇರಿಯ್ಲಲಿ  ಕೂಡಿಸಿ ನಾನೆ ಗೋಪಾಲಪ್ಪ ಇರುತ್ತೇನೆಂದು ಸುಳ್ಳಿ ಹೇಳಿ ಮೊದಲಿಗೆ ರದ್ದು ಪಡಿಸಲಾಗದ ಸಾಮಾನ್ಯ ಅಧಿಕಾರ ಪತ್ರ ದಿನಾಂಕ 05/09/2017 ನೇದ್ದಕ್ಕೆ ಹಣಮಂತ್ರಾಯ ಈತನು ಹೆಬ್ಬಟ್ಟು ಒತ್ತಿರುತ್ತಾರೆ. ತಾನು ಹೊಂದಿರುವ ಆಧಾರ ಸಂಖ್ಯೆ 7072-7432-1929 ನೇದ್ದಕ್ಕೆ ತನ್ನ ಹೆಸರು ಹಣಮಂತ್ರಾಯ ಇರುವುದನ್ನು ಬದಲಾಗಿ  ಗೋಪಾಲಪ್ಪ ಅಂತಾ ತಿದ್ದುಪಡಿ ಮಾಡಿಸಿ ಖಾಸಿಂಸಾಬ ಈತನು ತನ್ನ ಹೆಸರಿಗೆ ಹೊಲವನ್ನು ನೋಂದಣಿ ಮಾಡಿಸಿಕೊಂಡಿರುತ್ತಾನೆ. ಮೇಲ್ಕಂಡ ದಸ್ತಾವೇಜುಗಳಲ್ಲಿ ಖರೀದಿ ಪತ್ರಕ್ಕೆ  ಗ್ರಾಮದ ಬಾಬುಸಾಬ ತಂದೆ ಚಂದಾಸಾಬ ಮಖಾಸಿ, ಖಾಜಾ ಪಟೇಲ್ ತಂದೆ ಹುಸೇನ್ ಪಟೇಲ್ ಇಬ್ಬರೂ ಸಾಃ ಟೋಕಾಪೂರ ಮತ್ತು ಮೈನುದ್ದೀನ್ ತಂದೆ ಬಡೆಸಾಬ ಸೊಂಡೆವಾಲೇ, ಸಾಃ ನಾಯ್ಕಲ್, ಇವರೆಲ್ಲರೂ ಸೇರಿ ಮೃತ ಪಟ್ಟಿದ್ದ ತನ್ನ  ಅಣ್ಣ ಗೋಪಾಲಪ್ಪ ಇವರ ಹೆಸರಿನಲ್ಲಿದ್ದ ಆಸ್ತಿಯಲ್ಲಿ ಮೋಸದಿಂದ ಖರೀದಿ ನೋಂದಣಿ ಮಾಡಿಕೊಂಡಿರುವುದು ದಾಖಲಾತಿಗಳು ಮತ್ತು ಹೊಲದ ಅಕ್ಕ-ಪಕ್ಕದ ಹೊಲದವರಿಂದ ತಿಳಿದು ಬಂದಿರುತ್ತದೆ ಕಾರಣ ಮೇಲ್ಕಂಡ 5 ಜನರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 133/2022 ಕಲಂ 419, 420, 465, 471 ಸಂಗಡ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

    
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 52/2022 ಕಲಂ: 273, 328 ಐಪಿಸಿ ಮತ್ತು ಕಲಂ: 32, 34 ಕೆಇ ಯಾಕ್ಟ: ಇಂದು ದಿನಾಂಕ: 26/07/2022 ರಂದು 08.10 ಪಿಎಮ್ ಕ್ಕೆ ಸ.ತಫರ್ೆ: ಶ್ರೀ ಅಯ್ಯಪ್ಪ ಪಿ.ಎ.ಐ (ಕಾ.ಸು) ಗೋಗಿ ಪೊಲೀಸ್ ಠಾಣೆ ರವರು ಠಾಣೆಗೆ ಒಬ್ಬ ಆರೋಪಿ, ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲಿನೊಂದಿಗೆ ಬಂದು ಒಂದು ವರದಿ ನೀಡಿದ್ದು ಅದರ ಸಾರಂಶವೇನೆಂದರೆ, ಒಬ್ಬ ವ್ಯಕ್ತಿಯು ಚಾಮನಾಳ ಮಡ್ಡಿ ತಾಂಡಾದ ತನ್ನ ಮನೆಯ ಹತ್ತಿರ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುವ ಉದ್ದೇಶದಿಂದ ತಯ್ಯಾರಿಸಿ ಮಾರಾಟ ಮಾಡುತ್ತದ್ದಾನೆ ಅಂತಾ ಬಾತ್ಮಿ ಮೇರೆಗೆ, ಮಾನ್ಯ ಎಸ್.ಪಿ ಸಾಹೇಬರು ಯಾದಗಿರಿ ರವರ ಮತ್ತು ಮಾನ್ಯ ಡಿ.ಎಸ್.ಪಿ ಸಾಹೇಬರು ಸುರಪೂರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ.ಚನ್ನಯ್ಯ ಹಿರೇಮಠ ಸಿಪಿಐ ಸಾಹೇಬರು ಶಹಾಪುರ ವೃತ್ತ ರವರ ನೇತೃತ್ವದಲ್ಲಿ ಸಿಬ್ಬಂದಿಯವರೊಂದಿಗೆ ಬಾತ್ಮಿ ಸ್ಥಳಕ್ಕೆ ಹೋಗಿ ಆರೋಪಿತನು ಚಾಮನಾಳ ಮಡ್ಡಿ ತಾಂಡಾದ ತನ್ನ ಮನೆಯ ಹತ್ತಿರ ಪತ್ರಾಸ್ ಸೆಡ್ಡಿನಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಕಳ್ಳಬಟ್ಟಿ ಸರಾಯಿಯು ಮಾನವ ಜೀವಕ್ಕೆ ಹಾನಿಕಾರಕ ಅಂತಾ ಗೊತ್ತಿದ್ದು, ಕೂಡ ಕಳ್ಳ ಬಟ್ಟಿ ಸರಾಯಿ ತಯ್ಯಾರಿಸಿ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು 06.30 ಪಿಎಂಕ್ಕೆ ದಾಳಿ ಮಾಡಿ ಆರೋಪಿತನಿಂದ 03 ಲೀಟರ್ ಕಳ್ಳಭಟ್ಟಿ ಸರಾಯಿ ಹಾಗು ಒಂದು ಪ್ಲಾಸ್ಟೀಕ ಚರಿಗೆ ಮತ್ತು ಒಂದು ಅಲೂಮಿನಿಯಂ ಪಾತ್ರೆಯನ್ನು ಪಂಚರ ಸಮಕ್ಷಮ 06.30 ಪಿಎಮ್ ದಿಂದ 07.30 ಪಿ.ಎಮ್ ವರೆಗೆ ಜಪ್ತಿಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡು ಪಿ.ಎಸ್.ಐ ರವರು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರ ಮೇರೆಗೆ ಠಾಣೆ ಗುನ್ನೆ ನಂ: 52/2022 ಕಲಂ: 273, 328 ಐಪಿಸಿ ಮತ್ತು ಕಲಂ: 32, 34 ಕೆಇ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.  
                                                                         
    
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 53/2022 ಕಲಂ: 78(3) ಕೆ.ಪಿ.ಆ್ಯಕ್ಟ್: ಇಂದು ದಿನಾಂಕ: 26/07/2022 ರಂದು 08.45 ಪಿ.ಎಮ್ ಕ್ಕೆ ಚನ್ನೂರ ಕೆ ಗ್ರಾಮದ ರೇವಣಸಿದ್ದೇಶ್ವರ ಗುಡಿಯ ಮುಂದೆ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ಸಿಪಿಐ ಸಾಹೇಬರು ಶಹಾಪೂರ ರವರ ಮಾರ್ಗದರ್ಶನದಲ್ಲಿ, ಶ್ರೀ. ಅಯ್ಯಪ್ಪ ಪಿ.ಎಸ್.ಐ (ಕಾ&ಸು) ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ 08.45 ಪಿಎಮ್ ಕ್ಕೆ ದಾಳಿ ಮಾಡಿ ಮಟಕಾ ನಂಬರ ಬರೆದುಕೊಳ್ಳುತ್ತಿದ್ದ  ದೆವಿಂದ್ರಪ್ಪ ತಂದೆ ಮಹಾದೇವಪ್ಪ ಹಾದಿಮನಿ ವಯಾ:57 ಉ: ಕೂಲಿ ಜಾ: ಕಬ್ಬಲಿಗ ಸಾ: ಚನ್ನೂರ ಕೆ, ತಾ:ಶಹಾಪೂರ ಜಿ: ಯಾದಗಿರಿ ಈತನಿಗೆ ಹಿಡಿದು ಸದರಿಯವನಿಂದ ನಗದು ಹಣ 3120/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ 08.55 ಪಿಎಮ್ ದಿಂದ 09.55 ಪಿ.ಎಮ್ ವರೆಗೆ ಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 53/2022 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 54/2022 ಕಲಂ: 78(3) ಕೆ.ಪಿ.ಆ್ಯಕ್ಟ್: ಇಂದು ದಿನಾಂಕ: 26/07/2022 ರಂದು 09.15 ಪಿ.ಎಮ್ ಕ್ಕೆ ವನದುಗರ್ಾ ಗ್ರಾಮದ ರೇವಣಸಿದ್ದೇಶ್ವರ ಗುಡಿಯ ಮುಂದೆ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ಸಿಪಿಐ ಸಾಹೇಬರು ಶಹಾಪೂರ ರವರ ಮಾರ್ಗದರ್ಶನದಲ್ಲಿ, ಶ್ರೀ. ಸೋಮಲಿಂಗಪ್ಪ ಪಿಎಸ್ಐ (ತನಿಖೆ) ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ 09.15 ಪಿಎಮ್ ಕ್ಕೆ ದಾಳಿ ಮಾಡಿ ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ಹಣಮಂತ ತಂದೆ ದೇವಿಂದ್ರಪ್ಪ ನಿಶಾನಿ ವಯಾ:30 ಉ: ಕೂಲಿ ಜಾ; ಬೇಡರ ಸಾ; ವನದುಗರ್ಾ ತಾ:ಶಹಾಪೂರ ಜಿ: ಯಾದಗಿರಿ ಈತನಿಗೆ ಹಿಡಿದು ಸದರಿಯವನಿಂದ ನಗದು ಹಣ 1320/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ 09.15 ಪಿಎಮ್ ದಿಂದ 10.15 ಪಿ.ಎಮ್ ವರೆಗೆ ಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 54/2022 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

Last Updated: 27-07-2022 04:38 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080