Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 25-01-2022

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:- 02/2022 ಕಲಂ 279, 338, 304(ಎ) ಐಪಿಸಿ;- ದಿನಾಂಕ 20/01/2022 ರಂದು ಬೆಳಿಗ್ಗೆ 9-30 ಎ.ಎಂ.ಕ್ಕೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಯಾದಗಿರಿ ನಗರದ ಶುಭಂ ಪೆಟ್ರೋಲ್ ಬಂಕ್ ಹತ್ತಿರ, ಈ ಕೇಸಿನ ಗಾಯಾಳು ಸೂಗಪ್ಪ ತಂದೆ ಬಸಪ್ಪ ದೊರಿ ವಯ;55 ವರ್ಷ, ಜಾ;ಬೇಡರು, ಉ;ಒಕ್ಕುಲುತನ, ಸಾ;ಹಿರೇ ಬೂದುರು, ತಾ;ದೇವದುರ್ಗ, ಜಿ;ರಾಯಚೂರು ಈತನು ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದಾಗ ಲಾರಿ ಕಂಟೆನೆರ್ ವಾಹನ ನಂ.ಎನ್.ಎಲ್-01, ಎಸಿ-2028 ನೇದ್ದರ ಚಾಲಕ ಖಾದಿರಖಾನ್ ತಂದೆ ರಿಸಾದಖಾನ್ ಸಾ;ಧರ್ಮಶಾಲಾ ರಾಜಸ್ಥಾನ ಈತನು ತನ್ನ ಲಾರಿಯನ್ನು ಗಂಜ್ ಕಡೆಯಿಂದ ಹೊಸ ಬಸ್ ನಿಲ್ದಾಣದ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಡಿಕ್ಕಿಹೊಡೆದು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ಗಾಯಾಳುವಿಗೆ ತಲೆಗೆ ಭಾರೀ ಗುಪ್ತಗಾಯ ಹಾಗೂ ಎಡಕಿವಿಯ ಹತ್ತಿರ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ ಲಾರಿ ಚಾಲಕನ ಮೇಲೆ ಕ್ರಮ ಜರುಗಿಸುವ ಬಗ್ಗೆ ಪಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 02/2022 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ದಿನಾಂಕ 24/01/2022 ರಂದು ಸದರಿ ಪ್ರಕರಣದಲ್ಲಿ ರಾಯಚೂರಿನ ಬಾಲಂಕು ಆಸ್ಪತ್ರೆಯಿಂದ ಡೆತ್ ಎಮ್.ಎಲ್.ಸಿ ಮಾಹಿತಿ ಮೇರೆಗೆ ಬಾಲಂಕು ಆಸ್ಪತ್ರೆಗೆ ಬೇಟಿ ನೀಡಿದ್ದು, ಸದರಿ ಪ್ರಕರಣದಲ್ಲಿ ಮೃತನ ಹೆಂಡತಿಯವರು ತಮ್ಮದೊಂದು ಪುರವಣಿ ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ ಈ ಕೇಸಿನ ಗಾಯಾಳು ತನ್ನ ಗಮಡ ಸೂಗಪ್ಪ ಈತನಿಗೆ ದಿನಾಂಕ 20/01/2021 ರಂದು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರು ಹೆಚ್ಚಿನ ಉಪಚಾರಕ್ಕಾಗಿ ಅದೇ ದಿವಸ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಿದ್ದರಿಂದ ಗಾಯಾಳು ನನ್ನ ಗಂಡ ಸೂಗಪ್ಪ ಈತನಿಗೆ ಈತನಿಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು ಇರುತ್ತದೆ. ನಂತರ ರಿಮ್ಸ್ ಆಸ್ಪತ್ರೆಯಿಂದ ರಾಯಚೂರಿನ ಬಾಲಂಕು ಆಸ್ಪತ್ರೆಗೆ ಹೆಚ್ಚಿನ ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು ದಿನಾಂಕ 21/01/2022 ರಿಂದ ದಿನಾಂಕ 23/01/2022 ರ ವರೆಗೆ ಬಾಲಂಕು ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೇ ರಸ್ತೆ ಅಪಘಾತದಲ್ಲಾದ ಗಾಯದ ಭಾದೆಯಿಂದ ನಿನ್ನೆ ದಿನಾಂಕ 23/01/2022 ರಂದು ರಾತ್ರಿ 10-50 ಪಿ.ಎಂ.ಕ್ಕೆ ಎ.ಎಂ.ಕ್ಕೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಮುಂದಿನ ಕ್ರಮ ಜರುಗಿಸಿರಿ ಅಂತಾ ಪುರವಣಿ ಹೇಳಿಕೆ ಸಾರಾಂಶದ ಮೇಲಿಂದ ಸದರಿ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಂಡು ಕ್ರಮ ಕೊಂಡಿದ್ದು ಇರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ:- ಕಲಂ 78(3) ಕೆ.ಪಿ ಎಕ್ಟ್ 1963;- ದಿನಾಂಕ.24/01/2022 ರಂದು 6-40 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ (ಕಾ.ಸು)ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ವರದಿ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 24/01/2022 ರಂದು 4-00 ಪಿಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಗಾಂಧಿನಗರ ತಾಂಡಾ ಕ್ರಾಸಿನಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬನು ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ವಿಠೋಬಾ ಎ.ಎಸ್.ಐ ಹಾಗೂ ನಮ್ಮ ಸಿಬ್ಬಂದಿಯವರಾದ ಜಗನ್ನಾಥರೆಡ್ಡಿ ಹೆಚ್.ಸಿ. 10, ಅಬ್ದುಲ ಬಾಷಾ ಪಿಸಿ-237, ಸಾಬರೆಡ್ಡಿ ಪಿಸಿ-379 ರವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಹೋಗಿ 5-20 ಪಿಎಂಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಮನೋಜ ತಂ. ರಾಮು ರಾಠೋಡ ವಃ 46 ಜಾಃ ಲಂಬಾಣಿ ಉಃ ಖಾಸಗಿಕೆಲಸ ಸಾಃ ಗಾಂಧಿ ನಗರ ತಾಂಡಾ ಯಾದಗಿರಿ ಅಂತಾ ತಿಳಿಸಿದ್ದು ನಂತರ ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ 1) ನಗದು ಹಣ 15000/- 2) ಒಂದು ಮಟಕಾ ಅಂಕಿಬರೆದ ಚಿಟಿ ಅ.ಕಿ.00=00 3) ಒಂದು ಬಾಲಪೆನ್ ಅ.ಕಿ.00=00, ಸಿಕ್ಕಿದ್ದು ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ.24/01/2022 ರಂದು 5-20 ಪಿಎಂ ದಿಂದ 6-20 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟಾಪದಲ್ಲಿ ಗಣಕೀಕರಣ ಮಾಡಿ ಮುಗಿಸಿದ್ದು ನಂತರ ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತನೊಂದಿಗೆ ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ 6-40 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾದಿಕಾರಿರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿತನ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.18/2022 ಕಲಂ. 