Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 28-03-2022



ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 41/2022 ಕಲಂ: ಹೆಣ್ಣುಮಗಳು ಕಾಣೆಯಾದ ಬಗ್ಗೆ : ದಿನಾಂಕ:27/03/2022 ರಂದು 5-30 ಪಿಎಮ್ಕ್ಕೆ ಶ್ರೀಮತಿ ಬೇಗಂ ಗಂಡ ಮಹಿಬೂಬ ನದಾಫ, ವ:42, ಜಾ:ಮುಸ್ಲಿಂ, ಉ:ಹೊಲಮನೆ ಕೆಲಸ ಸಾ:ಗುಂಡ್ಲೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ದೂರು ಅಜರ್ಿ ಕೊಟ್ಟಿದ್ದರ ಸಾರಾಂಶವೇನಂದರೆ ನನ್ನ ಗಂಡನು ಕೂಲಿ ಕೆಲಸ ಮಾಡಿಕೊಂಡಿರುತ್ತಾನೆ. ನಮಗೆ 1 ಎರಡು ಗಂಡು ಮತ್ತು ಒಬ್ಬ ಹೆಣ್ಣು ಮಗಳಿರುತ್ತಾಳೆ. ನನ್ನ ಹಿರಿ ಮಗಳಾದ ವ:21 ವರ್ಷ ಇವಳು 8 ನೇ ತರಗತಿಯವರಿಗೆ ಶಾಲೆ ಓದಿ ಬಿಟ್ಟಿರುತ್ತಾಳೆ. ಅವಳ ಜನ್ಮ ದಿನಾಂಕ:10/04/2001 ಇರುತ್ತದೆ. ಸದರಿಯವಳು ಈಗ ನಮ್ಮ ಮನೆಯಲ್ಲಿ ಮನೆಕೆಲಸ ಮಾಡಿಕೊಂಡಿದ್ದಳು. ಹೀಗಿದ್ದು ದಿನಾಂಕ:13/03/2022 ರಂದು ರಾತ್ರಿ ಊಟ ಮಾಡಿದ ನಂತರ ನಾವು ಮನೆಯಲ್ಲಿ ಮಲಗಿಕೊಂಡೆವು. ನಮ್ಮ ಹಿರಿ ಮಗಳಾದ ಶಮೀನಾ ಇವಳು ಕೂಡಾ ನಮ್ಮೊಂದಿಗೆ ಊಟ ಮಾಡಿ ತನ್ನ ಕೋಣೆಯಲ್ಲಿ ಹೋಗಿ ಮಲಗಿಕೊಂಡಳು. ಮರು ದಿವಸ ದಿನಾಂಕ:14/03/2022 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಾನು ಎದ್ದು ಮನೆಯಲ್ಲಿ ಕಸ ಮುಸರಿ ಮಾಡಿದ ನಂತರ ನನ್ನ ಮಗಳಾದ ಇವಳಿಗೆ ಎಬ್ಬಿಸಿಲು ಹೊದರೆ ಅವಳು ತನ್ನ ರೂಮಿನಲ್ಲಿ ಇರಲಿಲ್ಲ. ಆಗ ಗಾಬರಿಯಾದ ನಾನು ನನ್ನ ಗಂಡ ಮತ್ತು ನಮ್ಮ ಅತ್ತೆ ಖಾಜಾಬೀ ಇವರಿಗೆ ಕರೆದು ಕಾಣುತ್ತಿಲ್ಲ ಎಂದು ಹೇಳಿದೆನು. ಆಗ ಅವರು ಬಯಲು ಕಡೆ ಏನಾದರೂ ಹೋಗಿರುತ್ತಾಳೆ ಬರಬಹುದು ಎಂದು ಹೇಳಿದರು. ಬಳಹ ಹೊತ್ತಾದರು ನನ್ನ ಮಗಳು ಮರಳಿ ಮನೆಗೆ ಬರಲಿಲ್ಲ. ಆಗ ನನ್ನ ಗಂಡ ಮತ್ತು ನನ್ನ ಮಗ ಇಫರ್ಾನ ಇಬ್ಬರೂ ಕೂಡಿ ನಮ್ಮೂರ ಸುತ್ತಮುತ್ತ ಮತ್ತು