Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 29-10-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 116/2022 ಕಲಂ: 341, 504, 506 ಸಂ. 34 ಐಪಿಸಿ: ಇಂದು ದಿನಾಂಕ; 28/10/2022 ರಂದು 5-30 ಪಿಎಮ್ ಕ್ಕೆ ಪಿರ್ಯಾಧಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಮ್ಮ ತಂದೆಯವರಾದ ಅಸದ್ ಚಾವುಸ್ ರವರು 2014 ರಲ್ಲಿ ಕಲಬುರಗಿ ನಗರದ ಸೈಯದ ಅಮೀನ್ ಇವರ ಮಗಳಾದ ಸೈಯದಾ ಆಸ್ಮಾ ಎಂಬುವವರೊಂದಿಗೆ ನನ್ನ ಮದುವೆ ಮಾಡಿದ್ದು ನಾನು ನನ್ನ ಹೆಂಡತಿ ಮತ್ತು ನಮ್ಮ ತಂದೆ ಕೂಡಿಕೊಂಡು ಮನೆಯಲ್ಲಿ ವಾಸವಾಗಿರುತ್ತೇವೆ. ನಾವು ಗಂಡ ಹೆಂಡತಿ ಮದುವೆಯಾದಾಗಿನಿಂದಲೂ ಸುಖ ಸಂಸಾರ ಮಾಡಿಕೊಂಡಿದ್ದು ನಮಗೆ ಇಲ್ಲಿಯವರೆಗೆ ಮಕ್ಕಳು ಆಗಿರುವುದಿಲ್ಲ. ನಾವು ಈ ಬಗ್ಗೆ ಎಲ್ಲಾ ಕಡೆ ಆಸ್ಪತ್ರೆಗೆ ತಿರುಗಾಡಿ ಉಪಚಾರ ಪಡೆದುಕೊಂಡರು ಕೂಡಾ ನಮಗೆ ಮಕ್ಕಳು ಆಗಿರುವುದಿಲ್ಲ. ನಾನು ನಮ್ಮ ತಂದೆಗೆ ಒಬ್ಬನೇ ಮಗನಾಗಿದ್ದು ನಮಗೂ ಕೂಡಾ ಮಕ್ಕಳು ಆಗದೇ ಇದ್ದರೆ ನಮ್ಮ ವಂಶ ಬೆಳೆಯುವುದು ಹೇಗೆ ಅಂತಾ ನಮ್ಮ ತಂದೆಯವರು ನನಗೆ ಇನ್ನೊಂದು ಮದುವೆ ಮಾಡುವ ಯೋಚನೆ ಮಾಡಿದ್ದು ಇರುತ್ತದೆ. ಆಗ ನನ್ನ ಹೆಂಡತಿ ಮತ್ತು ಅವರ ಮನೆಯವರು ಈ ವಿಷಯದಲ್ಲಿ ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದಿದ್ದರು. ನನ್ನ ಹೆಂಡತಿ ಕಳೆದ ನಾಲ್ಕು ತಿಂಗಳ ಹಿಂದೆ ನನಗೆ ಬಿಟ್ಟು ತನ್ನ ತವರು ಮನೆಗೆ ಹೋಗಿದ್ದಳು. ಹಿಗೀದ್ದು ದಿನಾಂಕ; 18/10/2022 ರಂದು ನನ್ನ ಮತ್ತು ನನ್ನ ಹೆಂಡತಿಯ ವಿಷಯವಾಗಿ ಮಾತನಾಡಲು ನನ್ನ ಹೆಂಡತಿ ಸೈಯದಾ ಆಸ್ಮಾ, ಅಳಿಯಂದಿರಾದ ಸೈಯದ ಕರೀಂ ತಂದೆ ಸೈಯದ ಅಮೀನ, ಸೈಯದ ಸಲೀಂ ತಂದೆ ಸೈಯದ ಅಮೀನ ಹಾಗೂ ಅವರೊಂದಿಗೆ ಇನ್ನೊಬ್ಬ ಅಪರಿಚಿತ ವ್ಯಕ್ತಿ ಕೂಡಿಕೊಂಡು ಕಲಬುರಗಿಯಿಂದ ಯಾದಗಿರಿಯ ನಮ್ಮ ಸಂಭಂಧಿಯವರಾದ ಜಾವೀದ ಅಹ್ಮದ ತಂದೆ ಶೇಖ ಮಹಿಬೂಬ ರವರ ಮನೆಗೆ ಬಂದಿದ್ದರಿಂದ ನಾನು ಮತ್ತು ನನ್ನ ತಂದೆ ಅಸದ್ ಚಾವುಸ್ ಹಾಗೂ ನಮ್ಮ ಮನೆಗೆ ಬಂದಿದ್ದ ಇಮಾಮ ಪಟೇಲ ತಂದೆ ಖಾಸೀಂ ಪಟೇಲ ಸಾ; ವರ್ಕನಳ್ಳಿ ಕೂಡಿಕೊಂಡು 4-00 ಪಿಎಮ್ ಸುಮಾರಿಗೆ ಅಲ್ಲಿಗೆ ಹೋಗಿ ಮಾತನಾಡುತ್ತಿರುವಾಗ ನನ್ನ ಅಳಿಯಂದಿರಾದ ಸೈಯದ ಕರೀಂ, ಸೈಯದ ಸಲೀಂ ಇವರು ನನಗೆ ಲೇ ಸೂಳೆ ಮಕ್ಕಳೆ ನಿಮಗೆ ಸೊಕ್ಕು ಬಹಳ ಆಗಿದೆ ನನ್ನ ತಂಗಿ ಹೇಳಿದಂತೆ ಕೇಳಿಕೊಂಡು ಸಂಸಾರ ಮಾಡುವುದು ಬಿಟ್ಟು ಇನ್ನೊಂದು ಮದುವೆ ಆಗುತ್ತೇನೆ ಅಂತಾ ಹೇಳುತ್ತೀಯಾ ಅಂತಾ ಅವಾಚ್ಯವಾಗಿ ಬೈದಾಡಿದಾಗ ನಾವು ಸುಮ್ಮನೆ ಯಾಕೆ ಬೈಯುತ್ತೀರಾ ಕುಳಿತು ಮಾತನಾಡೋಣಾ ಅಂತಾ ಅಂದಾಗ ನಮ್ಮ ಅಳಿಯಂದಿರ ಜೋತೆಗೆ ಬಂದಿದ್ದ ವ್ಯಕ್ತಿಯು ಏ ಬೊಸಡೀಕೆ ನಿಮ್ಮೊಂದಿಗೆ ಏನು ಮಾತನಾಡಬೇಕು ನಮ್ಮ ಸೈಯದಾ ಆಸ್ಮಾ ಇವಳು ಹೇಳಿದಂತೆ ಕೇಳಿಕೊಂಡು ಬಿದ್ದೀರಿ ಇಲ್ಲವಾದರೆ ನಿಮಗೆ ಸುಮ್ಮನೆ ಬಿಡಲ್ಲ ಅಂತಾ ಬೆದರಿಕೆ ಹಾಕಿದನು. ಆಗ ನಾನು ಮತ್ತು ನಮ್ಮ ತಂದೆ ಇವರೊಂದಿಗೆ ತಕರಾರು ಮಾಡಿಕೊಳ್ಳುವುದು ಬೇಡ ಅಂತಾ ಅಲ್ಲಿಂದ ಹೋಗುತ್ತಿದ್ದಾಗ ನಮ್ಮ ಇಬ್ಬರು ಅಳಿಯಂದಿರು ನಮಗೆ ತಡೆದು ನಿಲ್ಲಿಸಿ ಎಲ್ಲಿಗೆ ಹೋಗುತ್ತೀರಾ ಮಕ್ಕಳೇ ನಿಲ್ಲಿ ಇವತ್ತು ನಿಮಗೆ ಒಂದು ಗತಿ ಕಾಣಿಸುತ್ತೇವೆ ಅಂತಾ ಬೈಯುತಾ,್ತ ನೀವು ಕಲಬುರಗಿಗೆ ಬನ್ನಿ ನಿಮಗೆ ಖಲಾಸ ಮಾಡಿ ಬಿಡುತ್ತೇವೆ. ನಿಮಗೆ ಖಲಾಸ ಮಾಡಿ ನಿಮ್ಮ ಆಸ್ತಿ ನನ್ನ ತಂಗಿ ಹೆಸರಿಗೆ ಮಾಡಿಸುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದರು. ಆಗ ಅಲ್ಲೇ ಇದ್ದ ಜಾವೀದ ಅಹ್ಮದ, ಸೀರಾಜ ಅಹ್ಮದ ತಂದೆ ಶೇಖ ಮಹಿಬೂಬ, ಇಮಾಮ ಪಟೇಲ ಇವರು ಜಗಳ ಬಿಡಿಸಿ ನಮಗೆ ಅಲ್ಲಿಂದ ಕಳಿಸಿಕೊಟ್ಟರು. ಇದು ನಮ್ಮ ಸಂಸಾರದ ವಿಷಯವಾಗಿದ್ದರಿಂದ ನಾವು ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ದಿನಾಂಕ; 28/10/2022 ರಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ನಮಗೆ ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು, ಜೀವದ ಬೆದರಿಕೆ ಹಾಕಿದ ಈ ಮೇಲಿನವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.116/2022 ಕಲಂ.341, 504, 506 ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 50/2022 ಕಲಂ 279, 338, ಐ.ಪಿ.ಸಿ: ಇಂದು ದಿನಾಂಕ: 28/10/2022 ರಂದು 12-45 ಎ.ಎಮ್.ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಸ್ವೀಕೃತವಾದ ಆರ್,ಟಿ.ಎ ಎಮ್.ಎಲ್.ಸಿ. ಮಾಹಿತಿ ಮೇರೆಗೆ ಮಾನ್ಯ ಪಿ.ಎಸ್.ಐ-01 ಸಾಹೇಬರು ನನಗೆ ಎಮ್.ಎಲ್.ಸಿ ವಿಚಾರಣೆಗಾಗಿ ನೇಮಿಸಿ ಕಳಿಸಿದ್ದು, ನಾನು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡ ಗಾಯಾಳು ವಿಚಾರಣೆ ನಂತರ ಗಾಯಾಳು ಪಿಯರ್ಾದಿ ಶ್ರೀಮತಿ ಪಾರ್ವತಿ ಗಂಡ ಲಚ್ಚು ಚವ್ಹಾಣ ವಯ;35 ವರ್ಷ, ಜಾ;ಲಂಬಾಣಿ, ಉ;ಕೂಲಿ, ಸಾ;ಚಾಮನಳ್ಳಿ ತಾಂಡ, ತಾ;ಜಿ;ಯಾದಗಿರಿ ಇವರು ಘಟನೆಗೆ ಸಂಬಂಧಿಸಿದಂತೆ ತಮ್ಮ ಹೇಳಿಕೆ ಫಿಯರ್ಾದಿಯನ್ನು ಕೊಟ್ಟಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನನ್ನ ಗಂಡನು ಸುಮಾರು 14 ವರ್ಷಗಳ ಹಿಂದೆ ತೀರಿಕೊಂಡಿರುತ್ತಾನೆ. ನನಗೆ ರವೀಂದ್ರ ಎಂಬ ಒಬ್ಬ ಮಗನಿರುತ್ತಾನೆ. ಹೀಗಿದ್ದು ಇಂದು ದಿನಾಂಕ 28/10/2022 ರಂದು ಬೆಳಿಗ್ಗೆ ಸುಮಾರಿಗೆ ನಾನು ಅಲ್ಲಿಪುರ ಸಣ್ಣ ತಾಂಡದಲ್ಲಿ ಇರುವ ನಮ್ಮ ಸಂಬಂಧಿಕರಿಗೆ ಮಾತನಾಡಿಸುವ ಸಲುವಾಗಿ ನಮ್ಮ ತಾಂಡದಿಂದ ಅಲ್ಲಿಪುರ ಸಣ್ಣತಾಂಡಾಕ್ಕೆ ನಮ್ಮೂರಿನ ಒಂದು ಖಾಸಗಿ ಆಟೋದಲ್ಲಿ ಅಲ್ಲಿಪುರ ಕ್ರಾಸ್ವರೆಗೆ ಬಂದು ಇಳಿದುಕೊಂಡೆನು. ನಂತರ ಅಲ್ಲಿಂದ ಅಲ್ಲಿಪುರ ಸಣ್ಣ ತಾಂಡಕ್ಕೆ ಹೋಗುವ ಸಲುವಾಗಿ ರಸ್ತೆ ಬದಿಗೆ ಹೋಗಿ ನಿಂತು, ಯಾವುದಾದರೂ ಆಟೋ ಬರುವ ದಾರಿಯನ್ನು ಕಾಯುತ್ತಾ ನಿಂತಿದ್ದಾಗ ಸಮಯ ಅಂದಾಜು 11;30 ಎ.ಎಂ.ದ ಸುಮಾರಿಗೆ ನಾನು ನೋಡು ನೋಡುತ್ತಿದ್ದಂತೆ ಒಬ್ಬ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲನ್ನು ವಾಡಿ ರಸ್ತೆ ಕಡೆಯಿಂದ ಯಾದಗಿರಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ನನಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದನು, ಆಗ ನನಗೆ ಡಿಕ್ಕಿ ಹೊಡೆದ ರಭಸಕ್ಕೆ ಸಿಡಿದು ರಸ್ತೆ ಬದಿಗೆ ಬಿದ್ದಾಗ ಬಲಗಾಲಿನ ಕೆಳಗೆ ಭಾರೀ ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ ಹಾಗೂ ತಲೆಯ ಹಿಂಭಾಗಕ್ಕೆ ಭಾರೀ ಗುಪ್ತಗಾಯವಾಗಿ ಉಬ್ಬಿಕೊಂಡು ಬಂದಿರುತ್ತದೆ. ಅಲ್ಲಿಪುರ ಕ್ರಾಸ್ ಹತ್ತಿರ ನಿಂತಿದ್ದ ನಮ್ಮುರಿನ ರೆಡ್ಡಿ ತಂದೆ ಬಲರಾಮ ರಾಠೋಡ ಈತನು ಹಾಗೂ ಇತರರು ಅಪಘಾತವನ್ನು ಕಂಡು ಓಡೋಡಿ ನನ್ನ ಹತ್ತಿರ ಬಂದು ವಿಚಾರಿಸಿದ್ದು, ಆಗ ನಾನು ರೆಡ್ಡಿ ಈತನಿಗೆ ಈ ಘಟನೆಯ ಬಗ್ಗೆ ನನ್ನ ಮಗನಾದ ರವೀಂದ್ರನಿಗೆ ಪೋನ್ ಮಾಡಿ ತಿಳಿಸು ಕೂಡಲೇ ಅವರಿಗೆ ಇಲ್ಲಿಗೆ ಬರಲು ಹೇಳು ಅಂತಾ ತಿಳಿಸಿದೆನು. ಆಗ ರೆಡ್ಡಿ ಈತನು ನನ್ನ ಮಗ ರವೀಂದ್ರನಿಗೆ ಪೋನ್ ಮಾಡಿ ಘಟನೆ ಬಗ್ಗೆ ತಿಳಿಸಿರುತ್ತಾನೆ. ನನಗೆ ಅಪಘಾತಪಡಿಸಿದ ಮೋಟಾರು ಸೈಕಲ್ ಮತ್ತು ಅದರ ಸವಾರ ಘಟನಾ ಸ್ಥಳದಲ್ಲಿ ಹಾಜರಿದ್ದು, ಮೋಟಾರು ಸೈಕಲ್ ನಂಬರ ನೋಡಲಾಗಿ ಕೆಎ-33, ಇಎ-5751 ನೇದ್ದು ಇರುತ್ತದೆ, ಅದರ ಸವಾರನು ನಮ್ಮ ಚಾಮನಳ್ಳಿ ತಾಂಡಾದವನೇ ಆದ ವಿಠಲ್ ತಂದೆ ಮನ್ನು ಚವ್ಹಾಣ ಈತನು ಇರುತ್ತಾನೆ. ಸದರಿ ಅಪಘಾತದಲ್ಲಿ ಆತನಿಗೆ ಅಲ್ಲಲ್ಲಿ ಸಣ್ಣ ಪುಟ್ಟ ತರಚಿದ ಗಾಯಗಳಾಗಿರುತ್ತವೆ. ಘಟನಾ ಸ್ಥಳಕ್ಕೆ ನನ್ನ ಮಗನಾದ ರವಿಂದ್ರ ಹಾಗೂ ನನ್ನ ಭಾವನ ಮಗನಾದ ಅಜರ್ುನ ತಂದೆ ಪರಶುರಾಮ ಚವ್ಹಾಣ ಇವರುಗಳು ಬಂದಿದ್ದು, ಘಟನೆ ಬಗ್ಗೆ ನನ್ನಿಂದ ಮತ್ತೆ ತಿಳಿದುಕೊಂಡು ನನಗೆ ಉಪಚಾರಕ್ಕಾಗಿ ಒಂದು ಖಾಸಗಿ ವಾಹನದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ಹೀಗಿದ್ದು ಇಂದು ದಿನಾಂಕ 28/10/2022 ರಂದು 11-30 ಎ.ಎಂ.ಕ್ಕೆ ವಾಡಿ-ಯಾದಗಿರಿ ಮುಖ್ಯ ರಸ್ತೆಯ ಅಲ್ಲಿಪುರ ಕ್ರಾಸ್ ಹತ್ತಿರ ರಸ್ತೆ ಬದಿಯಲ್ಲಿ ನಿಂತಿದ್ದ ನನಗೆ ಮೋಟಾರು ಸೈಕಲ್ ನಂಬರ ಕೆಎ-33, ಇಎ-5751 ನೇದ್ದರ ಸವಾರ ವಿಠಲ್ ಈತನು ಅಪಘಾತಪಡಿಸಿದ್ದು, ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆಯನ್ನು ಕೊಟ್ಟಿದ್ದನ್ನು ಪಡೆದುಕೊಂಡು, ಮರಳಿ ಯಾದಗಿರಿ ಸಂಚಾರ ಪೊಲೀಸ್ ಠಾಣೆಗೆ 02-45 ಪಿ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 50/2022 ಕಲಂ: 279, 338 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ಗೋಗಿ ಪೊಲೀಸ ಠಾಣೆ:-
ಗುನ್ನೆ ನಂ:78/2022 ಕಲಂ 15(ಎ) 32(3) ಕೆ.ಇ ಆ್ಯಕ್ಟ್ : ಇಂದು ದಿನಾಂಕ: 28/10/2022 ರಂದು 04.40 ಪಿಎಮ್ ಕ್ಕೆ ಆರೋಪಿತನಾದ ಸಣ್ಣಭೀಮರಾಯ ತಂದೆ ಹಣಮಂತ ನಾಟೇಕಾರ, ವ:22ವರ್ಷ, ಜಾ:ಮಾದಿಗ, ಉ:ಕಿರಾಣಿ ಅಂಗಡಿ, ಸಾ:ಮಹಲ್ ರೋಜಾ, ತಾ:ಶಹಾಪೂರ ಈತನು ಮಹಲ್ ರೋಜಾ ಗ್ರಾಮದ ಹೊರಗೆ ಸಗರ ರೋಡಿಗೆ ಇರುವ ತನ್ನ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದು, ಆಗ ಅಯ್ಯಪ್ಪ ಪಿಎಸ್ಐ (ಕಾ&ಸು) ಪಿ.