78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ;- ಗುನ್ನೆ ನಂ: 15/2022 ಕಲಂ: 78() ಕೆ.ಪಿ. ಆಕ್ಟ್ ;- ಇಂದು ದಿನಾಂಕ 24.01.2011 ರಂದು ಬೆಳಿಗ್ಗೆ 10:00 ಗಂಟೆಗೆ ಗುರುಮಠಕಲ್ ಪಟ್ಟಣದ ಕಾಕಲವಾರ ಕ್ರಾಸ್ ಹತ್ತಿರ ರೋಡಿನ ಮೇಲೆ ಒಬ್ಬ ಆರೋಪಿತನು ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಖಾಜಾ ಹುಸೇನ್ ಪಿ.ಐ ರವರು ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಸಮಯ ಬೆಳಿಗ್ಗೆ 10:00 ಗಂಟೆಗೆ ದಾಳಿ ಮಾಡಿ ಆರೋಪಿತನ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 2520/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ದಿನಾಂಕ 24.01.2022 ರಂದು ಸಮಯ ಬೆಳಿಗ್ಗೆ 11:30 ಗಂಟಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿ ವರದಿ ನೀಡಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಠಾಣೆ ಗುನ್ನೆ ನಂಬರ 15/2022 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ;- ಗುನ್ನೆ ನಂ: 16/2022 ಕಲಂ: 78() ಕೆ.ಪಿ. ಆಕ್ಟ್ ;- ದಿನಾಂಕ 24.01.2022 ರಂದು ಮಧ್ಯಾಹ್ನ 02:00 ಗಂಟೆಗೆ ಗುರುಮಠಕಲ್ ಪಟ್ಟಣದ ಗಡಿಮೊಹಲ್ಲಾದಲ್ಲಿ ಪೋಸ್ಟ್ ಆಫೀಸ್ನ ಮುಂದಿನ ರೋಡಿನ ಮೇಲೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಒಬ್ಬ ಆರೋಪಿತನು ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶಿವಲಿಂಗಪ್ಪ ಪಿ.ಎಸ್.ಐ ರವರು ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಸಮಯ ಮಧ್ಯಾಹ್ನ 2:30 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ಹಿಡಿದು ಆತನ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಆತ ತನ್ನ ಹೆಸರು ಸಯ್ಯದ ಮೈನೋದ್ದಿನ ತಂದೆ ಸಯ್ಯದ ಪೀರ ಹೈಮದ್ ವ||44 ವರ್ಷ ಜಾ||ಮುಸ್ಲಿಂ ಉ||ಹೊಟೆಲ್ ಕೆಲಸ ಸಾ||ಗಡಿಮೊಹಲ್ಲಾ ಗುರುಮಠಕಲ್ ಜಿ||ಯಾದಗಿರ ತಿಳಿಸಿದ್ದರಿಂದ ಆತನಿಂದ ವಶಕ್ಕೆ ತೆಗೆದುಕೊಂಡು ಆತನ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 