ಗೋನಾಲ, ಅಗ್ನಿಹಾಳ, ಶಿವಪೂರ ಮತ್ತು ಕಾಡ್ಲೂರು ಮುಂತಾದ ಕಡೆ ಹೋಗಿ ಹುಡುಕಾಡಿ ಬಂದರು ನನ್ನ ಮಗಳು ಸಿಗಲಿಲ್ಲ. ನನ್ನ ತವರು ಮನೆ ರಾಯಚೂರು ತಾಲೂಕು ಪೊಲಕಂದೊಡ್ಡಿಗೆ ಬಂದಿರುತ್ತಾಳೆಯೇ ಎಂದು ಫೋನ ಮಾಡಿ ಕೇಳಿದೆನು. ನನ್ನ ಮಗಳು ಅಲ್ಲಿ ಕೂಡಾ ಬಂದಿರುವುದಿಲ್ಲ ಎಂದು ಹೇಳಿದರು. ನನ್ನ ಮಗಳು ಮನೆಯಿಂದ ಹೋಗುವಾಗ ಮೈಮೇಲೆ ನೀಲಿ ಬಣ್ಣದ ಚೂಡಿದಾರ ಡ್ರೆಸ್ ಧರಿಸಿರುತ್ತಾಳೆ. ಚಹರೆಪಟ್ಟಿ ಎತ್ತರ 4'-6'' ಫಿಟ್, ಸಾದಾರಣ ಮೈಕಟ್ಟು, ಗೋಧಿ ಬಣ್ಣ, ದಪ್ಪನೆ ಮೂಗು ಇರುತ್ತದೆ. ನನ್ನ ಮಗಳಾದ ಇವಳು ದಿನಾಂಕ:13/03/2022 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ:14/03/2022 ರಂದು ಬೆಳಗಿನ ಜಾವ 06:00 ಮಧ್ಯದ ಅವಧಿಯಲ್ಲಿ ಮನೆಯಿಂದ ಹೊರಗಡೆ ಹೊದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ. ನನ್ನ ಮಗಳಿಗೆ ನನ್ನ ಗಂಡನು ರಾಯಚೂರು, ಬೆಂಗಳೂರು ಮುಂತಾದ ಕಡೆ ಹೋಗಿ ಹುಡುಕಾಡಿ ಬಂದಿರುತ್ತಾನೆ. ನನ್ನ ಮಗಳಿಗೆ ನಾವು ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಕಾಣೆಯಾದ ನನ್ನ ಮಗಳು ಶಮೀನಾ ಇವಳನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರು ಅಜರ್ಿ ನಿಜವಿರುತ್ತದೆ ಅಂತಾ ಕೊಟ್ಟ ಫಿಯರ್ಾಧಿ ಸಾರಾಂಶದ ಮೇಲಿಂದ ವಡಗೇರಾ ಪೊಲೀಸ ಠಾಣೆ ಗುನ್ನೆ ನಂ. 41/2022 ಕಲಂ:ಹೆಣ್ಣು ಮಗಳು ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 47/2022 ಕಲಂ 279, 338 ಐಪಿಸಿ ಸಂಗಡ 187 ಐ.ಎಮ್.ವಿ ಯಾಕ್ಟ : ಇಂದು ದಿನಾಂಕ: 27/03/2022 ರಂದು ಶ್ರೀ ವೆಂಕಟೇಶ ತಂದೆ ಮನೊಹರ ಜಾದವ ವಯ: 17 ವರ್ಷ ಜಾ: ಲಂಬಾಣಿ ಉ: ವಿದ್ಯಾಥರ್ಿ ಸಾ: ಚಾಮನಾಳ ತಾಂಡಾ ತಾ: ಶಹಾಪೂರ ರವರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ್ದು ಸದರಿ ಅಜರ್ಿ ಸಾರಾಂಶವೆನೆಂದರೆ ದಿನಾಂಕ: 25-03-2022 ರಂದು ನಾನು ಮತ್ತು ಚಿಕ್ಕಪ್ಪನ ಮಗನಾದ ಮಣಿಕಂಠ ತಂದೆ ಬಸವರಾಜ ಚವ್ಹಾಣ ವಯಾ: 21 ಇಬ್ಬರೂ ಕೂಡಿ ಮಣಿಕಂಠ ಇವರ ತಂಗಿಯು ಬೇವಿನಹಳ್ಳಿಯ ಮುರೋಜರ್ಿ ಶಾಲೆಯಲ್ಲಿ ಇರುವುದರಿಂದ ಅವಳನ್ನು ಕರೆದುಕೊಂಡು ಬರಲು ಬೆಳಿಗ್ಗೆ 10.00 ಗಂಟೆಗೆ ನಮ್ಮೂರಿಂದ ಪಲ್ಸರ್ ಮೋಟಾರ ಸೈಕಲ್ ನಂ:ಎಮ್ಹೆಚ್/04-4337 ನೇದ್ದರ ಮೇಲೆ ಶಹಾಪೂರ ದಾಟಿ ಅಂದಾಜು ಮದ್ಯಾಹ್ನ 1.30 ಗಂಟೆ ಸುಮಾರಿಗೆ ಮಂಗಿಲಾಲ ಜೈನ ಶಾಲೆ ಹತ್ತಿರ ರಸ್ತೆ ಮೇಲೆ ಹೋಗುತ್ತಿರುವಾಗ ಶಾಲೆಯ ಮುಂದುಗಡೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಒಂದು ಆಟೋ ನೇದ್ದರ ಚಾಲಕನು ಅಲಕ್ಷತನದಿಂದ ಚಲಾಯಿಸುತ್ತಾ ಒಮ್ಮೇಲೆ ಬಲಕ್ಕೆ ತಿರುಗಿಸಿ ನಾವು ಹೋಗುತ್ತಿದ್ದ ಮೋಟಾರ ಸೈಕಲ್ಗೆ ಡಿಕ್ಕಿ ಪಡಿಸಿದನು, ನಮ್ಮ ಮೋಟಾರ ಸೈಕಲ್ ಚಲಾಯಿಸುತ್ತಿದ್ದ ಮಣಿಕಂಠ ತಂದೆ ಬಸವರಾಜ ಚವ್ಹಾಣ ಈತನ ಎಡಕೈ ಉಂಗುರು ಬೆರಳಿಗೆ ಬಾರೀ ರಕ್ತಗಾಯ ಆಗಿ ಮುರಿಂದತಾಗಿರುತ್ತದೆ. ಆಗ ಆಟೋ ಚಾಲಕನು ಅಪಘಾತ ಪಡಿಸಿ ಆಟೋವನ್ನು ತೆಗೆದುಕೊಂಡು ಓಡಿ ಹೋಗಿರುತ್ತಾನೆ. ಸದರಿ ಆಟೋ ಮತ್ತು ಆಟೋ ಚಾಲಕನಿಗೆ ನೋಡಿದರೆ ನಾನು ಗುತರ್ಿಸುತ್ತೇನೆ. ನಂತರ ನಾನು ಮಣಿಕಂಠನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಪೂರಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದೆನು. ನಂತರ ಈ ವಿಷಯವನ್ನು ಮಣಿಕಂಠ ಇವರ ತಂದೆಯಾದ ಬಸವರಾಜ ತಂದೆ ಲಕ್ಷ್ಮಣ ಚವ್ಹಾಣ ಇವರಿಗೆ ಪೋನ ಮಾಡಿ ವಿಷಯ ತಿಳಿಸಿದೆನು. ನಂತರ ಇಬ್ಬರೂ ಕೂಡಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಯುನೈಟೆಡ ಆಸ್ಪತ್ರೆಗೆ ಸೇರಿಕೆ ಮಾಡಿ, ಇಂದು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಅಜರ್ಿ ನೀಡಿದ್ದು ಇರುತ್ತದೆ.