ಎಸ್.ಐ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ 04.45 ಪಿಎಮ್ ಕ್ಕೆ ದಾಳಿ ಮಾಡಿದಾಗ ಮದ್ಯ ಕುಡಿಯಲು ಬಂದ ಜನರು ಓಡಿ ಹೋಗಿದ್ದು, ಆಗ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟ ಆರೋಪಿತನಿಗೆ ಹಿಡಿದು ಸ್ಥಳದಲ್ಲಿಂದ 1) 90 ಎಮ್.ಎಲ್. ನ 20 ಓರಿಜಿನಲ್ ಚ್ವೈಸ್ ಡಿಲಕ್ಸ್ ವಿಸ್ಕೀ ಪೌಚ್ ಗಳು ಒಂದಕ್ಕೆ ಅಂ.ಕಿ: 35.13 ರೂ ಒಟ್ಟು ಅ.ಕಿ: 702.6/- ಮತ್ತು 2) 4 ಪ್ಲಾಸ್ಟಿಕ್ ಗ್ಲಾಸ್ ಗಳು ಅಂ.ಕಿ: 00=00,, ಇವುಗಳನ್ನು ಜಪ್ತಿ ಪಂಚನಾಮೆಯ ಮೂಲಕ ವಶಕ್ಕೆ ಪಡೆದು 06.30 ಪಿಎಮ್ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಒಂದು ವರದಿಯನ್ನು ನೀಡಿದ್ದರ ಆಧಾರದ ಮೇಲಿಂದ ಠಾಣಾ ಗುನ್ನೆ ನಂ: 78/2022 ಕಲಂ 15(ಎ), 32(3) ಕೆಇ ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 39/2022 ಕಲಂ: 87 ಕೆ.ಪಿ ಯಾಕ್ಟ್: ದಿನಾಂಕ: 28/10/2022 ರಂದು 5:30 ಪಿ.ಎಂ.ಕ್ಕೆ ಶ್ರೀ ದೇವೆಂದ್ರರೆಡ್ಡಿ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಫನ ಪತ್ರ ನೀಡಿದ್ದು ಇದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ದಿನಾಂಕ:28/10/2022 ರಂದು 5:00 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗ ಮೇಲಿನಗಡ್ಡಿ ಗ್ರಾಮದಲ್ಲಿನ ಬಸಪ್ಪಯ್ಯನ ಗುಡಿಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎನ್ನುವ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಪೊಲೀಸ್ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಿದ್ದು ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವಂತೆ ಮಾನ್ಯ ಜೆ.ಎಂ.ಎಪ್.ಸಿ ನ್ಯಾಯಾಲಯ ಸುರಪೂರ ರವರಲ್ಲಿ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 39/2022 ಕಲಂ 87 ಕೆಪಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 158/2022 ಕಲಂ: 15(ಎ), 32(3) ಕೆ.