2400/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ದಿನಾಂಕ 24.01.2022 ರಂದು ಸಮಯ ಮಧ್ಯಾಹ್ನ 03:45 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಠಾಣೆ ಗುನ್ನೆ ನಂಬರ 16/2021 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ;- ಗುನ್ನೆ ನಂ. 17/2022 ಕಲಂ: 273, 284 ಐಪಿಸಿ ಮತ್ತು 32, 34 ಕೆಇ ಆಕ್ಟ್;- ದಿನಾಂಕ: 24.01.2022 ರಂದು ಪಿಐ ಸಾಹೇಬರು ಮತ್ತು ಸಿಬ್ಬಂದಿಯವರು ಠಾಣೆಯಲ್ಲಿದ್ದಾಗ ಆರೋಪಿನಾದ ರಾಮು ತಂದೆ ನರಸಿಂಗ ಕಲಾಲ ಸಾ: ಕಂದಕೂರ ಗ್ರಾಮ ಈತನು ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹೆಂಡ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಐ ಸಾಹೇಬರು ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿ ಓಡಿ ಹೋಗಿದ್ದು ಮಸಾಲಿ ಚೀಲದಲ್ಲಿಯ ಪ್ಲಾಸ್ಟೀಕ್ ಪಾಕೆಟ್ಗಳಲ್ಲಿ ಕಟ್ಟಿದ 30 ಲೀಟರ ಹೆಂಡವನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಓಡಿ ಹೋದ ಸದರಿ ಆರೋಪಿತನ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದ ಅದರ ಸಾರಾಂಶದ ಮೇಲಿಂದ ಪ್ರಕರಣದ ದಾಖಲಿಸಿಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ;- ಗುನ್ನೆ ನಂ: 18/2022 ಕಲಂ: 78() ಕೆ.ಪಿ. ಆಠ್ಟಿ್;- ದಿನಾಂಕ 24.01.2022 ರಂದು ಸಂಜೆ 4:50 ಗಂಟೆಗೆ ರಾಂಪೂರ ಗ್ರಾಮದ ಅಂಗನವಾಡಿ ಶಾಲೆಯ ಮುಂದಿನ ರೋಡಿನ ಮೇಲೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಇಬ್ಬರು ಆರೋಪಿತರು ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿದ್ದಣ್ಣ ಪಿ.ಎಸ್.ಐ ರವರು ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಸಮಯ ಸಂಜೆ 6:00 ಗಂಟೆಗೆ ದಾಳಿ ಮಾಡಿ ಇಬ್ಬರು ಆರೋಪಿತರನ್ನು ಹಿಡಿದು ಅವರ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 2120/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ದಿನಾಂಕ 24.01.2022 ರಂದು ಸಮಯ ಸಂಜೆ 7:45 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಠಾಣೆ ಗುನ್ನೆ ನಂಬರ 18/2021 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ;- ಗುನ್ನೆ ಸಂಖ್ಯೆ 15/2022 ಕಲಂ 78(3) ಕೆ.ಪಿ ಕಾಯ್ದೆ;- ದಿನಾಂಕ: 24.01.2022 ರಂದು ಸಾಯಂಕಾಲ 6 ಗಂಟೆಗೆ ವಿಜಯಕುಮಾರ ಪಿಐ ಸಾಹೇಬ ಸೈದಾಪುರ ಪೊಲೀಸ್ ಠಾಣೆ ರವರು ಸ್ಥಳಿಯ ಸ್ಟೇಷನ್ ಸೈದಾಪುರದ ರೇಣುಕಾ ವೈನ್ಶಾಪ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ ಇಬ್ಬರೂ ಆಪಾದಿತರನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದೊಂದಿಗೆ ಜಪ್ತಿ ಪಂಚನಾಮೆ, ಆಪಾದಿತರು ಮತ್ತು ಮುದ್ದೆಮಾಲು ನನಗೆ ಒಪ್ಪಿಸಿದರು. ನಾನು ಬಸಪ್ಪ ಕುಂಬಾರ ಸಿ.ಹೆಚ್.ಸಿ-142 ಸೈದಾಪುರ ಠಾಣೆ ಠಾಣಾ ಗುನ್ನೆ ನಸಂಖ್ಯೆ 15/2022 ಕಲಂ 78(3) ಕನರ್ಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 18/2022 ಕಲಂ ಮಹಿಳೆ ಕ್ಫಣೆ;- ದಿನಾಂಕ 24/01/2022 ರಂದು 4.00 ಪಿ ಎಮ್ ಕ್ಕೆ ಪಿಯರ್ಾದಿ ಶ್ರೀಮತಿ ಮಂಜುಳಾ ಗಂ. ಮಲ್ಲಣ್ಣ ವಿಶ್ವಕರ್ಮ ವ|| 55 ವರ್ಷ ಜಾ|| ಹಿಂದು ವಿಶ್ವಕರ್ಮ ಉ|| ಕೂಲಿಕೆಲಸ ಸಾ|| ಇಬ್ರಾಹಿಂಪೂರ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 23/01/2022 ರಂದು ರಾತ್ರಿ 10.00 ಗಂಟೆಗೆ ಎಲ್ಲರೂ ಊಟ ಮಾಡಿ ಮಲಗಿದೇವು ನಂತರ ನನ್ನ 3ನೇ ಮಗಳಾದ ಭಾಗ್ಯಶ್ರೀ ಇವಳು ರಾತ್ರಿ 1.30 ಗಂಟೆಗೆ ಎದ್ದು ನಾನು ಸಂಡಾಸಕ್ಕೆ ಹೋಗಿ ಬರುತ್ತೇನೆ ಎಂದು ಹೋದಳು ಸ್ವಲ್ಪ ಸಮಯ ಬಿಟ್ಟು ನಾನೂ ಕೂಡಾ ಅವಳ ಹಿಂದೆ ಹೋಗಿ ನೋಡಲಾಗಿ ನನ್ನ ಮಗಳು ಕಾಣಲಿಲ್ಲ ನಾನು ಸಂಡಾಸಕ್ಕೆ ಹೋಗುವ ಜಾಗದ ಹತ್ತಿರ ಹುಡುಕಾಡಲಾಗಿ ಎಲ್ಲಿಯೂ ನನ್ನ ಮಗಳು ಕಾಣಲಿಲ್ಲ ನಂತರ ಮನೆಗೆ ಬಂದು ನನ್ನ ಮಕ್ಕಳಾದ ಶ್ರೀದೇವಿ ಮತ್ತು ಅಶ್ವಿನಿ ಇವರಿಗೆ ಕರೆದುಕೊಂಡು ಎಲ್ಲಾಕಡೆ ಕತ್ತಲಲ್ಲಿ ಹುಡುಕಾಡಲಾಗಿ ನನ್ನ ಮಗಳು ಕಾಣಲಿಲ್ಲ ಬೆಳಗಿನ ಜಾವಕೂಡಾ ಹುಡುಕಾಡಿ ನಮ್ಮ ಸಂಬಂದಿಕರು ಇರುವ ಊರುಗಳಿಗೆ ಪೋನ ಹಚ್ಚಿ ಕೇಳಿ ಹುಡುಕಾಡಲಾಗಿ ಎಲ್ಲಿಯೂ ನನ್ನ ಮಗಳ ಇರುವಿಕೆ ಬಗ್ಗೆ ಮಾಹಿತಿ ಗೊತ್ತಾಗಲಿಲ್ಲ್ಲ. ಕಾರಣ ನನ್ನ ಮಗಳಾದ ಕುಮಾರಿ ಭಾಗ್ಯಶ್ರೀ ತಂ. ಮಲ್ಲಣ್ಣ ವಿಶ್ವಕರ್ಮ ವ|| 20 ವರ್ಷ ಜಾ|| ಹಿಂದು ವಿಶ್ವಕರ್ಮ ಉ|| ಮನೆಕೆಲಸ ಸಾ|| ಇಬ್ರಾಹಿಂಪೂರ ತಾ|| ಶಹಾಪೂರ ಇವಳನ್ನು ನಮ್ಮ ಸಂಬಂದಿಕರು ಇರುವ ಊರುಗಳಲ್ಲಿ ವಿಚಾರಿಸಿ ಹುಡುಕಾಡಿ ತಡವಾಗಿ ಠಾಣೆಗೆ ಬಂದು ಪಿಯರ್ಾದಿ ನೀಡುತ್ತಿದ್ದು ಕಾಣೆಯಾದ ನನ್ನ ಮಗಳ ಮೇಲೆ ಕಾನೂನು ಕ್ರಮ ಜರುಗಿಸಿ ಪತ್ತೆ ಮಾಡಿಕೊಡಲು ವಿನಂತಿ.
ಕಾಣೆಯಾದ ನನ್ನ ಮಗ ಚಹರೆ ಪಟ್ಟಿ ಈ ಕೇಳಗಿನಂತಿರುತ್ತವೆ.
ಹೆಸರು ಃ- ಕುಮಾರಿ ಭಾಗ್ಯಶ್ರೀ ತಂ. ಮಲ್ಲಣ್ಣ ವಿಶ್ವಕರ್ಮ
ವಯಸ್ಸು ಃ- 20
ಬಣ್ಣ ಃ- ಸಾದಕೆಂಪು ಬಣ್ಣ
ಎತ್ತರ ಃ- 4.8 ಫೀಟ್ ಇದ್ದು.
