Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/02/2021

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 25/2021 ಕಲಂ 87 ಕೆ.ಪಿ ಆಕ್ಟ : ಇಂದು ದಿನಾಂಕ 04/02/2021 ಬೆಳಿಗ್ಗೆ 10-40 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ವೆಂಕಟೇಶ್ ಪೊಲೀಸ್ ಉಪ-ಅಧೀಕ್ಷಕರು ಸುರಪೂರ ಉಪ ವಿಭಾಗ ಸುರಪೂರ ಇವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದೆನೆಂದರೆ, ನಾನು ಇಂದು ದಿನಾಂಕ: 04/02/2021 ರಂದು, ಸಬ್ ಡಿವಿಜನ್ ಎನ್.ಆರ್.ಸಿ. ಕರ್ತವ್ಯ ಮುಗಿಸಿ, ಸುರಪೂರ ಉಪವಿಭಾಗದಿಂದ ಪೇಟ್ರೋಲಿಂಗ ಕುರಿತು ಶಹಾಪೂರಕ್ಕೆ ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ಬಂದಾಗ ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹತ್ತಿಗುಡೂರ-ನಂದಳ್ಳಿ ರಸ್ತೆ ಪಕ್ಕದ ಹತ್ತಿಗುಡೂರ ಸಿಮಾಂತರದಲ್ಲಿ ಕೆಲವು ಜನರು ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ ಜೂಜಾಟವಾಡುತ್ತಿದ್ದಾರೆ ಅಂತ ಮಾಹಿತಿ ಬಂದಿದ್ದು, ಸದರಿ ಮಾಹಿತಿಯು ಖಚಿತ ಪಡಿಸಿಕೊಂಡು, ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ, ಶಹಾಪೂರ ಪೊಲೀಸ್ ಠಾಣೆಗೆ ಬಂದು, ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಪೂರ ರವರಿಗೆ ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡ ಮೆರೆಗೆ, ಮಾನ್ಯ ನ್ಯಾಯಾಲಯವು ಅನುಮತಿ ನೀಡಿರುತ್ತಾರೆ. ಕಾರಣ ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಡಲಾಗಿದೆ. ಅಂತ ಜ್ಞಾಪನ ಪತ್ರ ನೀಡಿದ ಪ್ರಕಾರ ಠಾಣೆ ಗುನ್ನೆ ನಂಬರ 25/2021 ಕಲಂ 87 ಕೆ.ಪಿ ಆಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಳ್ಳಲಾಗಿದೆ. ಸ||ತ|| ಪಿಯರ್ಾದಿಯವರು ನಂತರ ದಾಳಿ ಮಾಡಿ ಜೂಜಾಟ ಆಡುತಿದ್ದ 5 ಜನ ಆರೋಪಿತರನ್ನು ಹಿಡಿದು ಅವರಿಂದ ನಗದು ಹಣ 18300=00 ರೂಪಾಯಿಗಳನ್ನು ಹಾಗೂ ಜೂಜಾಟಕ್ಕೆ ಬಳಸಿದ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ :-. 20/2021 ಕಲಂ: 87 ಕೆ.ಪಿ ಎಕ್ಟ್ : ಇಂದು ದಿನಾಂಕ: 04/02/2021 ರಂದು 7-50 ಪಿಎಮ್ ಕ್ಕೆ ಶ್ರೀ ಎಮ್.ಡಿ ಅಜೀಜ್ ಪಿ.ಎಸ್.ಐ (ಅವಿ) ರವರು ಪೊಲೀಸ್ ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದೇನಂದರೆ ನಾನು ಇಂದು ದಿನಾಂಕ: 04/02/2021 ರಂದು ನಾನು ಮತ್ತು ಸಿಬ್ಬಂದಿಯವರು ಠಾಣೆಯಲ್ಲಿ ಇದ್ದಾಗ ನನಗೆ ಖಚಿತ ಮಾಹಿತಿ ಬಂದಿದ್ದೇನಂದರೆ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಶಂಕರಬಂಡಾ ಸೀಮಾಂತರದಲ್ಲಿ ಬರುವ ಸರಕಾರಿ ಗೈರಾಣ ಹಳ್ಳದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಸದರಿ ಜೂಜುಕೋರರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಪತ್ರದ ಮೂಲಕ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡ ಲಗತ್ತಿಸಲಾಗಿದೆ ಎಂದು ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 20/2021 ಕಲಂ: 87 ಕೆಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 32/2021 ಕಲಂಃ 323,324,341,504,506 ಸಂ 34 ಐಪಿಸಿ : ದಿನಾಂಕ: 04/02/2021 ರಂದು 6-15 ಪಿ,ಎಂ ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ ಪಿಯರ್ಾದಿ ಶ್ರೀ ಹಣಮಂತ್ರಾಯ ತಂದೆ ಬೀಮರಾಯ ಚಟ್ನಿ ವಯಾ:38 ವರ್ಷ ಉ:ಅಟೋಡ್ರೈವರ ಜಾತಿ:ಬೇಡರ ಸಾ:ಮಲ್ಲಿಬಾವಿ ದಿನಾಂಕ:04-02-2021 ರಂದು ಬೆಳಿಗ್ಗೆ 09-30 ಗಂಟೆ ಸುಮಾರಿಗೆ ನಮ್ಮೂರ ಮಲ್ಲಿಬಾವಿಯಿಂದ ಸುರಪೂರಕ್ಕೆ ನಮ್ಮ ಅಟೋ ನಂಬರ ಕೆಎ-33, ಎ-3377 ನೇದ್ದರಲ್ಲಿ ನಮ್ಮೂರ ದುರ್ಗಪ್ಪ ತಂದೆ ಬೀಮರಾಯ ಗುಡ್ಡಕಾಯಿ, ದೇವಪ್ಪ ತಂದೆ ರಾಯಪ್ಪ ಕೊಡೆಸೂರ, ಶಿವಪ್ಪ ತಂದೆ ಅಯ್ಯಪ್ಪ ಮಂಗಿಹಾಳ ಇವರನ್ನು ಅಟೋದಲ್ಲಿ ಕೂಡಿಸಿಕೊಂಡು ಮಲ್ಲಿಬಾಯಿ-ಸುರಪೂರ ಮುಖ್ಯ ರಸ್ತೆಯ ಕರಿ ಸೌಳ ಹತ್ತಿರ 10 ಗಂಟೆ ಸುಮಾರಿಗೆ ಸುರಪೂರಕ್ಕೆ ಬರುತ್ತಿರುವಾಗ ನಮ್ಮೂರ ಬಲಬೀಮ ತಂದೆ ಹಣಮಂತ ಚಿಕ್ಕನಳ್ಳಿ ಈತನು ತನ್ನ ಹೊಸ ಸ್ಲೆಂಡರ ಪ್ಲಸ್ ಮೊಟಾರ ಸೈಕಲ್ನ್ನು ಚಲಾಯಿಸಿಕೊಂಡು ಬಂದವನೆ ನನ್ನ ಅಟೋಗೆ ಒಮ್ಮೆಲೆ ಕಟ್ಟ ಹೊಡೆದು ಬಾಜು ಸೈಡ್ ಹೊಡೆದು ಹೋಗುತ್ತಿರುವಾಗ ನಾನು ಅವನಿಗೆ ಯಾಕಪ್ಪ ಇಷ್ಟ ಬಾಜು ಸೈಡ ಹೊಡೆದು ಗಾಡಿ ಓಡಿಸ್ತಿಯಲ್ಲಾ ಏನಾದರೂ ಆಗಿ ಅಟೋದ ಒಳಗಡೆ ಆದರೆ ಏನ ಮಾಡೊದ ಅಂತಾ ಬುದ್ದಿ ಮಾತು ಹೇಳಿದಕ್ಕೆ ಅವನು ನನ್ನೊಂದಿಗೆ ತಕರಾರು ಊರಿ ಹೋಗಿದ್ದನು. ನಂತರ ನಾನು ಸುರಪೂರಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ ಮರಳಿ ಅಟೋ ತಗೆದುಕೊಂಡು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಮ್ಮೂರ ಬಲಬೀಮ ಇವರ ಮನೆಯ ಮುಂದಿನ ರಸ್ತೆಯ ಮುಖಾಂತರ ಹೋಗುತ್ತಿರುವಾಗ ಊರೊಳಗೆ ಹೋಗುತ್ತಿರುವಾಗ ಬಲಬೀಮ ತಂದೆ ಹಣಮಂತ ಚಿಕ್ಕನಳ್ಳಿ, ಹಾಗೂ ಬಲಬೀಮನ ತಂದೆಯಾದ ಹಣಮಂತ ಇಬ್ಬರು ಬಂದವರೆ ನನ್ನ ಅಟೋಗೆ ಅಡ್ಡಗಟ್ಟಿ ನಿಲ್ಲಿಸಿ ಕೆಳಗೆ ಇಳಿಯೋ ಮಗನೆ ನೀನು ಸುರಪೂರಕ್ಕೆ ಹೋಗುವಾಗ ನನಗೆ ಬೈಯುತ್ತಾ ಸುಳೆ ಮಗನೆ ಅಂತಾ ಅಂದವರೆ ಅವರಲ್ಲಿಯ ಬಲಬೀಮ ಈತನು ಅಲ್ಲೆ ಬಿದ್ದ ಒಂದು ಬಡಿಗೆಯಿಂದ ನನ್ನ ಬಲಗೈಗೆ ಮತ್ತು ಬಲ ಬುಜಕ್ಕೆ, ಬಲಗಡೆ ಪಕ್ಕಡಿಗೆ ಹೊಡೆದು ಗುಪ್ತಗಾಯಗೊಳಿದನು. ಹಣಮಂತ ಈತನು ಅಲ್ಲೆ ಬಿದ್ದ ಒಂದು ಕಲ್ಲಿನಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿದನು ಆಗ ಅದೇ ಸಮಯಕ್ಕೆ ಸುದ್ದಿ ಅಲ್ಲಿಗೆ ಬಂದು ಜಗಳ ಬಿಡಿಸಲು ಬಂದ ನನ್ನ ತಮ್ಮನ ಹೆಂಡತಿಯಾದ ನಾಗಮ್ಮ ಗಂಡ ಯಲ್ಲಪ್ಪ ಇವಳಿಗೆ ಬಲಬೀಮ ಈತನು ಒಂದು ಕಲ್ಲಿನಿಂದ ಅವಳ ಎಡಗೈಗೆ ಮತ್ತು ತಲೆಗೆ ಹೊಡೆದು ಗುಪ್ತಗಾಯಗೊಳಿಸಿ ಅವಾಚ್ಯ ಬೈಯುತ್ತಿರುವಾಗ ಆಗ ಅದೇ ಸಮಯಕ್ಕೆ ಸುರಪೂರದಿಂದ ಅಲ್ಲಿಗೆ ಬಂದ ದುರ್ಗಪ್ಪ ತಂದೆ ಬೀಮರಾಯ ಗುಡ್ಡಕಾಯಿ, ಹಾಗೂ ಗ್ರಾಮದ ಮಾನಪ್ಪ ತಂದೆ ಗೋಪಾಲಪ್ಪೆ ಬೇಟೆಗಾರ, ಯಂಕಪ್ಪ ತಂದೆ ನಾಗಪ್ಪ ಚಿಕ್ಕನಳ್ಳಿ ಇವರೆಲ್ಲರೂ ಜಗಳವನ್ನು ನೋಡಿ ಬಿಡಿಸಿದ್ದು ಇರುತ್ತದೆ. ಆಗ ಅವರಿಬ್ಬರು ಇನ್ನೊಮ್ಮೆ ನನ್ನ ತಂಟೆಗೆ ಬಂದರೆ ಮಕ್ಕಳೆ ನಿಮ್ಮ ಜೀವ ಹೊಡೆಯುತ್ತವೆ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋಗಿದ್ದು ಇರುತ್ತದೆ. ನಂತರ ಗಾಯಗೊಂಡ ನಾನು ನನ್ನ ಸೊಸೆ ನಾಗಮ್ಮ ಇಬ್ಬರು ಸರಕಾರಿ ಆಸ್ಪತ್ರೆ ಸುರಪೂರಕ್ಕೆ ಬಂದು ಉಪಚಾರ ಮಾಡಿಸಿ ಠಾಣೆಗೆ ಬಂದು ದೂರು ಅಜರ್ಿ ನಿಡಿದ್ದು ಇರುತ್ತದೆ. ನಮಗೆ ಹೊಡೆ ಬಡೆ ಮಾಡಿದ ಬಲಬೀಮ ಹಾಗೂ ಅವರ ತಂದೆಯಾದ ಹನಮಂತ ಚಿಕ್ಕನಳ್ಳಿ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 31/2021 ಕಲಂ: 78 () ಕೆ.ಪಿ. ಕಾಯ್ದೆ : ಇಂದು ದಿನಾಂಕ: 04/02/2021 ರಂದು 03 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಚಂದ್ರಶೇಖರ ಪಿಎಸ್ಐ(ಕಾ&ಸು-2) ಸಾಹೇಬರು ಒಬ್ಬ ಆರೋಪಿತನೊಂದಿಗೆ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:04/02/2021 ರಂದು 2 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಸುರಪುರ ನಗರದ ಎಸ್.ಬಿ.ಐ ಬ್ಯಾಂಕ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಸೋಮಯ್ಯ ಸಿಪಿಸಿ-235 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ- 176 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ನಾಗಪ್ಪ ತಂದೆ ಮಲ್ಲಪ್ಪ ಓಕಳೆ ವ|| 33 ವರ್ಷ ಪ.ಜಾತಿ ಉ|| ಸಮಾಜ ಸೇವಕ ಸಾ|| ಪಾಲಳದಕೇರಾ ಸುರಪುರ 2) ಶ್ರೀ ಯಂಕಪ್ಪ ತಂದೆ ಹೊನ್ನಪ್ಪ ಕಮತಗಿ ವ|| 49 ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ಸಿದ್ದಾಪುರ ಇವರನ್ನು 2:30 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 2:40 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0094 ನೇದ್ದರಲ್ಲಿ ಹೊರಟು 2:55 ಪಿ.ಎಮ್ ಕ್ಕೆ ಸುರಪುರ ನಗರದ ಎಸ್.ಬಿ.ಐ ಬ್ಯಾಂಕ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಬ್ಯಾಂಕ ಹಿಂದುಗಡೆ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 3:00 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ನರಸಪ್ಪ ತಂದೆ ಮಾನಪ್ಪ ಬೈಲಪತ್ತಾರ ವ|| 26 ವರ್ಷ ಜಾ|| ವಿಶ್ವಕರ್ಮ ಉ|| ಕೂಲಿ ಕೆಲಸ ಸಾ|| ಕಬಡಾಗೇರಾ ಸುರಪುರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 1830=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 3:00 ಪಿ.ಎಮ್ ದಿಂದ 4:00 ಪಿ.