ಇ ಯಾಕ್ಟ: ಇಂದು ದಿನಾಂಕ 28/10/2022 ರಂದು 8.15 ಪಿ ಎಮ್ ಕ್ಕೆ ಮಾನ್ಯ ಹಣಮಂತ ಪಿ ಎಸ್ ಐ ಸಾಹೇಬರು ಠಾಣೆಗೆ ಹಾಜರಾಗಿ ಕೊಟ್ಟ ವರದಿ ಏನೆಂದರೆ , ನಾನು ಹಣಮಂತ ಪಿ.ಎಸ್.ಐ(ಕಾಸು) ಇದ್ದು ವರದಿ ನೀಡುವುದೇನೆಂದರೆ, ಇಂದು ದಿನಾಂಕ: 28/10/2022 ರಂದು 6.00 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ, ಮಲ್ಲಾ(ಬಿ) ಗ್ರಾಮದಲ್ಲಿ ಗ್ರಾಮ ಪಂಚಾಯತ ಕಾಯರ್ಾಲಯದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಸರಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯವನ್ನು ಮಾರಾಟ ಮಾಡಿ ಮಧ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದಾನೆಂದು ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿ ಜನರಾದ ಶಿವರಾಜ ಹೆಚ್.ಸಿ 85, ಪ್ರಭುಗೌಡ ಪಿಸಿ 361 ಮತ್ತು ಬಸವರಾಜ ಪಿಸಿ 363 ರವರಿಗೆ ಬಾತ್ಮೀ ವಿಷಯ ತಿಳಿಸಿ ನಂತರ ಠಾಣೆಗೆ ಇಬ್ಬರು ಪಂಚರಾದ 1) ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವಯಾ|| 40 ಜಾ|| ಪ.ಜಾತಿ ಉ||ಕೂಲಿ ಸಾ|| ಕೆಂಭಾವಿ 2) ಮಕ್ತುಮ ತಂದೆ ಮಾಸುಮಸಾಬ ವಡಕೇರಿ ವಯಾ|| 38 ಜಾ|| ಮುಸ್ಲಿಂ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಬರಮಾಡಿಕೊಂಡು ಅವರಿಗೂ ಮಾಹಿತಿ ತಿಳಿಸಿ ದಾಳಿ ಮಾಡಲು ಸಹಕರಿಸಲು ತಿಳಿಸಿದ್ದು ಅವರು ಒಪ್ಪಿದ್ದರಿಂದ ನಾನು ಮತ್ತು ನಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ಠಾಣೆಯ ಜೀಪ ನಂಬರ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 6.10 ಪಿಎಮ್ಕ್ಕೆ ಹೊರಟು 6.25 ಪಿಎಮ್ಕ್ಕೆ ಮಲ್ಲಾ(ಬಿ) ಗ್ರಾಮದ ಗ್ರಾಮ ಪಂಚಾಯತ ಕಾಯರ್ಾಲಯದ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಅಕ್ರಮ ಮಧ್ಯ ಮಾರಾಟ ಮಾಡಿ ಸರಾಯಿ ಕುಡಿಯಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟ ಸ್ಥಳದಿಂದ ಸುಮಾರು 80 ಅಡಿ ದೂರದಲ್ಲಿ ನಿಂತು ಮದ್ಯ ಮಾರಾಟ ಮಾಡಿ ಸರಾಯಿ ಕುಡಿಯಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದನ್ನು ನೋಡಿ ಖಚಿತಪಡಿಸಿಕೊಂಡು ನಾನು ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ 6.30 ಪಿಎಂ ಕ್ಕೆ ದಾಳಿ ಮಾಡಿದ್ದು ನಮ್ಮನ್ನು ನೋಡಿ ಅಲ್ಲಿ ಸೇರಿದ್ದ ಜನರು ಓಡಿ ಹೋದರು. ಮಧ್ಯ ಮಾರಾಟ ಮಾಡುತ್ತಿದ್ದವನು ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ನಾನು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಸದರಿ ವ್ಯಕ್ತಿಯನ್ನು ಹಿಡಿದು ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಶೇಖರ ತಂದೆ ಮಲ್ಲಪ್ಪ ಭೋಸಗಿ ವ|| 31ವರ್ಷ ಜಾ|| ತಳವಾರ ಉ|| ಒಕ್ಕಲುತನ ಸಾ|| ಮಲ್ಲಾ(ಬಿ) ತಾ|| ಸುರಪೂರ ಅಂತ ತಿಳಿಸಿದನು. ನಂತರ ಸದರಿ ಸ್ಥಳದಲ್ಲಿದ್ದ ಒಂದು ರಟ್ಟಿನ ಡಬ್ಬಿಯನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ ಮಧ್ಯ ತುಂಬಿದ್ದು ಸದರ ಚೀಲದಲ್ಲಿ 90 ಎಮ್ಎಲ್ನ 8 ಓರಿಜಿನಲ್ ಚ್ವಾಯಿಸ್ ವಿಸ್ಕಿ ಪೌಚಗಳು ಇದ್ದು ಒಂದು ಪೌಚನ ಬೆಲೆ 35.13 ಇದ್ದು ಒಟ್ಟು 08 ಪೌಚಗಳ ಬೆಲೆ 281.04 ರೂ. ಆಗುತ್ತಿದ್ದು ನಂತರ ಸಿಕ್ಕ ವ್ಯಕ್ತಿಗೆ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ಮಾಡಿಕೊಡಲು ಯಾವುದಾದರು ಅಧಿಕೃತ ಪರವಾನಿಗೆ ಇದೆಯೇ ಎಂದು ವಿಚಾರಿಸಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದನು. ಆಗ ಸದರಿ ವ್ಯಕ್ತಿಯನ್ನು ವಶಕ್ಕೆ ಪಡೆದು ಅವನ ಹತ್ತಿರ ಸಿಕ್ಕ ಮಧ್ಯ ತುಂಬಿದ ಪೌಚ್ಗಳನ್ನು 6.30 ಪಿಎಮ್ದಿಂದ 7.30 ಪಿಎಮ್ದವರೆಗೆ ಮಲ್ಲಾ(ಬಿ) ಗ್ರಾಮದ ಗ್ರಾಮ ಪಂಚಾಯತ ಕಾಯರ್ಾಲಯದ ಮುಂದಿನ ಲೈಟಿನ ಬೆಳಕಿನಲ್ಲಿ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಜಪ್ತಿಪಡಿಸಿಕೊಳ್ಳಲಾಯಿತು. ನಂತರ ಸದರಿ ಆರೋಪಿತನೊಂದಿಗೆ 8.15 ಪಿಎಮ್ಕ್ಕೆ ಠಾಣೆಗೆ ಬಂದು ಸದರಿ ಆರೋಪಿತನ ವಿರುದ್ದ ಕಲಂ: 15(ಎ), 32(3) ಕೆಇ ಯಾಕ್ಟ ಪ್ರಕಾರ ಕ್ರಮ ಜರುಗಿಸಬೇಕು ಅಂತ ಇದ್ದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 158/2022 ಕಲಂ 15(ಎ), 32(3) ಕೆಇ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Last Updated: 29-10-2022 10:32 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080