ಭಾಷೆ ಃ- ಕನ್ನಡ
ಧರಿಸಿದ ಬಟ್ಟೆ ಃ- ಒಂದು ಕೆಂಪು ನೈಟಿ
ಸದರಿ ಕಾಣೆಯಾದ ಮಗಳನ್ನು ಹುಡುಕಿಕೊಡಬೇಕೆಂದು ವಿನಂತಿ. ಅಂತ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 18/2022 ಕಲಂ ಮಹಿಳೆ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಕೊಡೆಕಲ್ಲ ಪೊಲೀಸ್ ಠಾಣೆ;- ಗುನ್ನೆ ನಂ. 08/2022 ಕಲಂ: 78(3) ಕೆ.ಪಿ ಆಠ್ಟಿ್;- ದಿನಾಂಕ:24.01.2022 ರಂದು ಮಧ್ಯಾಹ್ನ 12:30 ಗಂಟೆಗೆ ಸರಕಾರಿ ತಪರ್ೆ ಶ್ರೀ ಕೃಷ್ಣಮೂತರ್ಿ ಪಿಎಸ್ಐ (ತನಿಖೆ) ಸಾಹೇಬರು ಕೊಡೆಕಲ್ಲ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರವನ್ನು ನೀಡಿದ್ದು ಅದರ ಸಾರಾಂಶ ಏನೆಂದರೆ ನಾನು ಇಂದು ದಿನಾಂಕ:24/01/2022 ರಂದು ಬೆಳಿಗ್ಗೆ 10:00 ಗಂಟೆಗೆ ನಾನು ಕೊಡೆಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಕಕ್ಕೇರಾ ಉಪಠಾಣೆಯ ಸಿಬ್ಬಂದಿಯಾದ ಸಂಗನಗೌಡ ಹೆಚ್ಸಿ-16 ರವರು ಠಾಣೆಗೆ ಬಂದು ತಿಳಿಸಿದ್ದೆನೆಂದರೆ ಹಿರೇಹಳ್ಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇರುವ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಿದ್ದು, ಠಾಣೆಯ ಯಲ್ಲಪ್ಪ ಹೆಚ್ಸಿ-117 ರವರಿಗೆ ದಾಳಿ ಕುರಿತು ಇಬ್ಬರು ಪಂಚರಿಗೆ ಕರೆದುಕೊಂಡು ಬರಲು ತಿಳಿಸಿದ್ದು ಸದರಿ ಹೆಚ್ಸಿ ರವರು ಪಂಚರನ್ನಾಗಿ 1) ಶ್ರೀ.ಸಂಗಪ್ಪ ತಂದೆ ಬಸಪ್ಪ ಮಂಟೆ ವಯಾ-40 ಜಾ:ಹಿಂದೂ ನೇಕಾರ ಉ:ಚಾಲಕ ಸಾ:ಕೊಡೆಕಲ್ಲ ತಾ:ಹುಣಸಗಿ 2) ಶ್ರೀ.ಚಾಂದಪಾಶಾ ತಂದೆ ಮಿರಾಸಾಬ ಚೌದ್ರಿ ವಯಾ-23 ವರ್ಷ, ಜಾ:ಮುಸ್ಲಿಂ ಉ:ಚಿಕನ್ ಅಂಗಡಿ ಸಾ:ಕೊಡೆಕಲ್ಲ ತಾ:ಹುಣಸಗಿ ರವರಿಗೆ ಬೆಳಿಗ್ಗೆ 10:10 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು ನಾನು ಪಂಚರಿಗೆ ವಿಷಯ ತಿಳಿಸಿದ್ದು ಪಂಚರು