ಎಮ್ ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ಆದೇಶ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ :- 08/2021 ಕಲಂ: 78 (3) ಕೆ.ಪಿ ಯಾಕ್ಟ್ : ದಿನಾಂಕ 04/02/2021 ರಂದು 7:30 ಪಿ.ಎಂ ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಠಾಣೆಯಲ್ಲಿ ಇದ್ದಾಗ 6:00 ಪಿ.ಎಂ ಕ್ಕೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಪೂರ ಗ್ರಾಮದ ವಾಲ್ಮಿಕ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 08/2021 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ನಂತರ ಮಾನ್ಯ ಪಿಎಸ್ಐ ಸಾಹೇಬರು 9:20 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ ಹಾಗೂ ಒಂದು ಬಾಲ್ ಪೆನ್ ಒಂದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ ನಗದು ಹಣ 1020/-ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.ರಮೇಶ ತಂದೆ ಗೋವಿಂದ ರಾಠೊಡ ವ:32 ವರ್ಷ ಉ:ಒಕ್ಕಲುತನ ಜಾ:ಹಿಂದು ಲಮಾಣಿ ಸಾ:ನಾರಾಯಣಪೂರ ಐಬಿ ತಾಂಡಾ

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ :- 07/2021 ಕಲಂ:87 ಕೆ ಪಿ ಆಕ್ಟ : ಇಂದು ದಿನಾಂಕ: 04.02.2021 ರಂದು ಸಾಯಂಕಾಲ 6:00 ಗಂಟೆಗೆ ಠಾಣೆಯಲ್ಲಿದ್ದಾಗ ನನಗೆ ರಾಜನಕೊಳುರು ಗ್ರಾಮದ ಶ್ರೀ ಮಜರಮ್ಮನ (ಕೆಂಚಮ್ಮನ) ಗುಡಿ ಹಿಂದುಗಡೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ (ಕಟ್ಟೆಯ ಮೇಲೆ) ಕೆಲವು ಜನರು ಕುಳಿತು ತಮ್ಮ ತಮ್ಮಲ್ಲಿಯೇ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ್ ಎಂಬುವ ಇಸ್ಪೇಟ್ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸದರಿ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ನೀಡಿದ ಅನುಮತಿಯನ್ನು ಕಜ್ಜಪ್ಪ ಪಿಸಿ-251 ರವರು ಪಡೆದುಕೊಂಡು ತಂದು ಹಾಜರು ಪಡಿಸಿದ್ದು. ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು. ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:07/2021 ಕಲಂ:87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
ಆರೋಪಿತರ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.1) ಹಣಮಂತ ತಂದೆ ಹಣಮಂತ್ರಾಯ ಮಾದರ ವ:32 ವರ್ಷ ಉ:ಕೂಲಿಕೆಲಸ ಜಾ: ಹಿಂದೂ ಮಾದರ ಸಾ:ರಾಜನಕೊಳೂರು ತಾ: ಹುಣಸಗಿ ಹುಲಗಪ್ಪ ತಂದೆ ಬಸಪ್ಪ ಮಾದರ ವ:48 ವರ್ಷ ಉ:ಒಕ್ಕಲುತನ ಜಾ: ಹಿಂದೂ ಮಾದರ ಸಾ: ರಾಜನಕೊಳುರು ತಾ: ಹುಣಸಗಿ ಇಸ್ಮಾಯಿಲ್ ತಂದೆ ಶಮರ್ೋದ್ದೀನ ಬೇಪಾರಿ ವ:28 ವರ್ಷ ಉ: ಕೂಲಿಕೆಲಸ ಜಾ:ಮುಸ್ಲಿಂ ಸಾ:ರಾಜನಕೊಳೂರು ತಾ:ಹುಣಸಗಿ.

Last Updated: 05-02-2021 11:08 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080