ಕಾರಣ ಯಾವುದೊ ಒಂದು ಆಟೋ ನೇದ್ದರ ಚಾಲಕನು ರಸ್ತೆ ಪಕ್ಕದಲಿಂದ ಅಲಕ್ಷತದಿಂದ ಒಮ್ಮೇಲೆ ಆಟೋವನ್ನು ಒಮ್ಮೆಲೆ ಬಲಕ್ಕೆ ತಿರುಗಿಸಿ ನಾವು ಹೋಗುತ್ತಿದ್ದ ಪಲ್ಸರ ಮೋಟಾರ ಸೈಕಲ್ ನಂ: ಎಮ್ಹೆಚ್/04-4337 ನೇದ್ದಕ್ಕೆ ಡಿಕ್ಕಿ ಪಡಿಸಿ ಮಣಿಕಂಠ ಚವ್ಹಾಣ ಇತನ ಉಂಗುರ ಬೆರಳು ಭಾರಿ ರಕ್ತಗಾಯ ಆಗಿ ಮುರಿದಂತಾಗಿರುತ್ತದೆ. ಕಾರಣ ಓಡಿ ಹೋದ ಆಟೋ ಮತ್ತು ಚಾಲಕನ ಮೇಲೆ ಕಾನೂನು ಕ್ರಮ ಜರುಗಸಲು ವಿನಂತಿ ಇರುತ್ತದೆ. ಅಂತಾ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 47/2022 ಕಲಂ: 279,338 ಐಪಿಸಿ ಸಂಗಡ 187 ಐ.ಎಮ್.ವಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 37/2022, ಕಲಂ: 323, 324, 307, 504, 506 ಸಂ.34 ಐ.ಪಿ.ಸಿ : ಇಂದು ದಿನಾಂಕ: 27-03-2022 ರಂದು 06:10 ಪಿ.ಎಮ್.ಕ್ಕೆ ಶಾಂತಪ್ಪ ಹೆಚ್.ಸಿ-182 ರವರು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಪಿಯರ್ಾಧಿ ತಂದೆ ಹಾಜರುಪಡಿಸಿದ ಸಾರಂಶವೆನೆಂದರೆ ಸುಮಾರು ದಿನಗಳಿಂದ ನಮ್ಮ ಮನೆಯ ಪಕ್ಕದಲ್ಲಿ ನಮ್ಮ ಜನಾಂಗದ ಮಹಾಲಿಂಗಪ್ಪ ತಂದೆ ಅಮಾತೆಪ್ಪ ಇವರ ಖುಲ್ಲಾ ಜಾಗ ಇದ್ದು, ಈ ಜಾಗದಲ್ಲಿ ನಮ್ಮ ಜಾತಿಯ ದೇವಪ್ಪ ತಂದೆ ಸಾಬಣ್ಣ ಮುದಕನಳ್ಳಿ ಈತನು ಮರಳನ್ನು ಕೂಡಿ ಹಾಕಿ ಅದರ ಸುತ್ತಲು ಸೋಲಾರ ಕರೆಂಟ್ ಹಾಕಿದ್ದನು. ಆಗ ನಾವು ದೇವಪ್ಪನಿಗೆ ಮನೆಯ ಸುತ್ತ ಮುತ್ತಿನ ಸಣ್ಣ ಮಕ್ಕಳು ಇಲ್ಲಿ ಆಟ ಆಡುತ್ತವೆ ಸೋಲಾರ ಕರಂಟ್ ಹಾಕಬೇಡ ಅಂತಾ ಹೇಳಿದ್ದೆವು ಅದಕ್ಕೆ ಆತನು ನಮ್ಮ ಸಂಗಡ ಜಗಳ ಮಾಡಿ ಲೇ ಸೂಳೆ ಮಗನೆ ನನ್ನ ತಂಟೆಗೆ ಬಂದರೆ ನಿನಗೆ ಖಲಾಸ ಮಾಡುತ್ತೇನೆ ಮಗನೆ ಅಂತಾ ಬೇದರಿಕೆ ಹಾಕಿದ್ದನು ಆಗ ಊರಿನ ಹಿರಿಯರು ಕುಂತು ಬಗೆಹರಿಸಿದ್ದರು ಅಲ್ಲಿಂದ ದೇವಪ್ಪ ಈತನು ನಮ್ಮ ಮೇಲೆ ಸಿಟ್ಟು ಇಟ್ಟುಕೊಂಡಿದ್ದನು.