ದಾಳಿ ಕಾಲಕ್ಕೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಒಪ್ಪಿಕೊಂಡಿದ್ದು ನಂತರ ಪಂಚರು ಮತ್ತು ಸಿಬ್ಬಂದಿಯವರಾದ ಯಲ್ಲಪ್ಪ ಹೆಚ್ಸಿ-117, ಸಂಗನಗೌಡ ಹೆಚ್ಸಿ-16, ಬಸೆಟ್ಟೆಪ್ಪ ಪಿಸಿ-110, ಬಸವರಾಜ ಪಿಸಿ-76 ರವರೊಂದಿಗೆ ಸರಕಾರಿ ಜೀಪ್ ನಂ:ಕೆಎ-33 ಜಿ-0165 ವಾಹನದಲ್ಲಿ ಕುಳಿತುಕೊಂಡು ಠಾಣೆಯನ್ನು ಬೆಳಿಗ್ಗೆ 10:15 ಗಂಟೆಗೆ ಬಿಟ್ಟು 10:50 ಗಂಟೆಗೆ ಹಿರೇಹಳ್ಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗಿ ಜೀಪ್ನ್ನು ಮರೆಯಲ್ಲಿ ನಿಲ್ಲಿಸಿ ಅಲ್ಲಿಂದ ಎಲ್ಲರೂ ಇಳಿದು ನಡೆದುಕೊಂಡು ಸ್ವಲ್ಪ ಮುಂದೆ ಹೋಗಿ, ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿಯು ಬಸ್ ನಿಲ್ದಾಣದ ಹತ್ತಿರ ಕಕ್ಕೇರಾ ಕಡೆಗೆ ಹೋಗುವ ರಸ್ತೆಯ ಮೇಲೆ ನಿಂತು ಹೋಗಿ ಬರುವ ಜನರಿಗೆ ಕರೆದು ಇದು ಕಲ್ಯಾಣಿ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ 80 ರೂಪಾಯಿ ಬರುತ್ತದೆ ಅದೃಷ್ಟ ಇದ್ದವರು ನಂಬರ ಬರೆಯಿಸಿ ಹಣ ಪಡೆದುಕೊಳ್ಳಿ ಅಂತಾ ಅನ್ನುತ್ತಾ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರವುಳ್ಳ ಚೀಟಿಗಳನ್ನು ಬರೆದುಕೊಡುವದನ್ನು 10:55 ಗಂಟೆಗೆ ಖಚಿತಪಡಿಸಿಕೊಂಡು ಪಿಎಸ್ಐ ಸಾಹೇಬರು ಹಾಗೂ ಎಲ್ಲಾ ಪೊಲೀಸರು ಕೂಡಿ ನಮ್ಮ ಸಮಕ್ಷಮದಲ್ಲಿ ಒಮ್ಮೇಲೆ ದಾಳಿ ಮಾಡಿ ಸದರಿ ವ್ಯಕ್ತಿಗೆ ಹಿಡಿದಿದ್ದು, ಪಿಎಸ್ಐ ಸಾಹೇಬರು ನಮಗೆ ಕರೆದು ನಮ್ಮ ಸಮಕ್ಷಮದಲ್ಲಿ ಸದರಿ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಿದ್ದು, ಅವನು ತನ್ನ ಹೆಸರು ಸಂಗಪ್ಪ ತಂದೆ ರಾಮಯ್ಯ ಹುಲಸೂರ ವಯಾ-58 ವರ್ಷ, ಜಾ:ಹಿಂದೂ ಕುರುಬರ ಉ:ಕಿರಾಣಿ ಅಂಗಡಿ ವ್ಯಾಪಾರ ಸಾ:ಹಿರೇಹಳ್ಳ ತಾ:ಸುರಪೂರ ಜಿ:ಯಾದಗಿರ ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ 1320-00ರೂ ನಗದು ಹಣ, 1 ಮಟಕಾ ನಂಬರ ಬರೆದ ಚೀಟಿ, ಒಂದು ಬಾಲಪೆನ್ನ ದೊರೆತಿದ್ದು, ಪಿಎಸ್ಐ ಸಾಹೇಬರು ಸದರಿ 3 ವಸ್ತುಗಳನ್ನು ಕೇಸಿನ ಮುಂದಿನ ಪುರಾವೆಗೆಂದು ಜಪ್ತಿ ಮಾಡಿಕೊಂಡು ಒಂದು ಕಾಗದದ ಪಾಕೇಟ್ನಲ್ಲಿ ಹಾಕಿ ಶೀಲ್ ಮಾಡಿ ತಮ್ಮ ಹಾಗೂ ನಮ್ಮ ಸಹಿ ಮಾಡಿದ ನಿಶಾನೆ ಚೀಟಿ ಅಂಟಿಸಿ ತಮ್ಮ ವಶಕ್ಕೆ ಪಡೆದುಕೊಂಡರು. ಸದರಿಯವನಿಗೆ ವಿಚಾರಿಸಲಾಗಿ ಸದರಿಯವನು ಈ ಹಣ ಮಟಕಾ ನಂಬರ್ ಬರೆಯಿಸುವವರಿಂದ ಹಣ ಪಡೆದು ಚೀಟಿ ಬರೆದು ಕೊಟ್ಟಿದ್ದರಿಂದ ಬಂದಿರುವದಾಗಿ ತಿಳಿಸಿದ್ದು ಸದರಿಯವನು ಕಲ್ಯಾಣ ಮಟಕಾ ಎಂಬುವ ಓಪನಿಂಗ್ ಮತ್ತು ಕ್ಲೋಸಿಂಗ್ ಆಟ ಆಡುತ್ತಿದ್ದುದು ಖಚಿತಪಟ್ಟಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ:24/01/2022 ರಂದು 10:55 ಗಂಟೆಯಿಂದ 11:55 ಗಂಟೆಯ ವರೆಗೆ ಪೂರೈಸಿದ್ದು ನಂತರ ಸದರಿ ಮಟಕಾ ಬರೆದುಕೊಳ್ಳುತ್ತಿದ್ದ ಸಂಗಪ್ಪ ತಂದೆ ರಾಮಯ್ಯ ಹುಲಸೂರ ವಯಾ-58 ವರ್ಷ, ಜಾ:ಹಿಂದೂ ಕುರುಬರ ಉ:ಕಿರಾಣಿ ಅಂಗಡಿ ವ್ಯಾಪಾರ ಸಾ:ಹಿರೇಹಳ್ಳ ತಾ:ಸುರಪೂರ ಜಿ:ಯಾದಗಿರ ಈತನನ್ನು ವಶಕ್ಕೆ ಪಡೆದುಕೊಂಡು ಸಿಬ್ಬಂದಿಯೊಂದಿಗೆ ಮರಳಿ ಕೊಡೆಕಲ್ಲ ಠಾಣೆಗೆ 12:30 ಪಿಎಮ್ ಗಂಟೆಗೆ ಬಂದಿದ್ದು, ಠಾಣೆಯಲ್ಲಿ ಆರೋಪಿತನ ವಿರುದ್ದ ವರದಿಯನ್ನು ತಯಾರಿಸಿ ಆರೋಪಿ & ಮೂಲ ಜಪ್ತಿ ಪಂಚನಾಮೆ, ಮುದ್ದೇಮಾಲು ಹಾಜರಪಡಿಸಿ ಸರಕಾರದ ಪರವಾಗಿ ಮಧ್ಯಾಹ್ನ 12:45 ಗಂಟೆಗೆ ವರದಿ ಸಲ್ಲಿಸಿರುತ್ತೇನೆ. ಸದರಿ ಆರೋಪಿತನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೊಡೆಕಲ್ಲ ಪೊಲೀಸ್ ಠಾಣಾ ಗುನ್ನೆ ನಂ:08/2022 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.

Last Updated: 25-01-2022 11:14 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080