ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 30-10-2021

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 170/2021 ಕಲಂ 341, 323, 504, 506 ಸಂ 34 ಐ.ಪಿ.ಸಿ. : ಫಿರ್ಯಾದಿ ಮತ್ತು ಫಿರ್ಯಾದಿಯ ಮಗನು ಚಂಡ್ರಿಕಿ ಗ್ರಾಮದ ತಮ್ಮ ಮನೆಯ ಕಡೆಯ ಕಡೆಗೆ ಹೋಗುತ್ತಿರುವಾಗ ಫಿರ್ಯಾದಿಯ ಮನೆಯ ಮುಂದೆ ಆರೋಪಿತರು ಬಂದು ಫಿರ್ಯಾದಿ ಮತ್ತು ಫಿರ್ಯಾದಿಯ ಮಗನಿಗೆ ತಡೆದು ನಿಲ್ಲಿಸಿ ನಮ್ಮ ಹೊಲದಲ್ಲಿ ಕೆಲಸಕ್ಕೆ ಬಂದ ಕೆಲಸಗಾರರಿಗೆ ಅವಾಚ್ಯಾವಾಗಿ ಬೈದು ಅಂಜಿಸಿ ಕಳುಹಿಸಿದ್ದಿರಿ ಲೇ ಸೂಳೆ ಮಕ್ಕಳೆ ನಿಮ್ಮದು ಬಹಳ ಆಗಿದೆ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ನೂಕಾಡಿ ಜೀವ ಬೆದರಿಕೆ ಹಾಕಿ ಹೋಗಿದ್ದರ ಬಗ್ಗೆ ಫಿರ್ಯಾದಿ ವಗೈರೆ ಸಾರಾಂಸವಿರುತ್ತದೆ.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ. 171/2021 ಕಲಂ: 279, 337 338 ಐಪಿಸಿ ಸಂ 187 ಐಎಮ್ವಿ ಆಕ್ಟ್ : ದಿನಾಂಕ 28.10.2021 ರಂದು ಸಾಯಂಕಾಲ 6.45 ಗಂಟೆಯ ಸುಮಾರಿಗೆ ಪಿರ್ಯಾಧಿಯು ತನ್ನ ಮೋಟರ್ ಸೈಕಲ್ ಮೇಲೆ ಇನ್ನೊಬ್ಬನ್ನು ಹಿಂದೆ ಕೂಡಿಸಿಕೊಂಡು ಗುರುಮಠಕಲ್ದಿಂದ ತಮ್ಮ ಗ್ರಾಮಕ್ಕೆ ಹೋಗುತ್ತಿರುವಾಗ ಹಿಂದುಗಡೆ ಹಿಂದ ಅಟೋ ಚಾಲಕನು ತನ್ನ ಅಟೋವನ್ನು ಅತಿವೇಗ ಅಲಕ್ಷತನದಿಂದ ಚಾಲಾಯಿಸಿಕೊಂದು ಬಂದು ಹಿಂದಿನಿಂದ ಪಿರ್ಯಾಧಿಯ ಮೋಟರ್ ಸೈಕಲ್ ನಂ:ಕೆಎ-32 ಇಕೆ-4752 ನೇದ್ದಕ್ಕೆ ಡಿಕ್ಕಿ ಪಡಿಸಿ ತನ್ನ ಅಟೋ ಸಮೇತ ಹಾಗೇಯೇ ತೆಗೆದುಕೊಂಡು ಹೋಗಿದ್ದು ಈ ಅಪಘಾತದಲ್ಲಿ ಪಿರ್ಯಾಧಿಯು ಗಾಯಗೊಂಡು ಉಪಚಾರಕ್ಕಾಗಿ ಕಲಬುರಗಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ. ಅಂತಾ ಪಿರ್ಯಾಧಿ ವಗೈರೆ ಸಾರಾಂಶ ಇರುತ್ತದೆ.

 