ಇಂದು ದಿನಾಂಕ: 27-03-2022 ರಂದು ಸಾಯಂಕಾಲ 04-00 ಗಂಟೆಗೆ ನಮ್ಮ ತಮ್ಮ ಶಾಂತಪ್ಪನ ಮಗನಾದ ನಿಂಗಪ್ಪ ಮತ್ತು ದೇವಪ್ಪನ ಕಾಕನಾದ ನಾಗಪ್ಪನ ಮಗ ಭೀಮಪ್ಪ ಇವರಿಬ್ಬರು ಉಸಕಿನಲ್ಲಿ ಆಡುತ್ತ ಆಡುತ್ತ ಹುಡಗರು ರೋಡಿನ ಮೇಲೆ ಬಾಯಿ ಮಾತಿನ ಜಗಳ ಮಾಡುತ್ತಿರುವಾಗ ಆಗ ನಾನು ಹೋಗಿ ಹೇ ಹುಡಗರೆ ಯಾಕೆ ಜಗಳ ಮಾಡುತ್ತಿರಿ ಸುಮ್ಮನೆ ಯಾರ ಮನೆಗೆ ಅವರು ಹೋಗುರಿ ಅಂತಾ ಹೇಳಿದಾಗ ದೇವಪ್ಪ ತಂದೆ ಸಾಬಣ್ಣ ಇವನು ಬಂದು ಲೇ ಸೂಳೆ ಮಗನೆ ನಿಮ್ಮದು ಬಹಳ ಸೊಕ್ಕು ಆಗಿದೆ ಪದೆ ಪದೆ ನಮ್ಮ ಸಂಗಡ ಜಗಳ ಜಗಳಕ್ಕೆ ಬರುತ್ತಿರಿ ಲಂಗಾ ಸೂಳೆ ಮಕ್ಕಳೆ ಅಂತಾ ಬೈದು ನನಗೆ ಕಟ್ಟಿಗೆಯ ಬಡಿಗೆಯನ್ನು ತೆಗೆದುಕೊಂಡು ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿ ಮತ್ತೆ ಕಟ್ಟಿಗೆಯಿಂದ ಬೆನ್ನಿಗೆ ಭುಕ್ಕೆ ಹೊಡೆದು ಪೆಟ್ಟು ಮಾಡಿ ನೆಲಕ್ಕೆ ಹಾಕಿ ಕೊಲೆ ಮಾಡಬೆಕೆಂಬ ಉದ್ದೇಶದಿಂದ ಕಟ್ಟಿಗೆಯಿಂದ ಬೆನ್ನಿಗೆ ಹೊಡೆದು ಅದೆ ಕಟ್ಟಿಗೆಯಿಂದ ನನ್ನ ತಲೆಯ ಮೇಲೆ ಹೊಡೆದಾಗ ನಾನು ಹೇಗೋ ಮಾಡಿ ತಪ್ಪಿಸಿಕೊಂಡೆನು ಇಲ್ಲಿದ್ದರೆ ನನ್ನ ಪ್ರಾಣ ಹೋಗುತಿತ್ತು. ಆಗ ಲಕ್ಷ್ಮೀ ಗಂಡ ದೇವಪ್ಪ ಈಕೆಯು ಈ ಸೂಳಿ ಮಗನಿಗೆ ಇವತ್ತು ಜೀವ ಸಹಿತ ಬಿಡಬೇಡಿರಿ ಇವನಿಗೆ ಸೊಕ್ಕು ಬಹಳ ಆಗಿದೆ ಇವನಿಗೆ ಮುಗಿಸಿ ಬಿಟ್ಟರೆ ಕಿರಿಕಿರಿ ತಪ್ಪುತ್ತದೆ ಈ ರಂಡಿ ಮಗನಿಗೆ ಖಲಾಸ ಮಾಡುರಿ ಇವನದ್ದು ಎನ್ ಶುದ್ದಿ ಅಂತಾ ಬೈಯುತ್ತಿರುವಾಗ ಭೀಮಪ್ಪ ತಂದೆ ನಾಗಪ್ಪ ಇವನು ಎಗ್ಗರಿ ಬಂದು ನನಗೆ ಕಾಲಿನಿಂದ ಒದ್ದು ಲೇ ಮುದಿ ಸೂಳಿ ಮಗನೆ ನನಗ ಹೊಡ್ಯಾಕ ಬರುತ್ತೇನಲೆ ಸೂಳೆ ಮಗನೆ ಅಂತಾ ಬೈದಾಗ ಆಗ ಜಗಳ ಮಾಡುವದನ್ನು ನೋಡಿ ನಮ್ಮ ಅಣ್ಣನ ಮಗ ಬಸಪ್ಪ ತಂದೆ ಭೀಮಣ್ಣ, ಮತ್ತು ನಮ್ಮೂರಿನ ಸಾಬಣ್ಣ ತಂದೆ ಸಾಬಣ್ಣ ಇವರು ಬಂದು ಜಗಳ ಬಿಡಿಸಿಕೊಂಡರು ಆಗ ನನಗೆ ಜಗಳದಲ್ಲಿ ಗಾಯಗಳು ಆಗಿದ್ದರಿಂದ ಆಸ್ಪತ್ರೆಗೆ ತೋರಿಸಲು ನಮ್ಮ ಸಾಬಣ್ಣ ತಂದೆ ಸಾಬಣ್ಣ ಈತನು ಮೋಟರ ಸೈಕಲ್ ಮೇಲೆ ಕರೆದುಕೊಂಡು ಬಂದು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾನೆ. ಅಂತಾ ಪಿಯರ್ಾಧಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ:37/2022 ಕಲಂ:323, 324, 307, 504, 506 ಸಂ.34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 38/2022 ಕಲಂ. 341, 323, 324, 504, 506 & 34 ಐ.ಪಿ.ಸಿ. : ಇಂದು ದಿನಾಂಕ 27/03/2022 ರಂದು ಸಾಯಂಕಾಲ 07:00 ಗಂಟೆಗೆ ನಾನು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಒಂದು ಎಮ್ ಎಲ್ ಸಿ ಹೇಳಿಕೆ ಪಡೆದಿದ್ದು ಸದರಿ ಹೇಳಿಕೆವೆನೆಂದರೆ ಶ್ರೀ ದೇವಪ್ಪ ತಂದೆ ಸಾಬಣ್ಣ ಮುದಕನಳ್ಳಿ ವಯಾಃ 32 ವರ್ಷ ಜಾಃ ಕಬ್ಬಲಿಗ ಉಃ ಒಕ್ಕಲತನ ಸಾ: ಕಟಗಿ ಶಹಾಪುರ ತಾ:ಯಾದಗಿರ. ನಾನು ಸುಮಾರು ಎರಡುಮೂರು ತಿಂಗಳ ಹಿಂದೆ ನಮ್ಮ ಜಾತೀಯ ಮಹಾಲಿಂಗಪ್ಪನ ತಂದೆ ಅಮತಪ್ಪ ಇವರ ಖುಲ್ಲಾ ಜಾಗದಲ್ಲಿ ನಾನು ಮನೆ ಕಟ್ಟಲು ಮರಳನ್ನು ಕೂಡಿ ಹಾಕಿದ್ದು ದನಕರಗಳು ತಿರಿಗಾಡಬಾರದು ಅಂತ ಅದ ಸುತ್ತಲು ಸೋಲಾರ ತಂತಿ ಹಾಕಿದನು ಇದಕ್ಕೆ ಅಮತೆಪ್ಪ ಇತನು ಸೋಲಾರ ತೆಗಿ ಅಂತ ಹಿಂದೆ ಜಗಳ ಮಾಡಿದ್ದನು.
ಹೀಗಿರುವಾಗ ಇಂದು ದಿನಾಂಕ 27/03/2022 ರಂದು ಸಾಯಾಂಕಾಲ 04:00 ಗಂಟೆಯ ಸುಮಾರಿಗೆ ನಾನು ಹಾಕಿದ ಉಸಕಿನಲ್ಲಿ ನನ್ನ ಅಣ್ಣನ ಮಗ ಭೀಮಪ್ಪ ಮತ್ತು ಶಾಂತಪ್ಪನ ಮಗನಾದ ನಿಂಗಪ್ಪ ಇಬ್ಬರು ಆಡಾಡುತ್ತಾ ಜಗಳ ಮಾಡುತ್ತಾತ ರೋಡಿನ ಮೇಲೆ ಬಂದಾಗ ಅಲ್ಲಿಯೇ ಇದ್ದ ಅಮತಪ್ಪ ತಂದೆ ನಿಂಗಪ್ಪ ಮುದಕನಳ್ಳಿ ಇತನು ಬಂದು ನನ್ನ ಅಣ್ಣನ ಮಗನಾದ ನಿಂಗಪ್ಪನಿಗೆ ಕೈಯಿಂದ ಹೊಡೆಯುತ್ತಿದ್ದಾಗ, ನಾನು ಅಲ್ಲಿಗೆ ಹೋಗಿ ಯಾಕೇ ನನ್ನ ಅಣ್ಣನ ಮಗನಿಗೆ ಹೊಡೆಯುತ್ತಿ ಅಂತ ಕೇಳಿದಾಗ ಲೇ ಸೂಳೆ ಮಗನೇ ನಿಮ್ಮದು ಸೊಕ್ಕು ಬಹಳ ಅಂದು ನನ್ನ ಎದೆಯ ಮೇಲೆ ಅಂಗಿ ಹಿಡಿದು ಅಮತಪ್ಪ ನನಗೆ ಕೈಯಿಂದ ಮುಷ್ಠಿ ಮಾಡಿ ಸೊಂಟದ ಮಧ್ಯದ ಭಾಗಕ್ಕೆ, ಎದೆಯ ಎಡಭಾಗಕ್ಕೆ ಗುದ್ದಿರುತ್ತಾನೆ ಮತ್ತು ತಿಪ್ಪಮ್ಮ ಮತ್ತು ನಿಂಗಪ್ಪ ಇಬ್ಬರು ಸೇರಿ ನನ್ನ ಬಲತೊಡೆಗೆ ಕೈಯಿಂದ ಹೊಡೆದಿರುತ್ತಾರೆ. ಆಗ ನಾನು ಅಂಜಿ ಹೋಗುತ್ತಿರುವಾಗ ಅಮತಪ್ಪ, ತಿಪ್ಪಮ್ಮ ಮತ್ತು ನಿಂಗಪ್ಪ ಇವರೆಲ್ಲರು ನನ್ನನು ತಡೆದು ನಿಲ್ಲಿಸಿ ಇನ್ನೊಂದು ಸಲ ನಮ್ ತಂಟಿಗೆ ಬಂದರೆ ಖಲಾಸ ಮಾಡುತ್ತೆವೆ ಅಂತ ಬೆದರಿಕಿ ಹಾಕಿದ್ದಾಗ ಆಗ ನನ್ನ ಅಣ್ಣನ ಮಗ ಜಗಳದಲ್ಲಿ ಬಂದಾಗ ಆತನಿಗೆ ಅಮತಪ್ಪ, ತಿಪ್ಪಮ್ಮ ಮತ್ತು ನಿಂಗಪ್ಪ ಇವರೆಲ್ಲರು ಕೂಡಿ ಆತನಿಗೆ ತಲೆಗೆ, ಬಲಗೈಗೆ ಮತ್ತು ಎಡ ತೊಡೆಗೆ ಹೊಡೆದು ಲೇ ಸುಳೆ ಮಕ್ಕಳೆ ನಿಮಗೆ ಖಲಾಸ ಮಾಡುತ್ತಿವಿ ಅಂತ ಹೊದರಾಡುತ್ತಿರುವಾಗ ಜಗಳ. ನೋಡಿ ನಮ್ಮ ಊರಿನ ಭೀಮಣ್ಣ ತಂದೆ ಮಹಾದೇವಪ್ಪ ಕೊಟ್ರಕಿ ಮತ್ತು ಬಸಪ್ಪ ತಂದೆ ಭೀಮಣ್ಣ ಕೊಟ್ರಕಿ ಸಾ: ಕಟಗಿ ಶಹಾಪುರ ಇವರು ಜಗಳವನ್ನು ಬಂದು ಬಿಡಿಸಿರುತ್ತಾರೆ. ನಂತರ ನಮ್ಮಗೆ ಭೀಮಣ್ಣ ಕೊಟ್ರಕಿ ಇವರು ಖಾಸಗಿ ವಾಹನದಲ್ಲಿ ತಂದು ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಆದ ಕಾರಣ ನನ್ನ ಮೇಲೆ ಹಲ್ಲೆ ಮಾಡಿದ ಅಮತೆಪ್ಪ ತಂದೆ ನಿಂಗಪ್ಪ ಮುದಕನಳ್ಳಿ , ತಿಪ್ಪಮ್ಮ ಗಂಡ ಅಮತಪ್ಪ ಮತ್ತು ನಿಂಗಪ್ಪ ತಂದೆ ಶಾಂತಪ್ಪ ಸಾ: ಎಲ್ಲರು ಕಟಗಿ ಶಹಾಪುರ ಇವರ ಮೇಲೆ ಸೂಕ್ತ ಕಾನೂನು ರೀತಿ ಕ್ರಮ ಕೈಗೋಳ್ಳಿ ಅಂತಾ ಹೇಳಿ ಗಣಕ ಯಂತ್ರದಲ್ಲಿ ಹೇಳಿ ಗಣಕಿಕರಿಸಿದ ಹೇಳಿಕೆ ನಿಜವಿರುತ್ತದೆ. ಅಂತಾ ನೀಡಿದ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 38/2022 ಕಲಂ 341, 323, 324, 504, 506. & 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

Last Updated: 28-03-2022 10:50 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080