ಯಾದಗಿರಿ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 144/2021 ಕಲಂ. 78(3) ಕೆ.ಪಿ. ಆಕ್ಟ ತಿದ್ದುಪಡಿ ಕಾಯ್ದೆ 2021 : ದಿನಾಂಕ 29-10-2021 ರಂದು ಮುಂಜಾನೆ 09-00 ಗಂಟೆಗೆ ಠಾಣೆಯಲ್ಲಿರುವಾಗ ಮಾಹಿತಿ ಬಂದಿದ್ದೆನೆಂದರೆ ಮುಂಡರಗಿ ಗ್ರಾಮದಲ್ಲಿ ಯಾರೊ ಒಬ್ಭ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಕೂಡಲೇ ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ಮೋನಪ್ಪ ಪಿ.ಸಿ.263,ಶ್ರೀ ಪ್ರಭುಗೌಡ ಸಿಪಿಸಿ-361, ಶ್ರೀ ಭೀಮಪ್ಪ ಪಿಸಿ.33 ಎಲ್ಲರೂ ಸೇರಿಕೊಂಡು ಠಾಣೆಯಿಂದ ನಮ್ಮ ಸಕರ್ಾರಿ ಜೀಪ ನಂ.ಕೆ.ಎ.33/ ಜಿ.-0115 ನೆದ್ದರಲ್ಲಿ ಕುಳಿತುಕೊಂಡು ಹೊರಟು ಮುಂಡರಗಿ ಗ್ರಾಮಕ್ಕೆ ತಲುಪಿ ಅಲ್ಲಿ ಇಬ್ಬರೂ ಪಂಚರಾದ 1) ದಂಡಪ್ಪ ತಂದೆ ಹಣಮಂತ ದಾಸರ ವ:34 ಜಾ:ಕಬ್ಬಲಿಗ 2) ಸಾಬಯ್ಯ ತಂದೆ ಯಂಕಪ್ಪ ಆಶನಾಳದವರ ವ:31 ವರ್ಷ ಜಾ:ಬೇಡರ ಸಾ:ಇಬ್ಬರೂ ಮುಂಡರಗಿ.ಇವರಿಗೆ ಬರಮಾಡಿಕೊಂಡು ಮಟಕಾ ಜೂಜಾಟದ ಮಾಹಿತಿಯ ಬಗ್ಗೆ ತಿಳಿಸಿ, ಬಸ್ ನಿಲ್ದಾಣ ಹತ್ತಿರ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತು ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಗೆಲ್ಲುತ್ತಿರಿ ಎಂದು ಕೂಗಾಡುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಕರೆಯುತ್ತಿದ್ದನು ಮತ್ತು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನು, ಆಗ ನಾವೆಲ್ಲರೂ ಕೂಡಿ ಒಮ್ಮೆಲೆ ದಾಳಿ ಮಾಡಿ ಮುಂಜಾನೆ 09:30 ಗಂಟೆಗೆ ಅವನನ್ನು ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಯಮನಪ್ಪ ತಂದೆ ಸಾಬಣ್ಣ ದಾಸರ ವ:31 ವರ್ಷ ಜಾ:ಕಬ್ಬಲಿಗ ಸಾ:ಮುಂಡರಗಿ ಅಂತಾ ತಿಳಿಸಿದನು. ಅವನ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 500/ ರೂ ನಗದು ಹಣ, ಎರಡು ಮಟಕಾ ನಂಬರ ಬರೆದ ಚೀಟಿ ಮತ್ತು ಒಂದು ಬಾಲಪೆನ್ನ ಹಾಗೂ ಎರಡು ಮೋಬೈಲ್ ಫೋನ್ಗಳು ಅ.ಕಿ.1200/- ಸಿಕ್ಕಿದ್ದು ಸದರಿಯವುಗಳ ಐ.ಎಮ್.ಇ.ಐ. 862044053065459/22& 862044053065442/22 ಅಂತಾ ಇರುತ್ತದೆ ಅವುಗಳನ್ನು ಪಂಚರ ಸಮಕ್ಷಮ ನಮ್ಮ ವಶಕ್ಕೆ ಪಡೆದುಕೊಂಡೆನು, ಈ ಎಲ್ಲಾ ಹಣ ಮತ್ತು ಮಟಕಾ ನಂಬರುಗಳು ಯಾರಿಗೆ ಕೊಡುತ್ತಿ ಅಂತಾ ಕೇಳಿದಾಗ ಅವನು ಇವುಗಳನ್ನು ವಿಶ್ವರಾಧ್ಯ ಸ್ವಾಮಿ ಸಾ:ಕಲಬುಗರ್ಿ ಮತ್ತು ದುರ್ಗಪ್ಪ ತಂದೆ ಚಂದ್ರಮ ವ:32 ವರ್ಷ ಜಾ:ಕಬ್ಬಲಿಗ ಸಾ:ಅಲ್ಲೂರ (ಕೆ).ಇವರುಗಳಿಗೆ ಕೊಡುವುದಾಗಿ ತಿಳಿಸಿದನು. ಸದರಿ ವ್ಯಕ್ತಿಗಳಿಗೆ ನೀಡಿದ ಬಗ್ಗೆ ಆರೊಪಿತನ ಮೋಬೈಲ್ನಲ್ಲಿ ಸಂದೇಶಗಳು ಇವೆ. ಈ ಸವಿಸ್ತಾರವಾದ ಪಂಚನಾಮೆಯನ್ನು ಮುಂಜಾನೆ 09:30 ಗಂಟೆಯಿಂದ 10:30 ಗಂಟೆಯವರೆಗೆ ಮಾಡಿಕೊಂಡು ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ ಮುಂಜಾನೆ 11:00 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ಎಸ್.ಎಚ್.ಓ. ರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿಯವನ ವಿರುಧ ಕಲಂ 78(3) ಕೆ.ಪಿ. ಆ್ಯಕ್ಟ ತಿದ್ದುಪಡಿ 2021 ರ ಪ್ರಕಾರ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ ಅಂತಾ ನಿಡಿದ ವರದಿ ಆಧಾರದ ಮೇಲಿಂದ . ಠಾಣಾ ಗುನ್ನೆ 144/2021 ಕಲಂ 78(3) ಕೆ.ಪಿ. ಆ್ಯಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 30-10-2021 10:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080